ಮೇ ೨೪, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಮೋಹಿತ ಬರೆದ ನಕ್ಷತ್ರಗೀತೆಗಳು    
ಅಬ್ದುಲ್ ರಶೀದ್
ಬುಧವಾರ, 27 ಜೂನ್ 2012 (01:07 IST)

 ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ರಶೀದ್ ಬರೆದ ಕವಿತೆ.

(೧) 

ಏ ನಕ್ಷತ್ರ ಏನು ಮಾಡಿಬಿಟ್ಟಿರುವೆ
ಈ ನಡುವಯಸ್ಕ ಹೃದಯಕ್ಕೆ
ಇನ್ನೆಂದೂ ನಿಲಲಾಗದಂತೆ.

ಹುಟ್ಟಿದಾಗಿಂದ ಅದುಮಿಟ್ಟಿದ್ದ ಒಂದು ಅಳು,
ಕರುಳೊಳಗೇ ಬಾಯಿಲ್ಲದೆ ಸಿಲುಕಿಕೊಂಡಿದ್ದ
ಒಂದು ಸುಡು ಮಿಂಚಿನಂತಹ ಚೀತ್ಕಾರ,
ಒಂದು ಸುಖದ ಪರಿಮಳದಂತಹ ಬಾಕು
ಇನ್ನು ಉರಿಯುತ್ತ ಇರುವುದು ಇರುವರೆಗೆ

ನಿನ್ನ ಸಣ್ಣ ನಡುವಿನ ಒಂದು ಒದ್ದೆ ಉಮ್ಮಳ
ಯಾವುದೋ ನಕ್ಷತ್ರಪುಂಜ ಹೊರಳುವ
ಹಾಲಾಹಲದಂತೆ ಕೇಳಿಸುವುದು ಇಲ್ಲಿಗೆ,
ಉದುರಿಬಿದ್ದ ಒಂದು ಕಣ್ಣ ಹನಿ
ನದಿಯಂತೆ ಹರಿದು ಈ ಪ್ರಪಾತವ ಸೇರುವುದು,
ಮುಡಿಯ ಸರಿಸಿ ಕಾಣಿಸುವ ನಿನ್ನ ಕಿವಿಯ
ಸಣ್ಣದೊಂದು ನಗ್ನತೆ ಅಪರಿಮಿತ ರತಿ ಸುಖವ
ತೋರಿಸುವುದು,

ಏ ನಕ್ಷತ್ರ ಏನು ಮಾಡಿಬಿಟ್ಟಿರುವೆ
ಈ ನಡುವಯಸ್ಕ ಹೃದಯಕ್ಕೆ
ಇನ್ನೆಂದೂ ನಿಲಲಾಗದಂತೆ

ಹೊರಟು ಹೋಗು ಈ ಜಗದ ಬಾರವೇ
ಹೋಗು ಈ ನಡೆವ ಸುಖ, ಹೊರಳಿ ಅಲ್ಲಿಗೇ
ಬರಬೇಕಾದ ದುಃಖ
ಹೊರಟು ಹೋಗಲಿ ಈ ಇರುವ ಉಣ್ಣುವ
ಕೂಡುವ ಈ ಓಡಾಡುವ ನಿತ್ಯ ಮರಣ
ಹರಿದು ಬರಲಿ ನಿನ್ನ  ಎದೆಯ ಬೆವರ ಪರಿಮಳ
ಈ ನಡುವಯಸ್ಕನ ಸುಡುವ ಎದೆಯ.

ಕಳ್ಳು ಹಾಲಂತವಳೇ
ಬದುಕಿಯೇ ಇಲ್ಲ ಎಂದನಿಸುವ
ಸುಳ್ಳು ದೇವತೆಯೇ
ಒಂದು ವಿಶಾಲ ನದಿಯಂತಹ ನಿನ್ನ ನಡುವನ್ನು
ಕೊಡು ಈ ನಡುವಯಸ್ಕನಿಗೆ
ಬದುಕಲಿಕ್ಕೆ

(೨)
ಹೇ ನಕ್ಷತ್ರ  ನಾವಿಬ್ಬರು ಬೇರೆಂದು ಹೇಗೆ ಬಗೆಯಲಿ?
ನಿನ್ನ ಉಸಿರಿಗೇ ಸುಟ್ಟ ನನ್ನ ತುಟಿಗಳಿಂದ ನಗಲು ನೋಡುತ್ತಿರುವೆ.

ನಿಲಿಸಲಾಗದ ಈ ಅಸಾಧ್ಯ ನಿಟ್ಟುಸಿರು, ಸುಡು ಬಿಸಿಲಿನ ಹಾಗಿರುವ
ನೀನಿಲ್ಲದ ಉರಿ, ಎದೆಯೊಳಗೆ ಹರಿದು ಹೋಗುವ
ಈ ಇನ್ನಿಲ್ಲದಂತಹ ಲಾವಾಗ್ನಿ
ಇವೆಲ್ಲ ಬರೆಯಲು ಮತ್ತು ಓದಲು ಮಾತ್ರ ಇರುವುದು
ಅಂದುಕೊಂಡಿದ್ದೆ.

ಇದೀಗ ನೀ ಹೊರಟ ಮರುಗಳಿಗೆಯೇ
ಇವೆಲ್ಲವೂ ಒಂದಾಗಿ ಮುತ್ತಿಕೊಂಡಿವೆ.
ಮಹಾ ಕಟುಕಿಯಂತೆ
ಹೊರಟವನ ತುದಿಗಣ್ಣಲ್ಲೇ ನಿಲ್ಲಿಸಿ ನೆಲಕ್ಕೆ ಕೆಡವಿರುವೆ.

ನೀ ಬಂದೆ, ಕಂಡೆ, ಕೂಡಿದೆ, ಹೋದೆ
ಒಂದು ಅಗಾಧ ಕಡಲಂತಹ ಉಮ್ಮಳವ
ಮೈಯೆಲ್ಲ ಉಳಿಸಿ.
ಕವಿತೆ ಸಾಲು ಪ್ರತಿಮೆ ಮಣ್ಣಾಂಗಟ್ಟಿ
ಎಲ್ಲವನು ನೆಲದಲ್ಲಿ ಅಲ್ಲಲ್ಲಿ ಚಲ್ಲಾಪಿಲ್ಲಿ ಬೀಳಿಸಿ
ನನ್ನ ಅಷ್ಟೊಂದು ಅಳಿಸಿ!

ಪುಟದ ಮೊದಲಿಗೆ
 
Votes:  5     Rating: 4.2    
 
 
ಸಂಬಂಧಿಸಿದ ಲೇಖನಗಳು
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’
  ಒಂದು ಮಲಯಾಳಂ ಕವಿತಾ ಸಂಕಲನದ ಕುರಿತು ಎಲ್.ಸಿ. ಸುಮಿತ್ರಾ