ಸೆಪ್ಟೆಂಬರ್ ೩, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಒಂಭತ್ತನೇ ತರಗತಿಯ ತೊಂಭತ್ತರ ಅಜ್ಜ ಅಯ್ಯೋ ತೀರಿಹೋದರಲ್ಲ...    
ಸುದರ್ಶನ್
ಶನಿವಾರ, 22 ಆಗಸ್ಟ್ 2009 (06:00 IST)
ತೊಂಭತ್ತರ ಅಜ್ಜನ ಬತ್ತದ ಉತ್ಸಾಹ

ಐದಾರು ವರ್ಷದ ಕೆಳಗೆ ಕೀನ್ಯಾದ ಈ ಅಜ್ಜನ ಫೋಟೋ ನೋಡಿದ್ದೆ. ಪುಟ್ಟ ಪುಟ್ಟ ಹುಡುಗರ ನಡುವೆ ನಾಲ್ಕನೇ ಕ್ಲಾಸಿನಲ್ಲಿ ಕೈ ಎತ್ತಿ ಕೂತಿದ್ದಾನೆ. ಎಂಬತ್ತು ದಾಟಿದವನಲ್ಲಿ ಹತ್ತು ವರ್ಷದ ಮಗುವಿನ ಉತ್ಸಾಹ ಮತ್ತು ಪಾಠ ಕಲಿಯುವ ಗಾಂಭೀರ್ಯ. ಆ ಮುಖದಲ್ಲಿ ಕಂಡ ಕಲಿಯುವ ಒತ್ತಾಸೆ ನನ್ನನ್ನು ಹಿಡಿದಿಟ್ಟಿತ್ತು. ಹಲವರಿಗೆ ಆ ಫೋಟೋದ ಬಗ್ಗೆ, ಆ ಅಜ್ಜನ ಬಗ್ಗೆ ಅಭಿಮಾನದಿಂದ ಹೇಳಿಕೊಂಡು ಓಡಾಡಿದ್ದೆ.

ಕೀನ್ಯಾದಲ್ಲಿ ಉಚಿತ ಪ್ರಾಥಮಿಕ ಶಿಕ್ಷಣವನ್ನು ಜಾರಿಗೆ ತಂದೊಡನೆ ಕಿಮಾನಿ ನ್‌ಗಾನ್‌ಗ ಮರೂಗೆಗೆ ತಾನೂ ಓದಬೇಕು ಅನಿಸಿತು. ಚಿಕ್ಕ ವಯಸ್ಸಲ್ಲಿ ಹಲವು ಕಾರಣಗಳಿಂದಾಗ ಓದು ಬರಹ ಕಲಿಯಲು ಅವನಿಗೆ ಆಗಿರಲಿಲ್ಲ. ಈಗಲಾದರೂ ಓದಿದರೆ ತಾನೇ ಬೈಬಲ್ ಓದಿಕೊಳ್ಳಬಹುದು ಎಂದು ಈ ಐದು ಮಕ್ಕಳ ತಂದೆ, ಮೂವತ್ತು ಮೊಮ್ಮಕ್ಕಳ ಅಜ್ಜನ ಆಸೆಯಾಗಿತ್ತು. ಅಲ್ಲದೆ ತನಗೆ ಬರುತ್ತಿದ್ದ ಪಿಂಚಣಿಯಲ್ಲಿ ಏನೋ ಮೋಸವಾಗುತ್ತಿರಬಹುದೆಂಬ ಗುಮಾನಿ ಬೇರೆ ಇತ್ತು. ಅದಕ್ಕಾಗಿ ಜತೆಗೆ ಲೆಕ್ಕವನ್ನೂ ಕಲಿಯಬೇಕೆಂದು ಹಟತೊಟ್ಟ. ಬ್ರಿಟೀಷ್ ಸೆಟ್ಲರ್ಸರ ವಿರುದ್ಧದ ಮವ್ ಮವ್ ಚಳವಳಿಯಲ್ಲಿ ಪಾಲ್ಗೊಂಡಾಗ ಯುದ್ಧದಲ್ಲಿ ಬಲಗಾಲಿನ ಹೆಬ್ಬೆಟ್ಟು ಕತ್ತರಿಸಿಹೋಗಿತ್ತು. ತುಸುವೇ ಕುಂಟುತ್ತಿದ್ದ. ಐವತ್ತರ ದಶಕದಲ್ಲಿ ಕೀನ್ಯಾ ಬಿಡುಗಡೆ ಪಡೆಯಿತು. ಆದರೆ ವಿಧುರನಾದ ಕಿಮಾನಿಯ ಓದು ಬರಹದ ಆಸೆಗೆ ಕುಮ್ಮಕ್ಕು ಸಿಕ್ಕಲೇ ಇಲ್ಲ.

