ಮೇ ೨೬, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ದೀಪ್ತಿ ಬರೆದ ಒಂದಷ್ಟು ಕವಿತೆಗಳು    
ದೀಪ್ತಿ ಭದ್ರಾವತಿ
ಮಂಗಳವಾರ, 17 ಜುಲೈ 2012 (02:08 IST)

‘ಪ್ರತಿ ಕವಿಯು ಕೇಳಿಕೊಳ್ಳಬೇಕಾದ ಪ್ರಶ್ನೆಯೆಂದರೆ;ನಾನೇಕೆ ಬರೆಯಬೇಕು ? ಹೆಸರು ಬರಬೇಕೆಂದೆ ? ಪುಸ್ತಕ ಬಿಡುಗಡೆ ಸಮಾರಂಭ ಆಗಬೇಕೆಂದೇ ?
ಊಹೂಂ... ಕೊನೆಗೂ ಅದು ಬದುಕನ್ನು ಇನ್ನೂ ಆಳವಾಗಿ, ಪ್ರಾಮಾಣಿಕವಾಗಿ, ಕಾವ್ಯ ಎಂಬ ಜ್ಞಾನೇಂದ್ರಿಯದ ಮೂಲಕ ಅನುಭವಿಸುತ್ತಾ, ತಿಳಿಯುತ್ತಾ ಸಾಗುವ ಕಾಲುದಾರಿ ಇದು.’
ಕಾಯ್ಕಿಣಿಯವರು ನನ್ನ ಮೊದಲನೇ ಸಂಗ್ರಹದ ಮುನ್ನುಡಿಯಲ್ಲಿ ಬರೆದ ಮಾತುಗಳು ಇವು.
ನಾನೂ ಅನೇಕ ಬಾರಿ ಇದೇ ಪ್ರಶ್ನೆ ಅಂದರೆ ’ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಯನ್ನು ಎದುರಿಗಿರಿಸಿಕೊಂಡಾಗಲೆಲ್ಲಾ ಪುಟ್ಟ ಇರುವೆಯೊಂದು ದೊಡ್ಡ ಪರ್ವತವೊಂದನ್ನು ಎತ್ತಲು ಪ್ರಯಾಸ ಪಡುವಾಗಿನ ಸ್ಥಿತಿ ನನ್ನದಾಗುತ್ತದೆ. ಈ ರೀತಿಯಾದ ಪ್ರಶ್ನೆಯೊಂದಕ್ಕೆ ಸರಿಯಾಗಿ ಉತ್ತರಿಸಿ ಸಮಾಧಾನ ಪಟ್ಟುಕೊಳ್ಳುವಷ್ಟು ನಾನೇನೂ ಬರೆದಿಲ್ಲ. ಇದೀಗ ತಾನೇ ಆರಂಭ, ಪ್ರಬುದ್ಧ ಉತ್ತರಗಳು ನನ್ನ ’ಆಲೋಚನೆಗೆ ನಿಲುಕದೇ ಇದ್ದರೂ... ಇಷ್ಟಂತೂ ಹೇಳಬಲ್ಲೆ ಬರೆಯಲು ಕೂತ ಕ್ಷಣಗಳಲ್ಲಿ, ನನ್ನದೇ ಆದ ಲೋಕವೊಂದು ಅನಾವರಣಗೊಳ್ಳುತ್ತದೆ. ವಾಸ್ತವಿಕತೆಯ ಯಾವ ಹಂಗಿಗೂ, ಜಂಜಡಗಳಿಗೂ ಸಿಲುಕದೇ ಅಲ್ಲಿನ ನಾನೇ ನಾನಾಗಿ ವಿಹರಿಸುತ್ತೇನೆ. ’ಬರೆಯಬೇಕು’ ಎಂಬ ತುಡಿತವನ್ನು ತಂದಿಡುವ ಆ ಅನಾಮಿಕ ಕ್ಷಣ ನನ್ನನ್ನು ಎಲ್ಲರಿಂದ, ಎಲ್ಲದರಿಂದ, ಎಲ್ಲವೂಗಳಿಂದ ಮುಕ್ತವಾಗಿಸಿ ಸಂಪೂರ್ಣ ತನ್ನೆಡೆಗೆ ಸೆಳೆಯುತ್ತದೆ. ನಾನು ಅವುಗಳ ಎದುರಿನಲ್ಲಿ ನನ್ನನ್ನೇ ಒಡ್ಡಿಕೊಳ್ಳುತ್ತಾ ಸಂಪೂರ್ಣವಾಗಿ ಶರಣಾಗುತ್ತೇನೆ..., ಅಂತಹ ಗಳಿಗೆಗಳು ತೋಳಿನಲ್ಲಿ ಮತ್ತೆ ಮತ್ತೆ ಮೈ ಮರೆಯಬೇಕೆನ್ನಿಸುತ್ತದೆ. ಅದು ನನ್ನ ಪೂರ್ತಿ ಸ್ವಾರ್ಥದ, ನಿಸ್ವಾರ್ಥದ, ಸ್ವಂತದ, ಸ್ವಂತದ್ದಲ್ಲದ ಎಲ್ಲಾ ಅಹಂಗಳ ಬದಿಗಿಟ್ಟು ನೆಮ್ಮದಿಯ ಅರುಸುತ್ತಾ, ಅಲೆಯುತ್ತಾ ಸಿಕ್ಕಷ್ಟು ಬೊಗಸೆಯಲ್ಲಿ ತುಂಬಿಕೊಳ್ಳುತ್ತಾ, ಮತ್ತಷ್ಟು ಬೇಡುತ್ತಾ ನಡೆಯುವ ಆಪ್ತ ಸಮಯದ ಹಾಗೆ ಹೆಜ್ಜೆ ಇಡುವಾಗಲೆಲ್ಲ ಸಿಕ್ಕು, ಹೆಕ್ಕಿಕೊಂಡ ಸಾಲುಗಳ ಇಲ್ಲಿ ಕಾಣಿಸಿದ್ದೇನೆ.

 (೧)

‘ಗ್ರೀನ್ ರೂಮಿನಲ್ಲಿ’
ಬೆರಗುಗಣ್ಣಿನ ಪುಟ್ಟ ಮೊಲಕ್ಕೆ
ಆನೆಗಳ ಕಾಣುವ ತವಕ

ಅವರಿವರ ಕಾಡಿಬೇಡಿ
ಎಲ್ಲರ ಮರೆತು ಹೊಕ್ಕಿಯೇ
ಬಿಟ್ಟಿತು ಗಜಗಳ ಗ್ರೀನ್ ರೂಂ

ಐರಾವತಗಳೆರಡು ಬೀಗುತ್ತಾ ಬಂದವು
ಪುನಃ ಪುನಃ ತಮ್ಮ ಆಭರಣಗಳ
ಸರಿಪಡಿಸಿಕೊಳ್ಳುತ್ತಾ

ತಮ್ಮದೇ ಅಲಂಕಾರವ ತಾವಿಬ್ಬರೇ
ಕನ್ನಡಿಯಲಿ ನೋಡಿ ನೋಡಿ
ನಲಿದವು
ಒಬ್ಬರಿಗೊಬ್ಬರು ತಾವೇ ಹೊಗಳಿಕೊಂಡವು

ಸಮಯ ಕಾದು ಬೆವರತೊಡಗಿತು
ಮದವೇರಿ ಜಿದ್ದಿಗೆ ಬಿದ್ದವು
ಎಡೆಬಿಡದ ಕೆಸರೆರಚಾಟ
ಎದುರುಬದರಾಗಿ ಹಣೆಗೆ ಹಣೆಯ
ಚಚ್ಚಿ ಊಳಿಟ್ಟವು
ಕೋಣೆಯ ಸುತ್ತಲೂ ಗರಗರನೆ
ತಿರುಗಿ ತಿರುಗಿ ಸೆಣೆಸಿದವು

ಸಂಭ್ರಮದಿ ಅವಿತು ಕೂತಿದ್ದ ಶಶದ
ಎದೆಯೊಳಗೆ ಈತ ಭಯದ ಭೂಕಂಪ
ತನಗಾಗಿ ಹಂಬಲಿಸಿ ಕೂತ
ಇನಿಯನ ನೆನಪು ಒತ್ತರಿಸಿ ಬಂದು
ನಿಂತಿತು ಕಣ್ಣಗಾಲಿಗಳೆದುರು
ಚಂಗನೆ ಹಾರಿ
ಹಿಡಿಯಿತು ತನ್ನೂರಿನ ಹಾದಿ ಕ್ಷಣಕ್ಕೂ
ನಿಲ್ಲದೇ...

(೨)

ಕಪ್ಪುಚುಕ್ಕೆ’
ಅಂದೆಂದಿನಿಂದಲೋ ಸಾಲು ಸಾಲು
ಅಕ್ಷರಗಳ ಕಾಲಿನ ಬಳಿ ಕೂತ
ಪೂರ್ಣ ವಿರಾಮದ ಚುಕ್ಕೆಗಳಿಗೊಮ್ಮೆ
ಅರಳಿ ಬೆಳೆದು ಕಾಗದಲೋಕ
ಆಳುವ ಹಂಬಲ
ಒಟ್ಟಾಗಿ ಗುಟ್ಟಾಗಿ ಸಭೆ
ಸೇರಿದವು ತಮ್ಮದೇ ದಂಡು ಕಟ್ಟಿಕೊಂಡು
ದೂರದಾಗಸದ ಮಧುಪರ್ಕವ
ಹೊತ್ತು ತರಲು ಹೊರಟೇಬಿಟ್ಟವು

ಅಂಟಿನಿಂತರು ಒಬ್ಬರ ಅಂಗಿಯ
ತುದಿ ಹಿಡಿದು ಮತ್ತೊಬ್ಬರು
ಮುಗಿಲೆತ್ತರಕೆ ಸರಳರೇಖೆಗಳ
ಚಿತ್ತಾರ
ಮಧುವಿನರಮನೆಯ ಬಾಗಿಲ
ಕೋರೈಸುವ ಮಿಂಚಿಗೆ
ಕಣ್ಣುಗಳು ಮಂಜಾದವು
ರೈಲು, ಹಳಿ ತಪ್ಪಿತು
ಸುಟ್ಟು ಮಸಿಯ ಗುಡ್ಡೆಯಲಿ
ಸಿಲುಕಿಕೊಂಡವು

ಸಿಕ್ಕಿದಲ್ಲಿ ಓಡುತ್ತಾ ಒಬ್ಬರ
ತಲೆಯ ಮೇಲೊಬ್ಬರು ಹತ್ತಿ
ದಾಟಿ ಇಳಿದು ಬಂದು
ಪದಗಳ ಪಾದ ಒರೆಸತೊಡಗಿದವು

(೩)

ರಾಜಕಾರಣ’
ಗಂಟಲು ಆರಿ ಕೂತಿವೆ ಆಳದ
ಬಾವಿಗಳು
ಬಲಿಪೀಠದ ಕುರಿಯಂತೆ
ಸೋಗು ಹಾಕಿ ಭರ್ತಿ ತುಂಬಿದ
ಒಡಲ ಹೀರಿ ಹೀರಿ ತೇಗಿದ ನರಿಗಳು
ಇದೀಗ ಹುಲಿಯ ತೊಗಲು ತೊಟ್ಟು
ಹನಿ ಜಲವು ಎಲ್ಲಿಯೂ
ಒಸರದಂತೆ ಗಸ್ತು ತಿರುಗುತ್ತಿವೆ.

(೪)

ಧರ್ಮ’
ಆರಾಮ ಕುರ್ಚಿಯಲಿ ಶಿಸ್ತು
ಕೂತಿದ್ದಾನೆ ಪೋರ
ಮಾತಿಲ್ಲ ಕಥೆಯಿಲ್ಲ ಗಜ ಗಾಂಭೀರ‍್ಯ
ಚಂದದ ಮುಖದಲ್ಲಿ ಹುಡುಕಿದರೆ
ನಗುವಿನ ಸೆಲೆಯೂ ಇಲ್ಲ

ಗರಿಗರಿ ಸಮವಸ್ತ್ರ ನಳನಳಿಸುವ
ಪಾದರಕ್ಷೆಗೆ ದಿಟ್ಟಿ
ತಾಕುವಂತಿದೆ
ಕಲೆಯಿಲ್ಲ ಕೊಳೆಯಿಲ್ಲ
ಯಾರೋ ಈಗಷ್ಟೇ ಅಣಿ ಮಾಡಿದಂತಿದೆ

ಅಂಗಿಯ ಮೇಲೊಂದು ಸುಕ್ಕು
ಕಂಡರೂ ಮನೆಯವರೆಲ್ಲಾ
ಗಾಬರಿ ಬಿದ್ದು ತೀಡತೊಡಗುತ್ತಾರೆ

ಕೆಟ್ಟ ಕನಸ ಕಂಡವರ ಹಾಗೆ
ಕಿಟಾರನೆ
ಕಿರುಚಿ ಓಡುತ್ತಾರೆ
ಕಾಲ ಧೂಳಿಗೆ ಸಣ್ಣ
ಬಿಂದಿ ಅಂಟಿದರೂ...

ಪದೇ ಪದೇ ಅವನ ಮುಂಗುರುಳು
ಕೆನ್ನೆ ಹಣೆ ಗಲ್ಲವ ಅಷ್ಟದ್ರವ್ಯಗಳಿಂದ
ಒರೆಸುತ್ತಲೇ ಇರುತ್ತಾರೆ
ಅವನೆಂದೂ ಕೆಳಗಿಳಿದು ನಡೆದು
ಕಳೆಗುಂದದ ಹಾಗೆ ಹಾಸಿ
ಇಟ್ಟಿದ್ದಾರೆ ಕೋಮಲ ಹೂ
ಪಕಳೆಗಳ.

(೫)

ಶೂನ್ಯದಿಂದ’
ಬಿಳಿಯ ಖಾಲಿ ಹಾಳೆ
ಶಾಹಿ ತುಂಬಿದ ಲೇಖನಿಯೊಮ್ಮೆ
ಮುಖಾಮುಖಿಯಾದವು

ಮೊದಲ ನೋಟದಲ್ಲಿ ಒಲವ ಅಂಕುರ
ಕಣ್ಣಲ್ಲಿ ಕಣ್ಣಿಟ್ಟು
ಕೈಗೆ ಕೈ ಹೊಸೆದವು

ಅದರಕ್ಕದರ ಬೆಸೆದು
ಜೇನ ಹೊಳೆ
ಸ್ವರ್ಶ ಚಿತ್ತಾರದಿ ಕಳೆದೇಹೋದವು

ಇಬ್ಬರೂ ಮತ್ತೊಬ್ಬರಾಗುತ್ತಲೇ
ಒಬ್ಬರಾದವು

ಉಕ್ಕಿ ಮೊರೆಯಿತು ಸಾಗರ
ತಬ್ಬಿ ನಲಿಯಿತು ಭುವಿ
ಬೆವೆತು ಬಣ್ಣವಾದವು
ಹುಟ್ಟಿತು ಕವಿತೆ

(೬)

ಮೊರೆತ'

ಅಂದೆಂದೋ ಅವಳ ಕೈಯಲ್ಲಿದ್ದ
ಬಾವಿಯ ನೀರು ತುಂಬಿಕೊಂಡಿದ್ದ
ಪುಟ್ಟ ಬಾಟಲಿಯೊಂದು
ಅಣಕಿಸಿ ಹೋಗಿದ್ದಕ್ಕೆ
ಈಗಲೂ ಬಿಕ್ಕಿ ಬಿಕ್ಕಿ
ರೋದಿಸುತ್ತಿದೆ
ಅಗಾಧ ಕಡಲು.

ಪುಟದ ಮೊದಲಿಗೆ
 
Votes:  5     Rating: 2    
 
 
ಸಂಬಂಧಿಸಿದ ಲೇಖನಗಳು
  ವಿನಾಯಕ ಭಟ್ ಬರೆದ ಕಥೆ ‘ದೂರತೀರ ಯಾನ’
  ನಕ್ಷತ್ರ ಬರೆದ ಆತ್ಮಕ್ಕೆ ಕೊಡಿಸಿಕೊಂಡ ಮುತ್ತುಗಳ ಕವಿತೆ
  ರಶೀದ್ ಅನುವಾದಿಸಿದ ರೈನರ್ ಮರಿಯಾ ರಿಲ್ಕನ ಕವಿತೆ
  ಟಿ.ತಿಮ್ಮಪ್ಪ ಬರೆದ ಕಥೆ ‘ಕೆಂಪು ಹರಳಿನ ಉಂಗುರ’
  ರೇಣುಕಾ ನಿಡಗುಂದಿ ಕತೆ ‘ಮೋಡ ಮತ್ತು ಮಳೆ’
  ಪ್ರತಿಭಾ ನಂದಕುಮಾರ್ ಬರೆದ ಟೊಮೇಟೋ ಗಿಡದ ಕವಿತೆ
  ಭಾನುವಾರದ ವಿಶೇಷ:ನೀಲಾಂಜಲ ಬರೆದ ಕಥೆ ‘ಅವನು ಅವಳು’
  ಮೌಲಾನಾ ಜಲಾಲುದ್ದೀನ್ ರೂಮಿ ಕವಿತೆ
  ಅನುಪಮಾ ಬರೆದ ಹೆಸರು ಇಡಲಾಗದ ಕವಿತೆ
  ಮಲ್ಲಿಕಾರ್ಜುನಗೌಡ ತೂಲಹಳ್ಳಿ ಬರೆದ ದಿನದ ಕವಿತೆ
  ವಾರದ ವಿಶೇಷ: ರಾಜೀವ ನಾರಾಯಣ ನಾಯಕ ಬರೆದ ಕತೆ ‘ಸೀ ಫೇಸ್’
  ವಿಕ್ರಂ ಹತ್ವಾರ್ ಬರೆದ ನಿರ್ವಾಣದ ಕವಿತೆ
  ರಶೀದ್ ಅನುವಾದಿಸಿದ ಲೋರ್ಕಾ ಕವಿತೆ
  ಭಾನುವಾರದ ವಿಶೇಷ: ದೇವನೂರ ಮಹಾದೇವ ಬರೆದ ‘ಅಮಾಸ’
  ರಾಬಿಯಾಶೇಖ್ ಬರೆದ ಎರಡು ಕವಿತೆಗಳು
  ಭಾನುವಾರದ ವಿಶೇಷ: ನಾರಾಯಣ ಯಾಜಿ ಬರೆದ ಕಥೆ ‘ಹುರುಬು’
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಮನೋಹರ ಉಪಾಧ್ಯ ಓದಿದ `ಡೇರಿ ಡಾಕ್ಟರ್ ಹೋರಿ ಮಾಸ್ಟರ್'
  ಅನಸೂಯಾದೇವಿ ಬರೆದ ಮೂರು ಸಖೀಗೀತೆಗಳು
  ಭಾನುವಾರದ ವಿಶೇಷ: ಸಿಡ್ನಿ ಶ್ರೀನಿವಾಸ್ ಬರೆದ ಕಥೆ ‘ಸಾರಿ’
  ನಕ್ಷತ್ರ ಬರೆದ ಎಳನೀರಗಂಜಿ ಕವಿತೆ
  ಎನ್.ಸಿ ಮಹೇಶ್ ಅನುವಾದಿಸಿದ ಒರಿಯಾ ಕವಿತೆಗಳು
  ಸಂದೀಪ್ ಫಡ್ಕೆ ಬರೆದ ದಿನದ ಕವಿತೆ
  ಭಾನುವಾರದ ವಿಶೇಷ: ವೈಶಾಲಿ ಹೆಗಡೆ ಬರೆದ ಕತೆ ‘ಅಕ್ಕೋರು’
  ಪ್ರಜ್ಞಾ ಮತ್ತಿಹಳ್ಳಿ ಬರೆದ ರೈಲು ಪದ್ಯಗಳು
  ವಾಸುದೇವ ನಾಡಿಗ್ ಬರೆದ ದಿನದ ಕವಿತೆ
  ಅಂತಾರಾಷ್ಟ್ರೀ ಗುಬ್ಬಚ್ಚಿ ದಿವ್ಸ:ತಿರುಮಲೇಶರ ಕವಿತೆ
  ಎನ್.ಸಿ. ಮಹೇಶ್ ಬರೆದ ಕಥೆ ‘ಬೇರಿಗೇ ಎಷ್ಟೊಂದು ಕಸಿ’
  ಪ್ರತಿಭಾ ನಂದಕುಮಾರ್ ಬರೆದ ಇನ್ನಷ್ಟು ದೇವೀ ಕವಿತೆಗಳು
  ವಿಜಯರಾಘವನ್ ಅನುವಾದಿಸಿದ ಇಟಾಲಿಯನ್ ಕವಿತೆ
  ಕೃಷ್ಣಮೂರ್ತಿ ಹನೂರರ ಕಾದಂಬರಿಯ ಒಂದು ಅಧ್ಯಾಯ
  ನಿತ೦ಬಗಳಿಗೊ೦ದು ಕವಿತೆಯ ಅಂಜಲಿ:ಸುಮತಿ ಮುದ್ದೇನಹಳ್ಳಿ ಬರಹ
  ಪ್ರತಿಭಾ ನಂದಕುಮಾರ್ ಬರೆದ ದೇವಿ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಎರಡು ಕವಿತೆಗಳು
  ರಾಬಿಯಾಶೇಖ್ ಬರೆದ ಹೀಗೊಂದು ಸಾನೆಟ್
  ಭಾನುವಾರದ ವಿಶೇಷ: ನಾಗರಾಜ ವಸ್ತಾರೆ ಬರೆದ ಕಥೆ ‘ಹತೋಟಿ’
  ಸ್ಮಿತಾ ಅಮೃತರಾಜ್ ಬರೆದ ಎರಡು ಕವಿತೆಗಳು
  ಗಣನಾಥ ಅನುವಾದಿಸಿದ ಇನ್ನಷ್ಟು ಜಪಾನೀ ಕವಿತೆಗಳು
  ಸುಧಾ ಚಿದಾನಂದಗೌಡ ಬರೆದ ಕತೆ ‘ಅಂತರಂಗದ ಆಯಾಮ’
  ಒಂಟಿ ದೇವನಿಗೆ ನಕ್ಷತ್ರ ಬರೆದ ಕವಿತೆ
  ಅನಿಲ್ ತಾಳಿಕೋಟಿ ಅನುವಾದಿಸಿದ ನೆರೂದಾ ಕವಿತೆ
  ಕಾಲವಾದ ವಿನಯಚಂದ್ರನ್ ಕವಿತೆ
  ಕುಸುಮಾ ಶಾನಭಾಗ ಬರೆದ ಕತೆ ‘ಕುಂದ ಬೆಟ್ಟದ ಪಿಸುಮಾತು’
  ಎಸ್. ಎನ್ ಗಣನಾಥ ಅನುವಾದಿಸಿದ ಜಪಾನೀ ಕವಿತೆಗಳು
  ಪ್ರಜ್ಞಾ ಮತ್ತಿಹಳ್ಳಿ ಬರೆದ ವೇಷದ ಪದ್ಯಗಳು
  ಕಮಲಾಕರ ಕಡವೆ ಅನುವಾದಿಸಿದ ಇಟಾಲೋ ಕ್ಯಾಲ್ವಿನೋ ಕತೆಗಳು
  ಸ್ಮಿತಾ ಮಾಕಳ್ಳಿ ಮೊದಲ ಪುಸ್ತಕ ಇಂದು ಬಿಡುಗಡೆ
  ರಾಬಿಯಾಶೇಖ್ ಬರೆದ ದಿನದ ಕವಿತೆ
  ಅಗಲಿದ ಗೆಳೆಯನ ಕುರಿತು ರಾಜು ಹೆಗಡೆ ಕವಿತೆ
  `ಒಂದು ಇಂಡಿಯನ್ ಇಂಗ್ಲೀಷ್ ಕಥೆ’
  ಕಾವ್ಯಾ ಕಡಮೆ ಬರೆದ ದಿನದ ಕವಿತೆ
  ಮೈಶ್ರೀ.ನಟರಾಜ ಅನುವಾದಿಸಿದ ರಿಚರ್ಡ್ ಬ್ಲಾಂಕೋ ಕವಿತೆ
  ಭಾನುವಾರದ ವಿಶೇಷ: ವಿಕ್ರಂ ಹತ್ವಾರ್ ಬರೆದ ಕಥೆ ‘ಪೇಣಿ’
  ನಾಗರಾಜ ವಸ್ತಾರೆ ಬರೆದ ದಿನದ ಕವಿತೆ
  ವಾರದ ವಿಶೇಷ: ಪ್ರೇಮಶೇಖರ ಬರೆದ ‘ಬಾಳಿಗೊಂದಿಷ್ಟು ಗಾಳಿ’