Advertisement

ಸರಣಿ

ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ

ಹೀನ ಸುಳಿ ಹೋರಿಕರ ಮತ್ತು ಸಾಟಿಬುಗುರಿಯವರು: ಎಸ್. ಗಂಗಾಧರಯ್ಯ ಅನುಭವ ಕಥನ

ಅವತ್ತು ಹೊಲದಲ್ಲಿ ಆ ಪುಣ್ಯಾತ್ಮ ಕರುವಿನ ಮೈಲ್ಲಿ ಹೀನಸುಳಿಯನ್ನು ಪತ್ತೆ ಹಚ್ಚಿದ ಲಾಗಾಯ್ತಿನಿಂದ ಅದನ್ನು ಮಾರಾಟ ಮಾಡುವುದು ಕಷ್ಟವಂತೂ ಆಯ್ತು. ನೋಡಲು ಬಂದವರು `ಹೇಳಂಗಿದ್ರೆ ಈ ಕರ ಐತಲ್ಲ ಇದ್ರ ಯಾಪಾರ ಹೇಳಿ’ ಅಂತ ಇನ್ನೊಂದು ಕರುವನ್ನು ತೋರಿಸುತ್ತಿದ್ದರು. ಯಾರೋ ಅಪರೂಪಕ್ಕೊಬ್ಬ `ಹಣೇಲಿ ಬರ್ದದ್ದು ಆಗ್ಲಿ ತಗಂತೀನಿ. ನೋಡಿ ಸರ್ಯಾಗಿ ಗಿಟ್ಟಂಗೆ ಹೇಳು ಮತ್ತೆ ಯಾಪಾರಾನಾ’ಅಂತ ಆರಕ್ಕೆ ಮೂರರಂಗೆ ಬೇಕಾಬಿಟ್ಟಿ ಕೇಳುತ್ತಾ ರೋಸುತ್ತಿದ್ದರು. ಹಿಂಗೆ ಹೋರಿಗೆ ಹೀನಸುಳಿಯ ಇದೆ ಅಂತ ತಿಳಿಯುತ್ತಲೇ ಯಂಗಾರಾ ಮಾಡಿ ಸಸ್ತಕ್ಕೆ ಅಮಿಕ್ಕಂಡು ಬಿಡಬಹುದು ಅಂತ ಸುಮಾರು ಜನ ಸಾಟಿ ಬುಗುರಿಯವರು ಬಂದು ಬಂದು ನೋಡಿಕೊಂಡು ಹೋಗುತ್ತಿದ್ದರು.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

read more
ಮೇಷ್ಟ್ರಾಗಿ ಹೇಳಿದ  ಆ ಸುಳ್ಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮೇಷ್ಟ್ರಾಗಿ ಹೇಳಿದ  ಆ ಸುಳ್ಳು!!: ಬಸವನಗೌಡ ಹೆಬ್ಬಳಗೆರೆ ಸರಣಿ

ಮಾರನೇ ದಿನದಿಂದ ಆ ತರಗತಿಯ ಮಕ್ಕಳಲ್ಲಿ ವಿಶೇಷ ಬದಲಾವಣೆ ಕಂಡಿತು. ಅದೂ ಇದೂ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದವರೆಲ್ಲ ಇಂದು ಶಾಲೆಗೆ ಬಂದಿದ್ದರು ಕೊಟ್ಟ ಹೋಂ ವರ್ಕ್ ಮುಗಿಸಿದ್ದರು. ಈ ವಿಷಯವು ಕಾಡ್ಗಿಚ್ಚಿನಂತೆ ನಮ್ಮ ಶಾಲೆಯ ಇತರೆ ತರಗತಿಯ ಮಕ್ಕಳಿಗೂ ಹಬ್ಬಿತು. ಅವರೂ ಸಹ ಬುದ್ಧಿ ಶಕ್ತಿ ಹೇಳಲು ಪೀಡಿಸತೊಡಗಿದರು. ನನ್ನ ಈ ಮಾತನ್ನು 8 ನೇ ತರಗತಿಯ ಮಕ್ಕಳೂ ಸಹ ನಂಬಿದ್ದರು!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತಾರನೆಯ ಕಂತು ನಿಮ್ಮ ಓದಿಗೆ

read more
ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ

ಊರ ಹೆಸರು “ಸೀತಾಪುರ”: ಕೆ. ಸತ್ಯನಾರಾಯಣ ಕಥಾ ಸರಣಿ

ದ್ವೇಷಕ್ಕೋ, ಜಿದ್ದಿಗೋ, ಶೇಕದಾರ್‌ ನಮ್ಮ ಪುರಾತನ ಗ್ರಾಮವಾದ ಗೊಬ್ಬಳಿಪುರದ ಬಗ್ಗೆ ಅಪಪ್ರಚಾರ ಶುರುಮಾಡಿದ. ಪುರದ ಹೆಣ್ಣುಮಕ್ಕಳೆಲ್ಲ ಸೀತಾದೇವಿ ತರ, ತೀರಾ ಅಯೋಧ್ಯೆಗೇ ಮದುವೆ ಮಾಡಿಕೊಟ್ಟಿದ್ದರೂ ಹುಡುಗೀರ ಕೆಟ್ಟ ಜಾತಕದಿಂದಾಗಿ ಯಾವ ಮದುವೇನೂ ನಾಲ್ಕು ದಿನ ಕೂಡ ನಿಲ್ಲೋಲ್ಲ. ನಿಂತರೂ ರಾಮನಿಗೆ ಆದ ಹಾಗೆ ಇವರನ್ನು ಕೊಟ್ಟ ಮನೆಯಲ್ಲೂ ಏಳಿಗೆ ಕಂಡು ಬರೋಲ್ಲ. ಸಂಸಾರದೊಳಗೆ ಇದ್ದರೂ ಗೊಬ್ಬಳಿ ಮುಳ್ಳಿನ ತರಹ ಆಳವಾಗಿ ಊರಿ ಹಿಂಸೆ ಮಾಡ್ತಾರೆ. ಮುಳ್ಳು ತೆಗೆಯೋಕೂ ಕಷ್ಟ. ತೆಗೆದರೂ ಗಾಯ ಹಾಗೇ ಉಳಿದಿರುತ್ತೆ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

read more
ಕಣಗಾಲ ಮತ್ತು ಕಳ್ಳರು: ಎಸ್. ಗಂಗಾಧರಯ್ಯ ಅನುಭವ ಕಥನ

ಕಣಗಾಲ ಮತ್ತು ಕಳ್ಳರು: ಎಸ್. ಗಂಗಾಧರಯ್ಯ ಅನುಭವ ಕಥನ

ಮೂರ್ತಿ ಚಕ್ಕನೆ ಎದ್ದವನೇ ನನ್ನನ್ನು `ಲೇ ಆ ಕಡಿಂದ ಓಡಿ ಬಾರೋ’ ಅಂತ ನನಗೆ ಕೂಗಿ ಹೇಳುತ್ತಾ ಕಳ್ಳನ ಹಿಂದೆ ಬಿದ್ದ. ನಾನು ಕೂತಲ್ಲಿಂದ ಬೇಗನೇ ಮೇಲೆದ್ದರೂ ಇದು ನಾನು ನೋಡಿದ್ದ ಮೊದಲ ಕಳ್ಳ ಹಾಗೂ ಕಳ್ಳತನವಾದ್ದರಿಂದ ಒಂಚೂರು ಗಲಿಬಿಲಿಗೊಂಡು ಅವರತ್ತ ತಕ್ಷಣ ಓಡಲಾಗಲಿಲ್ಲ. ಅವರಿಬ್ಬರೂ ಆಗಲೇ ನಮ್ಮ ಹೊಲವನ್ನು ದಾಟಿದ್ದರು. ಪಕ್ಕದ ಹೊಲದಲ್ಲಿ ಮೂರ್ತಿಯ ಕೂಗು ಕೇಳಿಸುತ್ತಿತ್ತು. ನಾನು ಉಸುರುಯ್ದುಕೊಂಡು ನಮ್ಮ ಹೊಲದ ಬದಿಗೆ ಬರುವಷ್ಟರಲ್ಲಿ ಮೂರ್ತಿ ಹಿಂದಿರುಗಿ ಬರುತ್ತಿದ್ದ. `
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಎಂಟನೆಯ ಕಂತು

read more
“ಹಾಸ್ಯೋತ್ಸವ” ಹೇಗಾಯ್ತು ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ

“ಹಾಸ್ಯೋತ್ಸವ” ಹೇಗಾಯ್ತು ಗೊತ್ತ?: ಎಚ್. ಗೋಪಾಲಕೃಷ್ಣ ಸರಣಿ

ನಮ್ಮ ಇಡೀ ಜೀವಮಾನದ ಮತ್ತು ಮುಂದಿನ ಹತ್ತೋ ಹನ್ನೆರಡು ಜನ್ಮದ ದುಡಿತ ಅದಕ್ಕೆ ಹಾಕಬೇಕು ಅನಿಸ್ತಾ? ಕೈನಲ್ಲಿ ಬಿಡಿಕಾಸು ಅಥವಾ ಒಂದೇ ಒಂದು ನಯಾಪೈಸೆ, ಇಲ್ಲದಿರುವಾಗ ಇಂತಹ ತಿಕ್ಕಲು ತಿಕ್ಕಲು ಐಡಿಯಾಗಳು ಮನಸಿಗೆ ಬರುತವೆ ಅಂತ ಒಬ್ಬರು ಗೊಣಗಿದರಾ….? ಕೈತುಂಬ ಕಾಸಿದ್ದು ಯಾವದಾದರೂ ಮಂತ್ರಿ ಪಂತ್ರಿನ ಇನ್ವಾಲ್ವ್ ಮಾಡಿದ್ದರೆ ಅಂವ ಲಾರಿಗಳಲ್ಲಿ ತುಂಬಿ ಜನರನ್ನ ಸಪ್ಲೈ ಮಾಡಬಹುದು! ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೯೦ನೇ ಬರಹ ನಿಮ್ಮ ಓದಿಗೆ

read more
ಕೊಳದ ಬಕ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೊಳದ ಬಕ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕೊಳದ ಬಕಗಳು ಕೊಳ, ಕೆರೆ, ಗದ್ದೆ, ಕೆರೆ-ಕಾಲುವೆ, ಮುಂತಾದ ಪ್ರದೇಶಗಳಲ್ಲಿ ಹಾಗೂ ಜೊಂಡು-ಕೆಸರು ಇರುವೆಡೆಗಳಲ್ಲಿ, ಒಂಟಿಯಾಗಿ, ಅಥವಾ ತಮ್ಮ ಕುಟುಂಬಕ್ಕೆ ಸೇರಿದ ಇತರ ಹಕ್ಕಿಗಳೊಂದಿಗೆ ಗುಂಪಿನಲ್ಲಿ, ಬೇಟೆಯರಸುವುದನ್ನು ಕಾಣಬಹುದು. ಒಂದಿಷ್ಟೂ ಅಲುಗಾಡದೆ, ಒಂಟಿಕಾಲಿನ ಮೇಲೆ ನಿಂತು, ತದೇಕಚಿತ್ತದಿಂದ ಬೇಟೆಯಾಡುವ ಕೊಳದ ಬಕ, ಕೆಲವು ಸಾರಿ ಕೊಕ್ಕಿನಲ್ಲಿ ಸಣ್ಣ ಎರೆಹುಳವನ್ನು ಹಿಡಿದುಕೊಂಡು ಅದನ್ನು ನೀರಿನಲ್ಲಿ ಹಾಕಿ, ಸುತ್ತ ಮುತ್ತಲ ಮೀನುಗಳನ್ನು ಆಕರ್ಷಿಸುವ ಪರಿ ನಿಜಕ್ಕೂ ಕುತೂಹಲಕಾರಿ!
ಡಾ. ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಕೊಳದ ಬಕ” ಹಕ್ಕಿಯ ಕುರಿತ ಬರಹ ಇಲ್ಲಿದೆ

read more
ವಾರಾನ್ನದ ಅರೆ ಆತ್ಮಚರಿತ್ರೆ: ಕೆ. ಸತ್ಯನಾರಾಯಣ ಕಥಾ ಸರಣಿ

ವಾರಾನ್ನದ ಅರೆ ಆತ್ಮಚರಿತ್ರೆ: ಕೆ. ಸತ್ಯನಾರಾಯಣ ಕಥಾ ಸರಣಿ

ಅರ್ಧ ಮನೆಗಳಲ್ಲಿ ವರ್ಷಕ್ಕೆ ಒಂದು ದಿನವೂ ಉಪ್ಪಿನಕಾಯಿ ಹಾಕ್ತಾ ಇರಲಿಲ್ಲ. ಆಯ್ತು ತಿಂಡಿ-ತೀರ್ಥ ಸಿಗುತ್ತಲ್ಲ ಅಂತ ಅಂದುಕೊಂಡರೆ, ವಿಪರೀತ ಪಾತ್ರೆ, ಪಡಗ, ನೆಂಟರಿಷ್ಟರ ಊಟದ ಎಲೆಗಳು. ಇಂತಹ ದಿನಗಳಲ್ಲಿ ರಾತ್ರಿ ಕೂಡ ಊಟ ಮಾಡಿಕೊಂಡು ಹೋಗು ಎಂದರೂ ಭಯವೇ! ಊಟ ಸಿಗುತ್ತೆ ಅಂತ ಉಳಿದುಕೊಂಡರೆ, ಮತ್ತೆ ಪಾತ್ರೆ, ಪಗಡಿ, ಎಂಜಲು, ಗೋಮ. ಮಕ್ಕಳೇ ಧೈರ್ಯ ಮಾಡಿ ಊಟ ಏನೂ ಬೇಡ, ಮಧ್ಯಾಹ್ನ ತಿಂದದ್ದೇ ಇನ್ನೂ ಅರಗಿಲ್ಲ ಅಂತ ಅರ್ಧ ಸುಳ್ಳು ಹೇಳೋರು.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”  

read more
ಮಿಂಚುಳಗಳು ಮತ್ತು ಕಲ್ಬಾವಿ: ಎಸ್. ಗಂಗಾಧರಯ್ಯ ಅನುಭವ ಕಥನ

ಮಿಂಚುಳಗಳು ಮತ್ತು ಕಲ್ಬಾವಿ: ಎಸ್. ಗಂಗಾಧರಯ್ಯ ಅನುಭವ ಕಥನ

ಇವರು ಯಾರೊಬ್ಬರನ್ನು ಬೈದದ್ದಾಗಲಿ, ಯಾರ ಮೇಲೆ ಆಗಲಿ ಸಿಟ್ಟು ಮಾಡಿಕೊಂಡಿದ್ದನ್ನಾಗಲಿ ನಾನು ಯಾವತ್ತೂ ಕಂಡಿರಲಿಲ್ಲ. ಚಂದದ ನಗು ಹಾಗೂ ಮೌನ ಇವರ ಬಲು ದೊಡ್ಡ ಶಕ್ತಿಗಳಾಗಿದ್ದವು. ಇನ್ನೊಬ್ಬರಿಗೆ ಭಾರವಾಗದಂತೆ ಬದುಕಬೇಕು ಅಂತ ಯಾವಾಗಲೂ ಹೇಳುತ್ತಿದ್ದ ಗೋವಿಂದಪ್ಪ ತನ್ನ ಕೈಲಾದ ಕೆಲಸವನ್ನು ಮಾಡುತ್ತಿದ್ದರು. ಅಂತೆಯೇ ಯಾರಾದರೂ ಯಾವುದಾದರೂ ಕೆಲಸವನ್ನು ಹೇಳಿದರೆ ಒಂಚೂರೂ ಬೇಸರವಿಲ್ಲದೆ ಪಾಲಿಸುತ್ತಿದ್ದರು. ಒಂಥರಾ ನಿರುಮ್ಮಳ ಜೀವಿ. ಆದರೆ ಇಂಥ ಗೋವಿಂದಪ್ಪ ನಿದ್ದೆಗೆ ಜಾರಿದಾಗ ಮಾತ್ರ ಸಹಿಸಲಸಾಧ್ಯದ ವ್ಯಕ್ತಿಯಾಗಿಬಿಡುತ್ತಿದ್ದರು. ಏಕೆಂದರೆ ಇವರು ಹೊಡೆಯುತ್ತಿದ್ದ ಗೊರಕೆಯ ಸದ್ದು ಅವರು ಮಲಗಿದ್ದ ಮನೆಯವರಿಗೆ ಮಾತ್ರವಲ್ಲ ಸುತ್ತಲ ಯಾವ ಜೀವಿಯನ್ನೂ ಬಡಪಟ್ಟಿಗೆ ಬಿಡುತ್ತಿರಲಿಲ್ಲ.
ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”

read more
ಬಾಸ್‌ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ

ಬಾಸ್‌ಗಳು ಹೀಗಿದ್ರೆ ಎಷ್ಟು ಚೆಂದ ಅಲ್ವಾ??: ಬಸವನಗೌಡ ಹೆಬ್ಬಳಗೆರೆ ಸರಣಿ

ಒಮ್ಮೆ ಹೀಗೆ ಆಯ್ತಂತೆ: ಒಮ್ಮೆ ಒಂದು ಕಚೇರಿಯವರ ಬಳಿ ದೇವರು ಪ್ರತ್ಯಕ್ಷನಾಗಿ ‘ನಿಮಗೇನು ವರ ಬೇಕು’ ಎಂದು ಕೇಳಿದನಂತೆ. ಆಗ ಬಾಸಿಗೂ ಮೊದಲೇ ಅವರ ಸಿಬ್ಬಂದಿಯೊಬ್ಬನು ‘ನಾನು ಅಮೇರಿಕಾಗೆ ಹೋಗುವ ವರ ನೀಡು’ ಎಂದನಂತೆ. ತಕ್ಷಣ ದೇವರು ‘ತಥಾಸ್ತು’ ಎಂದನಂತೆ. ಮತ್ತೊಬ್ಬನೂ ಸಹ ‘ನಾನು ಲಂಡನ್‌ಗೆ ಹೋಗುವಂತೆ ಮಾಡು’ ಎಂದಾಗ ದೇವರು ಹಾಗೆ ಮಾಡಿದನಂತೆ. ಆಗ ಬಾಸಿನ ಸರದಿಯಲ್ಲಿ ದೇವರ ವರ ಕೇಳುವಾಗ ಅವನಿಗಿಂತ ಮುಂಚೆ ಅವರ ನೌಕರರು ವರ ಕೇಳಿದ್ದಕ್ಕೆ ಸಿಟ್ಟು ಬಂದು ಅವರಿಬ್ಬರೂ ಕಚೇರಿಗೆ ವಾಪಸ್ಸು ಬರುವ ಹಾಗೆ ಮಾಡು ಎಂದು ಕೇಳಿದನಂತೆ!!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