ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಅತಿಥಿ ಸಂಪಾದಕೀಯ: ಹೊರಗೆ ಕೂತು ಕನ್ನಡದಲ್ಲಿ ಬರೆಯುವುದು    
ಸುದರ್ಶನ್
ಶನಿವಾರ, 4 ಜುಲೈ 2009 (06:49 IST)
ಅವರ ಕಣ್ಣಲ್ಲಿ, ನಮ್ಮ ಕಣ್ಣೆಲ್ಲಿ?
ದೇಶದ ಹೊರಗೆ ಕೂತು ಕನ್ನಡದಲ್ಲಿ ಬರೆದ ಮೇಲೆ, ಇದರಲ್ಲೇನೂ ಇಲ್ಲವಲ್ಲ ಅನಿಸಿ ಹಲವು ಸಲ ಪಕ್ಕಕ್ಕೆ ಇಟ್ಟಿದ್ದಿದೆ. ಏಕೆಂದರೆ ಎಲ್ಲೇ ಕೂತು ಏನೇ ಬರೆದರೂ ಮಹಾನ್ ದರ್ಶನವಲ್ಲದಿದ್ದರೂ, ಬದುಕಿನ ಹೊಸ ಪದರವೋ, ಹೊಸ ಪರಿಸರವೋ ತೆರೆದುಕೊಳ್ಳುವಂತಿದೆ ಅನಿಸುವುದು ಕನಿಷ್ಟ. ಈಗೀಗ ನನ್ನಂತವರು ಹೊರಗೆ ಕೂತು ಕನ್ನಡದಲ್ಲಿ ಬರೆಯುವುದು ಹೆಚ್ಚಿದೆ. ಅದಕ್ಕೆ ಸ್ವಂತ ಬ್ಲಾಗುಗಳೂ, ಜಾಲತಾಣಗಳೂ ಹಲವಿವೆ. ಮುಂಚೆಂದಿಗಿಂತಲೂ ಹೆಚ್ಚು ಕನ್ನಡದ ಓದಿಗೆ ಅವು ಸಿಗುತ್ತಿವೆ. ಇವನ್ನೆಲ್ಲಾ ಮೀರಿ ನೋಡಬೇಕಾದ ಗಳಿಗೆಯೂ ಬಂದಿದೆ.

ನನ್ನ ಅಜ್ಜಿ ತಾತ ದಕ್ಷಿಣ ಕನ್ನಡದಿಂದ ಬೆಂಗಳೂರಿಗೆ ಗುಳೆಬಂದವರು. ಹೊಟ್ಟೆ ಪಾಡು, ಹೊಸ ಅವಕಾಶ ಎಲ್ಲವೂ ಅದಕ್ಕೆ ಕಾರಣವಿದ್ದಿರಬೇಕು. ಬೆಂಗಳೂರಿನ "ಹೌದು ರೀ, ಇಲ್ಲಾ ರೀ" ಎಂದು ಎಲ್ಲಕ್ಕೂ ರೀ ಸೇರಿಸುವ ರೀತಿಯನ್ನು ನನ್ನಜ್ಜಿ ಆಡಿಕೊಂಡು ನಗುತ್ತಿದ್ದುದು ನೆನಪಾಗುತ್ತಿದೆ. ಹೋಟೆಲಿಟ್ಟು, ಮಕ್ಕಳನ್ನು ಬೆಳೆಸಿ, ಓದಿಸಿ, ಹೋಟಲು ಮುಚ್ಚಿ, ಕಡೆಗೆ ಊರಿನ ಆಸ್ತಿಯನ್ನು ಮಾರಬೇಕಾದಾಗ ಗಳಗಳನೆ ಅತ್ತದ್ದು ನೆನಪಾಗುತ್ತಿದೆ. ಅವರ ಮಕ್ಕಳು ಅಮೆರಿಕಾಕ್ಕೂ, ನಾನು ಆಸ್ಟ್ರೇಲಿಯಕ್ಕೂ ಹೊರಟಾಗ ನನ್ನಜ್ಜಿ ತಾತ ಏನೋ ಕಳಕೊಂಡವರಂತೆ ಅಳುತ್ತಲೇ ಬೀಳ್ಕೊಟ್ಟದ್ದು ನೆನಪಾಗುತ್ತಿದೆ. ನನ್ನಪ್ಪನೂ ಕೆಲಸದ ಪತ್ರ ಹಿಡಿದು ಬಂದಿಳಿದಾಗ ಬೆಂಗಳೂರಿನ ವಲಸಿಗರಲ್ಲಿ ಒಬ್ಬರಾದುದು ನೆನಪಾಗುತ್ತಿದೆ. ಮುಂದೆ ಮದುವೆಯಾಗಿ, ಸಂಸಾರ ಹೂಡಿ, ನಮ್ಮನ್ನು ಬೆಳೆಸಿ, ಓದಿಸಿ ನಾವು ಅಲ್ಲಿಂದ ವಲಸೆ ಹೋಗುವುದಕ್ಕೆ ಸಿದ್ಧಮಾಡಿದುದೂ ಮರೆಯುವಂತದ್ದಲ್ಲ.

ಮನುಷ್ಯನ ಚರಿತ್ರೆಯ ಅತಿ ಹಳೆಯ ಪುಟದಿಂದಲೂ ನಾವು ವಲಸೆ ಹೋಗುತ್ತಿದ್ದೇವೆ. ಹೊಸ ಜಾಗದಲ್ಲಿ ಬೇರುಬಿಡುತ್ತಿದ್ದೇವೆ, ಬೇರೆಯವರ ಬೇರುಗಳೊಡನೆ ಬೆಸೆದುಕೊಳ್ಳುತ್ತಿದ್ದೇವೆ. ಆದರೆ ಹಿಂದಿನಂತೆ, ಹೋದವರು ಕಳೆದುಹೋಗದೆ ಬಿಟ್ಟ ತಾಯ್ನೆಲಕ್ಕೆ ಕೊಂಡಿ ಉಳಿಸಿ ಬೆಳೆಸಿಕೊಳ್ಳುತ್ತಿದ್ದೇವೆ. ಇದು ಮಾತ್ರ ಹೊಸದಿರಬಹುದು. ಅದಕ್ಕೆ ನಮಗೀಗ ಇರುವ ಸಾಧನಗಳು ನೆರವಿಗೆ ಬರುತ್ತಿವೆ ಕೂಡ.

ಹಿಂದೊಮ್ಮೆ ಬೆಂಗಳೂರಿನ ಬಟ್ಟೆ ಅಂಗಡಿ ಒಂದರಲ್ಲಿ ಒಬ್ಬ ಹರೆಯದ ಸೇಲ್ಸ್ ಹುಡುಗ ಸಿಕ್ಕಿದ್ದ. ಆಸ್ಟ್ರೇಲಿಯದಿಂದ ಬಂದವನೆಂದು ಗೊತ್ತಾದೊಡನೆ ನನ್ನ ಬೆನ್ನಿಗೆ ಬಿದ್ದಿದ್ದ. ತಮಿಳು ಮಿಶ್ರಿತ ಹರಕು ಮುರುಕು ಕನ್ನಡ ಮಾತಾಡುತ್ತಿದ್ದ. "ನನ್ನನ್ನು ಆಸ್ಟ್ರೇಲಿಯಕ್ಕೆ ಕರೆಸಿಕೊಂಡುಬಿಡಿ. ನಿಮಗೆ ಭಾರವಾಗುವುದಿಲ್ಲ." ಎಂದು ದುಂಬಾಲು ಬಿದ್ದಿದ್ದ. ಅಂಗಡಿಯ ಹೊರಗೂ ಅಷ್ಟು ದೂರ ಬಂದು ತನ್ನ ಕತೆಯನ್ನು ಹೇಳಿಕೊಂಡಿದ್ದ. ಅದೆಲ್ಲಾ ಅಷ್ಟು ಸುಲಭವಲ್ಲ ಮಾರಾಯ ಎಂದು ಎಷ್ಟು ಹೇಳಿದರೂ "ಅಲ್ಲಿಗೆ ಬಂದಿಳಿದೊಡನೆ ಕಾಣೆಯಾಗಿಬಿಡುತ್ತೇನೆ" ಎಂದ. "ನೋಡಪ್ಪ ನಂತರ ನಾವಿಬ್ಬರೂ ಜೈಲಿನ ಕಂಬಿ ಎಣಿಸಬೇಕಾಗುತ್ತದೆ" ಎಂದು ಹೇಳಿ "ಏನಾದರೂ ಓದು, ಕೆಲಸ ಹುಡುಕು ಆಮೇಲೂ ದೇಶ ಬಿಡಬೇಕು ಅನಿಸಿದರೆ ಅವಕಾಶಗಳು ಇರುತ್ತವೆ ಆತುರ ಪಡಬೇಡ." ಎಂದು ಸಮಾಧಾನ ಮಾಡಿ ಕಳಿಸಿದ್ದೆ.

ತಮಿಳುನಾಡಿನ ಯಾವುದೋ ಊರಿಂದ ಹೊಟ್ಟೆಪಾಡಿಗೋ, ಹೊಸ ಅವಕಾಶ ಹುಡುಕಿಕೊಂಡೋ ಬಂದಿರುವ ಅಂತವನು ಎಲ್ಲೆಲ್ಲೂ ಸಿಗುತ್ತಾರೆ. ಇಂದಿನ ಬೆಂಗಳೂರಿನ ತುಂಬಾ ಅಂತವರು ಇದ್ದಾರೆ. ಐಟಿ-ಬಿಟಿ ಗದ್ದಲದಲ್ಲಿ ಒಂದು ಕಾಲದಲ್ಲಿ ಮುಂಬೈಗೆ ಹೋದ ಹಾಗೆ ಈಗ ಬೆಂಗಳೂರಿಗೆ ದೇಶದ ಮೂಲೆ ಮೂಲೆಯಿಂದ ವಲಸಿಗರು ಬಂದು ನೆಲೆಗೆ ತಡಕಾಡುತ್ತಿದ್ದಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ. ಕೆಲವರು ಹಿಂದಿರುಗುತ್ತಾರೆ. ಇದು ಊರು ಬಿಟ್ಟ ನಮ್ಮೆಲ್ಲರ ಕತೆ.

ಸಿಡ್ನಿಯ ಒಪೇರಾ ಹೌಸ್ ನಲ್ಲಿನ ಸೂರ್ಯಾಸ್ತಆಸ್ಟ್ರೇಲಿಯದ ಹಲವು ವಿಶ್ವವಿದ್ಯಾಲಯಗಳು ಪ್ರತಿ ವರ್ಷ ವಲಸಿಗರ ಬರವಣಿಗೆಯ ಸಂಕಲನವನ್ನು ಹೊರತರುತ್ತವೆ. ಅದರಲ್ಲಿ ಗುಳೆ ಬಂದವರ ಬಹು-ಸಂಸ್ಕೃತಿಯನ್ನು ಬಿಂಬಿಸುವ ಬರಹಗಳಲ್ಲದೆ, ಅವರು ಆಸ್ಟ್ರೇಲಿಯವನ್ನು ನೋಡುವ ರೀತಿಯ ಬಗ್ಗೆ ಅಪಾರ ಕುತೂಹಲವಿರುತ್ತದೆ. ಈಸ್ಟ್-ಯೂರೋಪಿಯನ್ನರಿಂದ ಹಿಡಿದು ಮಿಡ್ಲ್-ಈಸ್ಟ್, ಇಂಡಿಯ ಉಪಖಂಡ, ಏಶಿಯಾದ ಎಲ್ಲ ಕಡೆಯವರಿಂದಲೂ ಬರಹಗಳಿರುತ್ತವೆ. ಹಳೆಯ ಆಸ್ಟ್ರೇಲಿಯನ್ನರನ್ನು ಹೊಸದಾಗಿ ಬಂದವರು ಹೇಗೆ ನೋಡುತ್ತಾರೆ, ಇಂಗ್ಲೀಷನ್ನು ಹೇಗೆಲ್ಲಾ ಜಗ್ಗಿಸಿ ಬಗ್ಗಿಸುತ್ತಾರೆ ಎಂಬುದೂ ಅಲ್ಲಿಯ ಒಂದು ವೈಶಿಷ್ಟ್ಯ.

