ಸೆಪ್ಟೆಂಬರ್ ೯, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ    
ಚರಿತಾ. ಎಂ.ಆರ್
ಮಂಗಳವಾರ, 3 ಮಾರ್ಚ್ 2009 (06:27 IST)

ನೆಮ್ಮದಿ ಮಾರಾಟಕ್ಕಿದೆ...!

ತಂಪು-ತಾಜಾ ನೆಮ್ಮದಿ ಈ ಲೇಖನದಲ್ಲಿ ಮಾರಾಟಕ್ಕಿದೆ. ಆದರೆ `ಬೆಲೆ’-ರೂಪಾಯಿಗಳಲ್ಲ; ಒಂದು ಹನಿ ಮುಗ್ಧತೆ ಹಾಗೂ ಅರಿವು ಮಾತ್ರ.

ಒಂದು ತಾಸು ಆಲೋಚಿಸಿ ನೋಡಿ; ಮಾನವ, ಸಾಹಿತ್ಯದ ಮೂಲಕ ಹುಡುಕುವುದು ಏನನ್ನ? ತನಗೆ ಹೊಂದುವ ಸನ್ನಿವೇಶ-ಭಾವನೆ, ರಸಾನುಭವ ಮುಂತಾದವುಗಳನ್ನು ಅಂದರೆ ತನ್ನನ್ನು ತಾನೇ ಹುಡುಕುತ್ತಾನೆ. ಇದರಿಂದೇನು ಲಭಿಸುವುದು? - ನೆಮ್ಮದಿ.

ದೇಶಗಳು, ಧರ್ಮಗಳು, ಸಹೋದರರು - ಇವರೆಲ್ಲಾ ಏಕೆ ಪರಸ್ಪರ ಕದನದಲ್ಲಿ ತೊಡಗುತ್ತಾರೆ? ಅಧಿಕಾರಕ್ಕಾಗಿರಬಹುದು, ಆಸ್ತಿ-ಆಮಿಷಗಳಿಗಾಗಿರಬಹುದು. ಈ ವಸ್ತುಗಳಿಂದೇನು ದೊರಕುತ್ತದೆ. ಅವರ ಪ್ರಕಾರ ಸಂತಸ, ನೆಮ್ಮದಿ, ಶಾಂತಿ. ಅಂದರೆ ಯುದ್ಧಗಳ ಗುರಿ `ಶಾಂತಿ’ ಎಂದಾಯ್ತು. ಹಾಗಾದರೆ, ತಾನು `ಚತುರ ಜೀವಿ’ ಎಂದು ಗರ್ವದಿಂದ ಹೇಳಿಕೊಳ್ಳುವ ಮಾನವ ಯುದ್ಧದಲ್ಲೇಕೆ ತೊಡಗಬೇಕು? ಯುದ್ಧವಿಲ್ಲದೆಯೇ `ಶಾಂತಿ’ ನೆಲೆಸಿರುವಾಗ, ಯುದ್ಧಮಾಡಿ ಅದನ್ನು ಗಿಟ್ಟಿಸಿಕೊಳ್ಳುವ ಗೀಳೇಕೆ? ಇನ್ನೂ ಕೆಲವರು ವಾದ-ವಿವಾದಗಳಲ್ಲಿ ಮೇಲುಗೈ ಸಾಧಿಸಿ ನೆಮ್ಮದಿ ಪಡೆಯಲು ಪ್ರಯತ್ನಿಸುವರು. ಇವೆಲ್ಲಾ ಬುದ್ಧಿವಂತ ಮನುಷ್ಯ `ನೆಮ್ಮದಿ’ ಅರಸುವ ಮೂರ್ಖ ವಿಧಾನಗಳು.