ಬತ್ತದ ಉತ್ಸಾಹ- ಕಿಮಾನಿ ಮರೂಗೆಉಚಿತ ಶಿಕ್ಷಣದ ಕಾನೂನು ಜಾರಿಗೊಂಡಿದ್ದೇ ಕಿಮಾನಿಯ ಆಸೆ ಗರಿಗೆದರಿತು. ಪಶ್ಚಿಮ ಕೀನ್ಯಾದ ಊರ ಬಳಿಯ ಶಾಲೆಗೆ ಸೇರಿಕೊಳ್ಳಲು ಹೋದ. ಅಲ್ಲಿಯ ಟೀಚರರು ಅವನನ್ನು ಸುಮ್ಮನೇ ಹೋಗು ಎಂದು ಓಡಿಸಿದರಂತೆ. ‘ತಲೆ ಕೆಟ್ಟಿರಬೇಕು ಅಥವಾ ಯಾರನ್ನೋ ಹುಡುಕಿಕೊಂಡು ಬಂದಿರಬೇಕು’ ಎಂದು ಅವರೆಲ್ಲಾ ಮೊದಲಿಗೆ ತಿಳಕೊಂಡಿದ್ದರಂತೆ. ನಂತರ ಅವನ ಶಾಲೆಗೆ ಸೇರುವ ಆಸೆ ಕೇಳಿ ನಕ್ಕು ಕಳಿಸಿಬಿಟ್ಟರಂತೆ. ಆ ಶಾಲೆಯ ಹೆಡ್‌ಮಿಸ್ಟ್ರೆಸ್ ಜೇನ್ ಒಬಿಂಚು ಅವನನ್ನು ಗಂಭೀರವಾಗಿ ತೆಕ್ಕೊಳ್ಳದೆ ನಾಕಾರು ಸಲ "ವಾರ ಬಿಟ್ಟು ಬಾ, ತಿಂಗಳು ಬಿಟ್ಟು ಬಾ" ಎಂದು ಹೇಳಿ ಸಾಗಾ ಹಾಕುತ್ತಿದ್ದಳಂತೆ. ಅವನು ಸರಿಯಾಗಿ ವಾರವೋ, ತಿಂಗಳೋ ಬಿಟ್ಟು ಹಾಜರಾಗುತ್ತಿದ್ದನಂತೆ. ಕಡೆಗೆ ದಾರಿ ಕಾಣದೆ ೮೪ ವರ್ಷದ ಅಜ್ಜನನ್ನು ನಾಕನೇ ಕ್ಲಾಸಿಗೆ ಸೇರಿಸಿಕೊಂಡಳು. ಅವನ ಜತೆ ಅವನ ಇಬ್ಬರು ಮೊಮ್ಮಕ್ಕಳೂ ಅದೇ ಕ್ಲಾಸಿನಲ್ಲಿ ಇದ್ದರು. ಹೇಗಾದರೂ ಓದಿ ಪಶು ವೈದ್ಯಕೀಯ ಡಿಪ್ಲೋಮಾ ಪಡೆಯಬೇಕೆಂಬ ತನ್ನ ಆಸೆಯನ್ನು ಕಿಮಾನಿ ಹೇಳಿಕೊಂಡಿದ್ದ.

ನಂತರ ಎರಡು ವರ್ಷ ಒಂದು ದಿನವೂ ತಪ್ಪದೆ ಕಿಮಾನಿ ಮರೂಗೆ ಶಾಲೆಗೆ ಹಾಜರಾಗುತ್ತಿದ್ದ. ಮಕ್ಕಳಂತೆ ಮಂಡಿಯವರೆಗೂ ಸಾಕ್ಸ್ ತೊಟ್ಟು, ಶೂಸ್ ಹಾಕಿಕೊಂಡು, ಶಾಲೆಯ ಯೂನಿಫಾರ್ಮಿಗೆ ಹೊಂದುವಂತ ನೀಲಿ ಬಣ್ಣದ ಶರ್ಟು ತೊಟ್ಟು ಎಲ್ಲ ಮಕ್ಕಳಂತೆ ಪಾಠ ಕಲಿಯುತ್ತಿದ್ದ. ಆದರೆ, ಸಿಗರೇಟು ಸೇದುವುದನ್ನು ಟೀಚರರು ಎಷ್ಟು ಹೇಳಿದರೂ ಬಿಡುತ್ತಿರಲಿಲ್ಲ. ಆದರೆ ಕಲಿಯುವುದರಲ್ಲಿ ಅತೀವ ಆಸಕ್ತಿ. ತನ್ನ ಕ್ಲಾಸಿನಷ್ಟೇ ಅಲ್ಲ, ಶಾಲೆಯ, ಊರಿನ, ಹಾಗು ದೇಶದ ಮಕ್ಕಳಿಗೇ ಸ್ಪೂರ್ತಿ ಆಗಿಬಿಟ್ಟಿದ್ದ. ೨೦೦೫ರಲ್ಲಿ ಮೊತ್ತ ಮೊದಲ ಬಾರಿ ವಿಮಾನ ಹತ್ತಿ ನ್ಯೂಯಾರ್ಕಿಗೆ ಹೋಗಿ ಯೂಎನ್‌ನಿನ ಮಿಲೇನಿಯಮ್ ಡೆವಲಪ್‌ಮೆಂಟ್ ಸಮ್ಮಿಟ್‌ನಲ್ಲಿ ಉಚಿತ ಪ್ರಾಥಮಿಕ ಶಿಕ್ಷಣ ಎಷ್ಟು ಮುಖ್ಯ ಎಂದು ಮಾತಾಡಿದ್ದ. ಗಿನ್ನೆಸ್‌ ಬುಕ್ಕಿನಲ್ಲಿ ಪ್ರಾಥಮಿಕ ಶಾಲೆ ಸೇರಿದ ಅತಿ ಹೆಚ್ಚು ವಯಸ್ಸಿನವ ಎಂದು ದಾಖಲಾದ.

ಮರೂಗೆಯ ಬರೆಯುವ ಉತ್ಸಾಹಮೊನ್ನೆ ಆಗಸ್ಟ್ ೧೪ರಂದು, ತನ್ನ ೯೦ನೇ ವಯಸ್ಸಿನಲ್ಲಿ ಕಿಮಾನಿ ಮರೂಗೆ ಹೊಟ್ಟೆ ಕ್ಯಾನ್ಸರಿನಿಂದ ತೀರಿಹೋದ. ಸುದ್ದಿ ಕೇಳಿ ನನಗೆ ಏನೋ ಕಳಕೊಂಡ ಭಾವ ತೀವ್ರವಾಗಿ ಕಾಡಿತು. ಆರು ವರ್ಷದ ಕೆಳಗೆ ಅವನ ಫೋಟೋ ನೋಡಿದಾಗ ಅವನು ನನ್ನ ತಲೆಯನ್ನು ಹೊಕ್ಕು ಕೂತುಬಿಟ್ಟಿದ್ದ. ಮಕ್ಕಳ ಶಿಕ್ಷಣದ ಸಾಮಾಜಿಕ ನ್ಯಾಯದ ಬಗ್ಗೆ ಏನೇನೋ ದನಿಗಳನ್ನೆಬ್ಬಿಸುತ್ತಾ ಇದ್ದ. ಅವಕಾಶ ಮತ್ತು ಏಳ್ಗೆಯ ಬಗ್ಗೆ ನನ್ನ ಜತೆ ಮಾತಾಡುತ್ತಲೇ ಇದ್ದ. ಇದೀಗ ಅವನ ಸಾವಿನ ಹೊತ್ತು, ಗೊತ್ತಿಲ್ಲದ ಗೆಳೆಯನನ್ನು ಕಳಕೊಂಡಂತೆ, ತಲೆಯಲ್ಲೊಂದು ದನಿ ಸ್ತಬ್ಧವಾದಂತೆ ವಿಚಿತ್ರ ವೇದನೆಯನ್ನು ತಂದಿತು. ಅವನಿಗೆ ತೊಂಬತ್ತು ವರ್ಷವಾಗಿದ್ದರೂ ಹತ್ತು ವರ್ಷದ ಹುಡುಗ ಅಕಾಲಿಕವಾಗಿ ಸತ್ತನೇನೋ ಅನ್ನುವ ಭಾವ ಕಾಡಿತು. ಓದು ಪೂರೈಸಲಾದರೂ ಅವನು ನೂರಿನ್ನೂರು ವರ್ಷ ಬದುಕಬೇಕಿತ್ತು ಅನಿಸಿತ್ತು.

ಅವನ ಫೋಟೋವನ್ನು ಮೊನ್ನೆ ಮೊನ್ನೆ ನೋಡಿದಂತಿತ್ತು. ಅವನ ಸಂಗತಿಗಳನ್ನು ಮತ್ತೆ ಹುಡುಕಿದೆ. ಓದಲೇಬೇಕಂಬ ಅವನ ಒತ್ತಾಸೆಯನ್ನು ಬಿಟ್ಟುಕೊಡದೇ ಇದ್ದದ್ದು ಸಮಾಧಾನ ತಂದಿತು. ಆದರೆ ಇತ್ತೀಚಿನ ಚುನಾವಣೆ ಸಂದರ್ಭದ ಗಲಾಟೆಯಲ್ಲಿ ಅವನ ಮನೆಗೆ ಬೆಂಕಿ ಹಚ್ಚಿ, ಅವನ ಬಳಿ ಇದ್ದುದೆಲ್ಲವನ್ನೂ ದೋಚಿಬಿಟ್ಟಿದ್ದರು. ಆರೋಗ್ಯ ಕೆಡುತ್ತಿದ್ದ ಅವನನ್ನು ಮುದುಕರ ಆಶ್ರಯವೊಂದಕ್ಕೆ ಸೇರಿಸಿದ್ದರು. ಕಡೆಕಡೆಗೆ ತಾನು ಶಾಲೆಗೆ ಹೋಗಲಾಗದ್ದರಿಂದ, ಟೀಚರರು ಆಶ್ರಯದಲ್ಲಿ ತಾನಿದ್ದಲ್ಲಿಗೇ ಬಂದು ಪಾಠ ಹೇಳಿಕೊಡಬೇಕೆಂದು ಬೇಡಿಕೊಂಡಿದ್ದ. ತಾನು ಅಂದುಕೊಂಡಂತೆ ಪಶುವೈದ್ಯ ಆಗದಿದ್ದರೂ, ಕೋಟ್ಯಾಂತರ ಮಕ್ಕಳಿಗೆ ಸ್ಪೂರ್ತಿಯಾಗಿಬಿಟ್ಟಿದ್ದ.

ಸಹಪಾಠಿಗಳೊಂದಿಗೆ ಮರೂಗೆಅಮೇರಿಕದ ದಕ್ಷಿಣದಲ್ಲಿ ಕರಿಯರ ಜತೆ ಕೆಲಸ ಮಾಡುವ ಸಮಾಜಸೇವಕಿಯೊಬ್ಬಳು ಹೇಳಿದ ಮಾತು ನೆನಪಾಯಿತು. ದೇಶ ಸೇವೆ, ಸಮಾಜ ಸೇವೆ ಎಂದು ಬೇರೆಯವರಿಗಾಗಿ ದುಡಿಯುತ್ತೇವೆ ಎಂಬೆಲ್ಲಾ ಬಡಾಯಿ ಬಿಟ್ಟು ತೀವ್ರ ಸ್ವಾರ್ಥದಿಂದ ಕೆಲಸಮಾಡಬೇಕು ಅಂತ. ನನ್ನ ಬದುಕು ಹಸನಾಗಲು ನನ್ನ ಸುತ್ತಲ ಸಮುದಾಯ, ಸಮಾಜ ಸರಿಯಿರಬೇಕು, ನ್ಯಾಯಯುತವಾಗಿ ಇರಬೇಕು ಎಂಬ ಸ್ವಾರ್ಥದ ಭಾವ ನಮ್ಮ ಕೆಲಸಕ್ಕೆ ಅಡಿಯಾಸೆ ಆಗಿದ್ದರೆ ಒಳ್ಳೆಯದು ಎಂಬುದು ಆಕೆಯ ಮಾತಿನ ಇಂಗಿತ. ಅಂತಹ ಸ್ವಾರ್ಥದ ಮನಸ್ಸು ತುಂಬಾ ಉತ್ಸಾಹಿತ ಮನಸ್ಸೂ, ಕಡೆಯವರೆಗೂ ಸೋಲದ ಮನಸ್ಸು ಆಗಿರುತ್ತದೆ ಕೂಡ. ಕಿಮಾನಿ ಮರೂಗೆ ಉಳಿದವರಿಗೆ ಸ್ಪೂರ್ತಿಯಾಗಿದ್ದು ಅಂತಹ ಒಂದು ಸ್ವಾರ್ಥದಿಂದಾಗಿಯೇ.

ಕೆಲವು ವರ್ಷದ ಹಿಂದೆ ಕೇರಳದ ಅಜ್ಜಿಯೊಬ್ಬಳು ಇಳಿವಯಸ್ಸಿನಲ್ಲಿ ಕಂಪ್ಯೂಟರ್ ಕಲಿಯುತ್ತಿದ್ದಾಳೆಂದು ಓದಿದ್ದೆ. ಅವಳೀಗ ಏನಾಗಿರಬಹುದು ಎಂದು ಹುಡುಕುವಂತಾಗಿದೆ. ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ಹೇಳುತ್ತೀರ?

[ಚಿತ್ರಗಳು-ಸಂಗ್ರಹದಿಂದ]

ಪುಟದ ಮೊದಲಿಗೆ
 
Votes:  6     Rating: 4.83    
 
 
ಸಂಬಂಧಿಸಿದ ಲೇಖನಗಳು
  ವಸ್ತಾರೆ ವಿರಚಿತ ಗೋಲಗುಮ್ಮಟ ಪಢಾಯಿ:೧
  ಅಫ್ಘಾನ್:ಬೇಸ್ತು ಬೀಳುತ್ತಿರುವ ಭಾರತ
  ಕವಲಕ್ಕಿ ಡೈರಿ:ರಕ್ತದಾನಕ್ಕೆ ಅಂಜಿಕೆ ಯಾತಕ್ಕೆ?
  ಯಾರಾದರೂ ಸಿಕ್ಕಿಂ ನೋಡಿದ್ದೀರಾ?
  ಆಸ್ಟ್ರೇಲಿಯಾಪತ್ರ: ‘ಕಮೀಲಿಯಾ’ ಎಂಬ ಕೂಗು
  ಜಿಕೆಆರ್ ಪುಸ್ತಕಪ್ರೀತಿ:ಅರುಣ್ ಕೂಡ್ಲಿಗಿ ಕವಿತೆಗಳು
  ಪ್ರೇಮ ಶೇಖರ ಕಾಲಂ:ಅರ್ಧ ಮುಗಿಸಿ ಹೋಗುತ್ತಿರುವ ಅಮೇರಿಕಾ
  ಕವಲಕ್ಕಿ ಡೈರಿ: ಕೆಲವು ಅಪಸ್ಮಾರ ಪ್ರಸಂಗಗಳು
  ಮೇಘಾಲಯದ ಮಾಯಾಗುಹೆಗಳು
  ಯೋಗೀಂದ್ರ ಕಾಲಂ:ಕೇಟಿಯ ಹೆರಿಗೆ ರಜೆ
  ವಿಕಿಲೀಕ್ ಹೇಳಿದ ಸತ್ಯಗಳು: ಪ್ರೇಮಶೇಖರ ಕಾಲಂ
  ಸ್ಟೋನ್ ಹಿಲ್ ಡೈರಿ:ಕಪ್ಪುಕುಂಡೆಯ ಕಟ್ಟಿರುವೆಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ:ಕಸ್ತೂರಿಬಾಯರಿಯವರ ಕಥೆಗಳು
  ಪೂರ್ವಾಂಚಲ ಪುರಾಣ : ತವಾಂಗ್,ತವಾಂಗ್ ಮತ್ತೂ ತವಾಂಗ್
  ಉಳ್ಳವರ ಔದಾರ್ಯವೂ,ಇಲ್ಲದವರ ಋಣಭಾರವೂ
  ದೈವನಿಂದಕರೆಂಬ ಕೀರ್ತಿಶನಿಗಳ ಕುರಿತು
  ಜಿಕೆಆರ್ ಪುಸ್ತಕ ಪ್ರೀತಿ: ವೀರಣ್ಣ ಮಡಿವಾಳ ಕವಿತೆಗಳು'
  ಯೋಗೀಂದ್ರ ಕಾಲಂ:ಹಾರು ವಿಮಾನಕೆ ಎರಗೋ ಹಕ್ಕಿ
  ಸ್ಟೋನ್ ಹಿಲ್ ಡೈರಿ: ಹಿಮ ಚುಂಬಿತ ನರ ಲೋಕ
  ಪ್ಯಾಪಿಲಾನ್ ಮಾಡುವ ಇಂತಿ ನಮಸ್ಕಾರಗಳು....
  ಬಹಿರ್ದೆಸೆಯ ಸೌಂದರ್ಯೋಪಾಖ್ಯಾನ
  ಈಶಾನ್ಯದ ತಂಪುತಾಣ ಶಿಲ್ಲಾಂಗ್
  ಅರೇಬಿಯಾ ಕಾಲಂ:ಮರುಭೂಮಿಯೆಂದರೆ ಬರಿಯ ಮರಳಲ್ಲ
  ಇನ್ನ ರಾಮಮೋಹನರಾಯರು ಯಾಕೆ ಎಲ್ಲವನ್ನೂ ಬರೆಯಲಿಲ್ಲ?
  ಕವಲಕ್ಕಿ ಡೈರಿ: ಕೆಲವು ಡಾಕ್ಟರುಗಳನ್ನು ನೆನೆದು
  ಜಿಕೆಆರ್ ಪುಸ್ತಕಪ್ರೀತಿ: ರಮೇಶರ ಸಾಸುವೆ ಹೂ ಕವಿತೆಗಳು
  ಕವಲಕ್ಕಿ ಡೈರಿ: ಆಪರೇಷನ್ ಎಂಬ ಕುಟುಂಬ ಯೋಚನೆ
  ಹೊನ್ನ ಮುಡಿಯವಳು ಇನ್ನೆಂದು ಬರುವಳು?
