ಸೆಪ್ಟೆಂಬರ್ ೭, ೨೦೧೦
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮಕ್ಕಳ ಸಂಪಿಗೆಯಲ್ಲಿ ಮುದ್ದು ಬರೆದ ಕವಿತೆ    
ಸಂಪಾದಕ
ಶನಿವಾರ, 12 ಸೆಪ್ಟೆಂಬರ್ 2009 (03:41 IST)

ಮನಮುಟ್ಟುವ ಪ್ರತಿಮೆಗಳು ತುಂಬಿದ ಈ ಪ್ರಬುದ್ಧ ಕವಿತೆಯನ್ನು ಬರೆದಿರುವಳು ಪುಟಾಣಿ ಹುಡುಗಿ ಮುದ್ದು ತೀರ್ಥಹಳ್ಳಿ. ಹನ್ನೊಂದು ವರ್ಷದ ಈ ಹುಡುಗಿ ಆರನೇ ಕ್ಲಾಸಿನಲ್ಲಿ ಓದುತ್ತಿದ್ದಾಳೆ. ಇತ್ತೀಚೆಗೆ ತಾನೇ ಹಠ ಮಾಡಿ ಇಂಗ್ಲಿಶ್ ಮೀಡಿಯಮ್ ಶಾಲೆ ಬಿಟ್ಟು ಕನ್ನಡ ಮೀಡಿಯಮ್ ಶಾಲೆ ಸೇರಿದ್ದಾಳೆ. ಕವಿತೆಗಳೇ ಅಲ್ಲದೆ ಕತೆ, ಲೇಖನಗಳನ್ನೂ ಬರೆಯುವ ಈ ಅಪಾರ ಪ್ರತಿಭೆಯ ಹುಡುಗಿ ತನ್ನದೇ ಕೈಬರಹದಲ್ಲಿ ‘ಮಂದಾನಿಲ’ ಎಂಬ ದ್ವೈಮಾಸಿಕ ಪತ್ರಿಕೆ ತಂದು ಅದನ್ನು ಆಸಕ್ತರಿಗೆ ಕಳಿಸುತ್ತಾಳೆ.

ಮತ್ತೆ ಬಂತಲ್ಲ ಮಳೆ

ಮುಂಗಾರಿನ ಆರಂಭದ ದಿನಗಳಲಿ
ಆರಂಭ ಶೂರನಂತೆ ಅಬ್ಬರಿಸಿ
ಬತ್ತಿ ಬರಡಾದ ಹೊಲ ಬಾವಿ
ನದಿ ಝರಿ ಕೆರೆಗಳ ಹಲ್ಕಿರಿದು ಅಣಕಿಸಿ
ಬರುವುದೇ ಇಲ್ಲವೆಂಬಂತೆ ಹೋದದ್ದು
ಮತ್ತೆ ಬಂತಲ್ಲ ಮಳೆ

ಹೋಗಿಯೇ ಇರಲಿಲ್ಲವೆಂಬಂತೆ
ಬಂದು ಹನಿದು ಸುರಿದು ಸುರಿದು
ದಿನ ರಾತ್ರಿಗಳ ಲೆಖ್ಖವಿಡದ ಹಠಮಾರಿ
ಅಪವಾದವೆಂಬಂತೆ ಹಳು ಕೊಟ್ಟು
ಮಕ್ಕಳು ಶಾಲೆಗೆ ಹೊರಟಾಗಲೇ
ಬಾಣಂತಿ ಕೂಸಿನ ಬಟ್ಟೆ
ಒಣಗಿಸುವಾಗಲೇ
ಮತ್ತೆ ಬಂತಲ್ಲ ಮಳೆ

ಬಂದದ್ದು ಮತ್ತೆ ನಿಲ್ಲಲಿಲ್ಲ
ದಿಕ್ಕು ತಪ್ಪಿ ಹರಿದವು ನದಿ ತೊರೆ ಎಲ್ಲ
ಈ ಪರಿಯ ಹಪಹಪಿ
ಭೂಮಿಗೂ ಇರಲಿಲ್ಲ
ಭೂಮಿಯ ಮೇಲಿನ ಯಾವ
ರೈತನಿಗೂ ಇರಲಿಲ್ಲ.

ಮನೆ ಮಠಗಳಿಗೆಲ್ಲಾ ನೀರು ನುಗ್ಗಿ
ವನರಾಶಿ ಬುಡ ಮುರಿದು ನೆಲ ಅಪ್ಪಿ
ಜನದನಗಳು ನೀರಿಗೆ ಹಾರವಾದದ್ದೇ
ಮನತಣಿದು ಪ್ರಸನ್ನವಾದದ್ದು

ರೈತ ನಾಟಿಗೆ ಗದ್ದೆಗಳಲಿ ನೀರಿಗಿಳಿಯುವುದ
ಕಾಯುವ ಹೊತ್ತು
ಬಾಲಕನ ಶವವ ನೀರಿಂದ
ಮೇಲೆಳೆಯುವ ಹೊತ್ತು
ನೀರು ತುಂಬಿದ ಮನೆಗಳಲಿ
ಬಟ್ಟೆ ಪಾತ್ರೆ ತಡಕಾಡುವ ಹೊತ್ತು
ಸೊಂಟಮಟ್ಟ ನೀರಿನಲ್ಲಿ ನಿಂತು
ಬೀಳುವ ಮಾಡಿಗೆ
ಊರುಗೋಲು ನೆಡುವ ಹೊತ್ತು
ಹೊತ್ತು ನೋಡಿಯೇ
ಮತ್ತೆ ಬಂತಲ್ಲ ಮಳೆ!

-ಮುದ್ದು ತೀರ್ಥಹಳ್ಳಿ

ಮುದ್ದು ತೀರ್ಥಹಳ್ಳಿ

ಪುಟದ ಮೊದಲಿಗೆ
 
Votes:  5     Rating: 5    
 
 
ಸಂಬಂಧಿಸಿದ ಲೇಖನಗಳು
  ಸಚಿನ್ ದೇವರಾದರೂ ಕ್ರಿಕೆಟ್ ಧರ್ಮವಲ್ಲ
  ಬಿ ಎ ಬಿ ಎ ಎಂದೇಕೆ ಬೀಳುಗಳೆಯುವಿರಿ? ಸೀಮಾ ಸಮತಲ ಬರಹ
  ಧಾರವಾಡದ ಮೊದಲ ದಿನಗಳು : ಸ್ಮಿತಾ ಮಾಕಳ್ಳಿ ಬರಹ
  ಬಂಗಾರದಂತ ಎನ್ನ ಚಾದರ: ಸೀಮಾ ಸಮತಲ ಬರಹ
  ಕಾಲೇಜು ಸಂಪಿಗೆ: ಗುರುವಿನ ಗುಲಾಮನಾಗದ ತನಕ...
  ನನ್ನ ಶತ್ರುವೂ ಅಕ್ಕ, ನನ್ನ ಗೆಳತಿಯೂ ಅಕ್ಕ
  ಕಾಲೇಜು ಸಂಪಿಗೆ : ಲಾರಾಳ ಲೌವ್ಲಿ ಲೋಕ
  ಕಾಲೇಜು ಸಂಪಿಗೆ : ಸೀಮಾ ಸಮತಲ ಬರೆದ ಹಿಮಾಲಯ ಕಥನ
  ಕಾಲೇಜು ಸಂಪಿಗೆಯಲ್ಲಿ ಕಾವ್ಯ ಬರೆದ ಕವಿತೆಗಳು
  ಮಕ್ಕಳ ಸಂಪಿಗೆಯಲ್ಲಿ ಸಂಕೇತನ ಬಣ್ಣಗಳು
  ಕಾಲೇಜು ಸಂಪಿಗೆಯಲ್ಲಿ ಲಕ್ಷ್ಮಿ ವಾರಣಾಶಿ ಬರೆದ ಕವಿತೆ
  ಮಕ್ಕಳ ಸಂಪಿಗೆ: ಭಗವತಿ ಹೇಳುವ ಮೂರು ಕಥೆಗಳು
  ‘ಅಜ್ಜಿಮನೆಯಲ್ಲಿ’ ೬ : ದೇವಸ್ಥಾನದಲ್ಲೊಂದು ಪ್ರಶ್ನೆ
  ಕಾಲೇಜು ಸಂಪಿಗೆ: ಜಾತಿರಗಳೆಯಿಲ್ಲದ ಬಾಲ್ಯ
  ಮಕ್ಕಳ ಸಂಪಿಗೆಯಲ್ಲಿ ಜೀವನ್ ಜೋಸ್ ಬಣ್ಣಗಳು
  ಮಕ್ಕಳ ಸಂಪಿಗೆ: 'ಅಜ್ಜಿಮನೆಯಲ್ಲಿ' ಧಾರಾವಾಹಿ
  ಕಾಲೇಜು ಸಂಪಿಗೆ: ಸ್ಕೂಟಿ ಏರಿ ರಾಜಕುಮಾರಿ
  ಕಾಲೇಜು ಸ೦ಪಿಗೆಯಲ್ಲಿ ಕಾರ್ತಿಕ್ ಬರೆದ ಕವಿತೆ
  ಮಕ್ಕಳ ಸಂಪಿಗೆ: ತೋಪಿನಲ್ಲಿ ಮರಕೋತಿ ಆಡುವಾಗ
  ಕಾಲೇಜು ಸಂಪಿಗೆ: ಈಜುಕೊಳದಲ್ಲೇ ತೀರಿಹೋದಳು ಪುಟ್ಟಿ
  ನವೋದಯದ ದಿನಗಳು ೩- ಫಸ್ಟ್ ಸಂಡೆ ಮತ್ತು ಪರೀಕ್ಷೆ ಭಯ
  ಅಜ್ಜಿಮನೆಯಲ್ಲಿ ೩: ಟಂಗ್ ಟ್ವಿಸ್ಟರ್ಸು-ಹೇಳಿ ನೋಡೋಣ?
  ಅಜ್ಜಿಮನೆಯಲ್ಲಿ ೨- ಮೋಡದ ಹಾಡು
  ಕಾಲೇಜು ಸಂಪಿಗೆ: ಅಪ್ಪ ಅಮ್ಮನ ಜಗಳದ ನಡುವೆ ಗುಲ್ಮೊಹರ್
  ಮಕ್ಕಳ ದಿನ ವಿಶೇಷ : ಅಜ್ಜಿ ಮನೆಯಲ್ಲಿ ಅಳು ಬಂದಿದ್ದು
  ಕಾಲೇಜು ಸಂಪಿಗೆಯಲ್ಲಿ ವೇದಾ ನೂಪುರ ಬರೆದ ಕವಿತೆಗಳು
  ಕಾಲೇಜು ಸಂಪಿಗೆಯಲ್ಲಿ ಚರಿತ ಬರೆದ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಗ್ರೀಷ್ಮಾಳ ಚಿತ್ರಗಳು
  ಕಾಲೇಜು ಸಂಪಿಗೆ: ಮಲೆಯಾಳ ನೆಲದಲ್ಲಿ ಕಾಡು ಮಕ್ಕಳ ಕನಸು
  ಮಕ್ಕಳ ಸಂಪಿಗೆಯಲ್ಲಿ ವರುಣ ಚೆಲ್ಲಿದ ಬಣ್ಣಗಳು
  ನವೋದಯದ ದಿನಗಳು ೨ - ಅಲ್ಲೇನು ಕೋತಿ ಕುಣಿತೈತಾ..?
  ಕಾಲೇಜು ಸಂಪಿಗೆ: ಪರೀಕ್ಷೆ, ಫೇಲು, ಅಮ್ಮ, ಅಪ್ಪ ಇತ್ಯಾದಿ
  ಕಾಲೇಜು ಸಂಪಿಗೆಯಲ್ಲಿ ನವೋದಯದ ದಿನಗಳು
  ಕಾಲೇಜು ಸಂಪಿಗೆ : ಇಲ್ಲಿ ನೀರು ಮಾರಾಟಕ್ಕಿದೆ!
  ಮಕ್ಕಳ ಸಂಪಿಗೆಯಲ್ಲಿ ಅಮ್ಮ ಹೇಳಿದ ಕತೆ
  ಮಕ್ಕಳ ಸಂಪಿಗೆಯಲ್ಲಿ ವಿವೇಕನ ಫ್ಯಾಂಟಸಿಗಳು
  ಕಾಲೇಜುಸಂಪಿಗೆಯಲ್ಲಿ ರಂಗನತಿಟ್ಟು
  ಮಕ್ಕಳ ಸಂಪಿಗೆಯಲ್ಲಿ ಪೂಜಾಶ್ರೀ ಬರೆದ ಬಣ್ಣಗಳು
  ಕಾಲೇಜು ಸಂಪಿಗೆ: ತೊತ್ತೊ ಚಾನಳ ಸ್ವಚ್ಛಂದ ಲೋಕ
  ಮಕ್ಕಳ ಸಂಪಿಗೆ: ಸತ್ತೇನೇ ಎಲೇ ಗಿಡ್ಡಕ್ಕಿ!?
  ಕಾಲೇಜು ಸಂಪಿಗೆ: ರಕ್ಷಾಬಂಧನದ ಬಂಧ
  ಮಕ್ಕಳ ಸಂಪಿಗೆಯಲ್ಲಿ ಕಿರಣನ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಮಗನ ಭಾಷಾ ಸಾಹಸಗಳು
  ಮಕ್ಕಳ ಸಂಪಿಗೆಯಲ್ಲಿ ಭಗವತಿ ಹೇಳಿದ ಕಥೆ
  ಕಾಲೇಜು ಸಂಪಿಗೆಯಲ್ಲಿ ದಿಲೀಪ ಬರೆದ ಕವಿತೆ
  ಕಾಲೇಜು ಸಂಪಿಗೆಯಲ್ಲಿ ಗೌತಮ ಬರೆದ ಕಥೆ
  ಮಕ್ಕಳ ಸಂಪಿಗೆಯಲ್ಲಿ ಸಿತಾರಾ ಮಾಡಿದ ಭಾಷಣ
  ಕಾಲೇಜು ಸಂಪಿಗೆಯ ಮೊದಲ ಲೇಖನ
  ಮಕ್ಕಳ ಸಂಪಿಗೆಯಲ್ಲಿ ಲಕ್ಕಿ ಸನ್
  ಮಕ್ಕಳ ಸಂಪಿಗೆಯಲ್ಲಿ ಉಲ್ಲಾಸದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಂಬರ್ ನೀಲ್ ಬರೆದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ಅಪ್ರಮೇಯ
  ಮಕ್ಕಳ ಸಂಪಿಗೆಯಲ್ಲಿ ಆಶಿತ್ ಭಟ್
  ಮಕ್ಕಳಸಂಪಿಗೆಯಲ್ಲಿ ಹಾಸನದ ಬಣ್ಣಗಳು
  ಮಕ್ಕಳ ಸಂಪಿಗೆಯಲ್ಲಿ ‘ಚುಪ್ರಿ'ಯ ಕವಿತೆಗಳು