ನಿಖರವಾಗಿ ಹೇಳಬೇಕಾದರೆ, `ನೆಮ್ಮದಿ’ ನಿಮ್ಮೊಳಗೇ ಇದೆ. ಆಸೆ ಮಾನವನ ಸಹಜ ಗುಣವಾದರೂ, ಅದನ್ನು ಸ್ವಲ್ಪ ಮಟ್ಟಿಗೆ ಪಕ್ಕಕ್ಕಿಟ್ಟು; ನಿಮ್ಮ ಮಗು ಅಥವಾ ಮಡದಿ, ಗೆಳೆಯ-ಗೆಳತಿ, ತಂದೆ-ತಾಯಿಯರ ಪ್ರೀತಿಯ ನಗುವಿನಲ್ಲಿ ನೆಮ್ಮದಿಯನ್ನು ಹುಡುಕಬಹುದು. ನಿಸರ್ಗದ ಪ್ರಶಾಂತತೆಯಲ್ಲಿ, ಸಂಗೀತ-ಸಾಹಿತ್ಯದಲ್ಲೂ ಇದು ಲಭ್ಯ. ನೆಮ್ಮದಿ ಪಡೆಯಲು ಸನ್ಯಾಸಿಗಳಾಗಬೇಕೆಂಬ ನಿಯಮವೂ ಇಲ್ಲ. ಗೀತೆಯಲ್ಲಿ ಶ್ರೀ ಕೃಷ್ಣಪರಮಾತ್ಮ, `ಧರ್ಮಕ್ಕೆ ವಿರುದ್ಧವಲ್ಲದ ಕಾಮವೂ ನಾನೇ’ ಅನ್ನಲಿಲ್ಲವೇ?

ಪರಮಾತ್ಮ ಕಷ್ಟಗಳನ್ನೇಕೆ ಸೃಷ್ಟಿಸಿದನು ಗೊತ್ತೇ? ಸುಖ ಇನ್ನೂ ರುಚಿಯಾಗಲೆಂದು! ಮೃಷ್ಟಾನ್ನ ಭೋಜನದ ನಂತರ ನಿದ್ರೆ ಆವರಿಸುವ ಸಹಜ ಪ್ರಕ್ರಿಯೆಯಂತೆ, ದುಃಖಗಳ ನಂತರ ಸುಖ ಬರುವುದು, ಜೀವನದ ಪ್ರಕ್ರಿಯೆ. ಅತಿಯಾದರೆ ಅಮೃತವೂ ವಿಷವಂತೆ. ಅದಕ್ಕೆ ಪರಮಾತ್ಮ ಈ ರೀತಿಯ ಯೊಜನೆ ರೂಪಿಸಿರಬಹುದು.

ಸ್ವರ್ಗವಾಸಿ ಶ್ರೀ ಕೃಷ್ಣದೇವರಾಯರೊಮ್ಮೆ, ಸ್ವರ್ಗವಾಸದ ಕುರಿತು ಬಳಿಯಲ್ಲಿದ್ದ ತೆನಾಲಿರಾಮನೊಡನೆ ಈ ರೀತಿ ಅಂದರು `ರಾಮ ಈ ಸ್ವರ್ಗದಲ್ಲಿ ಎಲ್ಲವೂ ಇದೆ, ಆದರೂ ನನಗೊಂದು ರೀತಿ ನೆಮ್ಮದಿಯೇ ಇಲ್ಲ`. ರಾಮ ಸ್ವಲ್ಪ ಯೋಚಿಸಿ ಉತ್ತರಿಸಿದನು `ಭೂಲೋಕದಲ್ಲಿ ನಿಮ್ಮ ಸಾಮ್ರಾಜ್ಯ ಹೇಗಿದೆಯೆಂದು ನೋಡಿಕೊಂಡು ಬರೋಣವೇ` ಮಹಾರಾಜರು ಅಂತೆಯೇ ತೆನಾಲಿರಾಮನೊಡನೆ ದೇವೆಂದ್ರನ ಅಪ್ಪಣೆ ಪಡೆದು ಭೂಲೋಕಕ್ಕೆ ಧಾವಿಸಿದರು.

ಮಹಾರಾಜರು ಭೂಲೋಕಕ್ಕೆ ಪಾದಾರ್ಪಣೇ ಮಾಡಿ ವಿಸ್ಮಯ ನೋಡುತ್ತಾ ನಿಂತದ್ದೇ ತಡ ಸುತ್ತಲೂ `ಕೀಂ ಕೀಂ’ ಎಂಬ ಶಬ್ಧ ಮೂಡಿ ಬಂತು. `ಟ್ರಾಫಿಕ್ ಜಾಂ’ ಆಗಿತ್ತು. ಅದನ್ನರಿತ ತೆನಾಲಿರಾಮ ಅವರನ್ನು ಬದಿಗೆ ಕರೆದೊಯ್ದ. ನಿಮಿಷ ಮಾತ್ರದಲ್ಲಿ ಇವರೀರ್ವರ ಸುತ್ತು ಜನ ಸೇರಿದರು-ನಾಟಕದ ಕಂಪೆನಿಯವರೆಂದು ತಿಳಿದು ಮಹಾರಾಜರಿಗೆ ಸಂತಸ ಉಕ್ಕಿ ಬಂತು-ಪ್ರಜೆಗಳಿಗೆ ನಾನೆಂದರೆ ಎಷ್ಟೊಂದು ಪ್ರೀತಿ ಎಂದುಕೊಂಡು ದಣಿವಾದ್ದರಿಂದ, ರಾಮ, ವಿಶ್ರಮಿಸಿಕೊಳ್ಳಲು ವಸತಿಗೃಹಕ್ಕೆ ತೆರಳೋಣವೇ ಎಂದರು. `ಲಾಡ್ಜ್’ ಒಂದಕ್ಕೆ ತೆರಳಿದರು. ಅಲ್ಲಿ, ವಿಶ್ವಾಸ-ಹೆಸರು-ಹಣ ಎಲ್ಲಾ ಕೇಳಿದರು. ಇವರೀರ್ವರ ನೈಜ-ವಕ್ರ ಉತ್ತರಗಳನ್ನು ಕೇಳಿ, `ಗಾರ್ಡ್ಸ್’ಗಳಿಗೆ ಹೇಳಿ ಹೊರ ದಬ್ಬಿಸಿದರು.

ಇವರ ವಿಚಿತ್ರ ವೇಷಭೂಷಣ ನೋಡಿದ ಬೀದಿನಾಯಿ ಇವರಿಬ್ಬರನ್ನು ಬೆನ್ನಟ್ಟಿತು. ಪಾಪ! ಮಹಾರಾಜರೆಂದು ತಿಳಿದರೆ ನಿಧಾನವಾಗಿ ಓಡಿಸುತ್ತಿತ್ತೇನೋ!! `ಬುಸುಬುಸು’ ಎಂದು ಉಸಿರೆಳೆಯುತ್ತಾ ಮಹಾರಾಜರು ಒಂದು ಪಾಳುಮನೆಗೆ ನುಗ್ಗಿದರು. ಎನೂ ತಿಳಿಯದ ವಿನಮ್ರ ಸೇವಕನಂತೆ ತೆನಾಲಿರಾಮ, ಎಲ್ಲಿಂದಲೋ ಒಂದು ಲೋಟ ನೀರು ತಂದು ಕೊಟ್ಟನು.

ತಣ್ಣನೆ ನೀರು ಕುಡಿದು, ಮಹಾರಾಜರು ಅಬ್ಬ! ಈಗ ನೆಮ್ಮದಿಯಾಯ್ತು ಎಂದು ನೀಳವಾಗಿ ಉಸಿರೆಳೆದರು.

ಚರಿತ ಎಂ.ಆರ್ ಚರಿತಾ. ಎಂ.ಆರ್, ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಮ್. ಕಾರ್ಯಪ್ಪ ಕಾಲೇಜಿನ ಪ್ರಥಮ ವರ್ಷದ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕನ್ನಡದಲ್ಲಿ ಬರೆಯುವ ಖುಷಿಯಿದ್ದರೆ ನೀವೂ ಕಾಲೇಜು ಸಂಪಿಗೆಗೆ ಬರೆಯಬಹುದು. ಕತೆ, ಕವಿತೆ, ವಿಮರ್ಶೆ, ಸಿನೆಮಾ, ಲಘು ಹರಟೆ, ಪ್ರವಾಸ, ಕ್ಯಾಂಪಸ್ ಸಮಾಚಾರಗಳ ಕುರಿತು ನಮಗೆ ಬರೆಯಿರಿ. ಬರಹದ ಜೊತೆಗೆ ನಿಮ್ಮ ಪುಟ್ಟ ಪರಿಚಯವೂ ಇರಲಿ. ಲೇಖನಗಳನ್ನು ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಟೈಪಿಸಿ editor@kendasampige.com ಗೆ ಇಮೇಲ್ ಮಾಡಿ. ]

ಪುಟದ ಮೊದಲಿಗೆ
 
Votes:  2     Rating: 5    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು