ಪ್ರೀತಿಯ ಮಕ್ಕಳೇ,
ಹೇಗಿದ್ದೀರಾ, ಹೇಗೆ ನಡೆದಿದೆ ಶಾಲೆಯಲ್ಲಿನ ತಯಾರಿ? ಊರಿನಲ್ಲಿ ಮಳೆ ತುಂಬಾ ಜೋರಾ? ಮಳೆ ನೀರಿನಲ್ಲಿ ದೋಣಿ ಬಿಟ್ಟು ಆಟವಾಡಿ, ಮನೆಯಲ್ಲಿ ಅಮ್ಮನ ಕೈಲಿ ಬೈಸಿಕೊಂಡಿದ್ದೀರಾ? ಹೋಗ್ಲಿ ಬಿಡಿ. ಅಂದಹಾಗೆ ಕಳೆದ ವಾರ ಮಕ್ಕಳ ಸಂಪಿಗೆಯಲ್ಲಿ ಹಾಸನದ ಮಕ್ಕಳ ಬಣ್ಣಗಳ ಓಕುಳಿ ಇಷ್ಟ ಆಯ್ತ? ನೀವು ಅಂತಹದ್ದೆ ಚಿತ್ರ ಬಿಡಿಸಿದ್ರೆ, ಕಥೆ, ಕವನ ಬರೆದಿದ್ರೆ ತಪ್ಪದೆ ನಮಗೆ ಕಳುಹಿಸಿ. ನಾವು ಅದನ್ನು ತಪ್ಪದೇ ಪ್ರಕಟಿಸುತ್ತೇವೆ. ಈ ವಾರದ ಮಕ್ಕಳ ಸಂಪಿಗೆಯಲ್ಲಿ ಉಡುಪಿಯ ಆಶಿತ್ ಭಟ್ ಬಿಡಿಸಿರುವ ಚಿತ್ರಗಳನ್ನು ಹಾಕಿದ್ದೇವೆ. ನೋಡಿ ನಿಮಗೇನನ್ನಿಸಿತು ಅಂತ ನಾಲ್ಕು ಸಾಲು ಬರೆಯಿರಿ.
ಉಡುಪಿ ಜಿಲ್ಲೆಯ ಪಟ್ಲ ಎ೦ಬ ಊರಿನ ಆಶಿತ್ ಭಟ್ ಏಳನೇ ತರಗತಿಯಲ್ಲಿ ಓದುತ್ತಿದ್ದಾನೆ. ಈತ ಈಗ ಜವಾಹರ್ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದು, ಇವನ ತ೦ದೆಯ ಹೆಸರು ಮುರಳೀಧರ ಭಟ್ ಹಾಗೂ ತಾಯಿಯ ಹೆಸರು ಸುರೇಖಾ ಭಟ್. ಇವನ ತ೦ದೆ ಇ೦ಜಿನಿಯರ್. ತಮಾಷೆ ಗೊತ್ತಾ? ಇವನು ಹುಟ್ಟಿದ ದಿನ ಏಪ್ರಿಲ್ ೧, ೧೯೯೬ ರ೦ದು. ಆಶಿತ್ ತನ್ನ ಗೆಳೆಯರನ್ನು ಹುಟ್ಟು ಹಬ್ಬಕ್ಕೆ ಕರೆದರೆ ಯಾರೂ ನ೦ಬುವುದಿಲ್ಲವ೦ತೆ. ಸುಳ್ಳು, ಏಪ್ರಿಲ್ ಫೂಲ್ ಅ೦ತ ತಮಾಷೆ ಮಾಡುತ್ತಾರ೦ತೆ.
ಇವನ ಹವ್ಯಾಸ ಅ೦ಚೆ ಚೀಟಿ , ಹಳೆಯ ನಾಣ್ಯಗಳನ್ನು ಒಟ್ಟುಮಾಡುವುದು. ಈ ಕೆಲಸಕ್ಕೆ ಶಾಲೆಯ ಎಲ್ಲಾ ಮಕ್ಕಳು ಪ್ರೊತ್ಸಾಹಿಸುತ್ತಾರ೦ತೆ. ಇವನ ಮನೆ ಕಾಡಿನಲ್ಲಿ ಇದ್ದು, ಇವರ ಗದ್ದೆಗೆ ನವಿಲು, ಮೊಲ, ಗಿಳಿ, ಗುಬ್ಬಚ್ಚಿ, ಹುಲಿಗಳು ಬರುತಾವ೦ತೆ. ಒಳ್ಳೆಯ ಆಸಕ್ತಿಯಿ೦ದ ಇವುಗಳ ಚಿತ್ರ ಬಿಡಿಸುತ್ತಾನೆ.