Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ರಷ್ಯಾದ ಭೌಗೋಳಿಕ ಕಥನ…

ಒಂದುವೇಳೆ ಬೆಂಗಳೂರು ಸಮುದ್ರಮಟ್ಟಕ್ಕಿಂತ ಒಂದು ಮುನ್ನೂರು ಮೀಟರ್ ಕೆಳಗಿದ್ದಿದ್ದರೆ? ಅರಬ್ಬೀ ಸಮುದ್ರದ ಮೂಲಕ ಬಂದ ಗಾಳಿ ಪಾಲ್ಘಾಟ್ ಗ್ಯಾಪಿನ ಕಾರಣ ಪಶ್ಚಿಮ ಘಟ್ಟಗಳಿಗೆ ಅಪ್ಪಳಿಸದೇ ಊಟಿ ತಲುಪಿ ಅಲ್ಲಿ ತಂಪುಗೊಂಡು ಬೆಂಗಳೂರಿನ ಕಡೆಗೆ ಪ್ರಯಾಣ ಬೆಳೆಸಿ ಈಗಿನ ಎತ್ತರಕ್ಕೆ ತಡೆಯಿರದ ಕಾರಣ ಮುಂದೆ ಹೋಗಿಬಿಡುತ್ತಿತ್ತು. ಈಗಿನ ಅತ್ಯುತ್ತಮ ಹವಾಮಾನ ಇರುತ್ತಲೇ ಇರಲಿಲ್ಲ. ಹೈದರಾಲಿ ಮತ್ತು ಟಿಪ್ಪು ಲಾಲ್‌ಬಾಗ್ ನಿರ್ಮಿಸುತ್ತಲೇ ಇರಲಿಲ್ಲ. ಮೈಸೂರು ಅರಸರಿಗೆ ಪ್ರಿಯವಾದ ಜಾಗವಾಗುತ್ತಲೇ ಇರಲಿಲ್ಲ. ಬ್ರಿಟಿಷರಿತೆ ತಮ್ಮ ಊರನ್ನು ನೆನಪಿಸುವ ಪ್ರದೇಶವೂ ಆಗುತ್ತಿರಲಿಲ್ಲ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

ಡಾರ್ಕ್ ಹ್ಯೂಮರ್ ಮತ್ತು ನಮ್ಮ ಗ್ರಹಿಕೆಗಳು

ನಾವು ಎಷ್ಟೋ ಬಾರಿ ಸೆಕ್ಸಿಸ್ಟ್, ಕ್ಯಾಸ್ಟಿಸ್ಟ್ ಜೋಕುಗಳನ್ನು ಮಾಡುತ್ತೇವೆ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿದ್ದರೆ ಇನ್ನೂ‌ ಕೆಲವೊಮ್ಮೆ ಅಪ್ರಯತ್ನಪೂರ್ವಕಾಗಿ ಬರುತ್ತದೆ. ಈಗಲೂ ಬರವಣಿಗೆಯಲ್ಲಿ ನಾನು ಇಂತಹ ಪದಗಳ ಬಳಸುವುದು ಕಮ್ಮಿಯಾದರೂ ಆತ್ಮೀಯ ಗೆಳೆಯರೊಟ್ಟಿಗೆ ಮಾತಾಡುವಾಗ ಕ್ಯಾಸ್ಟಿಸ್ಟ್ ಅಲ್ಲದಿದ್ದರೂ ಸೆಕ್ಸಿಸ್ಟ್ ಬೈಗಳುಗಳು ಅಪ್ರಯತ್ನಪೂರ್ವಕವಾಗಿ ಬರುತ್ತವೆ. ಮುಂದಾದರೂ ಅದನ್ನು ಕಮ್ಮಿ ಮಾಡಬೇಕು ಎಂದು ಇವರ ಬರಹಗಳ ಓದಿದಾಗ ಅನ್ನಿಸಿದೆ.
ಗಿರಿಧರ್‌ ಗುಂಜಗೋಡು ಅಂಕಣ

Read More

ಹಾಯ್‌ ಅಂಗೋಲಾ!

ಅಂಗೋಲಾದ ಜನರ ಬಗ್ಗೆ ಹೇಳುವುದು, ಅಲ್ಲಿನ ವ್ಯವಸ್ಥೆ ಬಗ್ಗೆ ಹೇಳುವುದು, ಅಲ್ಲಿನ ಊಟ ತಿಂಡಿ ಬಗ್ಗೆ ಹೇಳುವುದು ಇದೆಲ್ಲಾ ಸಹಜ. ನಿರೂಪಣೆ ಅದ್ಭುತವಾಗಿದೆ, ಹೊಸ ವಿಷಯ ತಿಳಿಯುತ್ತದೆ ಎಲ್ಲಾ ನಿಜವೇ. ಆದರೆ ಅತ್ಯಂತ ವಿಶಿಷ್ಟವಾದ ಅಧ್ಯಾಯವಿದೆ. ಮೊದಲ ಬಾರಿ ಓದಿದಾಗ ಬಹಳ ವಿಚಿತ್ರ ಅನ್ನಿಸಿತ್ತು‌. ಒಂದು ಕ್ಷೌರ ಮಾಡಿಸಿಕೊಳ್ಳಲು ಮುನ್ನೂರು ಕಿಲೋಮೀಟರ್ ಪ್ರಯಾಣಿಸಬೇಕಾಗಿದ್ದ ಪ್ರಸಾದರ ಅವಸ್ಥೆ ಬಗ್ಗೆ ಕೇಳಿದಾಗ ನಗುವುದೋ ಅಳುವುದೋ ಗೊತ್ತಾಗುವುದಿಲ್ಲ. ಆಫ್ರಿಕನ್ನರ ಕೂದಲ ರೀತಿಗೂ ಭಾರತೀಯರ ಕೂದಲ‌ ರೀತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಗೊತ್ತಿರುವ ಸಂಗತಿ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

ಜಿ.ಟಿ. ನಾರಾಯಣರಾವ್ ಹೇಳುವ ಎನ್‌ಸಿಸಿ ದಿನಗಳ ಕಥೆಗಳು

ಇಲ್ಲಿ ಬರುವ ವೈಜ್ಞಾನಿಕ ವಿವರಣೆಗಳು ಮಾತ್ರ ಎಲ್ಲರಿಗಲ್ಲ. ಅದು ವಿಜ್ಞಾನದಲ್ಲಿ ಆಸಕ್ತಿಯಿದ್ದು ಅರ್ಥಮಾಡಿಕೊಳ್ಳಲು ಶ್ರಮ ಹಾಕಲು ಸಿದ್ಧರಿರುವವರಿಗೆ ಮಾತ್ರ. ಕನ್ನಡದಲ್ಲಿ ಇರುವ ಕಾರಣ ಕೆಲ ಶಬ್ದಗಳನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಅದು ಈ‌ ಪುಸ್ತಕ ಅಂತಲ್ಲ. ಎಲ್ಲಾ ವೈಜ್ಞಾನಿಕ ಗ್ರಂಥಗಳನ್ನು ಕನ್ನಡೀಕರಿಸಬೇಕಾದರೆ ಆಗುವ ಸಾಮಾನ್ಯ ಸಮಸ್ಯೆ. ಪದಗಳನ್ನು ಕನ್ನಡದಕ್ಕೆ ತರುವುದು ಬಹಳ ಕಷ್ಟ. ನನ್ನ ಪ್ರಕಾರ ಅವುಗಳನ್ನು ಆಂಗ್ಲದಿಂದ ನೇರವಾಗಿ ಬಳಕೆ ಮಾಡುವುದೇ ಉತ್ತಮ‌. ಕನ್ನಡ ಸಂಸ್ಕೃತ, ಪರ್ಶಿಯನ್ ಮೊದಲಾದ ನುಡಿಗಳಿಂದ ಪದಗಳನ್ನು ಸ್ವೀಕರಿಸಿರುವ ಹಾಗೇ ಆಂಗ್ಲದಿಂದಲೂ ಸ್ವೀಕರಿಸುತ್ತದೆ.
ಗಿರಿಧರ್‌ ಗುಂಜಗೋಡು ಬರೆಯುವ ಓದುವ ಸುಖ ಅಂಕಣ

Read More

ಕಾಡುವ ಕತೆಗಳ ರೂವಾರಿ….

ಆ ಕಾಲಘಟ್ಟ ಬಂಗಾಳದ ಮಟ್ಟಿಗೆ ಅದೊಂಥರಾ ವಿಚಿತ್ರ ಪರಿಸ್ಥಿತಿ. ಅತ್ಯಂತ ವಿದ್ಯಾವಂತ, ಬುದ್ಧಿವಂತರಾದ ಜನಸಮುದಾಯ. ಆದರೆ ಅಷ್ಟೇ ಕರ್ಮಠ ಆಚರಣೆಗಳಿಂದ ಜರ್ಜರಿತವಾಗುತ್ತಾ ಇದ್ದ ಸಮುದಾಯ. ಅತ್ತ ಶ್ರೀಮಂತ ಜಮೀನುದಾರರು ಮತ್ತು ಬಡ ಕೂಲಿ ಕಾರ್ಮಿಕರು ಹಾಗೂ ಗೇಣಿದಾರರು. ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಂಶಗಳಲ್ಲಿ ಅತಿರೇಕದ ತುದಿಗಳಲ್ಲಿದ್ದ ಸಮಾಜ. ಇದನ್ನು ಸುಧಾರಿಸಲು ದೊಡ್ಡ ಸಂಖ್ಯೆಯಲ್ಲೇ ಹುಟ್ಟಿಬಂದ ಸುಧಾರಣಾವಾದಿಗಳು. ಆಂಗ್ಲ ಶಿಕ್ಷಣದಿಂದ ಬಹಳ ಕ್ಷಿಪ್ರವಾಗಿ ಪ್ರಸರಣಗೊಂಡ ಪಾಶ್ಚಾತ್ಯ ಜ್ಞಾನ. ಆಂಗ್ಲರು ಕೂಡಾ ಪ್ರಭಾವಿತಗೊಳ್ಳುವಷ್ಟರ ಮಟ್ಟಿಗಿನ ಬುದ್ಧಿಮತ್ತೆ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