ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ    
ದಿವ್ಯ ರಂಗೇನಹಳ್ಳಿ
ಶನಿವಾರ, 5 ಸೆಪ್ಟೆಂಬರ್ 2009 (06:02 IST)

ಬಾಕ್ಸ್ ತೆಗೆದುಕೊಂಡು ಎಲ್ಲರೂ ಒಟ್ಟಿಗೆ ಕೂತು ಎಲ್ಲರ ಮನೆಯ ತಿಂಡಿಗಳನ್ನ ಹಂಚಿಕೊಂಡು ಚೌಚೌಬಾತ್ ಮಾಡಿಕೊಂಡು ಕಿಚಡಿಯಂತೆ ಒಟ್ಟಿಗೆ ಸವಿಯುವ, ಎಲ್ಲರ ಎಸ್ಸೆಮ್ಮೆಸ್ ಹಂಚಿಕೊಳ್ಳುವ, ನಗೆಚಟಾಕಿ ಹರಿಸುವ, ತಮ್ಮ- ತಮ್ಮ ಬಾಯ್‌ಫ್ರೆಂಡ್‌ಗಳ ಬಗೆಗೊಂದಿಷ್ಟು ಗುಯ್‌ಗುಡುವ ಘಳಿಗೆಯೆಂದರೆ ಅದು ಊಟದ ಸಮಯ...ಅರರೆ...! ಹೀಗೆ ಹಂಚಿಕೊಂಡು ತಿನ್ನುವಾಗ ಎಲ್ಲ ಲೆಕ್ಕಚಾರ ನಮ್ಮಿಂದ ದೂರವಾಗಿರಬೇಕಲ್ವ...?ಊಹುಂ....ಹಾಗೆ ಆಗಿರುವುದೇ ಇಲ್ಲ ನೋಡಿ...!

ಈಚೆಗೆ ಪರೀಕ್ಷೆ ನಡೆಯುವ ಮುಂಚೆ, ಎಲ್ಲರೂ ಒಟ್ಟಿಗೆ ಸೇರಿಕೊಂಡು ಓದಿ ಆಯ್ತಾ...? ಈ ಅಸೈನ್ಮೆಂಟ್ ಮುಗೀತಾ...? ರೆಕಾರ್ಡ್‌ಗೆ ಸೈನ್ ಆಯ್ತಾ...? ಎಂದು ಕಾಡುಹರಟೆಗೆಂದು ಕ್ಯಾಂಟೀನ್ ತುದಿಯಲ್ಲಿ ಕುಳಿತಿದ್ದೆವು. ಎಲ್ಲರೂ ಬಾಕ್ಸ್ ತೆಗೆದು ತಿನ್ನುತ್ತಿದ್ದರೆ ನಮ್ಮೊಟ್ಟಿಗಿದ್ದ ಶ್ರಾವ್ಯ ಬಾಕ್ಸ್‌ಗೆ  ಸ್ವತಃ ಕೈಹಾಕಲೇ ಇಲ್ಲ...! ಹೋಗಲಿ...ಈ ಸ್ವೀಟಾದರೂ ತಿನ್ನಮ್ಮ ಎಂದು ಕೊಡಲಿಕ್ಕೆ ಹೋದರೆ, ‘ನೋ...ಥ್ಯಾಂಕ್ಸ್...!’ ಅಂದು ಬಿಡಬೇಕೆ...?
 
ಅಯ್ಯೋ...! ಮೊದಲೇ ಅವು ಪೂರ್ವಭಾವಿ ಪರೀಕ್ಷಾ ದಿನಗಳು, ಸೆಮಿಸ್ಟರ್ ಪದ್ದತಿಯೊಳಗೆ ಅತ್ಯಂತ ಒತ್ತಡಕ್ಕೆ ಸಿಲುಕಿಸುವ ಘಳಿಗೆಗಳು ಅವೇ ಇರಬಹುದು. ಅದು ಸಬ್‌ಮಿಶನ್...ಇದಕ್ಕೆ ಸೈನ್ ಎಂದು ಡಿಪಾರ್ಟ್‌ಮೆಂಟಿಂದ ಡಿಪಾರ್ಟ್‌ಮೆಂಟಿಗೆ ಓಡಾಡಿಯೇ ಅರ್ಧ ಹೈರಾಣಾಗಿರುತ್ತೇವೆ...ಈ ಹುಡುಗಿ ತಿನ್ನುವುದಿಲ್ಲ ಎನ್ನುತ್ತಾಳಲ್ಲ ಎಂದು ಸುಮ್ಮನಾದೆವು.

