ಮೇ ೨೧, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಕನ್ನಡಿಗರಿಗ್ಯಾಕೆ ಡಬ್ಬಾದ ಚಿತ್ರಗಳು;ಪ್ರಕಾಶ್ ಬಾಬು ಪ್ರಶ್ನೆ    
ಪ್ರಕಾಶ್ ಬಾಬು
ಸೋಮವಾರ, 7 ಮೇ 2012 (04:31 IST)

ಕನ್ನಡ ಚಿತ್ರರಂಗದಲ್ಲೀಗ ಡಬ್ಬಿಂಗ್ಗಿನ ಡಬ್ಬಾ ಶಬ್ದ. ಖಾಲಿ ಡಬ್ಬದಲ್ಲಿ ಕಲ್ಲುಗಳನ್ನು ಹಾಕಿ ಅಲ್ಲಾಡಿಸಿದರೆ ಉಂಟಾಗುತ್ತದಲ್ಲಾ ಅಂತಾ ಶಬ್ದ.

ಕೆಲವರಿಗೆ ಹೊಟ್ಟೆಯ ಚಿಂತೆ, ಕೆಲವರಿಗೆ ಪ್ರತಿಷ್ಠೆಯ ಚಿಂತೆ, ಇನ್ನೂ ಕೆಲವರಿಗೆ ಇದು ಕನ್ನಡ ಸಂಸ್ಕೃತಿಯ ಚಿಂತೆ. ನಮ್ಮ ನಾಡನ್ನು, ನಮ್ಮ ಭಾಷೆಯನ್ನು, ನಮ್ಮ ಸಂಸ್ಕೃತಿಯನ್ನು ಕಾಪಾಡಲು, ರಕ್ಷಣೆ ಮಾಡಲು ಎಷ್ಟೆಲ್ಲಾ ಜನ ಕಟಿಬದ್ಧರಾಗಿ ನಿಂತಿದ್ದಾರಲ್ಲಾ ಅಂತಾ ಆಶ್ಚರ್ಯವಾಗುತ್ತಿದೆ. ಈ ರೀತಿಯ ಕಾಳಜಿಯನ್ನು ಒಂದು ಒಳ್ಳೆಯ ಚಿತ್ರ ಮಾಡುವುದರಲ್ಲಿ ತೋರಿಸಿದ್ದರೆ ಅಥವಾ ಒಂದು ಟಿವಿ ಧಾರಾವಾಹಿ ಮಾಡುವುದರಲ್ಲಿ ತೋರಿಸಿದ್ದರೆ ಮೆಚ್ಚಬಹುದಿತ್ತು. ಈ ಚಲನಚಿತ್ರ ಕಾರ್ಖಾನೆಯ ಜನಕ್ಕೆ ಸ್ವಲ್ಪವಾದರೂ ಈ ನಾಡಿನ ಜನಗಳು ಚಲನಚಿತ್ರಗಳಿಂದ ಏನನ್ನು ನಿರೀಕ್ಷಿಸುತ್ತಾರೆ ಎನ್ನುವ ಪ್ರಾಥಮಿಕ ಜ್ಞಾನವಿದ್ದಿದ್ದರೆ, ಈ ನೆಲದ ಸಂಸ್ಕೃತಿಯ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದಿದ್ದರೆ, ಜಾಗತಿಕ ಮಟ್ಟದಲ್ಲಿ ಹೆಸರು ಮಾಡದಿದ್ದರೂ ಕಡೆಯಪಕ್ಷ ಈ ನೆಲಕ್ಕೆ ಹತ್ತಿರವಾದ, ರೀಮೇಕ್ ಅಲ್ಲದ, ಸದಭಿರುಚಿ ಚಿತ್ರಗಳನ್ನು ತಯಾರಿಸಲು ಪ್ರಯತ್ನಿಸಿದ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವ ಸೌಜನ್ಯವನ್ನು ತೋರುತ್ತಿದ್ದರು, ಎಲ್ಲವನ್ನೂ ವ್ಯಾಪಾರದಲ್ಲಿಯೇ ಅಳೆಯುವ ಈ ಮಂದಿ ಪದೇ ಪದೇ ಭಾಷೆಯ ವಿಷಯವನ್ನೆತ್ತಿ ಅದನ್ನೇ ಮಾರುವ ಸರಕಾಗಿಸಿಕೊಂಡಿದ್ದಾರೆ.

ಯಾವ್ಯಾಗ ಈ ಕಾರ್ಖಾನೆಯ ಮಂದಿಯ ಬುಡ ಅಲುಗಾಡುವುದೋ ಆಗೆಲ್ಲಾ ಎಲ್ಲಿಲ್ಲದ ಭಾಷಾ ಪ್ರೀತಿ ಉಕ್ಕಿ ಹರಿಯುತ್ತದೆ. ಯಾವುದೇ ಕ್ಷೇತ್ರಕ್ಕಿಲ್ಲದ ಪ್ರಾಮುಖ್ಯತೆ ಈ ಚಲನಚಿತ್ರ ಕಾರ್ಖಾನೆಗೆ ಯಾಕೆ ಅಂತಾ? ಅಷ್ಟಾಗಿಯೂ ಏನಾದರೂ ಈ ಕ್ಷೇತ್ರದಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗಳಾಗಿದ್ದರೆ ಅದಕ್ಕೆ ಪ್ರಾಮುಖ್ಯತೆ ಸಿಗಲಿ. ಅದೇ ಮಚ್ಚು, ಅದೇ ಲಾಂಗು ಹಿಡಿದು ಹೊಡೆದಾಡುವ, ಪ್ರೀತಿ ಪ್ರೇಮ ಅಂತಾ ಮರ ಸುತ್ತುವ ಅಥವಾ ಡ್ಯಾನ್ಸ್ ನೆಪದಲ್ಲಿ ಕವಾಯತು ಮಾಡುವುದನ್ನೇ ಇನ್ನು ಎಷ್ಟು ವರ್ಷ ಈ ಭಾರತದ ಜನ ಈ ಚಲನಚಿತ್ರ ಕಾರ್ಖಾನೆಗಳು ಉತ್ಪಾದನೆ ಮಾಡುವ ಮನರಂಜನೆ ಎಂಬ ಸರಕನ್ನು ನೋಡುತ್ತಾ ಕುಳಿತಿರುತ್ತಾರೋ ಆ ದೇವನೇ ಬಲ್ಲ.

ಇನ್ನು ಡಬ್ಬಿಂಗ್ ಬಗ್ಗೆ ಹೇಳುವುದಾದರೆ.. ಡಬ್ಬಿಂಗ್ ನಿಜಕ್ಕೂ ಚಿತ್ರರಂಗದ ಒಂದು ಕೆಟ್ಟ ತಂತ್ರ. ಮೂಕಿಚಿತ್ರಗಳ ಕಾಲದಲ್ಲಿ ಈ ತೊಂದರೆಯೇ ಇರಲಿಲ್ಲ. ಚಿತ್ರಗಳು ಮಾತಾಡಲು ಶುರು ಮಾಡಿದಾಗ ಕೂಡ ಸಮಸ್ಯೆ ಇರಲಿಲ್ಲ, ಆ ಆ ಭಾಷೆಯ ಜನ ಅಲ್ಲಲ್ಲೇ ಅವರ ಭಾಷೆಯ ಚಿತ್ರಗಳನ್ನು ನೋಡಿಕೊಳ್ಳುತ್ತಿದ್ದರು. ಯಾವಾಗ ಬೇರೆಯವರ ಚಿತ್ರಗಳು ನಮ್ಮಲ್ಲಿ, ನಮ್ಮ ಚಿತ್ರಗಳು ಬೇರೆಯವರಲ್ಲಿ(ಹರಿದಾಡಲೇ ಇಲ್ಲ) ಹರಿದಾಡಲು ಶುರು ಮಾಡಿದವೋ ಅಲ್ಲಿಂದಲೇ ಈ ಸಮಸ್ಯೆ ಪ್ರಾರಂಭವಾದದ್ದು. ಟೆಲಿವಿಷನ್ ಬಂದ ನಂತರ ಈ ಸಮಸ್ಯೆ ಇನ್ನೂ ಉಲ್ಬಣವಾಯಿತು.

ಆದರೆ ಚಿತ್ರದಲ್ಲಿ ಬಳಕೆಯಾಗುವ ಭಾಷೆ ಯಾವುದೇ ಆಗಿರಲಿ ಅದು ಬರಿ ಸಂವಹನ ಮಾಧ್ಯಮ ಮಾತ್ರವಲ್ಲ ಅಥವಾ ಬರಿ ಮಾತು, ಸಂಭಾಷಣೆ ಮಾತ್ರವಲ್ಲ. ಭಾಷೆ ಎಂದರೆ ಅದು ಒಂದು ನೆಲಕ್ಕೆ ಸಂಬಂಧಿಸಿದ್ದು, ಸಂಸ್ಕೃತಿಗೆ ಸಂಬಂಧಿಸಿದ್ದು, ಅದು ಒಂದು ಜನಾಂಗವನ್ನು ಗುರುತಿಸುವ ರೀತಿ. ಇನ್ನು ಚಲನಚಿತ್ರಗಳಲ್ಲಿ ಡಬ್ಬಿಂಗ್‌ನಿಂದಾಗುವ ಸಮಸ್ಯೆಗಳನ್ನು ಗುರುತಿಸೋಣ.. ಜಗತ್ತಿನ ಯಾವುದೇ ಚಿತ್ರವನ್ನು ನಾವು ನೋಡಿದರೂ ಸಬ್ ಟೈಟಲ್‌ನೊಂದಿಗೆ ಅದನ್ನು ಅದೇ ಭಾಷೆಯಲ್ಲಿ ನೋಡಲಿಚ್ಚಿಸುತ್ತೇವೆ. ಚಿತ್ರದಲ್ಲಿ ಮೂಡುವ ಪಾತ್ರಗಳೊಂದಿಗೆ ಅವರಾಡುವ ಮಾತು ಆ ನೆಲದ ಸೊಗಡನ್ನು ಹೊಂದಿರುತ್ತೆ. ಈಗ ಕುರೋಸೊವನ ಜಪಾನಿ ಚಿತ್ರವನ್ನು ಕನ್ನಡದಲ್ಲಿ ಡಬ್ ಮಾಡಿ ನೋಡಿ ಹೇಗೆನಿಸುತ್ತದೆ. ನಿಜಕ್ಕೂ ಆ ಪಾತ್ರಗಳನ್ನು ಕನ್ನಡದಲ್ಲಿ ಊಹಿಸಲೂ ಅಸಾಧ್ಯ. ಹಾಗೇ ಕನ್ನಡದ ಪಾತ್ರಗಳನ್ನು ಜಪಾನ್ ಅಥವಾ ಇನ್ನ್ಯಾವುದೇ ಭಾಷೆಯಲ್ಲಿ ನೋಡಲಸಾಧ್ಯ. ಹೀಗೆ ಕಲ್ಪಿಸಿಕೊಳ್ಳಿ: ನವಿಲಿನ ಒಂದು ಚಿತ್ರದ ತುಣುಕಿಗೆ ಕೋಗಿಲೆಯ ಶಬ್ದವನ್ನು, ಕೋಗಿಲೆಯ ಚಿತ್ರಕ್ಕೆ ನವಿಲಿನ ಶಬ್ದವನ್ನೋ ಹಾಕಿ ನೋಡಿ ಆಗ ತಿಳಿಯುತ್ತೆ ಈ ಡಬ್ಬಿಂಗ್ಗಿನ ಅವಾಂತರ ಏನೂ ಅಂತ. ಪಾತ್ರಗಳಾಡುವ ಭಾಷೆ ಬರೀ ಭಾಷೆಯಾಗಿರದೆ ಅದು ಅವರ ಸಂಸ್ಕೃತಿಯ ಒಂದು ಭಾಗವೇ ಆಗಿರುತ್ತದೆ.

‘ದಿ ಯಂಡ್ ಆಫ಼್ ಸಮ್ಮರ್’ ಚಿತ್ರಕೆಲದಿನಗಳ ಹಿಂದೆ ನನ್ನ ಮಗನೊಂದಿಗೆ ನಾನು ಜಪಾನ್ ಚಿತ್ರ ನಿರ್ದೇಶಕ ಓಝೂನ ‘ದಿ ಯಂಡ್ ಆಫ಼್ ಸಮ್ಮರ್’ ಚಿತ್ರವನ್ನು ನೋಡುತ್ತಿದ್ದೆ, ಅದರಲ್ಲಿ ಬರುವ ಹುಡುಗನೊಬ್ಬನ ಪಾತ್ರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ನನ್ನ ಮಗ ಅವನು ಬಳಸುವ ಭಾಷೆಯನ್ನು ಆಲಿಸಿ ಖುಷಿ ಪಡುವುದರೊಂದಿಗೆ ಅವನು ಹೊರಡಿಸುವ ಉಚ್ಛಾರಣೆ ಎಂದೂ ಕೇಳಿರದ, ಆ ಭೌಗೋಳಿಕ ವಾತಾವರಣಕ್ಕೆ, ಆ ಪಾತ್ರಗಳ ಅಭಿನಯಕ್ಕೆ ಬಿಡಿಸಲಾರದ ಬಂಧದಂತೆ ಒಂದರೊಳಗೊಂದು ಬೆಸೆದುಕೊಂಡಿದ್ದವು. ತಾನು ನಿತ್ಯ ನೋಡುವ ಸಿಂಚನ್, ಡೋರೆಮಾನ್ ಪಾತ್ರಗಳನ್ನು ಹಿಂದಿಯಲ್ಲೇ ನೋಡಿದ ನನ್ನ ಮಗನಿಗೆ ಅವು ಜಪಾನಿ ಪಾತ್ರಗಳು ಅಂತಾ ತಿಳಿದಿರಲೇ ಇಲ್ಲ. ಓಝೂ ಸಿನೆಮಾದ ಮೂಲಕ ಜಪಾನ್ ಭಾಷೆ ಹೇಗಿರುತ್ತೆ, ಅದು ಹೇಗೆ ಆ ಪ್ರದೇಶಕ್ಕೆ, ಆ ವಾಸ್ತುಶಿಲ್ಪಕ್ಕೆ, ಆ ಜನರಾಡುವ ಮಾತಿಗೆ ಒಂದು ಸೌಂದರ್ಯವನ್ನು ಸೃಷ್ಟಿಸಿರುತ್ತೆ ಎನ್ನುವುದನ್ನು ನನ್ನ ಮಗ ಅಂದು ತಿಳಿದುಕೊಂಡ.

ಕನ್ನಡಿಗರಾರೂ ಡಬ್ಬಾದ ಚಿತ್ರಗಳನ್ನು ನೋಡುವುದಿಲ್ಲ. ಅವರು ನೋಡಲಿಚ್ಛಿಸುವುದು ತಮಿಳನ್ನು ತಮಿಳಿನಲ್ಲಿ, ಹಿಂದಿಯನ್ನು ಹಿಂದಿಯಲ್ಲಿ, ಇಂಗ್ಲಿಷನ್ನು ಇಂಗ್ಲಿಷಿನಲ್ಲಿ. ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್ ಮಾಡಿ ಯಾರೂ ನೋಡದೇ ಇದ್ದಾಗ ಡಬ್ಬಿಂಗ್ ಬಂದರೂ ಏನು ಪ್ರಯೋಜನ?

ಪುಟದ ಮೊದಲಿಗೆ
 
Votes:  4     Rating: 2.25    
 
 
ಸಂಬಂಧಿಸಿದ ಲೇಖನಗಳು
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ
  ವಿಶ್ವರೂಪಂ ವಿರೋಧದ ಹಿಂದಿನ ಕೆಟ್ಟರೂಪಗಳು:ಸಬೀಹಾ ಬರಹ
  ಎಸ್.ಮಂಜುನಾಥ್ ಕಂಡುಕೊಂಡ ಸಂಕ್ರಾಂತಿಯ ಸತ್ಯಗಳು