ಕನ್ನಡ ನೆಲದಲ್ಲಿ ಬಂದು ನೆಲೆಯೂರಿ, ಬೇರು ಬಿಟ್ಟು, ನಂತರ ಕನ್ನಡದಲ್ಲಿ ನಮ್ಮ ಹಾಗೇ ಬರೆಯುವವರು ನಿಮಗೆ ಹಲವರು ಸಿಗುತ್ತಾರೆ. ಆದರೆ ಹೊಸದಾಗಿ ಬಂದವರು, ಕನ್ನಡ ನೆಲಕ್ಕಿನ್ನೂ ಹೊಂದಿಕೊಳ್ಳದವರು, ನಮ್ಮನ್ನು ಫ್ರೆಶ್ ಆಗಿ ನೋಡುವವರು ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ, ಏನನ್ನುತ್ತಾರೆ ಎಂಬುದೂ ದಾಖಲಾಗಬೇಕಲ್ಲವೆ? ಅದರಲ್ಲಿ ನಮ್ಮನ್ನು ನಾವೇ ಹೊಸದಾಗಿ ನೋಡಿಕೊಳ್ಳುವ ವಿಶಿಷ್ಟ ಸಂದರ್ಭ ಒದಗಿ ಬರುತ್ತದಲ್ಲವೆ? ಭಾಷೆ ಶುದ್ಧವಾಗಿರಬೇಕಾಗಿಲ್ಲ. ಆದರೆ ಬದುಕಿನ ಶುದ್ಧ ಕ್ಷಣಗಳು, ಒಳನೋಟಗಳು ಕಾಣ ಸಿಗುತ್ತವಲ್ಲವೆ? ಹರಕು-ಮುರುಕು ಕನ್ನಡವಾದರೂ ನಮ್ಮ ನೆಲ, ನಮ್ಮ ನಡವಳಿಕೆ ಅವರಿಗೆ ಹೇಗೆ ಕಾಣುತ್ತವೆ ಎಂಬ ಕುತೂಹಲ ನಮಗಿರಬೇಕಲ್ಲವೆ? ನಾಡು ನುಡಿಯ ರಾಜಕೀಯದ ಬೇಲಿಯನ್ನು ಮೀರಿ ಈ ಕೆಲಸ ಆಗಬೇಕಲ್ಲವೆ? ಹೊರಗೆ ಹೋಗಿ ಅನಿವಾಸಿಗಳಾಗಿ ಬರೆಯುವ ಕನ್ನಡಿಗರ ಬಗ್ಗೆಗಿನ ಕುತೂಹಲದಷ್ಟೇ, ನಮ್ಮ ನಡುವಿನ ಅನಿವಾಸಿ ಬದುಕಿನ ತವಕ ತಲ್ಲಣಗಳು ನಮಗೆ ದಕ್ಕುವುದು ಹೇಗೆ ಎಂದು ಯೋಚಿಸಬೇಕಾಗಿದೆ.
ಪುಟದ ಮೊದಲಿಗೆ
 
Votes:  7     Rating: 3.29    
 
 
ಸಂಬಂಧಿಸಿದ ಲೇಖನಗಳು
  ಯಡಿಯೂರಪ್ಪನವರು ಬೀದರಿಗೆ ಬಂದ ವೃತ್ತಾಂತವು
  ಧಾರಾಳ ಮಾತು ನಮಗೇ ಆಪತ್ತು!
  ಏಳು ಕಲಾವಿದೆಯರ ಏಳು ವರ್ಣಗಳು
  ರಾಮ ಭಕ್ತ ಹನುಮನೋ, ಹನುಮ ಭಕ್ತ ರಾಮನೋ
  `ಅಲ್ನೋಡಿ ಕಲೀರಿ' ಅಂದ್ರೇನು ದರ್ಶನ್?
  ಹುಲ್ಲಿನ ಮೇಲೆ ಕೂತ ಹುಡುಗ ರಾಮುಲು
  ಜಾಗತೀಕರಣ ನೀತಿಕಥಾ-6: ಗುರುಚರಿತೆ
  ನ್ಯೂಯಾರ್ಕ್ ಜಿಮ್ ಬಳ್ಳಾರಿ ದೇವರ ನೋಡಲು ಬಂದ ಕಥೆ!
  ಶಿಕ್ಷಣ ಮೀಸಲು ನೀತಿಯನ್ನು ನೀವೂ ಬೆಂಬಲಿಸಿ
  ಯೋಗರಾಜ್ ಭಟ್ ಬರೆದ `ಪಂಚರಂಗಿ' ಕವಿತೆಗಳು
  ನೋವೆಂದರೆ ಅಳು ಮಾತ್ರವೇ? :ಹರೀಶ್ ಬರಹ
  ರಾಖೀ ಹಬ್ಬದ ದಿನ ವಿಲಾಸಣ್ಣನ ನೆನಪು
  ಭಿಕ್ಷುಕರು ಮತ್ತು ಸಾಹಿರ್ ಸಾಲುಗಳು: ದಿವಾಕರ್ ಬರಹ
  ಕನ್ನಡ ಯುವ ಬರಹಗಾರರಿಗೆ ಟೊಟೊ ಪುರಸ್ಕಾರ
  ಕನ್ನಡದ ಜಗನ್ಮೋಹಿನಿ ಹರಿಣಿಯೊಂದಿಗೆ ಒಂದಷ್ಟು ಹರಟೆ
  ಪೆಜತ್ತಾಯ ಬರೆದ ತ್ರಿಚಕ್ರಿ ಗೋವಿಂದ ಭಟ್ಟರ ಕಥೆ
  ಜಾಗತೀಕರಣ ನೀತಿಕಥಾ-5: ಕಲ್ಲು ಸಿಕ್ಕರೆ ಕೊಳ್ಳಿರೋ...
  ಏನೂ ನನ್ನದಲ್ಲವೆಂಬ ಸ್ವಾತಂತ್ರ್ಯ:ನಾಗಶ್ರೀ ನಂಬಿರುವುದು
  ಸ್ವಾತಂತ್ರ್ಯ ಅಂದ್ರೆ ಏನು?:ಸುಶ್ರುತ ಕೇಳಿದ ಪ್ರಶ್ನೆಗಳು
  ಮೆಟ್ರೋ ಬದಿಯಲ್ಲೇ ಮಲ್ಲಿಗೆ ದಂಡೆಯ ಪರಿಮಳ
  ಗುಬ್ಬಚ್ಚಿಗಳಿಗೆ ಸ್ವಾತಂತ್ರ್ಯದ ಕಾಳು: ಹೇಮಾ ಬರಹ
  ಸ್ವಾತಂತ್ರದ ಮೊದಲ ಕ್ಷಣಗಳು:ಅಯ್ಯಂಗಾರ್ ನೆನಪುಗಳು
  ಕೆಂಡಸಂಪಿಗೆ ಕಮೆಂಟಿಗರು ಮೊನ್ನೆಯಿಂದಲೇ ಸ್ವತಂತ್ರರು!
  ಹಳ್ಳಿ ಹೈಕಳಿಗೆ ಬೇಡದ ಕನ್ನಡ ಶಾಲೆ: ಪೆಜತ್ತಾಯ ಚಿಂತನೆ
  ಅನು ಪಾವಂಜೆ ಬರೆದ ಅಜ್ಜನ ಮನೆಯ ನೆನಪುಗಳು
  ಒಬ್ಬ ಅತಿಸಾಮಾನ್ಯನ ಗೊಣಗಾಟ : ಸುದರ್ಶನ್ ಬರಹ
  ಮುಂಬೈನ ಮಂಕಿ ಬ್ರಿಡ್ಜ್ ನಲ್ಲೊಬ್ಬ ಪತಿತ ಪಾವನ ತಿರುಕ
  ಗ್ರೆಗರಿಯವರ ಪ್ರಶ್ನೆಗಳಿಗೆ ಯಾರು ಉತ್ತರಿಸುತ್ತಾರೆ?
  ಅಮೇರಿಕಾ ದೇಶದ ಅಂಗಳದ ಅಂಗಡಿಗಳು
  ಗವಾಕ್ಷಿಯಲ್ಲಿ ಬಂದಿರುವ ಡಬ್ಬಿಂಗ್ ಪಿಶಾಚಿ!
  ಮಹಾನುಭಾವ ಬಿ.ಆರ್.ಪಂತುಲು:ಬಸವರಾಜು ಬರಹ
  ನಾನೂ ಲಾಂಗ್ ಜಂಪ್ ಹಾರಿದೆ: ಆರ್.ಜಿ.ಭಟ್ ಬರಹ
  ಆಸ್ಟ್ರೇಲಿಯಾ ಪತ್ರ: ದೇವರ ನಂಬದ ಸ್ತ್ರೀ ಪ್ರಧಾನಿ
  ತೆಂಗಿನ ಜುಟ್ಟೂ ತಮ್ಮನ ಜುಟ್ಟೂ: ಪರೀಕ್ಷಿತಾ ಬರಹ
  ಸ್ಯಾನ್ ಬಾರ್ನ್ ಪ್ರಾಯೋಗಿಕ ಕೃಷಿ ಕ್ಷೇತ್ರ: ವೆಂಕಟೇಶ್ ಬರಹ
  ಸವಣೂರಿನ ಭಂಗಿಗಳು ತೋರಿಸಿದ ಸತ್ಯಗಳು
  ಗ್ರೆಗರಿ ಕಳಕೊಂಡದ್ದು,ಎಂ ಆರ್ ಪಿ ಎಲ್ ಕಳೆದುಕೊಂಡದ್ದು
  ನಾರೀಕೇರಳ...ಮಳೆ,ಸುದ್ದಿರಾಜಕೀಯ:ಕನಕ ಬರಹ
  ಜಾಗತೀಕರಣ ನೀತಿಕಥಾ- ಕತೆಯೆಂಬ ಕತೆ
  ಇಟ್ಟಿಗೆ ಮಣ್ಣಿನ ರಾಶಿಯ ಮುಂದೆ..:ಲಕ್ಷ್ಮಿ ಕುಡ್ಲ ಬರಹ
  ಅಕ್ರಮ ಗಣಿ ಕಂಡರೂ ನಾವು ಯಾಕೆ ಕುರುಡರು?
  ಮಂಗಳೂರಲ್ಲಿ ಪತ್ರಾವೋ ಉಪವಾಸ ಕುಂತಿದ್ದರು...
  ಗ್ರೆಗರಿ ಪತ್ರಾವೊಗಾಗಿ ವೈದೇಹಿ ಮೊರೆ
  ಗ್ರೆಗರಿ ಪತ್ರಾವೋ ಮನೆಗೆ ಜೆ.ಸಿ.ಬಿ. ಎರಗಿದ ಕಥೆ
  ಅರವತ್ತರ ಉಲ್ಲಾಸದಲ್ಲಿ ನಸೀರುದ್ದೀನ್ ಷಾ: ಬಸು ಬರಹ
  ಜಾಗತೀಕರಣ ನೀತಿಕಥಾ 3: ಸಿಐಡಿ ಹೇಳಿದ ಕತೆ
  ಆಸ್ಟ್ರೇಲಿಯಾ ಓಲೆ: ಓದಲು ಬಂದು ತಾಯಾದವರ ಕಥೆ
  ಗಣಿಯಿಂದ ಹೊರಬರುತ್ತಿರುವ ದುರ್ನಾತಗಳು
  ಆಳುವವರೂ,ಆಳಿಸಿಕೊಳ್ಳುವವರೂ,ಪ್ರಜಾಪ್ರಭುತ್ವವೂ....
  ಈ ಗೋಕಾಕ್ ಎಂದರೆ ಯಾರು? ಹೃಷಿಕೇಶ್ ಬರಹ
  ಫುಟ್ಬಾಲ್, ಮಂಡೇಲಾ ಮತ್ತು ಒಂದು ಕವಿತೆ
  ಅಹಲ್ಯೆಯಾಗಬೇಕಿದ್ದವಳು ಏಡಿ ಹಿಡಿದದ್ದು....
  ರಾಧಜ್ಜಿ ಸೀಕರ್ಣೆ ಬೇಡಾ ಅಂದ ಕಥೆ
  ಬದಲಾದ ಕಾಲಮಾನ: ರಾಜೇಶ್ವರಿ ತೇಜಸ್ವಿ ಬರಹ
  ಈ ಪೈಶಾಚಿಕತೆಗೆ ಕೊನೆಯೇ ಇಲ್ಲವೇ?