ಆನಂತರ ತಿಳಿಯಿತು ..., ಅವಳೇಕೆ ನಮ್ಮೊಟ್ಟಿಗೆ ತಿನ್ನುವುದಿಲ್ಲವೆಂದು...! ಅವಳಿಗೆ ಹಸಿವಿದ್ದರೂ ತಿನ್ನುವ ಮನಸ್ಸಿಲ್ಲ...! ಮನಸ್ಸಿದ್ದರೂ ಆ ಘಳಿಗೆಗಳನ್ನ ಅನುಭವಿಸುವ ಅದೃಷ್ಟವೂ ಇಲ್ಲದೇ ಇರಬಹುದು...!

ಅವಳಿಗೆ ‘ಜಾತಿ’ಯ ಸಮಸ್ಯೆ ಕಾಡುತ್ತಿತ್ತು. ಮೇಲ್ಜಾತಿಯವಳಾದ ತಾನೂ ಯಾರ ಬಾಕ್ಸ್‌ನಲ್ಲಿಯೂ ತಿನ್ನಬಾರದು ಎನ್ನುವ ಪ್ರಜ್ಞೆ ಪೂರ್ತಿಯಾಗಿ ಆವರಿಸಿಕೊಂಡಿತ್ತು. ಹಾಗಾಗಿಯೇ ಅವಳು ಇಂತಹ ಆಧುನಿಕ ಜಗತ್ತಿನೊಳಗೂ ಜಾತಿಯ ಲೆಕ್ಕಚಾರದೊಳಗೆ ಮುಳುಗಿ ಹೋಗಿದ್ದಳು.

ಈ ಘಟನೆಯಾದ ನಂತರ ಅನೇಹ ಆಲೋಚನೆಗಳು ಮನಸ್ಸಿನೊಳಗೆ ಇಣುಕುತ್ತಿದ್ದವು, ಹಳೆಯ ನೆನಪುಗಳು ಕೂಡ ಬೆಂಬಿಡದೆ ಕಾಡುತ್ತಿದ್ದವು. ಇದ್ದಕ್ಕಿದ್ದ ಹಾಗೆ ಶಾಲೆಯ ದಿನಗಳು ಕಣ್ಮುಂದೆ ತೆರೆದುಕೊಂಡವು. ಇಂಥವೆಲ್ಲದರ ಗೋಳಿಲ್ಲದೆ ಕಳೆದುಹೋದ ಅದ್ಭುತ ದಿನಗಳವು...!

ಸಣ್ಣ ಚಾಕಲೆಟ್‌ನಿಂದಿಡಿದೂ ಹಬ್ಬದ ಎಲ್ಲ ತಿನಿಸುಗಳನ್ನ ಕ್ಲಾಸಿನ ಪೂರ್ತಿ ಹಂಚಿಕೊಂಡು ತಿನ್ನುತ್ತಿದ್ದ ಕ್ಷಣಗಳು...! ಅದೆಷ್ಟೇ ಜಗಳವಾಡಿ ಮುನಿಸಿಕೊಂಡಿದ್ದರೂ ಚೈನಾಪಿಲೆ ಆಟವಾಡುವಷ್ಟರಲ್ಲಿ ಕೈ-ಕೈ ಹಿಡಿದು ಒಂದಾಗಿ ಓಡುತ್ತಿದ್ದ ಓಟಗಳು, ಗೆಳತಿಗೆ ಹುಷಾರಿಲ್ಲದೇ ಹೋದರೆ ಅವಳ ನೋಟ್ಸ್/ಹೋಮ್‌ವರ್ಕ್ ಎಲ್ಲವನ್ನ ಬರೆದುಕೊಟ್ಟು ಅವಳನ್ನ ಬಚಾವ್ ಮಾಡುತ್ತಿದ್ದ ಫ್ರೆಂಡ್‌ಶಿಪ್...! ಪರೀಕ್ಷೆಯಲ್ಲಿ ಮ್ಯಾಪ್ ಬರೆಯುವಾಗ ಇಂಡಿಯಾದ ಭೂಪಟ ಹಿಡಿದು ಟ್ರೇಸ್ ಮಾಡಿ ಒಬ್ಬರಿಂದೊಬ್ಬರಿಗೆ ಪಾಸ್‌ಮಾಡಿ ಎಲ್ಲರದೂ ಒಂದೇ ಉತ್ತರ ಕಾಣುವ ಹಾಗೆ ಮಾಡುತ್ತಿದ್ದ ಚಾಲಾಕಿತನ...!ವಾರ್ಷಿಕೋತ್ಸವದ  ತಯಾರಿಯಲ್ಲಿ ಒಟ್ಟೊಟ್ಟಿಗೆ ಡ್ಯಾನ್ಸ್ ಕಲಿಯುವ ನೆಪದಲ್ಲಿ ಕುಣಿದಾಡುತ್ತಿದ್ದ ಸಂಭ್ರಮ...! ಹೀಗೆ ಇಂಥವುಗಳ ಎಳೆ ತೆಗೆದರೆ ಅದೆಷ್ಟು ರಸಭರಿತ ಗೊಂಚಲುಗಳ ಬಾಲ್ಯದ ದಿನಗಳು ಕಣ್ಮುಂದೆ ಬರಬಹುದು.

ಇಷ್ಟೆಲ್ಲ ಒಟ್ಟೊಟ್ಟಿಗೆ ನಡೆಯುವಾಗ ಬಾಲ್ಯದಲ್ಲಿ ಯಾವ ಸಾಮಾಜಿಕ ಪಿಡುಗುಗಳ ಸೋಂಕು ಕಿಂಚಿತ್ ತಾಕಿರಲೇ ಇಲ್ಲ, ಆದರೆ ಇದಕ್ಕಿದ್ದ ಹಾಗೆ ಕಾಲೇಜಿಗೆ ಬರುತ್ತಿದ್ದಂತೆಯೇ ಇಂಥವುಗಳ ತೊಳಲಾಟದಲ್ಲಿ ಸಿಕ್ಕುವುದೇಕೆ...? ಹೌದಲ್ಲವೇ...! ಇವತ್ತು ಯಾವುದನ್ನು ಮುಗ್ದವಾಗಿ ನೋಡಲಿಕ್ಕೆ ಸಾಧ್ಯವಾಗುತ್ತಿಲ್ಲ. ತೂಗಿ ಅಳೆದ ಲೆಕ್ಕಚಾರದ ಮಾತುಗಳು, ಪ್ರತಿಯೊಂದರ ಬಗೆಗೂ ತಾರ್ಕಿಕ ನಿಲುವು, ಭಾವಗಳಿಲ್ಲದ ದೂಕಲೆಬೇಕಿರುವ ಒತ್ತಡದ ಬದುಕು...ಹಾಗಾಗಿಯೇ ಅಸ್ವಾಭಾವಿಕ ನಡವಳಿಕೆಗಳು.

ಮುಕ್ತವಾಗಿ ಹಂಚಿಕೊಳ್ಳದೆ ಎಲ್ಲವೂ ಕಣ್ಣಾಮುಚ್ಚಾಲೆಯಾಟ...! ಸಣ್ಣಗೆ ಭಿನ್ನ ಅಭಿಪ್ರಾಯಗಳು ಬರುತ್ತಿದ್ದಂತೆ ಮಾತನ್ನ ನಿಲ್ಲಿಸಿಬಿಡುವ ಮೂಕಮನಸುಗಳು...! ಡೆಸ್ಕ್ ಮುಂದೆಯೇ ಇದ್ದ ಗೆಳತಿ ಹುಷಾರಿಲ್ಲದೆ ನರಳುತ್ತಿದ್ದರೂ ಯಾವ ಪ್ರತಿಕ್ರಿಯೆಯೂ ಇಲ್ಲದ ಬಂಜರು ಹೃದಯಗಳು...! ಇಬ್ಬರು ಒಳ್ಳೆಯ ಫ್ರೆಂಡ್ಸ್ ಇದ್ದರೆ ಇಬ್ಬರ ಮಧ್ಯೆ ಬತ್ತಿ ಇಡುವ ಕಿತಾಪತಿಗಳು...!ಹುಡುಗ-ಹುಡುಗಿ ಒಟ್ಟಿಗೆ ಓಡಾಡಿಕೊಂಡಿದ್ದರೆ ಗ್ಯಾಸ್ಟ್ರಿಕ್ ಬರುವಷ್ಟು ಹೊಟ್ಟೆಹುರಿ ಪಟ್ಟುಕೊಂಡು ಕೊನೆಗೆ ಉಳಿಸುವ ಗಾಸಿಪ್ ಕಲೆಗಳು...!

ಕಾಲೇಜು ಹಂತಕ್ಕೆ ಬರುತ್ತಿದ್ದಂತೆ ಪ್ರಬುದ್ಧರಾಗುವ ದಿಸೆಯಲ್ಲಿಯೋ ಅಥವಾ ಎಲ್ಲವನ್ನ ಯೋಚನಾ ಲಹರಿಗೆ ಬಿಟ್ಟುಬಿಡುವುದರಿಂದಲೋ ಇಂಥಹ ಮುಖವಾಡಗಳನ್ನ ಧರಿಸಬೇಕಾಗುತ್ತಿದೆ. ವಯಸ್ಸು ಬದಲಾದಂತೆ ದೈಹಿಕ-ಮಾನಸಿಕ ಬದಲಾವಣೆಗಳು ಸಹಜವೇ ಆದರೂ ಅಸಹಜ ವರ್ತನೆ-ಪ್ರವೃತ್ತಿಗಳಿಂದ ದೂರ ಉಳಿಯುವುದು ಒಳಿತು.

ಆದರೆ, ನಿರ್ಮಲ ಮನಸ್ಸಿಗೆ, ಸಾಮೂಹಿಕ ಬದುಕಿಗೆ, ಪ್ರಶಾಂತತೆಯ ಭಾವಗಳಿಗೆ, ಸಹಭೋಜನಕೆ, ನೋವು-ನಲಿವುಗಳ ಮುಕ್ತ ಹಂಚಿಕೆಗೆ, ಬತ್ತದ ಪ್ರೀತಿಯ ರಸದೌತಣದ ಅನುಭೂತಿಗೆ ಬಾಲ್ಯವೊಂದೆ ಉತ್ತರ...! ಅಂಥಹ ಬಾಲ್ಯ ಮತ್ತೆ-ಮತ್ತೆ ಬರಬಾರದೇ....?

- ದಿವ್ಯ ರಂಗೇನಹಳ್ಳಿ.

ದಿವ್ಯ ರಂಗೇನಹಳ್ಳಿದಿವ್ಯ ರಂಗೇನಹಳ್ಳಿ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅಂತಿಮ ಪದವಿ ವಿದ್ಯಾರ್ಥಿನಿ, ಸಾಹಿತ್ಯದಲ್ಲಿ ಆಸಕ್ತಿ, ಬರವಣಿಗೆಯ ಅಭ್ಯಾಸ...ಕವಿತೆ, ಲೇಖನಗಳೆಡೆಗೆ ಹೆಚ್ಚು ಒಲವು. ಪ್ರಜಾವಾಣಿ, ಮಯೂರ, ಡೆಕನ್ ಹೆರಾಲ್ಡ್, ಹಾಯ್ ಬೆಂಗಳೂರು, ಓ ಮನಸೆ ಪತ್ರಿಕೆಗಳಲ್ಲಿ ಬರಹಗಳು ಪ್ರಕಟಗೊಂಡಿವೆ.

ಪುಟದ ಮೊದಲಿಗೆ
 
Votes:  1     Rating: 4    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು