ಮೇ ೧೯, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ನಾಗರಾಜ್ ವಸ್ತಾರೆ ಬರೆದ ದಿನದ ಕವಿತೆ    
ನಾಗರಾಜ ವಸ್ತಾರೆ
ಬುಧವಾರ, 16 ಮೇ 2012 (04:28 IST)

ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ನಾಗರಾಜ ವಸ್ತಾರೆ ಬರೆದ ಕವಿತೆ.

ಕನಕಧಾರೆಯ ನೆಪದಲ್ಲಿ
ನಾನು ಅಷ್ಟಿಷ್ಟು ನಂಬುವ ಅಥವಾ  
ಹಿಂದಿನವರು ನಂಬುತ್ತಿದ್ದರೆಂದು ನನ್ನನ್ನೂ ಹಾಗೇ
ನಡೆಸಿಕೊಳ್ಳುವ ಶ್ರೀಮಠದಲ್ಲೊಂದು
ರೀತಿಯಿದೆ ನೀತಿಯಿದೆ
ಹೀಗೊಂದಿಷ್ಟು ಕತೆಯ ಚಾಲ್ತಿಯಿದೆ

ಅಲ್ಲಿನ ಆದಿಗುರು ಆಚಾರ್ಯರೆಂದು
ಆದ್ಯವಾಗಲಿಕ್ಕು ಮೊದಲು ನಡೆದಿದ್ದಂತೆ ಇದು
ಅಂದರೆ ಸಂನ್ಯಾಸಕ್ಕು ಮುಂಚೆ

ಎಂಟೊಂಭತ್ತು ವಯಸ್ಸಿಗೆಲ್ಲ
ಅವರಿಗೆ ಗುರುದೀಕ್ಷೆ
ಯಾಯಿತೆಂದು ಹೇಳುತ್ತಾರೆ

ಆಗಿನ್ನೂ ಬ್ರಹ್ಮಚಾರಿ
ಒಮ್ಮೆಯೊಂದು ಪೂರ್ವಾಹ್ನ
ವಾಡಿಕೆಯಂತೆ ಭಿಕ್ಷೆಗೆ ಹೋಗಿ ಒಂದು
ಗುಡಿಸಲಿನೆದುರು ದೇಹಿ ಅಂದನಂತೆ
ಬಾಲವಟು

ಮನೆಯಾಕೆ ಕಡುಬಡವಿ ಹಣ್ಣು
ಹಣ್ಣಾದ ಮುದುಕಿ ಬೇರೆ
ಇದ್ದೊಂದು ಒಣಗಿದ ನೆಲ್ಲೀಕಾಯಿಯಿತ್ತು
ಇನ್ನೇನೂ ಇಲ್ಲವೆಂದು ಪೇಚಾಡಿ ಅತ್ತು
ಕ್ಷಮಿಸೆಂದು ಅಲವತ್ತಳಂತೆ

ಮುಗುಳ್ನಕ್ಕ ವಟುವು
ಕೂಡಲೆ ಧ್ಯಾನಕ್ಕಿಳಿದು ಸ್ತುತಿಸಿದನಾದರೆ
ಒಮ್ಮಿಂದೊಮ್ಮೆಗಲ್ಲಿ
ಚಿನ್ನದ ನೆಲ್ಲಿಯದೇ ಮಳೆಯಾಯಿತಂತೆ

ಇವೊತ್ತಿಗೂ ಶ್ರೀಮಠದಲ್ಲಿ ಇದನ್ನೇ
ಕನಕಧಾರಾಸ್ತೋತ್ರವೆಂದು ಅನುಗ್ರಹಿಸುವುದಿದೆ
ಧನಸಿದ್ಧಿಗೆಂದು ಮಂದಿ ಪಠಿಸುತ್ತಾರೆ
ಮನಸಾ

ವಿಚಿತ್ರ ತಾನೆ

ಇಷ್ಟಕಾಮ್ಯಕ್ಕಾಗಿ ಹೀಗೆ ಸ್ತುತಿ
ವ್ರತ ನೇಮ ನಿಷ್ಠೆ ಮಾಡಿರೆಂದೊಬ್ಬ ಯತಿ
ಇಂತು ಇತಿಯಂತೆನ್ನುವ ಹಾಗೆ
ಪ್ರತೀತಿ ಹಚ್ಚುವುದೆ

ಹಣಗೂಡುವ ಪವಾಡಗಳು
ಅನಾದಿಯಿಂದಲೂ ಅಧ್ವಾನವೇ
ಇದ್ದಾವು

ಅಲ್ಲದೆ
ಹಣದ ಮಳೆಯೆನ್ನುವ ಈ ಪದ್ಯವಿರಲಿ
ಆ ರೂಪಕವೂ ಎಷ್ಟು ಹೇಯ

* *

ಮುಂದೆ ಸಂನ್ಯಾಸವಾಯಿತು

ಶಿವಾಂಶ
ಸಂಭೂತವಾದ್ದರಿಂದ ಎಡಗೈಯ
ಚಿಟಿಕೆಯೆಂಬಂತೆ ಒಂದಲ್ಲ ಎರಡಲ್ಲ ಹತ್ತೆಂಟು
ಸಹಜ ಪವಾಡಗಳನ್ನು ಮೆರೆದರು
ಅವರು ಭಗವತ್ಪಾದವೆಂದು ಮುಂದೆಲ್ಲ ಅನು
ಯಾಯಿಕೋಟಿ ಕರೆಯಿತು

ಹೀಗಿರುವಾಗೊಮ್ಮೆ ಅವರ ತಾಯಿಯ
ಮುಪ್ಪು ತನ್ನ ವಾತ್ಸಲ್ಯವಾಂಛೆಯಲ್ಲಿ ಬೆಂದು
ಆರ್ದ್ರಗೊಂಡು ದ್ರವಿಸಿ ಮಗನನ್ನು
ನೆನೆಯಿತಂತೆ

ಲೋಕದಲ್ಲಿ ಕೆಟ್ಟ ಮಕ್ಕಳಿದ್ದಾರು
ಆದರಂಥ ತಾಯಿಯಿರಳೆಂದು ಮೊಳಗಿದ
ಮಹಾನುಭಾವನವ ಎಲ್ಲೋ ಇದ್ದವ
ಕರೆದಾಕ್ಷಣ ಮೈದೋರಿಬಿಟ್ಟ

ನಿತ್ಯಸ್ನಾನಕ್ಕಾಗಿ ತಾಯಿ
ನದಿಯತ್ತ ಬಲುದೂರ ನಡೆಯಲಿಕ್ಕೆ
ವಯಸ್ಸು ಸಹಕರಿಸುವುದಿಲ್ಲವೆಂದು ಮನಗಂಡು
ಧ್ಯಾನಿಸಿದರೆ
ಹೊಳೆಯೇ ಹೊರಳಿತಂತೆ
ಸಮೀಪಕ್ಕೆ ಹರಿಯಿತಂತೆ

ಚೆನ್ನಾದ ಕತೆ
ಎಷ್ಟಾದರೂ ನಂಬಲೇಬೇಕು

ನಂಬಿದರಷ್ಟೇ ಇಂಬು
ಮುಂದರಿಕೆಯೆಂದು ಅವರೇ ಹೇಳಿಕೊಟ್ಟದ್ದು
ನಂಬದೆಯೆ ಪವಾಡ ಘಟಿಸುವುದಿಲ್ಲ
ಇಷ್ಟಕ್ಕು

ಮಠ ಹೇಳುವ ಈ ದೃಷ್ಟಾಂತಕ್ಕೆ
ಯಾತಕ್ಕು ಅನಿಸಿದ್ದನ್ನಿಲ್ಲಿ ಅಂದುಬಿಡುತ್ತೇನೆ
ಸ್ವಹಿತ ಸ್ವಂತವೆಂದು
ಹೊಳೆಯ ಹೊರಳು ಬದಲಿಸುವುದು
ನಮ್ಮಲ್ಲಿ ಹಳೆಯ ಚಾಳಿ

ಪರಮ ಮಾನುಷ ಅದು
ದೈವಾಂಶಸಂಭೂತವಲ್ಲದೆ
ಖುದ್ದು ದೇವರಿದ್ದರೂ ಯಾತಕ್ಕೆ
ಮಾಫಿ ಅದಕ್ಕೆ

*  *

ಇಷ್ಟಿದ್ದೂ
ದೇವರನ್ನೂ ಜೀವರನ್ನೂ
ಒಂದೆನ್ನುವ ಅದ್ವೈತಕ್ಕೆ ಸದಾ
ಬದ್ಧವಿರುವೆ

ಜೀವರನ್ನು
ದೇವರಾಗಿಸುವ ಪವಾಡಗತೆಗಳಿಗೆ
ಮಾತ್ರ ಧಿಕ್ಕಾರ

ಪುಟದ ಮೊದಲಿಗೆ
 
Votes:  11     Rating: 4.18    
 
 
ಸಂಬಂಧಿಸಿದ ಲೇಖನಗಳು
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ
  ವಿಕಾಸ್ ನೇಗಿಲೋಣಿ ಕಥೆ ‘ನಮ್ಮ ಹಕ್ಕಿ ಬಿಟ್ಟೆ ಬಿಟ್ಟೆ’
  ನಕ್ಷತ್ರ ಬರೆದ ಕರುಳ ಸಂಕಟದ ಕವಿತೆ