ಆಸ್ಟ್ರೇಲಿಯಾದಲ್ಲಿ ಮಹಿಳಾ ನಡಿಗೆ ಗುಂಪು: ವಿನತೆ ಶರ್ಮಾ ಅಂಕಣ
ನನಗೆ ಆಸ್ಟ್ರೇಲಿಯಾದಲ್ಲಿ ‘ಹೊರತುಪಡಿಸುವ’ ಮನೋಭಾವದ ಅನುಭವ ದಟ್ಟವಾಗಿರುವುದರಿಂದ ಈಚೀಚೆಗೆ ಆ ಮನೋಭಾವದ ಮಜಲುಗಳ, ಅದು ವ್ಯಕ್ತವಾಗುವ ಹಿನ್ನೆಲೆಗಳ ಬಗ್ಗೆ ಆಸಕ್ತಿ ಬೆಳೆದಿದೆ. ಕೆಲತಿಂಗಳ ಹಿಂದೆ ನಡಿಗೆ ಗುಂಪಿಗೆ ವಾಪಸ್ಸಾದಾಗ ನನ್ನ ಪರಿಚಯದಾಕೆ ಉತ್ಸಾಹದಿಂದ ಬರಮಾಡಿಕೊಂಡರು. ಬೇರೆಯವರಿಗೆ ನಾನು ನನ್ನ ಹೆಸರನ್ನು ಹೇಳಿಕೊಂಡು, ಕೆಲವರ್ಷಗಳ ಹಿಂದೆ ನಿಮ್ಮ ಜೊತೆ ನಡೆಯುತ್ತಿದ್ದೆ, ಎಂದೆಲ್ಲಾ ಪೀಠಿಕೆ ಕೊಟ್ಟೆ. ಇತರರಲ್ಲಿ ಅದೇ ಉದಾಸೀನತೆ. ಪುನಃ ಎಲ್ಲರೂ ಬಿಳಿಯರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಅನಕೃ ಎಂಬ ಕನ್ನಡದ ಒನಪು! ಜುಲೈ ತಿಂಗಳ ಈ ನೆನಪು: ಎಲ್.ಜಿ.ಮೀರಾ ಅಂಕಣ
ಅನಕೃ ಅವರ ಬರಹದ ಉದ್ದೇಶವು ಇಲ್ಲಿ ಸ್ಪಷ್ಟವಾಗಿ ವ್ಯಕ್ತವಾಗಿದೆ. ಹಿಂದಿನ ಕಾಲದಿಂದ ನಂಬಿಕೊಂಡು ಬಂದ ಮೌಲ್ಯಗಳನ್ನು ಆಧುನಿಕ ಸಂದರ್ಭದಲ್ಲಿ ಅಳವಡಿಸಿಕೊಂಡು ಬಾಳುವ ವ್ಯಕ್ತಿಗಳು ಹೇಗಿರುತ್ತಾರೆ ಎಂಬ ಪ್ರಶ್ನೆಯನ್ನು ಅವರು ಎತ್ತಿಕೊಂಡಿದ್ದಾರೆ. ಅಂತಹ ಬಾಳನ್ನು ಬಾಳುವ ವ್ಯಕ್ತಿಗಳನ್ನು ಮತ್ತು ಅವರಿಗೆ ಎದುರಾಗುವ ಪ್ರತಿಕೂಲ ಸ್ವಭಾವದ ವ್ಯಕ್ತಿಗಳನ್ನು ಪಾತ್ರಗಳಾಗಿ ಇಟ್ಟುಕೊಂಡು, ಪರಸ್ಪರ ವಿರುದ್ಧ ಗುಣಗಳ ಸಂಘರ್ಷವನ್ನು ಚಿತ್ರಿಸಿ ಕೊನೆಗೆ ಒಳ್ಳೆಯದರ ಮುಂದೆ ಕೆಟ್ಟದ್ದು ಸೋಲುತ್ತದೆ ಎಂಬ ಶುಭಸಂದೇಶವನ್ನು ಸಾರುವ ಉಪಸಂಹಾರವನ್ನು ನೀಡಿದ್ದಾರೆ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಒಂಟಿಹೆಣ್ಣು ಮತ್ತು ಹಂಪೆಯಾತ್ರೆ: ಸುಕನ್ಯಾ ಕನಾರಳ್ಳಿ ಅಂಕಣ
ಮೂರನೆಯ ದಿನದ ಹೊತ್ತಿಗೆ ಮನಸ್ಸನ್ನು ಉಲ್ಲಾಸಕ್ಕೆ ಹಚ್ಚುವ, ಹರಿಯುವ, ಸೆಳೆಯುವ ನದಿಯನ್ನು ನೋಡಬೇಕೆನ್ನಿಸಿತ್ತು. ತುಂಗಭದ್ರೆಯ ಹರವನ್ನು ಕಲ್ಪಿಸಿಕೊಳ್ಳುತ್ತಾ ಬೆಳಿಗ್ಗೆಯೇ ಹೋಗಿ ಒಂದು ಮೂಲೆ ಹಿಡಿದು ಕೂತು ಎಷ್ಟೋ ಹೊತ್ತು ಆಕೆಯನ್ನು ಕಣ್ತುಂಬಿಕೊಂಡ ಮೇಲೆ ಸ್ವಲ್ಪ ಸಮಾಧಾನವೆನ್ನಿಸಿತ್ತು. ಕೃಷ್ಣದೇವರಾಯ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದ್ದ ಆನೆಗುಂದಿಗೆ ಹೋಗಬೇಕು ಎಂದು ಹೇಳಿದ್ದರೂ ನಮ್ಮ ಆಟೋವಾಲ ಕರೆದುಕೊಂಡು ಹೋಗಿದ್ದು ಐನೂರ ಎಪ್ಪತ್ತೈದು ಮೆಟ್ಟಿಲು ಹತ್ತಬೇಕಿದ್ದ ಅಂಜನಾದ್ರಿಗೆ. ಕಡಿದರೆ ಎರಡು ಆಳಾಗುವ ಒಬ್ಬ ಧಡಿಯ ಮೈಮೂತಿ ತುಂಬ ಹನುಮಂತನ ಬಣ್ಣ ಬಳಿದುಕೊಂಡು, ಸೊಂಟದ ಹಿಂದೆ ಒಂದು ಬಾಲವನ್ನು ಅಂಟಿಸಿಕೊಂಡು, ಗದೆ ಹಿಡಿದು ನಡುದಾರಿಯಲ್ಲಿ ಹಾದಿಗುಪ್ಪೆಯ ಮೇಲೇ ನಿಂತಿದ್ದ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಎಸ್. ಜಾನಕಿಗೆ ಯಾಕೆ ಕೇವಲ ಪದ್ಮ?: ಸುಕನ್ಯಾ ಕನಾರಳ್ಳಿ ಅಂಕಣ
ಅವರೇನೂ ತೆಪ್ಪಗೆ ಅದನ್ನು ಒಪ್ಪಿಕೊಳ್ಳಲಿಲ್ಲ. ತಮ್ಮಲ್ಲಿ ಜಾಗೃತವಾಗಿರುವ ಆಧುನಿಕ ಮಹಿಳಾಪ್ರಜ್ಞೆಗೆ ನೀವು ಅಪಚಾರ ಮಾಡುತ್ತಿದ್ದೀರಿ ಎಂದು ಗಾಂಧೀಜಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಯಾವ ಚಳುವಳಿಯೂ ತಾವಿಲ್ಲದೆ ನಡೆಯಕೂಡದು ಎಂದು ಸ್ಪಷ್ಟವಾಗಿ ಹೇಳಿದರು. ದಾದಾಬಾಯಿ ನವರೋಜಿಯವರ ಮೊಮ್ಮಗಳು ಕುರ್ಷೆದ್ ಬೆನ್ ನವರೋಜಿ ಒಂದು ಸಿಟ್ಟಿನ ಪತ್ರವನ್ನು ಸಹ ಬರೆದು ಗಾಂಧಿಗೆ ರವಾನಿಸಿದರು. ‘ಸ್ತ್ರೀಧರ್ಮ’ ಎಂಬ ಪತ್ರಿಕೆಯಲ್ಲಿ ಮಾರ್ಗರೆಟ್ ಕಸಿನ್ಸ್ ಹೀಗೆ ‘ಹೊರಗಿರಿಸುವ’ ಹುನ್ನಾರವನ್ನು ಪ್ರತಿಭಟಿಸಿದರು. ಯಾವುದೇ ಸಮಾವೇಶ, ಸಮಿತಿ, ಸಂಚಲನೆಗಳು ಹೆಣ್ಣಿಲ್ಲದೆ ನಡೆಯಬಾರದೋ, ಹಾಗೆಯೇ ಯಾವುದೇ ಹೋರಾಟ, ಪ್ರತಿಭಟನೆಗಳು ಸಹ ಹೆಣ್ಣಿಲ್ಲದೆ ಅಪೂರ್ಣ ಎಂದು ಎಚ್ಚರಿಸಿದರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
ಎಐ ಲೋಕದ ಅಲೆಗಳಲ್ಲಿ ಆಸ್ಟ್ರೇಲಿಯಾ: ವಿನತೆ ಶರ್ಮಾ ಅಂಕಣ
ನನ್ನ ಸಮಯವನ್ನು ಜಾಣ್ಮೆಯಿಂದ ಬಳಸುವುದು ನನಗೆ ಅಗತ್ಯವಾಗಿತ್ತು. ಅದಕ್ಕೆ ವಿರುದ್ಧವಾಗಿ ಎಐ ಬಳಕೆಗೇ ಅಧಿಕ ಸಮಯ ಹಿಡಿಸಿದ್ದು ನನಗೆ ಒಪ್ಪಿಗೆಯಾಗಲಿಲ್ಲ ಇರಿಸುಮುರಿಸಾಗಿತ್ತು.. ಆ ಸಮಯದಲ್ಲಿ ಯಾವುದೇ ಸಾಧನಗಳನ್ನು ಉಪಯೋಗಿಸದೆ ನಾನೇ ಪದ-ಕಡಿತ ಮಾಡಬಹುದಿತ್ತು ಎಂದೆನಿಸಿತು. ಬಹುಶಃ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಉಪಯೋಗಿಸುವುದು ಹೇಗೆ ಎನ್ನುವುದರ ಬಗ್ಗೆ ನಾನು ಕಲಿಯಬೇಕಿದೆ. ಮುಂಬರುವ ನಿರೀಕ್ಷೆಗಳಿಗೆ, ಸನ್ನಿವೇಶಗಳಿಗೆ ತಯಾರಾಗಬೇಕಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ರಿಚರ್ಡ್ ಫೇನ್ಮನ್ – ಅದ್ಭುತ ಪ್ರತಿಭೆಯ ವಿಲಕ್ಷಣ ವಿಜ್ಞಾನಿ: ಡಾ. ಎಲ್. ಜಿ. ಮೀರಾ ಅಂಕಣ
ಇಡೀ ಜೀವನವನ್ನು ಭೌತಶಾಸ್ತ್ರದ ಅಧ್ಯಯನ ಮತ್ತು ಆರಾಧನೆಯಲ್ಲಿ ಕಳೆದ ಫೇನ್ಮನ್ ಒಬ್ಬ ಅಸಾಧ್ಯ ಕುತೂಹಲಿ ಮತ್ತು ಮಹಾತುಂಟ. ವಿಜ್ಞಾನಿ ಎಂದ ತಕ್ಷಣ ನಮ್ಮ ಮನಸ್ಸಿನಲ್ಲಿ ಮೂಡುವ `ಗಂಭೀರ, ನಗಲು ಬಾರದ, ಚಿಂತನಾಪರ, ಮಿತಭಾಷಿ ವ್ಯಕ್ತಿತ್ವ’ಕ್ಕೆ ಒಂದು ವಿರುದ್ಧಪದ ಇವರು! ಸದಾ ಯಾರದಾದರೂ ಕಾಲೆಳೆಯತ್ತಾ ನಗುತ್ತಾ ನಗಿಸುತ್ತಾ, ಚಿತ್ರ ಬರೆಯಲು ಕಲಿಯುತ್ತಾ, ವಾದ್ಯ ನುಡಿಸಲು ಪ್ರಯತ್ನಿಸುತ್ತಾ, ಕ್ಯಾಬರೆ ನೃತ್ಯಗಾತಿಯರ ಜೊತೆಯಲ್ಲಿ ಸಂಭಾಷಣೆ ಮಾಡುತ್ತಾ…..
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಇಂದಿನ ಮಂದಿಯ ಬಿಂಬದ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ
ವಿಲಿಯಮ್ಸ್ ಪ್ರಕಾರ ಟೆಲಿವಿಷನ್ ಕೇವಲ ಒಂದು ತಾಂತ್ರಿಕತೆಯಲ್ಲ, ಅದು ಒಂದು ಸಾಂಸ್ಕೃತಿಕ ರೂಪವೂ ಹೌದು. ಅದರಲ್ಲಿ ಜಾಹೀರಾತುಗಳು ಧಾರಾವಾಹಿಗಳ ನಡುವೆ ‘ಅಕಸ್ಮಾತ್ತಾಗಿ’ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಅವೇ ಧಾರಾವಾಹಿಗಳನ್ನು ರೂಪಿಸುವ ಶಕ್ತಿಗಳು. ಪ್ರಾಯೋಜಕರು ತಮಗೆ ಬೇಕಾದ ನೋಡುಗರನ್ನು ಅದರ ಮೂಲಕ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಆ ಪೂರಕತೆಯನ್ನು ಅರ್ಥಮಾಡಿಕೊಳ್ಳುವುದು ತುಂಬ ಮುಖ್ಯ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೇಳನೆಯ ಬರಹ
ಇಲ್ಲಿ ಮಹಾರಾಣಿಯೂ ಕೇವಲ ಒಬ್ಬ ‘ಹೆಣ್ಣೇ’ !: ಸುಕನ್ಯಾ ಕನಾರಳ್ಳಿ ಅಂಕಣ
ಜನಪದ, ಪಠ್ಯ, ದೃಶ್ಯ ಹೀಗೆ ಮಾಧ್ಯಮ ಯಾವುದೇ ಇದ್ದರೂ ವೀರಗಾಥೆ ಎಂಬ ಪ್ರಕಾರ ಸರಾಗವಾಗಿ ಸಾಗುವುದನ್ನು ಬೇಡುತ್ತದೆ. ಚೆನ್ನಮ್ಮನ ಕಥಾನಕ ಸಹ ಅದಕ್ಕೆ ಹೊರತಾಗಿಲ್ಲ. ಎಲ್ಲವನ್ನೂ ಕಳೆದುಕೊಂಡ ಚೆನ್ನಮ್ಮ ಬಂಧನದಲ್ಲಿ ಐದು ವರ್ಷ ಕಳೆದು ಸಾವನ್ನಪ್ಪುತ್ತಾಳೆ. ಕಿತ್ತೂರು ಮತ್ತು ಚೆನ್ನಮ್ಮ ತದನಂತರದಲ್ಲಿ ದೇಶದಲ್ಲೆಲ್ಲಾ ಹಬ್ಬಿದ ಸ್ವಾತಂತ್ರ್ಯ ಹೋರಾಟದ ಮುಂದಾಳುಗಳೆಂದು ಸ್ತುತಿಸಲಾಗಿದೆ. ರಾಷ್ಟ್ರೀಯ ಹೋರಾಟದಲ್ಲಿ ಚೆನ್ನಮ್ಮ ಧ್ರುವತಾರೆಯಂತೆ ಮಿನುಗುತ್ತಿರುತ್ತಾಳೆ ಎಂದು ಹೊಗಳಲಾಗಿದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತಾರನೆಯ ಬರಹ
ಶ್ರೀರಂಗನಾಯಕ ರಾಜೀವ ಲೋಚನ ರಮಣ…: ವಿನಾಯಕ ಅರಳಸುರಳಿ ಅಂಕಣ
ಕೋಣೆ ಹಾಗೂ ಅದರ ಹಾಸಿಗೆಗಷ್ಟೇ ಸೀಮಿತವಾಗಿ ಹೋದ ಅಜ್ಜನಿಗೆ ಇಡೀ ಮನೆಯಲ್ಲಿ ಸ್ವಲ್ಪವಾದರೂ ಮನೋರಂಜನೆಗೆ ಒದಗುತ್ತಿದ್ದವನು ನಾನೊಬ್ಬನೇ. ಯಾವ್ಯಾವುದೋ ಸಿನಿಮಾ, ಭೂತ, ಪ್ರೇತದ ಕಥೆಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಅಂಗಳದಲ್ಲಿ ಡಿಶೂಂ ಡಿಶೂಂ ಎಂದು ಗಾಳಿಯೊಡನೆ ಗುದ್ದಾಡುತ್ತ ಸುಳಿದಾಡುತ್ತಿದ್ದ ನನ್ನನ್ನು ಗಣೇಶಾ ಎಂದು ಕರೆಯುತ್ತಿದ್ದ ಅಜ್ಜ ‘ಇಲ್ಲಿ ಜಗುಲೀಲಿ, ನನ್ನ ಎದುರೇ ಆಡು ಗಣೇಶಾ’ ಎಂದು ಗೋಗರೆಯುತ್ತಿದ್ದರು.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”










