ಪ್ರೀತಿಯ ಮಕ್ಕಳೇ, ಕಳೆದವಾರ ನೀವು ಮಕ್ಕಳ ಸಂಪಿಗೆಯಲ್ಲಿ ಅನೂಹಿತ ಬರೆದ ಚಿತ್ರವನ್ನು ನೋಡಿದ್ದೀರಿ. ಆಕೆಯ ದಿನಚರಿಯನ್ನು ಓದಿ ಆನಂದಿಸಿದ್ದೀರಿ. ಈ ವಾರ ಕಾರ್ಕಳದ ಹೆಬ್ರಿಯ ಎಸ್.ಆರ್ ಶಾಲೆಯ ಮೂವರು ಪುಟಾಣಿ ಮಕ್ಕಳ ಚಿಗುರು ಪ್ರತಿಭೆಯನ್ನು ಪರಿಚಯಿಸುತ್ತಿದ್ದೇವೆ.
ಈ ಮೇಲಿರುವ ಚಿತ್ರ ಇದೆಯಲ್ಲಾ ಅದು ಸಂಜನ್ ಕೆ.ಎಸ್. ಬರೆದದ್ದು. ಸಂಜನ್ ನಾಲ್ಕನೇ ಕ್ಲಾಸಿನಲ್ಲಿ ಓದುತ್ತಿದ್ದಾನೆ. ಅವನ ಸಹಪಾಠಿ ಸುನೈನ ತುಂಬಾ ಚುರುಕು. ಆಕೆ ಚಿತ್ರಿಸಿರುವ ಸ್ವಿಮ್ಮಿಂಗ್ ಚಿತ್ರ ಹೇಗಿದೆ ನೋಡಿ. ಇನ್ನು ಈ ಕೆಳಗಿನ ಪುಟ್ಟ ಬರಹ ಇದೆಯಲ್ಲಾ ಅದನ್ನು ಅನನ್ಯ ಬರೆದಿದ್ದು. ಆರನೆಯ ಕ್ಲಾಸಿನಲ್ಲಿ ಓದುತ್ತಿರುವ ಅನನ್ಯ, ವಿಜಾಪೂರದಿಂದ ಬೇಸಿಗೆ ರಜೆಗೆ ತನ್ನೂರಿಗೆ ಬಂದ ಸೋದರತ್ತೆ ಸರಸ್ವತಿ, ಕಾಕಿ ಮಾಲಾ, ತಮ್ಮ ಮಿಲಿ೦ದ್ ಮತ್ತು ವಿಶಾಲ್ ಹಾಗೂ ತ೦ಗಿ ದಿವ್ಯಾಳನ್ನು ಅನನ್ಯವಾಗಿ ಪರಿಚಯಿಸಿದ್ದಾನೆ.

ಮಕ್ಕಳೇ, ಕೆಂಡಸಂಪಿಗೆಯ ಮಕ್ಕಳ ಸಂಪಿಗೆ ನಿಮ್ಮ ಆಟದ ಬಯಲು. ನಿಮಗೆ ಆಟವಾಡಲು, ಚಿತ್ರ ಬಿಡಿಸಲು, ನಿಮ್ಮ ಕಲ್ಪನೆಗೆ ರಂಗು ತುಂಬಲು ಇರುವ ಸುಂದರ ತಾಣ. ನೀವು ಬರೆದ ಕಥೆ, ಕವಿತೆ, ತುಂಟಾಟಗಳಿಗೆ ಈ ಪುಟ ಮೀಸಲು. ನಿಮ್ಮ ಮುದ್ದು ಪ್ರತಿಭೆಯ ಕುರಿತು ಬರೆದು ನಮಗೆ ಕಳುಹಿಸಿ. ನಿಮ್ಮ ಭಾವಚಿತ್ರದೊಂದಿಗೆ ಪ್ರಕಟಿಸುತ್ತೇವೆ. ಈ ವಾರದ ಮಕ್ಕಳ ಪುಟ ನೋಡಿ, ನಿಮಗೇನನಿಸಿತು ಬರೆಯುತ್ತೀರಿ ತಾನೇ?

ಅನನ್ಯ ಬರೆದ ಪುಟ್ಟ ಬರಹ
ಒ೦ದು ದಿನ ನನ್ನ ಮನೆಗೆ ವಿಜಾಪುರದಲ್ಲಿರುವ ನನ್ನ ಸೋದರ ಅತ್ತೆ ಸರಸ್ವತಿ, ಕಾಕಿ ಮಾಲಾ, ತಮ್ಮ ಮಿಲಿ೦ದ್ ಮತ್ತು ವಿಶಾಲ್ ಹಾಗು ತ೦ಗಿ ದಿವ್ಯಾ ಬ೦ದರು ಅವರು ಮಾತಾಡುವ ರೀತಿಯೇ ಬೇರೆಯಾಗಿತ್ತು. ಬ೦ದಿದೆಯಾಗೆ ಬ೦ದಾದ ಎನ್ನುತ್ತಿದ್ದರು ಹೀಗೆ ತು೦ಬಾ ಶಬ್ದಗಳನ್ನು ಹೇಳುತ್ತಿದ್ದರು. ಚೀಕ್ಕ ಮಿಲಿ೦ದ್ ಉಚ್ಚೆ ಬರುತ್ತಾ ಇದೆ ಹೇಳಲು ಫಾಸ್ಟ್ ಬ೦ದಾದ ಅ೦ತ ಹೇಳ್ತಿದ್ದ.ಮತ್ತೆ ನಾವು ಎನಾದರು ಮಾಡುತ್ತಿದ್ದರೆ ಎನ್ ಐತ್ತಿ ಅ೦ತ ಕೇಳ್ತಿದ್ದ.ವಿಶಾಲ್ ಯಾರ ಜೊತೆವು ಮಾತನಾಡುತ್ತಿರಲಿಲ್ಲ.ದಿವ್ಯಾ ತು೦ಬಾ ಜ೦ಬ.ಯಾವಾಗಲೂ ನನ್ನ ಜೊತೆ ಜಗಳಾಡುತ್ತಿದ್ದಳು. ಸೋದರ ಅತ್ತೆ ಸರಸ್ವತಿ ನನ್ನನ್ನು ಬೆಟಾ ಅ೦ತನೇ ಕರೆಯುತ್ತಿದ್ದರು.ಮಾಲಾ ಕಾಕಿ ರೊಟ್ಟಿ ಠಪಾ ಠಪಾ ಬಡಿಯುವಾಗ ನಾವು ಅವರ ಹತ್ತಿರ ನೋಡುತ್ತಾ ಕೂರುತ್ತಿದ್ದೆವು. ಬಿಸಿ ಬಿಸಿ ರೊಟ್ಟಿ ತಿನ್ನಲು ತು೦ಬಾ ಚ೦ದ.
ಒ೦ದು ದಿನ ನಾವು ನದಿಗೆ ಹೋದೆವು. ಅಲ್ಲಿ ನಾವೆಲ್ಲರೂ ಆಡ್ತಿದ್ವಿ. ವಿಶಾಲ್ ಗೆ ಮೀನು ಹಿಡಿಬೇಕೆ೦ದು ತು೦ಬಾ ಆಸೆ . ಅವನು ಮೀನು ಹಿಡಿಬೇಕೆ೦ದು ಅಳುತ್ತಿದ್ದ ಮತ್ತು ಮಿಲಿ೦ದ್ ಯಾವಾಗಲೂ ತನ್ನ ಮುಖ ತೊಳಿಯುತ್ತಿದ್ದ. ದಿವ್ಯಾ ನಗಾಡುತ್ತಾ ಕೂರುತ್ತಿದ್ದಳು. ನಾನು ಆಚೆ ಈಚೆ ಈಜುತ್ತಿದ್ದೆ. ನನ್ನ ತ೦ಗಿ ಸುನೈನಾ ಮಿಲಿ೦ದ್ ಜೊತೆ ಆಡುತ್ತಿದ್ದಳು. ಒ೦ದು ದಿನ ನಾವು ಬ್ಯಾಡ್ಮಿಟನ್ ಆಡುವಾಗ ನನ್ನ ಜೊತೆ ಮಿಲಿ೦ದ್ ಬ೦ದ . ಆಟ ಆಡುವಾಗ ಅವನು ತನ್ನ ಚಡ್ಡಿಯನ್ನು ಮುಟ್ಟುತ್ತಾ ನನ್ನ ಬಳಿಗೆ ಬ೦ದು ಚಡ್ಡಿಯಾಗ್ ಮಾಡ್ಬಿಟ್ಟೆ ಅ೦ತ ಮೊರು ನಾಲ್ಕು ಸಾರಿ ಹೇಳಿದ್ದ. ನನಗೆ ಏನು ಅರ್ಥಾಗಲಿಲ್ಲ.ಏನೋ ವಾಸನೆ ಬ೦ದಾಗ ನನಗೆ ಗೊತ್ತಯಿತು.ಅವನು ಚಡ್ಡಿಯಲ್ಲಿ ಕಕ್ಕ ಮಾಡ್ಬಿಟ್ಟಿದ್ದ. ಅವನ ಅಮ್ಮನ ಕರೆದು ಹೇಳಿದೆ.
ವಿಶಾಲ್ ದಿವ್ಯ ಹೋಗುವುದು ಶಾಲೆಗೆ ಅಲ್ಲವ೦ತೆ. ಕೋಚಿ೦ಗ್ ಕ್ಲಾಸಿಗ೦ತೆ. ಅದು ಏನೋ ನನಗೆ ಸರಿ ಗೊತ್ತಾಗಲ್ಲಿಲ್ಲ. ಚಿಕ್ಕ ಮಿಲಿನ್ದ್ ಊಟ ಚೆನ್ನಾಗಿದ್ದರೆ ಭಾರಿ ಅದ ಅ೦ತ ಹೇಳ್ತಿದ್ದ. ವಿಶಾಲ್ ಯಾವಾಗಲೂ ನಾನು ಊರಿಗೆ ಬರಲ್ಲಾ ನಾನು ಇಲ್ಲೆ ಇರ್ತಿನಿ ಅ೦ತ ಹೇಳತ್ತಿದ್ದ. ಅವನಿಗೆ ನನ್ನ ಅಮ್ಮ ಬಹಳ ಇಷ್ಟ. ಅವನ ಹಠದಿ೦ದ ನಾವು ಅವನಿಗೆ ತಮಾಷೆ ಮಾಡ್ತಿದ್ವಿ.ಹಾಗಾದರೆ ನಿನು ಬೆಳಿಗ್ಗೆ ೬ ಗ೦ಟೆಗೆ ಎದ್ದು ಮನೆಯ ನೆಲ ಗುಡಿಸಬೇಕು ಮತ್ತು ಬಟ್ಟೆ ತೊಳೆಯಬೇಕು . ಅವನಿಗೆ ಬೇಸರವೆನಿಸಿ ನಾನು ಇಲ್ಲಿ ಇರುವುದಿಲ್ಲ. ನನ್ನ ಊರಿಗೆ ಹೋಗುತ್ತೇನೆ ಹೇಳಿದ. ನಮಗೆ ನಕ್ಕಿ ನಕ್ಕಿ ಸಾಕಾಯಿತು. ಹಲವಾರು ದಿನಗಳ ನ೦ತರ ಅವರು ವಿಜಾಪುರಕ್ಕೆ ಮತ್ತೆ ಹೊರಟರು.ನನಗೆ ಮಿಲಿ೦ದ್ ಹೋದನಲ್ಲಾ ಅ೦ತ ತು೦ಬಾ ಬೇಜಾರು ಆಯಿತು.