ಮೇ ೨೦, ೨೦೧೩
ಲಾಗ್ ಇನ್
  
ಯೂಸರ್ ನೇಮ್
  
ಪಾಸ್‌ವರ್ಡ್
  
 
ಪಾಸ್‌ವರ್ಡ್ ಮರೆತಿದೆಯೆ??
ಹೊಸಬರೇ? ಇಲ್ಲಿ ನೋಂದಾಯಿಸಿ
  
ವಾರ್ತಾಪತ್ರ
  
ನಿಮ್ಮ ಈ ಮೇಲ್:
 
  

ಕಮಲಮ್ಮನವರಿಗೆ ಇನ್ನಿಲ್ಲದ ಆತಂಕವಾಗಿತ್ತು. ಮಗಳ ಮದುವೆಗಾಗಿ ಖರೀದಿಸಿದ್ದ ಎಲ್ಲಾ ಒಡವೆಗಳು ಇದ್ದರೂ ಮಗಳು ಇಷ್ಟಪಟ್ಟು ಆರಿಸಿದ್ದ ಕೆಂಪು ಹರಳಿನ ಸಣ್ಣ ಉಂಗುರದ ಸುಳಿವೇ ಇರಲಿಲ್ಲ. ಮಧ್ಯಾಹ್ನದಿಂದ ಅವರು ಹುಡುಕದ ಜಾಗವಿಲ್ಲ, ತಡಕದ ಮೂಲೆಯಿಲ್ಲ. ರೂಮಿನಲ್ಲಿದ್ದ ಬೀರು, ಹಾಸಿಗೆ, ಮಂಚ ಎಲ್ಲವನ್ನೂ ಎಳೆದೆಳೆದು ನಾಲ್ಕಾರು ಬಾರಿ ಹುಡುಕಿ ಸುಸ್ತಾಗಿದ್ದರು. ಅವರ ಮನದಲ್ಲಿ ಅದನ್ನು ಕದ್ದವರ ಬಗ್ಗೆ ಸಂಶಯ ಮೂಡಿತ್ತು. ಎಷ್ಟು ಸಾರಿ ಹುಡುಕಿದರೂ ಉಂಗುರ ಸಿಗದೇ ಹೋದಾಗ ಆ ಸಂಶಯ ಬೆಳೆದು ಹೆಮ್ಮರವಾಗಿತ್ತು. ಆದರೂ ಮನಸ್ಸಿನ ಮೂಲೆಯಲ್ಲಿ ಅದನ್ನು ಒಪ್ಪಿಕೊಳ್ಳಲು ಆಗದೇ ಅವರು ಚಡಪಡಿಸುತಿದ್ದರು. ಧಾರೆಯ ರೇಸಿಮೆ ಸೀರೆ ಮತ್ತು ಆ ಉಂಗುರದೊಂದಿಗಿದ್ದ ಎಲ್ಲಾ ಒಡವೆಗಳನ್ನು ಕೊನೆಯ ಬಾರಿ ನೋಡಿದವಳು ಅವಳೇ.. ಮನೆಗೆಲಸದ ಕೆಂಪಿ. ಅವಳು ಹೋದ ಮೇಲೆ ಎಲ್ಲಾ ಒಡವೆಗಳನ್ನು ಅವುಗಳ ಬಾಕ್ಸುಗಳಲ್ಲಿ ಜೋಪಾನವಾಗಿಟ್ಟಾಗ ಉಳಿದದ್ದು ಉಂಗುರದ ಬಾಕ್ಸು. ಅದರೊಳಗೆ ಉಂಗುರ ತೆಗೆದಿಡಲು ನೋಡಿದಾಗ ಅಲ್ಲಿ ಉಂಗುರ ಕಾಣದೇ ಅವರಿಗೆ ಆತಂಕವಾಗಿತ್ತು. ಅವಳು ನೋಡಿ ಎಲ್ಲವನ್ನೂ ಅವರೆದುರಿಗೇ ಸೀರೆಯೊಂದಿಗೆ ಇಟ್ಟು ಹೋಗಿದ್ದರೂ ಅವಳು ಯಾವ ಮಾಯದಲ್ಲಿ ಆ ಉಂಗುರವನ್ನು ಕದ್ದಳೆಂದು ಅವರಿಗೆ ತಿಳಿದಿರಲಿಲ್ಲ. ಆದರೂ ಇಷ್ಟು ವರ್ಷಗಳಿಂದ ಮನೆಯಲ್ಲಿ ಕೆಲಸ ಮಾಡುತಿದ್ದರೂ ಎಂದೂ ಇಂತಹ ಕೆಲಸ ಮಾಡಿದವಳಲ್ಲ... ಇಂದೇಕೆ ಇಂತಹ ಕೆಲಸ ಮಾಡಿದಳು ಎಂಬ ಚಿಂತೆ ಕಮಲಮ್ಮನವರ ತಲೆಯನ್ನ ಕೊರೆಯುತಿತ್ತು. ವಯಸ್ಸಾದ ಮೇಲೆ ಮನುಷ್ಯನಿಗೆ ದುರಾಸೆ ಜಾಸ್ತಿಯಾಗುತ್ತದೇನೋ ಎಂದು ಮನಸ್ಸಿನಲ್ಲಿಯೇ...

