ಅರಮನೆ-ಗುರುಮನೆಗಳ ನಡುವೆ: ಸುಕನ್ಯಾ ಕನಾರಳ್ಳಿ ಅಂಕಣ
ಕೊನೆಗೆ ಕುಡಿದು ಮತ್ತೇರಿದ ಅರಮನೆಯ ಸೈನಿಕರು ಬಂದು ಬೆಕೆಟ್ಟನನ್ನ ಎಲ್ಲರೆದುರು ಕೊಲ್ಲುತ್ತಾರೆ. ಬಿಷಪ್ಪನೊಬ್ಬ ಗುರುಮನೆಯೊಳಗೆ ಹುತಾತ್ಮನಾಗಿ ತನ್ಮೂಲಕ ಸಂತನೊಬ್ಬ ಉದಯಿಸಿದ್ದೇನೋ ನಿಜ. ಆದರೆ ಅರಮನೆ ಗೆದ್ದಂತಾಯಿತೆ? ಹೇಡಿ ಸೈನಿಕರು ಏನೇನೋ ಬಡಬಡಿಸುತ್ತಾ ತಾವೆಸಗಿದ ಘೋರ ಕೊಲೆಯನ್ನು ಸಮರ್ಥಿಸಿಕೊಳ್ಳುತ್ತಾರೆ. ಒಬ್ಬನಂತೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದ್ದರೂ ಬಿಷಪ್ ತಪ್ಪಿಸಿಕೊಳ್ಳಲಿಲ್ಲವಲ್ಲಾ? ತಾವೇನು ಮಾಡುವ ಹಾಗಿತ್ತು? ಹಾಗಾಗಿ ಅದೊಂದು ಆತ್ಮಹತ್ಯೆ ಎಂದು ಸಹ ಅರ್ಥೈಸುತ್ತಾನೆ. ಬಡಹೆಂಗಸರ ಮೇಳ ತಮ್ಮ ಬದುಕಿನಲ್ಲಿ ಸುಖ ಸಂತೋಷಗಳೊಂದೂ ಇಲ್ಲ, ತಾವು ಏನನ್ನೂ ಬದಲಾಯಿಸಲು ಅಸಮರ್ಥರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತಾರನೆಯ ಬರಹ
ಬೆಂಗಳೂರು ಟೂ ಶಿವಮೊಗ್ಗ…: ವಿನಾಯಕ ಅರಳಸುರಳಿ ಅಂಕಣ
ತನ್ನ ದಾರಿಯಲ್ಲಿ ಸಿಗುವ ಪ್ರತಿಯೊಂದು ಪುಟ್ಟ ಪಟ್ಟಣದ ನಿಲ್ದಾಣವನ್ನೂ ಹೊಕ್ಕು, ಆತಿಥ್ಯ ಸ್ವೀಕರಿಸಿ, ಟಾಟಾ ಹೇಳಿಯೇ ಅದು ಹೊರಡುವುದು. ಅಂಥಾ ನಿಲ್ದಾಣಗಳಲ್ಲಿ ನುಗ್ಗಿ ಹತ್ತಿಕೊಳ್ಳುವ, ಉದ್ಯೋಗಕ್ಕಾಗಿ ಪಕ್ಕದೂರಿನ ಶಾಲೆಗೋ, ಆಚೆ ಪಟ್ಟಣಕ್ಕೋ ಹೋಗುವ ಉದ್ಯೋಗಿಗಳು. ಬೆಂಗಳೂರಿನಷ್ಟು ಕಿಕ್ಕಿರಿಯದ, ಬರೀ ಆಕಾಶ ಕಾಣುವಷ್ಟು ಗಗನಚುಂಬಿಗಳಿರುವ ಕಟ್ಟಡಗಳ ಸಮುದ್ರವಲ್ಲದ, ಎಲ್ಲವನ್ನೂ ಮಾರಾಟಕ್ಕಿಡದ, ಕೊಂಚ ಸಾಗಿದರೆ ಮುಗಿದು ಹೋಗಿ ಕಾಡು, ಮರಗಳ ಹಳ್ಳಿಯೊಂದು ಪ್ರತ್ಯಕ್ಷವಾಗುವ ಈ ಪುಟ್ಟ ಪಟ್ಟಣದಲ್ಲಿ ಬದುಕು ಕಟ್ಟಿಕೊಂಡ ಇವರೆಲ್ಲ ಎಷ್ಟು ಪುಣ್ಯಾತ್ಮರಲ್ಲವೇ ಎಂದುಕೊಳ್ಳುವಾಗಲೇ ಅವರು ಬಸ್ಸಿಳಿದು ಹೆದ್ದಾರಿಯಿಂದ ಕವಲೊಡೆದ ರಸ್ತೆಯೊಂದರಲ್ಲಿ ನಡೆಯುತ್ತ ಮರೆಯಾಗುತ್ತಾರೆ.
