ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅನಂತಮೂರ್ತಿಯವರ ಎರಡು ಹೊಸ ಕವಿತೆಗಳು    
ಯು ಆರ್ ಅನಂತಮೂರ್ತಿ
ಸೋಮವಾರ, 6 ಅಕ್ಟೋಬರ್ 2008 (05:13 IST)

ಅನಂತಮೂರ್ತಿಯವರು ತಮ್ಮ ಬಾಲ್ಯದ ನೆನಪುಗಳ ಕೆಲವು ಭಾಗಗಳನ್ನು ತಾವೇ ಬರೆಯಲು ನಿರ್ಧರಿಸಿದ್ದಾರೆ. ಸದ್ಯ ಅವರು ಹೆಗ್ಗೋಡಿನ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಭಾಗವಹಿಸುತ್ತಿರುವುದರಿಂದ ಬರಹವನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗಿಲ್ಲ. ಎರಡು ವಾರಗಳ ಬಿಡುವಿನ ನಂತರ ಅವರ ನೆನಪುಗಳು ಮತ್ತೆ ಕೆಂಡಸಂಪಿಗೆಯಲ್ಲಿ ಕಾಣಿಸಿಕೊಳ್ಳಲಿದೆ. ಅಲ್ಲಿಯವರಿಗೆ ನಮ್ಮ ಓದಿಗಾಗಿ ತಮ್ಮ ಇತ್ತೀಚಿನ ಎರಡು ಅಪ್ರಕಟಿತ ಕವಿತೆಗಳನ್ನು ಕಳುಹಿಸಿದ್ದಾರೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ನೀವು ಬರೆದ, ಅನುವಾದಿಸಿದ ಕವಿತೆಗಳನ್ನು ನಮಗೆ ಕಳುಹಿಸಿ ಕೊಡಬಹುದು.

ಏನೋ ಸಾವೆನ್ನುವ

‘ಅದು’ ನಿರೀಕ್ಷಿಸುತ್ತ ಇರೋದು
ಎಲ್ಲೋ,ಮುಂದೆಂದೋ
ಈಗಂತೂ ಅಲ್ಲ ;

(ಎನ್ನಿಸುವಂತೆ) ಆಪ್ತರ ಲೋಕಾಭಿರಾಮದ ಮಾತು.
ನೋವಾಗದಂತೆ ಸೂಜಿಯಲ್ಲಿ ರಕ್ತ ಸೆಳೆಯುವ ನರ್ಸಿನ ಮುಗುಳ್ನಗೆ
ಹಾಸಿಗೆ ಪಕ್ಕದಲ್ಲೊಂದು ಇನ್ನಷ್ಟು ಅರಳುವ ಭರವಸೆಯ ಗುಲಾಬಿ
ಒಣಗುವ ನಾಲಗೆಗೆ ಹಿತವಾಗಲೆಂದು ಗೆಳೆಯ ತಂದ ಕಿತ್ತಳೆ ಬುಟ್ಟಿ

’ಅದು’ ನಿರೀಕ್ಷಿಸುತ್ತ ಇದೆ ಎಂದು ತಿಳಿಯೋದೂ
ಅಹಮಿನ ಭ್ರಮೆ
’ಅದು’ ಇದೆ,
ಸುಮ್ಮನೇ, ಬಯಸದೆ, ಬೇಡದೆ,
ಅದರ ಉದಾಸೀನಕ್ಕೆ ತಾನು ಸಲ್ಲುವ ಕ್ಷಣ
ಈಗಾದರೇನು, ನಾಳೆಯಾದರೇನು,
ನಿನ್ನೆಯೂ ಅದು ಹೀಗೇ ನಿರ್ಲಕ್ಷ್ಯದಲ್ಲಿ ಇತ್ತಲ್ಲ
ಎಂದು ತನ್ನ ಪಾಡಿಗೆ ಗುಲಾಬಿಯಂತೆ ಇವನೂ
ಇನ್ನೂ ಕೊಂಚ ಅರಳುತ್ತ ಇರುವಾಗ

ಕಿಟಕಿಯಾಚೆ ಕಾಮರೂಪಿ ಮೋಡಗಳ ಆಕಾಶ,
ಹುಳ ಕುಕ್ಕಿ ಹುಡುಕುವ ಆತುರದ ಹಸಿರು ಕೊಕ್ಕಿನ ಪುಟಾಣಿ ಹಕ್ಕಿ,
ರೋಮಾಂಚಿತ ಕಚಕುಳಿಯ ಗುಬ್ಬಿ,
ಸೋರುವ ಸಿಂಬಳದ ಎಗ್ಗಿಲ್ಲದೆ ಚೆಂಡಾಡುವ ಚಡ್ಡಿಯ ಹುಡುಗ
ಕೂದಲನ್ನು ಕಟ್ಟುತ್ತ ಬಿಚ್ಚುತ್ತ ಗಂಡನಿಗೆ ಕಾಯುತ್ತ ಹೊಸಿಲನ ಮೇಲೆ ನಿಂತ ಸೇಳೆಯ ಸೊಸೆ

ತನ್ನದೆನ್ನಿಸಿದ್ದ ಈ ಎಲ್ಲವುದಕ್ಕೂ
ಸಾವಕಾಶದ ಕಾಲದಲ್ಲಿ ತಾನು ಅನಗತ್ಯ ಎನ್ನುವುದು ಹೊಳೆದು
ತೊಟ್ಟುಕಳಚಿ
ಹೋದ.

ಸಂಸಾರಿ

ಎಗ್ಗಿಲ್ಲದ ಪ್ರಣಯಿ

ಯಾಕೆ?
ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ –

ದಿಟ್ಟರು, ಮೊಂಡರು,
ಮೋಟುಮರ ಗಾಳಿಮಿಂಡ ಅಂತಾರಲ್ಲ
ಹಾಗೆ ಜಗಭಂಡರು

ಸೊಂಪಾಗಿ ಸುಮ್ಮನೇ
ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ
ರೂಢಿಸಿಕೊಂಡು
ತನ್ನ ಅಪಾರ ತೂಕವೂ ಹಗುರವೆಂಬಂತೆ ಸದ್ಯದ ಗಾಳಿಗೆ ತೂಗುತ್ತ
ಬಾಳಿ ತಾಳುವ ಅಶ್ವತ್ಥದ ಕೆಳಗೆ
ನೆರಳಿಗೆ ಸುಖಿಸಿ, ಅಪರೂಪಕ್ಕೆ
ಉದಾಸೀನದಲ್ಲಿ ಹಾಯಾಗಿ ಕಾಲುಚಾಚಿ ಕೂತವ
ಸಂಸಾರಿ.

ತೊಟ್ಟುತಾನೇ ಕಳಚಿ ಉದುರುವ ಎಲೆಯೊಂದನ್ನು ಹೀಗೇ ಗಮನಿಸಿ
ಹೀಗೇ ನಿರ್ಗಮಿಸುವ ಆಸೆಯ
ಮೊಮ್ಮಗನಿಗೆ ಬುಗುರಿ ಆಟ ಕಲಿಸುವ
ವ್ಯಾಮೋಹಿ ಕೂಡ

- ಅನಂತಮೂರ್ತಿ

[ಚಿತ್ರ - ರಶೀದ್] 

ಪುಟದ ಮೊದಲಿಗೆ
 
Votes:  4     Rating: 5    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?