 ಅಂತ:ಪುರದ ಅಳುಗಳು:ಲಕ್ಷ್ಮೀಶಂಕರ ಜೋಶಿ ಅಂಕಣ

ನಾನು ಕಲಿಯುವಾಗ, ನನ್ನ ಕಾಲೇಜಿನಲ್ಲಿ ಹಿಸ್ಟರಿ ಪಾಠ ಮಾಡುವ ಮೇಷ್ಟ್ರೋಬ್ಬರು ಹೈದ್ರಾಬಾದ ಕರ್ನಾಟಕ ಪ್ರದೇಶದವರೇ! ಬಹಳ ಒಳ್ಳೆಯವರು. ಸಾಲಾಗಿ ಐದು ಹೆಣ್ಣು ಮಕ್ಕಳ ನಂತರ ಹುಟ್ಟಿದ ಮಗನನ್ನು ಹೂವಿನಂತೆ ಜೋಪಾನ ಮಾಡುತ್ತಿದ್ದರು. ಮಗನನ್ನು ಪಡೆಯುವ ಸಲುವಾಗಿಯೇ ಐದಾರು ಹೆಣ್ಣುಗಳನ್ನು ಹೆತ್ತಿದ್ದರೆಂದು ಅವರ ಮನೆ ಹತ್ತಿರವಿರುವ ಹೆಣ್ಣುಮಕ್ಕಳು ಮಾತಾಡಿಕೊಳ್ಳುತ್ತಿದ್ದರು. ಬಹಳ ಮೃದು ಸ್ವಭಾವದ ಅವರು ತೀರ ಹೆಂಗರುಳಿನವರು. ನನ್ನನ್ನ ಬಹಳೇ! ಹಚ್ಚಿಕೊಂಡಿದ್ದರು. ಓದುವಾಗಲೇ ಲಗ್ನವಾದ ನಾನು ಲಗ್ನದ ನಂತರವೂ ಕಾಲೇಜಿಗೆ ಹೋಗುವದನ್ನು ನೋಡಿ ಅವರಿಗೆ ಋಷಿಯಾಗುತ್ತಿತ್ತು. ಮದುವೆಯ ನಂತರ ಮನೆ ಮಾಡಬೇಕಲ್ಲ. ಸುರಪುರ ಸಮೀಪದ ಯು.ಕೆ.ಪಿ ಕ್ವಾರ್ಟರ್ಸ ನಲ್ಲಿ ನಮ್ಮ ಸಂಸಾರ ಆರಂಭವಾಯಿತು ಎಂದೂ ಇನ್ನೆರಡು ವರ್ಷ ಓದಿಯೇ ಪೂರ್ಣ ಪ್ರಮಾಣದ ಗೃಹಿಣಿಯಾಗುತ್ತೇನೆ ಸರ್ ಎಂದೂ ಜೋಕ್ ಮಾಡಿದ್ದೆ. ಅದೆಲ್ಲ ಇರಲಿ, ಇವತ್ತು ಸಂಜೆ ಮನೆ ಕಡೆ ಬಾ. ಮುಖ್ಯವಾದ ವಿಷಯ ಮಾತಾಡೋದಿದೆ. ಸೀರಿಯಸ್ಸಾಗಿ ಹೇಳ್ತಾ ಇದ್ದೀನಿ ಎಂದಿದ್ದರು.

‘ಸುರಪುರ ಹೆಸರ ಕೇಳಿಯೇನು? ಅಲ್ಲಿ ದೊರೆಗಳ ದರಬಾರು. ನೀ ಇಲ್ಲಿಯಂಗ ಅಲ್ಲೇನರ ಗಾಡಿ ಮ್ಯಾಲ ಪಿರಿ ಪಿರಿ ಅಡ್ಡ್ಯಾಡಿದಂದ್ರ ನಿನ್ನ ಹೊತಗೊಂಡ ಹೋಗ್ತಾರ. ಸುಮ್ನ ಮನ್ಯಾಗ ಕೂಡಬೇಕು. ಇಲ್ಲದ್ದ ಉಸಾಬರಿ...

 ಕಂಡಿದ್ದು, ಕೇಳಿದ್ದು, ಓದಿದ್ದು, ಅನಿಸಿದ್ದು
ರಾಜರ ಕಾಲದ ಬ್ರಾಯ್ಲರ್ ಕೋಳಿ:ಅಬ್ದುಲ್ ರಶೀದ್ ಅಂಕಣ

ಸುಮಾರು ಇನ್ನೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಕೊಡಗು ದೇಶವನ್ನು ಆಳಿದ್ದ ಹಾಲೇರಿ ರಾಜವಂಶದ ಕೊನೆಯ ದೊರೆ ಚಿಕವೀರರಾಜೇಂದ್ರ.ಈ ದೊರೆಯ ಕುರಿತು ಮಾಸ್ತಿ ವೆಂಕಟೇಶ ಅಯ್ಯಂಗಾರರು ಬರೆದ ಕಾದಂಬರಿಯನ್ನು ನಿಮ್ಮಲ್ಲಿ ಕೆಲವರಾದರೂ ಓದಿರಬಹುದು.ಬ್ರಿಟೀಷರು ಈತನನ್ನು ಅಧಿಕಾರದಿಂದ ಬಲವಂತವಾಗಿ ಇಳಿಸಿ, ಬೆಂಗಳೂರು, ವೆಲ್ಲೂರು ಹಾಗೂ ಕೊನೆಗೆ ಕಾಶಿಯಲ್ಲಿ...

ರಕ್ಷಾನ ಬಾಲ್ಯಕಾಲ:ಪೆಜತ್ತಾಯರ ಸರಣಿ

ನಮ್ಮಲ್ಲಿಗೆ ಬಂದ ನಾಲ್ಕನೇ ದಿನ ರಾತ್ರಿ ರಕ್ಷಾನಿಗೆ ಕೆಂಡಾಮಂಡಲ ಜ್ವರ ಬಂತು. ಆತ ಆಹಾರ ನೀರು ಮುಟ್ಟಲಿಲ್ಲ. ನರಳುತ್ತಾ ಅಮ್ಮನ ತೊಡೆಯ ಮೇಲೆ ಮಲಗಿಬಿಟ್ಟ. ಡಾ|| ಡೆಲ್ವಿಯವರ ಮನೆ, ಅವರ ಕ್ಲಿನಿಕ್‌ನ ಪಕ್ಕದಲ್ಲೇ ಇತ್ತು. ರಾತೋರಾತ್ರಿ ಅವರ ಮನೆಗೆ ರಕ್ಷಾನನ್ನು ಕರೆದುಕೊಂಡು ಹೋದೆವು. ಒಂದು ಇಂಜೆಕ್ಷನ್ ಚುಚ್ಚಿ, ಹೆದರಬೇಡಿ! ನಾಳೆ ಸರಿ ಹೋಗುತ್ತಾನೆ ಎಂದರು.ಆ ರಾತ್ರಿ...

ಉತ್ತರಾಯಣ ಕಾಲಂ:ತಿರುಮಲೇಶರ ವಾರದ ಬರಹ

“ಕೆಂಡಸಂಪಿಗೆಯಲ್ಲಿ ಪ್ರಕಟವಾದ ನನ್ನ ಹಲವಾರು ಲೇಖನಗಳನ್ನು ಓದಿ ಪ್ರತಿಕ್ರಿಯೆ ನೀಡಿದವರಿಗೆ ಕೃತಜ್ಞತೆಗಳು. ಲೇಖಕರು ಬರೆಯುತ್ತಾರೆ; ಆದರೆ ಲೇಖನಗಳನ್ನು ಯಾರು ಓದುತ್ತಾರೆ ಎನ್ನುವ ಕುರಿತು ಗೊತ್ತಿರುವುದಿಲ್ಲ. ಅವರ ಅಭಿಪ್ರಾಯಗಳೂ ಗೊತ್ತಾಗುವುದಿಲ್ಲ. ಹಿಂದೆ ಮುದ್ರಣ ಯುಗದಲ್ಲಿ ಓದುಗರ ಕೆಲವು ಅಭಿಪ್ರಾಯಗಳು ಪತ್ರರೂಪದಲ್ಲಿ ಪ್ರಕಟವಾಗುತ್ತಿದ್ದುವು. ಈಗ...

 
 ರಾಜೇಶ್ವರಿ ಕಥನ:ಕಾಡೆಂಬ ಕಡಲಿನ ಮೂರನೇ ಕಂತು

ನೂರು ವರ್ಷದ ಹಿಂದೆನೆ "ಪೂನಾದ ಪೋಚಾಸ್" ಎಂಬ ನರ್ಸರಿ ಇತ್ತೆಂದು ತಿಳಿದರೇ ಆಶ್ಚರ್ಯವಾಗುತ್ತೆ. ಅಮ್ಮನ ಅಣ್ಣ(ತಂದೆ) ಹೊಸ ಹೊಸ ಪ್ರಯೋಗಕ್ಕೆ ತೆರೆದುಕೊಳ್ಳುವವರಾಗಿದ್ದರೆಂದು ಹೇಳಿರುವೆನಷ್ಟೆ. ಅವರಿಗೆ ಅಣಬೆ ಬೆಳೆಯುವ ಜಾಹೀರಾತೊಂದು ಗಮನಕ್ಕೆ ಬಂದಿತಂತೆ - 'ಪೂನಾದ ಪೋಚಾಸ್" ಅಲ್ಲಿಂದ ಅಣಬೆ ಬೀಜ ತರಿಸಿಕೊಂಡು ಅಣಬೆ ಬೆಳೆಯಲು ಶತ ಪ್ರಯತ್ನಪಟ್ಟರು. ಹಲವಾರು ಸಲ ಪ್ರಯತ್ನ ಪಟ್ಟರೂ ಫಲಿಸಲಿಲ್ಲ. ಅಣಬೆ ಅರಳಲಿಲ್ಲ. ಈಚೆಗೆ ಕೃಷಿ ವಿಶ್ವವಿದ್ಯಾಲಯದವರು ಅಭಿವೃದ್ಧಿಪಡಿಸಿರುವ ಬೀಜಗಳಿಂದ ಅಣಬೆ ಬೆಳೆ ತೆಗೆಯುವುದು ಸಫಲವಾಗುತ್ತಿದೆ.

ಹೂವಿನ ಗಿಡ ಬೆಳೆಸುವುದರಲ್ಲಿಯೂ ಅತಿ ಆಸಕ್ತಿ, ಮನೆ ಮುಂದೆ ಸಮತಟ್ಟಾದ ಜಾಗ ಸಿದ್ಧಪಡಿಸಿದ್ದರು. ರೋಸ್ ಗಾರ್ಡನ್ ಮಾಡುವೆನೆಂದು ಹೇಳುತ್ತಿದ್ದರು, ಆ ವರ್ಷ ಕಾಫಿ ಪಸಲೂ ಚೆನ್ನಾಗಿ ಆಗಿ ಹೆಚ್ಚು ಕಾಫಿ ಕೊಯ್ದಿದ್ದರು. ಆದರೆ ಆ ವರ್ಷನೆ ನಮ್ಮಣ್ಣ ತೀರಿಕೊಂಡರೆಂದು ಅಮ್ಮ ಬೇಜಾರು ಮಾಡಿಕೊಳ್ಳುತ್ತಿದ್ದರು.

ಮೈಸೂರಿನ "ಉದಯ ರವಿ"ಯಲ್ಲಿ ಸುಂದರವಾದ ಕನ್ನಡಿ ಮೇಜೊಂದು ಇದೆ. ಇದಕ್ಕೆ ಹೊಂದಿಕೊಂಡಂತೆ ಮೂರು ಡ್ರಾಯರುಗಳು ಇವೆ. ಇವನ್ನು ತೆರೆಯುವುದೆಂದರೆ ನನಗೆ ಅಮೂಲ್ಯವಾದ ಗುಪ್ತ ನಿಧಿಗೇ ಕೈಹಾಕಿದಂತೆ. ನನ್ನ ಅತ್ತೆಯವರು (ಹೇಮಾವತಿ ಕುವೆಂಪು) ಇಂಗ್ಲೆಂಡಿನಿಂದ ತರಿಸಿಕೊಂಡು ನೋಡಿ ಹೆಣೆದ ಕಸೂತಿ, ಕೋಶ ಪುಸ್ತಕಗಳಿವೆ ಅಲ್ಲಿ. ಅವನ್ನು ತಿರುವಿಹಾಕುತ್ತಿರುವಾಗ ಕಂಡೆನೊಂದು ಜಾಹೀರಾತು, ಪೂನಾದಲ್ಲಿನ ಪೋಚಸ್ ಎಂದಿತ್ತು. ಕುತೂಹಲ ಹೆಚ್ಚಾಯ್ತು. ಕುವೆಂಪು ಕೈಯಿಂದ ಪೋಚಾಸ್ ಗೆ ಕಾಗದ ಬರೆಸಿ ಡೆಲಿಯಾ ಗಡ್ದೆ ಇನ್ನಿತರ ಹೂವಿನ ಬೀಜಗಳನ್ನು ಅತ್ತೆಯವರು ತರಿಸಿಕೊಂಡಿದ್ದರಂತೆ. ಗಿಡಗಳು ಚೆನ್ನಾಗಿ ಬಂದು ಹೂಕೊಟ್ಟಿದ್ದವು ಎಂದಿದ್ದರು. ಇದು ಐವತ್ತರ ದಶಕದ ಮಾತಾಯ್ತು.

***

ಅಮ್ಮನ ತಾಯಿಗೆ ಮಗಳು ಚಿಕ್ಕವಳು ಕಣ್ಣ ಮುಂದೆಯೇ ಇರಬೇಕೆಂದು, ಆದರೆ ಮಗಳು ಆಟ ಆಡ್ತ ಆಡ್ತ ದೂರ ಹೋದಾಗ...

Font Help
Site Web
ಜನಮತ
ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲುವು
 
 
Getting poll results. Please wait...
Sampige Feed
Follow Kendasampige on twitter
Kendasampige on Facebook
Spread Kendasampige