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”
ಆಸ್ಟ್ರೇಲಿಯಾದ ಎನ್ಡಿಐಎಸ್ ಅನುದಾನದ ಏಳುಬೀಳುಗಳು: ಡಾ. ವಿನತೆ ಶರ್ಮ ಅಂಕಣ
ಈ NDIS ಸಹಾಯವನ್ನು ಪಡೆಯಲು ಕೆಲವು ಅರ್ಹತಾ ಮಾನದಂಡಗಳಿವೆ. ಅನುದಾನವನ್ನು ಕೋರಲು ಅಭ್ಯರ್ಥಿಗಳು ತಮಗಿರುವ ಅಂಗ ಮತ್ತು ಮಾನಸಿಕ ನ್ಯೂನತೆಗಳ ತಪಾಸಣಾ ವರದಿಗಳನ್ನು ಸಲ್ಲಿಸಬೇಕು. ತಮ್ಮ ಕುಟುಂಬ ವಾರ್ಷಿಕ ಆದಾಯ, ಸ್ಥಿರ, ಅಸ್ಥಿರ ಆಸ್ತಿ ವಿವರಗಳು, ಇರುವ ಸಾಮರ್ಥ್ಯಗಳ ಬಳಕೆ, ದೌರ್ಬಲ್ಯಗಳಿಂದ ಆಗುತ್ತಿರುವ ಪರಿಣಾಮ, ಹೀಗೇ ಅನೇಕ ದಾಖಲೆಗಳನ್ನು ಒದಗಿಸಬೇಕು. ಇವನ್ನೆಲ್ಲಾ ಪಡೆಯುವುದು, ಒದಗಿಸುವುದು ಸುಲಭದ ಮಾತಲ್ಲ. ಅನೇಕರಿಗೆ ಇದು ದೊಡ್ಡ ಚಾಲೆಂಜ್. ಇವರೊಡನೆ ಇವರ ಕುಟುಂಬ ಸದಸ್ಯರೂ ಕಣಕ್ಕಿಳಿದು ಪರದಾಡಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ
ಎಐ ಯುಗ, ಹುಡುಕಾಟ, ಚಾರಣಪ್ರೀತಿ ಹಾಗೂ `ಘಾಂದ್ರುಕ್’…: ಡಾ. ಎಲ್.ಜಿ. ಮೀರಾ ಅಂಕಣ
`ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ – ಲಂಕೇಶರ ಲೇಖನ ನೆನಪಾಗುತ್ತೆ. ಬಿಟ್ಟೇನೆಂದರೂ ಮನುಷ್ಯನಿಗೆ ಮನುಷ್ಯರ ಸಹವಾಸವನ್ನು ಬಿಡಲು ಸಾಧ್ಯವೇ? `ಯಾರ ಹತ್ತಿರವೂ ನಾನು ಮಾತಾಡುವುದಿಲ್ಲ, ಮನುಷ್ಯರ ಸಹವಾಸವೇ ಬೇಡ’ ಎಂದುಕೊಂಡ ಸಿದ್ಧಾರ್ಥನು ಕೆಲವು ದಿನ ಹೀಗಿದ್ದರೂ ನಂತರ ನಿಧಾನವಾಗಿ ಮನುಷ್ಯರ ಸಂಗ, ಸಹವಾಸ ಬೆಳೆಸುತ್ತಾ ಹೋಗುವುದು, ಸೋಫಿಯಾಳ ಪ್ರೀತಿಯಲ್ಲಿ ತಲ್ಲೀನನಾಗುವುದು, ಹಾಗೂ ತಾನು ನೋಡಿದ ವಿವರಣೆಗೆ ಮೀರಿದ ಹಿಂಸೆಯಿಂದ ಮನುಷ್ಯರ ಬಗೆಗೆ ತೀವ್ರ ಅಪನಂಬಿಕೆ ಬೆಳೆಸಿಕೊಂಡಿದ್ದ ಸೋಫಿಯಾಳು ಸಿದ್ಧಾರ್ಥನನ್ನು ಹೃದಯಕ್ಕೆ ಹಚ್ಚಿಕೊಳ್ಳುವುದು – ಇವು ಏನನ್ನು ಸೂಚಿಸುತ್ತವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ
ಮನದ ಕಿಟಕಿ: ರವೀಂದ್ರ ನಾಯಕ್ ಸಣ್ಕಕ್ಕಿಬೆಟ್ಟು ಅಂಕಣ
ಮನೆಯ ರಾಮಾಯಣ ಮುಗಿಸಿ ಹೊರಗೆ ಬಂದು ಡ್ಯೂಟಿಗೆಂದು ಬೈಕ್ ಹತ್ತುವಾಗ ಆ ಗಂಡಸಿನ ಮುಖ ನೋಡಬೇಕು… ಯುದ್ಧ ನಂತರದ ನಿರ್ಮಲ ಶಾಂತಿ, ಆನಂದ ಅವರ ಮುಖದಲ್ಲಿ; ಜೀವಾವಧಿ ಶಿಕ್ಷೆ ಮುಗಿಸಿ ಈಗಷ್ಟೇ ಹೊರ ಬಂದ ಖೈದಿಯ ಸಂತೋಷದಂತೆ ನಿರಾಳ ಮುಖಭಾವ. ಸಂಜೆ ಮತ್ತೆ ಮನೆಯ ಬಾಗಿಲು ಬಡಿಯುವಾಗ ಮತ್ತದೇ ಬೇಸರ. “ಒಂದೇ ಮನೆಯಲ್ಲಿ ವಿಚ್ಭೇದಿತ ಮನಸ್ಸುಗಳು ಸಹಭೋಜನ ಮಾಡುತ್ತವೆ” ಎಂದು ಎಲ್ಲೋ ಓದಿದ್ದ ಮಾತು ಇವರನ್ನು ನೋಡಿದಾಗ ಅದೆಷ್ಟು ನಿಜ ಅನ್ನಿಸಿತು…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಹನ್ನೆರಡನೆಯ ಬರಹ
‘ವಿಧವೆ’ ನಿಮ್ಮನ್ನು ತುಂಬ ಕಾಡಿದಳೆ?: ಕಾಸರವಳ್ಳಿಯವರೊಂದಿಗೆ ಒಂದು ಸಂದರ್ಶನ: ಸುಕನ್ಯಾ ಕನಾರಳ್ಳಿ ಅಂಕಣ
‘ನಾಯಿನೆರಳು’ ವಿನ ಮೂರನೆಯ ಭಾಗದಲ್ಲಿ ಪ್ರಭುತ್ವ ಹೆಚ್ಚು ಹೆಚ್ಚು ಮೂಗು ತೂರಿಸೋದನ್ನ ತೋರಿಸೋದಕ್ಕೆ ಪ್ರಯತ್ನಪಟ್ಟಿದೀನಿ. ಪೋಲೀಸು, ಕೋರ್ಟು, ಕೇಸು… ಅವು ಮಂದಿಯ ವೈಯುಕ್ತಿಕ ಜೀವನದ ನಿರ್ಧಾರಗಳು ಅನ್ನೋ ಅಂಶವನ್ನ ಗಣನೆಗೇ ತಗೊಳಲ್ಲ. ವೆಂಕಟಲಕ್ಷ್ಮಿಗೆ ವ್ಯವಸ್ಥೆಯ ಆಯಾಮಗಳ ಪರಿಚಯ ಇದೆ. ಜೊತೆಗೆ, ಸಮುದಾಯದ ಒಂದು ಪಾತ್ರ ‘ಸ್ವಲ್ಪ ದಿನ ಹಿಟ್ಲರ್ ಕಾಟ ಕೊಟ್ಟ. ಈಗ ಗಾಂಧಿ ಕಾಟ,’ ಅಂತ ಹೇಳುತ್ತೆ. ಅವರಿಬ್ಬರ ನಡುವಿನ ವ್ಯತ್ಯಾಸವೂ ಅವರಿಗೆ ಗೊತ್ತಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೈದನೆಯ ಬರಹ
ಸೆರಗ ಬಿಡು ಮರುಳೆ: ಜಯಲಕ್ಷ್ಮಿ ಪಾಟೀಲ್ ಅಂಕಣ
ಅಗತ್ಯವಿಲ್ಲದಿದ್ದರೂ, ಇಷ್ಟವಿಲ್ಲದಿದ್ದರೂ, ಪಾಲಿಸಲೇಬೇಕು ಎನ್ನುವುದು ಹೇರಿಕೆಯಾದಾಗ ಸಂಪ್ರದಾಯಗಳು ಸಂಕೋಲೆಗಳಾಗಿ ಹಿಂಸಿಸತೊಡಗುತ್ತದೆ. ಈ ಹೇರಿಕೆ ಕೇವಲ ಸಮಾಜದ್ದಲ್ಲ ನಮ್ಮೊಳಗಿನದೂ ಸಹ! ‘ಸಂಪ್ರದಾಯವನ್ನು ಬಿಟ್ಟು ನಡೆದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಗತಿ ಏನು ಮುಂದೆ?!’ ಎನ್ನುವ ನಮ್ಮೊಳಗಿನ ಭೀತಿಯೇ ಅರ್ಧ ಮನುಷ್ಯರನ್ನು, ‘ಬಿಟ್ಟರೂ ಬಿಡಲಾರದೀ ಮಾಯೆ’ ಎಂದು ತ್ರಿಶಂಕು ಸ್ಥಿತಿಯಲ್ಲಿ ನೇತಾಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅಕ್ಷರ, ಹಣ, ಸಾರಿಗೆ ಮತ್ತು ಮಾಧ್ಯಮ ಇತ್ಯಾದಿ ಅನುಕೂಲತೆ ಎಲ್ಲರಿಗೂ ಎಟುಕತೊಡಗಿದಂತೆ, ಅಷ್ಟಿಷ್ಟು ಮೌಢ್ಯಗಳು, ಸಂಪ್ರದಾಯದ ಸಂಕೋಲೆಗಳು ಸಡಿಲಗೊಂಡರೂ, ತ್ರಿಶಂಕು ಸ್ಥಿತಿಯಿಂದ ಅಷ್ಟು ಸುಲಭದಲ್ಲಿ ಬಿಡುಗಡೆ ಸಿಗುವುದಿಲ್ಲ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ
ಈ ಬದುಕಿನ ಪ್ರೀತಿ ಪ್ರೇಮ ಪ್ರಣಯ…: ಸುಕನ್ಯಾ ಕನಾರಳ್ಳಿ ಅಂಕಣ
ಮದುವೆಯಾಗಲು ಕಾಯುತ್ತಿದ್ದ ದಿನಗಳಲ್ಲಿ ಭ್ರಮೆ ನಿಧಾನವಾಗಿ ಕರಗುತ್ತಿತ್ತು. ಈ ನನ್ನ ಮಗ ಮತ್ತು ನನ್ನ ನಡುವೆ ಇರುವ ಸಮಾನ ಆಸಕ್ತಿಗಳಾದರೂ ಏನು ಎಂದು ಉತ್ತರವೇ ಇಲ್ಲದ ಪ್ರಶ್ನೆಗಳಲ್ಲಿ ದಿನ ಕಳೆಯುತ್ತಿತ್ತು. ಹತ್ತಿರ ಬಂದರೂ ದೇಹ ಸ್ಪಂದಿಸದಿರುವಾಗ ಬದುಕೆಲ್ಲ ಸಿಕ್ಕಿ ಬಿದ್ದು ಏನು ಗತಿ ಎಂದು ಕಳವಳಿಸಲು ಪ್ರಾರಂಭಿಸಿದ್ದೆ. ಒಮ್ಮೆ ಸುಷ್ಮಾ ಸ್ವರಾಜಳ ಅವಳಿಯಂತೆ ಕಾಣಿಸುವ ಅವನ ಅಮ್ಮನನ್ನು ಭೇಟಿಯಾದೆ. ಡಿ ಎಚ್ ಲಾರೆನ್ಸನ ಸನ್ಸ್ ಅಂಡ್ ಲವರ್ಸ್ ಕಾದಂಬರಿ ನೆನಪಿಗೆ ಬಂತು. ಈಕೆ ಉಡದ ಹಿಡಿತದವಳು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ನಾಲ್ಕನೆಯ ಬರಹ
ಮನೆಮನೆ ಕೈತೋಟದಲ್ಲಿದೆ ಸಮುದಾಯ ಸೌಖ್ಯ: ಡಾ. ವಿನತೆ ಶರ್ಮ ಅಂಕಣ
ಅಂದಿನ ಸಾಮಾನ್ಯಜನರ ಸಾವಯವ ಜೀವನ ಈಗ ಒಂದು ಸಮುದಾಯ ಸಮಷ್ಠಿಪ್ರಜ್ಞೆಯಾಗಿ ಮೂಡಿದೆ. ಮಾದರಿಯಾಗಿ ಮೂಡುತ್ತಿದೆ. ನಮ್ಮದೇ ಸ್ವಾಯತ್ತತೆಯಿಂದ ಮನೆಮಟ್ಟಿಗೆ ನಾವು ಆಹಾರವನ್ನು ಬೆಳೆಸುವ ನಿರ್ಧಾರದಿಂದ ಹಿಡಿದು ನಮ್ಮ ನೆಲದ, ನಾಡಿನ, ಮೂಲಜರ ಆಹಾರವೇನಾಗಿತ್ತು, ಅದರ ಬಗ್ಗೆ ನಮಗೆಷ್ಟು ತಿಳಿದಿದೆ, ಆ ಆಹಾರ ಬೆಳೆಗಳ ವಿಧಗಳನ್ನು ಪುನರುಜ್ಜೀವಿಸಬಹುದೆ ಎನ್ನುವ ಮಾತುಕತೆಗಳು ಸಮುದಾಯ ಅಭಿವೃದ್ಧಿಯ ಸಂಕೇತ. ಇಂತಹ ಮಾತುಕತೆಗಳಿಂದ ನಮ್ಮ ನಂಬಿಕೆಗಳು, ಮನೋಭಾವ, ಚರ್ಯೆಗಳಲ್ಲಿ ಬದಲಾವಣೆ ಬರುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ









