ಹೆಣ್ಣಕಣ್ಣೋಟದ ಉತ್ತರ ಮಹಾಭಾರತ: ಡಾ. ಚಂದ್ರಮತಿ ಸೋಂದಾ ಬರಹ
ಈ ಕೃತಿಯಲ್ಲಿ ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಅಗಾಧವಾದ ತಾಳ್ಮೆ ಮತ್ತು ಇವೆಲ್ಲ ನೋವಿಗೆ ಕಾರಣವಾಗಿರುವ ತನ್ನಿನಿಯರನ್ನು ದೂರವೇ ಇಡುವ ಸಶಕ್ತ ಹೆಣ್ಣಾಗಿ ಕಾಣಿಸುತ್ತಾಳೆ. ನೂರು ಮಕ್ಕಳನ್ನು ಕಳೆದುಕೊಂಡ ಗಾಂಧಾರಿ, ಮಗನ ಸಾವಿನಿಂದ ನೊಂದ ಸುಭದ್ರೆ, ಯುದ್ಧದಿಂದ ದೂರವಿದ್ದರೂ ಪಂಚಪಾಂಡವರನ್ನು ನುಂಗಿದ ಯುದ್ಧದ ಭೀಕರತೆಗೆ ಸ್ವತಃ ಬಲಿಯಾದ ದ್ರೌಪದಿ, ಕುಂತಿ, ಭಾನುಮತಿ ಎಲ್ಲರೂ ಯುದ್ಧದಿಂದ ನೊಂದವರೇ. ಅವರನ್ನೆಲ್ಲ ಒಂದೆಡೆ ಇರುವಂತೆ ಮಾಡಿದ ದ್ರೌಪದಿ ಇಲ್ಲಿ ಮಾತಿಗಿಂತ ಕ್ರಿಯಶೀಲತೆಗೆ ಹೆಚ್ಚು ಆದ್ಯತೆ ನೀಡಿದ ಪಾತ್ರವಾಗಿ ಮೂಡಿದ್ದಾಳೆ. ಅವಳ ಕರ್ತೃತ್ವಶಕ್ತಿ ಅಸಾಧಾರಣವಾದುದು ಎನ್ನುವ ಭಾವ ನಮ್ಮನ್ನು ತಟ್ಟುತ್ತದೆ.
ಎಂ.ಎಸ್. ವೇದಾ ಕಾದಂಬರಿ ‘ಉತ್ತರ ಮಹಾಭಾರತ’ ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ

