ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ದೂರಸಾಗರ - ಇಲ್ಲಿ ಈಗ ಫಾಲ್ ಎಂಬ ನಿಜದ ಬಣ್ಣಗಳ ಕಾಲ    
ಮೀರಾ ಪಿ.ಆರ್
ಬುಧವಾರ, 22 ಅಕ್ಟೋಬರ್ 2008 (03:35 IST)

ಇಲ್ಲಿ ಈಗ ಹಗಲು ಚಿಕ್ಕದಾಗುತ್ತಾ, ರಾತ್ರಿಗಳು ಅಕ್ಷರಷಃ ದೀರ್ಘವಾಗುತ್ತಾ, ರಾತ್ರಿಯಲ್ಲಿ ಮಾತ್ರ ಮೈ ಕೊರೆಯುತ್ತಿದ್ದ ಚಳಿ ಹಗಲಲ್ಲೂ ಜೊತೆಯಾಗುತ್ತಿದೆ. ಪ್ರಪಂಚದ ಉಳಿದೆಡೆಗಳಲ್ಲಿ ಗ್ರೀಷ್ಮ, Autumn ಅಂತೆಲ್ಲ ಘನ ಗಂಭೀರ ಹೆಸರುಗಳಿಂದ ಕರೆಸಿಕೊಳ್ಳುವ, ಬೇಸಿಗೆಗೂ ಚಳಿಗಾಲಕ್ಕೂ ನಡುವೆ ಬರುವ ಈ ಕಾಲಕ್ಕೆ ಅಮೆರಿಕದಲ್ಲಿ ಮಾತ್ರ Fall ಎನ್ನುವ ಸರಳಾತಿ ಸರಳ ಹೆಸರು. ಎಲೆಗಳು ಉದುರೋ ಈ ಕಾಲಕ್ಕೆ ಉದುರೋ ಕಾಲವೆಂಬ ಅನ್ವರ್ಥ ನಾಮ! ಹಾಗೆ ಎಲೆಗಳನ್ನೆಲ್ಲ ಉದುರಿಸಿಕೊಂಡು ಚಳಿಗಾಲಕ್ಕೆ ಪೂರಾ ಬೋಳಾಗಿ ನಿಲ್ಲುವ ಮರಗಳಲ್ಲಿ ಎಲೆ ಉದುರುವುದಕ್ಕೆ ಮುನ್ನ ಸಂಭವಿಸುವ ವರ್ಣವೈಭವ ಮಾತ್ರ ಈ ಲೋಕದ್ದೇ ಅಲ್ಲವೇನೋ ಅನ್ನಿಸುವಷ್ಟು ಮೋಹಕ.

ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ fall season ಶುರುವಾದಂದಿನಿಂದ, ಇಲ್ಲಿಯವರೆಗೂ ಹಸಿರಾಗಿದ್ದ ಎಲೆಗಳೆಲ್ಲ ಈಗ ಹಳದಿ, ಕೇಸರಿ, ಕೆಂಪು, ಕಂದು, ಕೆಲವು ನೇರಳೆ ಬಣ್ಣಕ್ಕೂ ತಿರುಗಿ......ಇಷ್ಟು ನಾಟಕೀಯವಾಗಿ ಕಾಲ ಬದಲಾಗುವುದನ್ನು ನಾನು ಇಲ್ಲಿ ಬರುವವರೆಗೂ ಕಂಡೇ ಇರಲಿಲ್ಲ. ಚಳಿಗಾಲದಲ್ಲಿ ಈ ನ್ಯೂ ಇಂಗ್ಲೆಂಡ್ ಪ್ರದೇಶದ ಬಣ್ಣ ಬಿಳಿ. ಕಾಡು, ರೋಡು, ಮನೆ, ಮರ, ಕಾರು ಎಲ್ಲದರ ಮೇಲೂ ಬೆಳ್ಳನೆ ಹತ್ತಿಯಂಥಾ, ಒಮ್ಮೊಮ್ಮೆ ಹೊಳೆಯುವ ಸಕ್ಕರೆ ಪುಡಿಯಂಥಾ ಹಿಮ ಕೂತು ಕಣ್ಣು ದಣಿಸುವಷ್ಟು ಬಿಳಿಯಾಗಿ, ಮತ್ತೆ ಒಂದೆರಡು ದಿನಕ್ಕೆ ಆ ಬಿಳಿ ಬಿಳಿ ಹಿಮವೆಲ್ಲಾ ಕರಗಿ ನೀರಾಗಿ ಹರಿಯುತ್ತಾ ಕೊಳೆಯಾಗಿ, ಕೊಚ್ಚೆಯಾಗಿ, ಹಿಮ ಕೆಸರಾಗಿ....ಹಿಮ ಬೀಳದೆ ಇದ್ದಾಗ ಎಲೆಯೇ ಇಲ್ಲದ ಕಪ್ಪು, ಕಂದು ಮರಗಳು. ಎಲ್ಲೋ ಒಂದೊಂದು ಮಾತ್ರ ನಿತ್ಯ ಹಸುರಿನ ಮರಗಳು. ಚಳಿಗಾಲದ ಈ ವರ್ಣರಾಹಿತ್ಯಕ್ಕೆ ಮುನ್ನ ಬರುವ ಈ ಎಲೆ ಉದುರುವ ಕಾಲದ ವರ್ಣವೈಭವದಲ್ಲಿ ಕಣ್ಣು ತುಂಬುವಷ್ಟು ಬಣ್ಣ. ಈ ಕಣ್ಣು ತುಂಬುವ ಬಣ್ಣದ ಎಲೆಗಳನೆಲ್ಲ ಹಾರಿಸಿಕೊಂಡು ಹೋಗುವ ಗಾಳಿ.

ವರ್ಷ ಪೂರ್ತಿ ಹಸಿರಾಗೇ ಇರುವ ನಿತ್ಯ ಹಸುರಿನ ಮರಗಳಲ್ಲಿ ಬಣ್ಣ ಬದಲಾಯಿಸುವ ನಾಟಕೀಯತೆಯೂ ಇಲ್ಲ, ಉದುರಿ ಬೋಳಾಗಿ ಮತ್ತೆ ಚಿಗುರಬೇಕಾಗುವ ಅನಿವಾರ್ಯತೆಯೂ ಇಲ್ಲ. ವರ್ಷಪೂರ್ತಿ ಪ್ರತಿ ಋತುವಿನಲ್ಲೂ ಒಂದೊಂದು ವೇಷ ಕಟ್ಟುವ ಮೇಪಲ್, ಬರ್ಚ್, ಎಲ್ಮ್, ಕೆಲಬಗೆಯ ಓಕ್ ಮುಂತಾದ ಮರಗಳಿಗಷ್ಟೇ ವರುಷಕೊಂದು ಹೊಸತು ಜನ್ಮ, ವರುಷಕೊಂದು ಹೊಸತು ಮರಣದ ಸಂಭ್ರಮ ಮತ್ತು ಯಾತನೆ ಎಲ್ಲವೂ. ಇಂತಹ ಮರಗಳಲ್ಲಿ ವಸಂತದಲ್ಲೂ, ಬೇಸಿಗೆಯಲ್ಲೂ ಎಲೆಯಲ್ಲಿನ ಹಸಿರಿಗೆ ಕಾರಣವಾಗುವ ಕ್ಲೋರೋಫಿಲ್ ಎಂಬ ಹಸಿರು ಪಿಗ್ಮೆಂಟಿನ ಉತ್ಪಾದನೆಗೆ ತಡೆಯಾಗಿ, ಅಲ್ಲಿಯವರೆಗೂ ಈ ಹಸಿರಿನ ಹಿಂದೆಯೇ ಬಚ್ಚಿಟ್ಟು ಕೊಂಡಿದ್ದ ಬೇರೆ ಬೇರೆ ಬಣ್ಣಗಳು ಎಲೆಗಳಲ್ಲಿ ಕಾಣತೊಡಗುವುದೇ ಈ ವರ್ಣವೈಭವಕ್ಕೆ ಮುಖ್ಯ ಕಾರಣವಂತೆ(ಬೇರೆ ಕಾರಣಗಳೂ ಇವೆ). ಇದುವರೆಗೆ ಎಷ್ಟು ಚೆಂದವಾಗಿ, ಮುಗ್ಧವಾಗಿ ಕಾಣುತ್ತಾ ಇದ್ದ ಹಸಿರು, ತನ್ನ ಹಿಂದೆ ಎಷ್ಟೊಂದು ಬಣ್ಣಗಳನ್ನ ಬಚ್ಚಿಟ್ಟುಕೊಂಡು ತಾನೊಂದೇ ಢಾಳಾಗಿ ಮುಂದೆ ತೋರುತ್ತಿತ್ತಲ್ಲ ಅನ್ನಿಸುತ್ತಿದೆ. ಹಾಗೆ ಬೇರೆ ಬಣ್ಣಗಳೆಲ್ಲ ಮೇಲೆದ್ದು ಬಂದು ತಮ್ಮ ಮುಖ ತೋರಿಸಬಹುದಾದ ಕಾರಣಕ್ಕೇ Fall ಮೇಲೆ ಪ್ರೀತಿ ಮೂಡುತ್ತ, ಹಾಗೇ ಮನುಷ್ಯರಲ್ಲೂ ಎಲ್ಲ ನಿಜಬಣ್ಣಗಳೂ ಪ್ರಕಟವಾಗಿಬಿಡಲಿಕ್ಕೆ ಕಾಲವೊಂದಿದ್ದಿದ್ದರೆ ಅನ್ನಿಸಿ ಗಾಬರಿಯಾಗುತ್ತಿದೆ. ಹಾಗಿಲ್ಲದಿರುವುದಕ್ಕೆ ಸಮಾಧಾನ ಪಡಬೇಕಾ ಇಲ್ಲವಾ ತಿಳಿಯುತ್ತಿಲ್ಲ.

ಎಲ್ಲೆಲ್ಲೂ ಉದುರಿಬಿದ್ದ ಈ ಬಣ್ಣ ಬಣ್ಣದ ಎಲೆಗಳನ್ನೆಲ್ಲ ಒಟ್ಟು ಸೇರಿಸಿ, ಗುಡ್ಡೆ ಮಾಡಿ, ಓಡಿ ಬಂದು ಈ ರಾಶಿಗಳ ಮೇಲೆ ನೆಗೆದು ಎಲೆ ಹಾರಿಸುತ್ತಾ ಕೇಕೆ ಹಾಕಿ ನಗುತ್ತಿರುವ ಮಕ್ಕಳಿಗೆ ಮಾತ್ರ, ಸಂತೋಷವೇ ಸ್ಥಾಯಿ ಭಾವವೇನೋ ಎಲ್ಲಾ ಕಾಲದಲ್ಲೂ ಅನ್ನಿಸುತ್ತಿದೆ.   

ಎಲೆಗಳೆಲ್ಲ ಉದುರಿ ಮರಗಳು ಬೋಳಾಗುವ ಮುನ್ನವೇ, ಸಾಧ್ಯವಾದಷ್ಟೂ ಈ ಬಣ್ಣಗಳನೆಲ್ಲ ತುಂಬಿಸಿಕೊಂಡುಬಿಡಬೇಕು, ಕಣ್ಣೊಳಗೆ.

(ಚಿತ್ರಗಳು-ಲೇಖಕಿಯದು)

ಪುಟದ ಮೊದಲಿಗೆ
 
Votes:  5     Rating: 4.2    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು