ಮೇ ೨೨, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  
ಏನು ಆ ಹುಬ್ಬಳ್ಳಿ ಕನೆಕ್ಷನ್?:ಬಸು ಬರಹ    
ಬಸವರಾಜು
ಶುಕ್ರವಾರ, 20 ಜುಲೈ 2012 (02:44 IST)
ಅನಂತಕುಮಾರ್, ಅಶೋಕ್, ಶೆಟ್ಟರ್, ಸದಾನಂದಗೌಡ

ಮಾಜಿ ಕೇಂದ್ರ ಮಂತ್ರಿ, ಲೋಕಸಭಾ ಸದಸ್ಯ ಅನಂತಕುಮಾರ್ ಹುಟ್ಟಿ ಬೆಳೆದದ್ದು ಹುಬ್ಬಳ್ಳಿಯಲ್ಲಿ. ಈಗತಾನೇ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿರುವ ಜಗದೀಶ್ ಶೆಟ್ಟರ್ ಹುಟ್ಟಿ ಬೆಳೆದದ್ದು ಕೂಡ ಹುಬ್ಬಳ್ಳಿಯಲ್ಲಿಯೇ. ಸದ್ಯದ ಬಿಜೆಪಿಯ ರಾಜಕೀಯ ಬೆಳವಣಿಗೆಗಳಲ್ಲಿ ಈ ‘ಹುಬ್ಬಳ್ಳಿ ಕನೆಕ್ಷನ್’ ಕೆಲವರನ್ನು ಕಂಗೆಡಿಸಿದೆ. ಚಿತ್ರವಿಚಿತ್ರ ಸುದ್ದಿಗಳಿಗೆ ಕಾರಣವಾಗಿದೆ. ರಾಜಕೀಯ ಪಂಡಿತರ, ವಿಶ್ಲೇಷಕರ ನಡುವೆ ಬಹುಚರ್ಚಿತ ವಿಷಯವಾಗಿದೆ.

ಏನು ಆ ಹುಬ್ಬಳ್ಳಿ ಕನೆಕ್ಷನ್?

ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಒನ್ ಪಾಯಿಂಟ್ ಪ್ರೋಗ್ರಾಂ ಆಗಿತ್ತು. ಹಾಗೆಯೇ ತಮ್ಮ ಬೆಂಬಲಿತ ಮಂತ್ರಿ-ಶಾಸಕರಿಗೆ ಸೂಕ್ತ ಸ್ಥಾನಮಾನ ದೊರಕಿಸಿಕೊಡುವ ಉದ್ದೇಶ ಅದರೊಳಡಗಿತ್ತು. ಆ ಮೂಲಕ ರಾಜ್ಯ ರಾಜಕಾರಣದಲ್ಲಿ, ಅದರಲ್ಲೂ ಬಿಜೆಪಿಯಲ್ಲಿ ತಮ್ಮ ನಾಯಕತ್ವಕ್ಕಿನ್ನೂ ಕಿಮ್ಮತ್ತಿದೆ ಎಂದು ತೋರಿಸುವುದಾಗಿತ್ತು.

ಯಡಿಯೂರಪ್ಪನವರು ಅಂದುಕೊಂಡಂತೆಯೇ ಆಗಿದೆ. ಇದು ಮೇಲ್ಮೋಟಕ್ಕೆ ಯಡಿಯೂರಪ್ಪನವರ ಗೆಲುವಿನಂತೆ ಕಂಡರೂ, ರಾಜಕೀಯ ಒಳಸುಳಿಗಳನ್ನು ಬಲ್ಲವರ ಪ್ರಕಾರ ಇದು ಅವರ ಗೆಲುವಲ್ಲ, ಸೋಲು ಎಂದು ವ್ಯಾಖ್ಯಾನಿಸಲಾಗುತ್ತಿದೆ.  

ಭಾರತೀಯ ಜನತಾಪಕ್ಷ ರಾಜ್ಯದಲ್ಲಿ ಅಧಿಕಾರ ಹಿಡಿದ ೨೦೦೮ರಿಂದ ಇಲ್ಲಿಯವರೆಗೆ, ಮೂರು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ, ಆಮೇಲೆ ಸದಾನಂದಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ, ಹೈಕಮಾಂಡನ್ನೇ ಹೈಜಾಕ್ ಮಾಡಿ ಮೆರೆದದ್ದು ಯಡಿಯೂರಪ್ಪನವರೊಬ್ಬರೆ. ಅಂದರೆ ಈ ನಾಲ್ಕು ವರ್ಷಗಳ ಕಾಲ ಯಡಿಯೂರಪ್ಪನವರದೇ ದರ್ಬಾರ್ ಆಗಿತ್ತು. ಹಾಗೆಯೇ ಈ ನಾಲ್ಕು ವರ್ಷಗಳ ಕಾಲ, ಯಡಿಯೂರಪ್ಪನವರ ವಿರೋಧಿ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಅನಂತಕುಮಾರ್ ರಾಜ್ಯ ರಾಜಕಾರಣದಿಂದ ದೂರವೇ ಉಳಿದಿದ್ದರು.   ಈಶ್ವರಪ್ಪ, ಯಡಿಯೂರಪ್ಪ, ಶೆಟ್ಟರ್

ಈಗ ಅನಂತಕುಮಾರ್ ಎದ್ದು ನಿಂತಿದ್ದಾರೆ. ತಮ್ಮ ರಾಜಕೀಯ ಎದುರಾಳಿ ಯಡಿಯೂರಪ್ಪನವರನ್ನು ಅವರ ತಂತ್ರಗಳನ್ನು ಅವರಿಗೇ ತಿರುಗಿಸುವ ಮೂಲಕ, ಬಗ್ಗು ಬಡಿದಿದ್ದಾರೆ.

ಅಂದರೆ, ಯಡಿಯೂರಪ್ಪನವರ ಪ್ರಕಾರ ಅಧಿಕಾರ ಲಿಂಗಾಯತರ ಕೈಯಲ್ಲಿರಬೇಕು, ಅದರಿಂದ ಮುಂದಿನ ಚುನಾವಣೆಯಲ್ಲಿ ಬಹುಸಂಖ್ಯಾತ ಲಿಂಗಾಯತರ ಬೆಂಬಲ ಗಳಿಸಿ, ಮತ್ತೆ ಅಧಿಕಾರ ಪಡೆಯಬೇಕು, ಅದಕ್ಕಾಗಿ ನಾನಲ್ಲದಿದ್ದರೂ ನಾನು ಹೇಳಿದಂತೆ ಕೇಳುವ ಮತ್ತೊಬ್ಬ ಲಿಂಗಾಯತ ಮುಖ್ಯಮಂತ್ರಿಯಾಗಿರಬೇಕು ಎಂದು ಸೌಮ್ಯ ಸ್ವಭಾವದ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಿದರು.

‘ಎಲ್ಲರಿಗೂ ಗೊತ್ತಿರುವಂತೆ ಜಗದೀಶ್ ಶೆಟ್ಟರ್ ಅವರನ್ನು ಸಿಎಂ ಕುರ್ಚಿಯಲ್ಲಿ ಕೂರಿಸಿದ್ದು ಯಡಿಯೂರಪ್ಪನವರ ಬ್ಲ್ಯಾಕ್‌ಮೇಲ್ ತಂತ್ರವಾದರೂ, ದಿಲ್ಲಿಯ ನಾಯಕರೊಂದಿಗೆ ನಡೆದ ನಾಟಕದ ಸೂತ್ರಧಾರಿ ಅನಂತಕುಮಾರ್’ ಎನ್ನುತ್ತಿದೆ ಬಿಜೆಪಿಯ ಒಂದು ಗುಂಪು. ‘ಯಡಿಯೂರಪ್ಪನವರು ತಮ್ಮ ಬೆಂಬಲಿತ ಮಂತ್ರಿಗಳ ರಾಜೀನಾಮೆ ಕೊಡಿಸಿ, ಸರ್ಕಾರ ಉರುಳಿಸುವ ಬ್ಲ್ಯಾಕ್ ಮೇಲ್ ತಂತ್ರ ಒಡ್ಡಿ ದೆಹಲಿಯ ನಾಯಕರಾದ ಗಡ್ಕರಿ, ರಾಜ್‌ನಾಥ್ ಸಿಂಗ್, ಜೇಟ್ಲಿಗಳನ್ನು ತಮ್ಮ ದಾರಿಗೆಳೆದುಕೊಂಡಿದ್ದೇನೋ ನಿಜ. ಆದರೆ, ಸದಾನಂದಗೌಡರ ಪರವಾಗಿದ್ದ ಎಲ್.ಕೆ. ಅಡ್ವಾಣಿಯವರನ್ನು ರಾತ್ರೋರಾತ್ರಿ ಜಗದೀಶ್ ಶೆಟ್ಟರ್ ಪರ ವಾಲುವಂತೆ ಮಾಡಿದ್ದು ಅನಂತಕುಮಾರ್’ ಎನ್ನುವುದನ್ನು ಬಿಜೆಪಿಯವರೇ ಬಾಯ್ಬಿಟ್ಟಿದ್ದಾರೆ. 

ಹೆಸರು ಹೇಳಲೊಪ್ಪದ ಬಿಜೆಪಿಯ ಹಿರಿಯ ನಾಯಕರೊಬ್ಬರು, ಬಿಜೆಪಿಯ ಸದ್ಯದ ಬೆಳವಣಿಗೆಯನ್ನು  ತರ್ಕಬದ್ಧವಾಗಿ ಮಂಡಿಸಿದ್ದು ಹೀಗೆ:

ಸದಾನಂದಗೌಡ, ಅಡ್ವಾಣಿ‘ಅಡ್ವಾಣಿಯವರಿಗೆ ಸದಾನಂದಗೌಡರ ಪರ ಒಲವಿತ್ತು. ಅದಕ್ಕಿಂತ ಹೆಚ್ಚಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪನವರು ಮಾಡಿದ ಬ್ರಹ್ಮಾಂಡ ಭ್ರಷ್ಟಾಚಾರದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳಲು ಬಹಳ ಕಷ್ಟವಾಗುತ್ತಿತ್ತು. ಅವರು ಕುರ್ಚಿಯಿಂದ ಕೆಳಗಿಳಿದು ಸದಾನಂದಗೌಡರು ಬಂದಾಗ, ನೀವು ಪಕ್ಷದ ವರ್ಚಸ್ಸನ್ನು ಮತ್ತೆ ಹೆಚ್ಚಿಸಬೇಕು, ಭ್ರಷ್ಟಾಚಾರ ಮುಕ್ತ ಆಡಳಿತ ನೀಡಬೇಕು, ನಿಮ್ಮ ಪರ ನಾನಿರುತ್ತೇನೆ ಎಂದು ಆಶ್ವಾಸನೆ ನೀಡಿದ್ದರು. ಗೌಡರು ಅಡ್ವಾಣಿಯೇ ನನ್ನ ಪರವಾಗಿರುವಾಗ ಇನ್ನೇನು ಎಂದು ಯಡ್ಡಿಯನ್ನು ಎಡಗಣ್ಣಿನಿಂದ ನೋಡತೊಡಗಿದರು. ಜೊತೆಗೆ ಯಡ್ಡಿಯ ಬೆಂಬಲಿತ ಮಂತ್ರಿಗಳ ಕೈ ಬಾಯಿ ಕಟ್ಟಿಹಾಕಿದರು. ಇದು ಅಡ್ವಾಣಿ ಪ್ರಕಾರ ಸರಿಯಾದ ಕ್ರಮವಾಗಿತ್ತು.

‘ಆದರೆ ಇವತ್ತು ರಾಜಕಾರಣ ದಂಧೆಯಾಗಿರುವಾಗ, ಬಿಜೆಪಿಯೂ ದಂಧೆಯಲ್ಲಿರುವ ರಾಜಕೀಯ ಪಕ್ಷವಾಗಿರುವಾಗ, ಮುಂಬರುವ ದಿನಗಳಲ್ಲಿ ಚುನಾವಣೆಯನ್ನು ಎದುರಿಸಬೇಕಾಗಿರುವಾಗ, ಗೆಲ್ಲಬೇಕಾದರೆ ಅಪಾರ ಹಣದ ಜೊತೆಗೆ ಜಾತಿ ಜನಗಳ ಬೆಂಬಲವೂ ಮುಖ್ಯವಾಗಿರುವಾಗ- ಸದಾನಂದಗೌಡರ ಸ್ವಚ್ಛ, ಶುದ್ಧ ಆಡಳಿತ ನಡೆಯುವುದಿಲ್ಲ ಎನ್ನುವುದು ಗಡ್ಕರಿ ಬಳಗಕ್ಕೆ ಮನದಟ್ಟಾಯಿತು. ಹಾಗಾಗಿ ಅವರು ಜಾತಿಬಲ, ಹಣಬಲವಿರುವ ಯಡ್ಡಿ ಬಳಗವನ್ನು ಬೆಂಬಲಿಸಿದರು.

‘ಆದರೆ ಇದನ್ನು ಅಡ್ವಾಣಿ ವಿರೋಧಿಸಿ, ಶೆಟ್ಟರ್ ಅವರನ್ನು ಭೇಟಿಯಾಗಲು ನಿರಾಕರಿಸಿದರು. ಶೆಟ್ಟರ್ ದೆಹಲಿಯಲ್ಲಿ ಅನಾಥರಾಗಿ ಅಲೆಯುತ್ತಿದ್ದಾಗ,  ಹುಬ್ಬಳ್ಳಿ ಕನೆಕ್ಷನ್ ಮೂಲಕ ಅನಂತ್‌ರನ್ನು ಅಪ್ಪಿಕೊಂಡರು. ಇಬ್ಬರಿಗೂ ಸಮಾನಶತ್ರುವಾದ ಯಡ್ಡಿಯನ್ನು ಮುಗಿಸುವ ತಂತ್ರಕ್ಕೆ ಜೊತೆಯಾದರು. ಸಂದರ್ಭದ ಸದುಪಯೋಗಪಡಿಸಿಕೊಂಡ ಅನಂತಕುಮಾರ್ ಅಡ್ವಾಣಿಯವರ ಮನವೊಲಿಸಿದರು. ಅದಕ್ಕೆ ಬೇಕಾದ,  ‘ಲಿಂಗಾಯತ ಕೋಮಿನ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ಮತ್ತೊಬ್ಬ ಲಿಂಗಾಯತ ನಾಯಕ ಯಡ್ಡಿಯನ್ನು ಮಟ್ಟಹಾಕುವ ಮಂತ್ರವನ್ನು’ ಕಿವಿತುಂಬಿದರು. ಆಗ ಅಡ್ವಾಣಿ ಎಸ್ ಎಂದರು.’    ಅಡ್ವಾಣಿ, ಅನಂತಕುಮಾರ್ 

ಜಗದೀಶ್ ಶೆಟ್ಟರ್ ಮತ್ತು ಅನಂತಕುಮಾರ್ ಇಬ್ಬರನ್ನೂ ಯಡಿಯೂರಪ್ಪನವರು ಈ ನಾಲ್ಕು ವರ್ಷಗಳ ಕಾಲ ಅಧಿಕಾರ ಕೇಂದ್ರದಿಂದ ದೂರವಿಟ್ಟಿದ್ದರು. ಇದು ಜಗತ್ತಿಗೇ ಗೊತ್ತಿರುವ ಸತ್ಯ. ಹಾಗೆಯೇ ಈಗ, ಸದಾನಂದಗೌಡರು ಮಾತು ಕೇಳುತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ಕೆಳಗಿಳಿಸಿ, ಅಧಿಕಾರ ಲಿಂಗಾಯತರ ಕೈಯಲ್ಲಿ ಇರಬೇಕೆಂಬ ಕಾರಣಕ್ಕೆ ಶೆಟ್ಟರ್ ಅವರನ್ನು ಮುಂದೆ ನಿಲ್ಲಿಸುತ್ತಿರುವುದೇ ಹೊರತು, ಶೆಟ್ಟರ್ ಮೇಲಿನ ಪ್ರೀತಿಯಿಂದಲ್ಲ. ಇದು ಕೂಡ ಶೆಟ್ಟರ್‌ಗೆ ಗೊತ್ತಿರುವ ಸತ್ಯವೆ.

ಹೀಗಾಗಿ ಅನಂತಕುಮಾರ್, ‘ನಾವಿಬ್ಬರೂ ಹುಬ್ಬಳ್ಳಿಯವರು, ನಾನೀಗ ನಿನಗೆ ಸಿಎಂ ಆಗಲು ಸಹಾಯ ಮಾಡುತ್ತೇನೆ, ನಾನು ರಾಜ್ಯಾಧ್ಯಕ್ಷನಾಗಲು ಸಹಕರಿಸು. ಅಧಿಕಾರ ನಮ್ಮ ಕೈವಶವಾಗುತ್ತಿದ್ದಂತೆ, ಲಿಂಗಾಯತ ನಾಯಕನಾಗಿ ನೀನು ಹೊರಹೊಮ್ಮಿದರೆ, ಪಾರ್ಟಿ ಪ್ರೆಸಿಡೆಂಟ್ ಆಗಿ ನಾನು ರಾಜ್ಯ ಸುತ್ತಿ, ಹಣ ಮತ್ತು ಅಧಿಕಾರದ ನೆರವಿನಿಂದ ಮುಂದಿನ ಚುನಾವಣೆ ಗೆದ್ದು ಅಧಿಕಾರ ಹಂಚಿಕೊಳ್ಳೋಣ’ ಎಂದರು. ಹೀಗಾದಾಗ ಸಹಜವಾಗಿಯೇ ಇಬ್ಬರ ಸಮಾನಶತ್ರು ಯಡಿಯೂರಪ್ಪನವರು ಯಾರೂ ಕೇಳದಂತಾಗಿ ಮೂಲೆಗುಂಪಾಗುತ್ತಾರೆಂಬುದು ಇವರ ಅಪೇಕ್ಷೆ.

ಇದು ಭಾರತೀಯ ಜನತಾ ಪಕ್ಷದ ಪಡಶಾಲೆಯಲ್ಲಿಯೇ ಕೇಳಿಬಂದ ಸುದ್ದಿಯಾದ್ದರಿಂದ ಎಚ್ಚೆತ್ತ ಅನಂತಕುಮಾರ್, ‘ನಾನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ೨೦೧೪ರ ಲೋಕಸಭೆಗೆ ನಡೆಯಲಿರುವ ಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಈ ಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಸ್ಥಾಪನೆ ಮಾಡಬೇಕು. ಅದಕ್ಕಾಗಿ ರಾಷ್ಟ್ರದಲ್ಲಿ ಹೆಚ್ಚು ಸಂಸದರು ಆಯ್ಕೆಯಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿರುವ ತಮಗೆ ರಾಜ್ಯ ರಾಜಕೀಯದ ಬಗ್ಗೆ ಆಸಕ್ತಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದೂ ಆಯಿತು.

ಯಡಿಯೂರಪ್ಪಇದನ್ನು ಅನಂತಕುಮಾರ್ ಸ್ಪಷ್ಟಪಡಿಸುವ ಅಗತ್ಯವಿದೆ ಎಂದಮೇಲೆ, ಶೆಟ್ಟರ್ ಮುಖ್ಯಮಂತ್ರಿಯಾಗುವಲ್ಲಿ ಅನಂತಕುಮಾರ್ ಆಟವೂ ಇದೆ ಎನ್ನುವುದು ಎಂತಹವರಿಗೂ ಅರ್ಥವಾಗುತ್ತದೆ. ಅರ್ಥವಾದರೂ ಅರ್ಥವಾಗದಂತಿರುವ ಯಡಿಯೂರಪ್ಪನವರ ಪಾಡಂತೂ ಯಾರಿಗೂ ಬೇಡವಾಗಿದೆ.

ಇದು ದೇಶ, ಧರ್ಮದ ಮಾತುಗಳನ್ನಾಡಿ ಅಧಿಕಾರಕ್ಕೆ ಬಂದ ಬಿಜೆಪಿಗಳ `ತತ್ವಬದ್ಧ' ರಾಜಕಾರಣ!

ಪುಟದ ಮೊದಲಿಗೆ
 
Votes:  9     Rating: 3.89    
 
 
ಸಂಬಂಧಿಸಿದ ಲೇಖನಗಳು
  ಕನ್ನಡಕ್ಕೆ ಇದಕ್ಕಿಂತ ಖುಷಿಯ ವಿಷಯವೇನಿದೆ:ಶ್ರೀರಾಂ ಆಶಯ
  ಏಳುಸುತ್ತಿನ ಹಿತ್ತಲ ಮಲ್ಲಿಗೆ:ವೆಂಕಟೇಶ್ ಮುಂಬೈ ಬರಹ
  ಜೀತಕ್ಕಿರುವವರ ಜೀವಿತ ಕಥೆಗಳು:ನಾಗರಾಜ ಹೆತ್ತೂರ್ ಬರಹ
  ಅಕ್ಕ ಎಂಬ ಅಕ್ಕರೆ ಅಕ್ಕ ಎಂಬ ಅಚ್ಚರಿ!:ಮಧುಸೂದನ ಬರಹ
  ಆಪಲ್ ಎಂಬ ಮೊಬೈಲ್ ಮಾಯಾವಿ:ಸುದರ್ಶನ ಗುರುರಾಜ ಬರಹ
  ಕೈಗಂಟಿದ ಮಸಿಯನ್ನು ಮುಖಕ್ಕೆ ಬಳಿದುಕೊಂಡರೆ? ಸುಧೀಂದ್ರ ಬರಹ
  ಕಮಲ ತನ್ನನ್ನು ತಾನೇ ಹೊಸಕಿತೇ?:ನರಸಿಂಹ ರಾಯಚೂರ್ ಪ್ರಶ್ನೆ
  ಎಸ್.ಮಂಜುನಾಥ್ ಮಾಡಿರುವ ಖಡ್ಗ ಮೀಮಾಂಸೆ
  ಓಟೇ ಹಾಕದ ಒಂಟಿ ಓಲೆಯ ಬೀರಯ್ಯ:ಗಂಗಾಧರಯ್ಯ ಬರಹ
  ಮಲೆಗಳಲ್ಲಿ ಮದುಮಗಳು ಎಲ್ಲಿ? ದಿಲಾವರ್ ರಾಮದುರ್ಗ ಬ್ಲಾಗ್
  ಅಮ್ಮನ ಕೂಡೆ ವೋಟ್ ಮಾಡಿದ್ದು:ಸ್ಮಿತಾ ಮಾಕಳ್ಳಿ ಬರಹ
  ವೋಟು ಹಾಕಿ ಸೋತ ಮುಖಗಳು:ಉಮಾರಾವ್ ಬರಹ
  ಸಚಿನ್ ಕೊಳಿಗೆ ಕಂಡ ಮಲೆಗಳಲ್ಲಿ ಮದುಮಗಳು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್’:ಮತ್ತೊಂದು ಕಥಾಪ್ರಸಂಗ
  ದೆವ್ವವಾದ ನರಭಕ್ಷಕ:ಕಾರ್ಲೋ ಅನುವಾದಿಸಿದ ಕಾರ್ಬೆಟ್ ಕಥನ
  ಪೈ ಎಂಬ ಮಾಯೆಯ ಸಿನೆಮಾ ಗಣಿತ:ದಿಲಾವರ್ ರಾಮದುರ್ಗ ಬರಹ
  ಆನ್ ಲೈನ್ ಆರಂಭಶೂರರ ಕುರಿತು ದತ್ತರಾಜ್ ಅನಿಸಿಕೆಗಳು
  ಮಲೆಗಳಲ್ಲಿ ಮದುಮಗಳಿಗೆ ರೂಪಲಕ್ಷ್ಮಿ ಮರುಳಾಗಿ ಬರೆದದ್ದು
  ‘ಡೇರಿ ಡಾಕ್ಟರ್ ಹೋರಿ ಮಾಸ್ಟರ್:ಒಂದು ಕಥಾಪ್ರಸಂಗ
  ಎವರೆಸ್ಟ್ ಏರಿದ್ದು ಮೊದಲು ಯಾರು?:ಎಂ.ವೆಂಕಟಸ್ವಾಮಿ ಬರಹ
  ಮಾಂಕ್ಷಾವಲಿ ನಾಮಾಂಕಿತ ಮಂಟೇಸ್ವಾಮಿ:ಬಾಬು ಕೌದೇನಹಳ್ಳಿ ಬರಹ
  ಕರ್ನಾಟಕ ಜನಸಾಹಿತ್ಯ ಸಮಾವೇಶ:ಅರುಣ ಜೋಳದ ಸಮೀಕ್ಷೆ
  ಚಾರ್ಲ್ಸ್ ಡಾರ್ವಿನರ ಆಮೆಗಳು:ಪಾಲಹಳ್ಳಿ ವಿಶ್ವನಾಥ್ ಬರಹ
  ತಗಾದೆಯಿಲ್ಲದ ಯುಗಾದಿ ಇರಲಿ:ಅನಸೂಯಾದೇವಿ ಹಾರೈಕೆ
  ಯುಗಾದಿಯ ಬಿಸಿಲಲ್ಲಿ ರತ್ನಪಕ್ಷಿಯ ಅರಸುತ್ತಾ:ಗೊರವರ ಬರಹ
  ಮುದುಕಿಯೊಬ್ಬಳ ಒಳ್ಳೆಯ ಶಾಪ:ಪ್ರೀತಂ ರಾವ್ ಲಂಡನ್ ಡೈರಿ
  ಜಗತ್ತಿನೆದುರು ನಿರುತ್ತರ ಕೊರಿಯ:ರೋಹಿತ ಬರಹ
  ಪರಿಮಳ ಹೊತ್ತು ಬರುತ್ತಿದ್ದವರು:ಎಲ್.ಸಿ.ಸುಮಿತ್ರ ನೆನಪುಗಳು
  ದೇವದೂತರಂತೆ ಬಂದಿದ್ದವರು:ಮಿಂಚುಳ್ಳಿ ಲಹರಿ
  ಬಿಗ್ ಬಾಸ್ ಎಂಬ ಮನೆ ಮುರುಕ ಆಟದ ಕುರಿತು ಭಾವನಾ ರಾವ್ ಮರುಕ
  ಹೃಷಿಕೇಶ್ ಬಡಪಾಯಿಗಳಿಗಾಗಿ ಬರೆದ ೩೭೧ನೇ ವಿಧಿಯ ಪಾಠ
  ರೈಲುಗಾಡಿಯ ರೀಲುಗಳು:ಸುಮನ್ ದೇಸಾಯಿ ಪ್ರಹಸನ
  ‘ಲೈಫ್ ಆಫ್ ಪೈ'ಕುರಿತು ಎ.ಎನ್.ಪ್ರಸನ್ನ
  ಬೆಳ್ಳೂರು ವೆಂಕಟಪ್ಪ ಬರೆದ ಮಂಟೇಸ್ವಾಮಿ ಕಥನ
  ಜೋ ಜೋ ಜೋ ಜೋ ಮಲಗಿದ್ದ ಕಂದಾ:ಪ್ರಶಾಂತ್ ಬರಹ
  ವಿಕ್ರಮನ ಕಥೆಗಳ ಕುರಿತು ಭಾವನಾ ಬರೆದ ವಿಮರ್ಶೆಯ ಸಾಲುಗಳು
  ಕೊಕ್ಕರೆಯಂಥ ಮನುಷ್ಯರು:ಎಸ್.ಮಂಜುನಾಥ್ ಗದ್ಯಚಿತ್ರ
  ಒಂದಿಷ್ಟು ಪ್ರೀತಿ ಕೇಳುವ ‘ಗೊಂಬೆಗಳ ಲವ್’:ರೂಪಲಕ್ಷ್ಮಿ ಬರಹ
  ಇಂಗಿಹೋದ ಬಾವಿಯಲ್ಲಿ:ರೋಹಿತ ಚಕ್ರತೀರ್ಥ ಬರಹ
  ಮಾಹಿತಿ ಹಕ್ಕಿನ ಮಾವಿನಕಾಯಿಯ ಕುರಿತು ಹೃಷಿಕೇಶ್ ದೇಸಾಯಿ
  ಅಜ್ಜಿಯ ಜೊತೆಗೆ ಗೌರಿಯ ನಡಿಗೆ:ನಾಗ ಐತಾಳರ ಬರಹ
  ಹೀಗೆ ನಮ್ಮೊಳಗೊಬ್ಬ ಪಾಂಡು ಪ್ರತಿಬಿಂಬ:ವಸಂತ ಬರಹ
  ಅರವಿಂದರ ದಾರ್ಶನಿಕ ಚಿಂತನೆ:ವಾಸುದೇವಮೂರ್ತಿ ಮರುಪರಿಶೀಲನೆ
  ಕಾಲುವೆಗಳ ಊರಿನ ಕಾಮನೆಗಳು:ನಿಹಾರಿಕಾ ಡೈರಿಯ ಪುಟಗಳು
  ಆಧ್ಯಾತ್ಮಿಕತೆ ಎಂಬ ಹೊಸ ಆಕರ್ಷಣೆ:ದತ್ತರಾಜ್ ಬರಹ
  ‘ಸ್ವಚ್ಛತೆ’ಯ ಅತಿ ಹುಚ್ಚು ಹೆಚ್ಚಾದೊಡೆ:ತ್ರಿವೇಣಿ ಬರಹ
  ಭುವನೇಶ್ವರಿ ಹೆಗಡೆ ಬರೆದ ನಾಮದ ಬಲವೊಂದಿದ್ದರೆ ಸಾಕೋ..
  ಕೂಡ್ಲಿಗಿಯ ಕಾಡು ಪಾಡು: ಸ್ವರೂಪ್ ಕೊಟ್ಟೂರು ಬರೆದಿದ್ದು
  ಶಾಂತಲ ಎಂಬ ಸರ್ವಮಾನ್ಯಳ ಕುರಿತು ವೆಂಕಟೇಶ್.ಕೆ
  ಗೊಂದಲಿಗರ ಕಥನಕಲೆ:ಅರುಣ್ ಜೋಳದ ಬರಹ
  ಮಣಿಕಾಂತ್ ಹೊಸ ಪುಸ್ತಕದ ಒಂದು ಅಧ್ಯಾಯ
  ಅರವತ್ತಾರರ ಹೆದರಿಕೆ ಮುಗಿಯಿತು:ಭಾರತಿ ಬರಹ
  ಟಿ.ಪಿ ವ್ಯಾಸಮುದ್ರಿ ವಿರಚಿತ ಎರಡು ಹಳ್ಳಿ ಪ್ರಸಂಗಗಳು
  ಪ್ರಜ್ಞಾವಂತರು ಸ್ವಲ್ಪ ಬುದ್ಧಿ ಹೇಳಿ ಪ್ಲೀಸ್
  ಕ್ಯಾರೆಟ್ ಮೂಗಿನ ಸ್ನೋ ಮ್ಯಾನ್:ಯೋಗೀಂದ್ರ ಕಾಲಂ