  ಮಡಗಾಸ್ಕರ್ ಡೈರಿ : ಎ ಮ್ಯೂಸಿಕಲ್ ವಯಲೆನ್ಸ್
  ವಸ್ತಾರೆ ಬರೆಯುವ ಪಟ್ಟಣ ಪುರಾಣ: ನಾನೂ ತೋರಣನೂ
  ಅರೇಬಿಯಾ ಕಾಲಂ: ಸೌದಿಯಲ್ಲಿ ಸೂರಿಲ್ಲದವರ ಸಮಾಚಾರ
  ಮಡಗಾಸ್ಕರ್ ಸಮಾಚಾರ : ಉನ್ನತಿ
  ಪೂರ್ವಾಂಚಲ ಪುರಾಣ : ಚಿರಾಪುಂಜಿಯ ಹಸಿರುಯಾತ್ರೆ
  ಜಿ.ಕೆ.ಆರ್ ಪುಸ್ತಕಪ್ರೀತಿ :ಆರಿಫ್ ರಾಜಾ ಕವಿತೆಗಳು
  ಧಮ್ಮದೀಕ್ಷೆಯೂ, ಯಶೋಧರೆಯರ ಕಷ್ಟಗಳೂ
  ಹಾರುವ ಕನಸುಗಳೂ ಬೀಳುವ ದುಃಸ್ವಪ್ನಗಳೂ
  ಮಡಗಾಸ್ಕರ್ ಸಮಾಚಾರ : ಮೃತ್ಯು ಮುಟ್ಟದ ಹೂವು ಮಿಲಿಸ್
  ಎಂ.ವೆಂಕಟಸ್ವಾಮಿ ಅನುವಾದಿಸಿದ ಒಂದು ನಾಗಾ ಸತ್ಯಕಥೆ
  `ಹೊರಗೆ ಮತ್ತು ಒಳಗೆ': ವಸ್ತಾರೆ ಪಟ್ಟಣ ಪುರಾಣ
  ತರೀಕೆರೆ ಏರಿಯಾ : ಕೊಲ್ಕತ್ತೆಯ ಕನ್ನಡಿಗ- ಕುಮಾರಪ್ಪ
  ಸ್ಟೋನ್ ಹಿಲ್ ಡೈರಿ:ಮಿಂಚುಹುಳ ನಕ್ಷತ್ರ ದೀಪಸಾಗರ
  ಜಿಕೆಆರ್ ಪುಸ್ತಕಪ್ರೀತಿ :ವಿಷ್ಣು ನಾಯ್ಕರ ‘ಜಂಗುಂ ಜಕ್ಕುಂ'
  ಮಡಗಾಸ್ಕರ್ ಸಮಾಚಾರ : ಮಂಗನ ಮಗು ಮತ್ತು ದಿ ಜಂಗಲ್ ಬುಕ್
  ಕವಲಕ್ಕಿ ಡಾಕ್ಟರ ಡೈರಿ : ವಿಷಮಶೀತ ಜ್ವರವಿಶೇಷ
  ಪ್ರೇಮಶೇಖರ ಕಾಲಂ:ಕಸಾಬ್ ಆಚೆಗಿನ ಸತ್ಯಗಳು
  ಮರುಭೂಮಿಯೆಂಬ ಸ್ವರ್ಗ ಮತ್ತು ನರಕ
  ತರೀಕೆರೆ ಏರಿಯಾ: ಮಳೆಯಲ್ಲಿ ನೋಡಿದ ಮದುಮಗಳು
  ಪೂರ್ವಾಂಚಲ ಪುರಾಣ : ಉನಕೋಟಿ ಮತ್ತು ಕಾಮಾಖ್ಯ
  ಯೋಗೀಂದ್ರ ಕಾಲಂ:ಇಲ್ಲಿ ಈಗ ಅತಂತ್ರ ಆಡಳಿತದ ಭಯ!
  ಪಟ್ಟಣ ಪುರಾಣ:ಅನನ್ಯತೆಯೆಂದರೆ ಅತಿರೇಕವಾಗಿರುವುದೇ?
  ಪ್ಯಾಪಿಲಾನ್ :ಇಲ್ಲಿನ ಜಿಯಾಗ್ರಫಿ ಮತ್ತು ನಮ್ಮವರ ಭಯಾಗ್ರಫಿ
  ಬೆನಝೀರ್ ಹತ್ಯೆ-ವಿಶ್ವಸಂಸ್ಥೆಯ ವರದಿ:ಪ್ರೇಮಶೇಖರ ಕಾಲಂ
  ಅರೇಬಿಯಾ ಕಾಲಂ: ಈ ಊರಿನ ಸೂಕೆಂಬ ಸಂತೆ
  ಇಲ್ಲಿ ಈಗ ಬಿಸಿಲ ಹಬ್ಬ : ಯೋಗೀಂದ್ರ ಕಾಲಂ
  ಮಡಗಾಸ್ಕರ್ ಸಮಾಚಾರ : ಒಂದು ಮಲಗಾಸಿ ದೇವಪುರಾಣವು