Advertisement

ಎಚ್. ಗೋಪಾಲಕೃಷ್ಣ

ಬಾಡಿ ಶೇಮಿಂಗ್ ಎಂಬ ಪೀಡೆ!: ಸುಕನ್ಯಾ ಕನಾರಳ್ಳಿ ಅಂಕಣ

ಹೆಣ್ಣಾದವಳು ತೆಳ್ಳಗೆ ಬೆಳ್ಳಗೆ ಬಳುಕಬೇಕು ಎನ್ನುವುದು ಯಾರ ಕಣ್ಣಿನ ಹಿತಕ್ಕೋಸ್ಕರ? ಚರ್ಮದ ಬಣ್ಣದ ನೆಲೆಯಲ್ಲಿ ಅಂತೂ ಅದು ಇನ್ನಷ್ಟು ಘೋರ. ಕಪ್ಪು ಬಣ್ಣದವರಿಗೆ ಇನ್ನಿಲ್ಲದಂತ ಕೀಳರಿಮೆಯನ್ನು ಹುಟ್ಟಿಸಿದ್ದರ ಫಲವಾಗಿ ಫೇರ್ ಅಂಡ್ ಲವ್ಲಿ ಎಂಬ ಕಂಪೆನಿ ಜಗತ್ತಿನ ಅತ್ಯಂತ ಶ್ರೀಮಂತ ವ್ಯಾಪಾರಗಳಲ್ಲಿ ಒಂದಾಗಿ ಹೋಗಿದ್ದು ನಮ್ಮೆದುರಿನ ವಾಸ್ತವ. ಒಮ್ಮೆ ನನ್ನ ಸಹೋದ್ಯೋಗಿ ತಮ್ಮ ಮಗನಿಗೆ ಸಿಕ್ಕ ಹೆಣ್ಣಿನ ಬಗ್ಗೆ ಹೇಳುತ್ತಾ, ‘ಸ್ವಲ್ಪ ಕಪ್ಪಿದಾಳೆ, ಆದರೂ ಪರವಾಗಿಲ್ಲ, ಲಕ್ಷಣವಿದೆ,’ ಎಂದಾಗ ವಿದ್ಯಾವಂತ, ಪ್ರಜ್ಞಾವಂತ ಹೆಣ್ಮಕ್ಕಳೂ ಸಹ ಅದೇ ಹಳಸಲು ಮಂತ್ರವನ್ನ ಪಠಿಸುತ್ತಾರಲ್ಲ ಅಂತ ಆಶ್ಚರ್ಯವಾಗಿತ್ತು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಶರೀಫ-ಬಿಶಪ್ಪ ಮತ್ತು ರಾಬಿನ್ ಹುಡ್: ಸುಕನ್ಯಾ ಕನಾರಳ್ಳಿ ಅಂಕಣ

ಬೆಳಕು ತೋರಿಸಿ, ಜ್ಞಾನವನ್ನು ಹೊಳೆಸಬೇಕಾದ ಆಧ್ಯಾತ್ಮ ಕೇಂದ್ರಗಳು ಶರೀಫನ ಜೊತೆ ಸೇರಿಕೊಂಡು ಸಮೂಹಸನ್ನಿ ಹಿಡಿಸುವಲ್ಲಿ ಯಶಸ್ವಿಯಾಗುತ್ತವೆ! ನಾನು ಹೈಸ್ಕೂಲ್ ಓದಿದ ಪಟ್ಟಣಕ್ಕೆ ಅಂದು ಇಂದಿರಾಗಾಂಧಿ ಬಂದಿದ್ದರು. ಭಾಷಣ ಕೇಳಲು ಉಸಿರು ಬಿಗಿ ಹಿಡಿದು ಓಡಿದ್ದೇ ಓಡಿದ್ದು. ಅಲ್ಲಿ ತಲುಪುವ ಹೊತ್ತಿಗೆ ಭಾಷಣ ಮುಗಿದು ಹೊಸದಾಗಿ ನಿರ್ಮಿತವಾಗಿದ್ದ ಹೆಲಿಪ್ಯಾಡಿನತ್ತ ಹೋದರು ಎಂದು ತಿಳಿದು ಹೊ ಎಂದು ಅತ್ತ ಕಡೆ ದೌಡಾಯಿಸಿದ್ದೆವು. ಇನ್ನೂ ಅರಿವು ಮೂಡಿರದ ವಯಸ್ಸು. ದಿನದ ಕೊನೆಯಲ್ಲಿ ಇದೆಂತಾ ಹುಚ್ಚಾಟ ಅಂತ ಅನ್ನಿಸಿದ್ದು ಮಾತ್ರ ನಿಜ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೈದನೆಯ ಬರಹ

Read More

ಎರಡನೆಯದಕ್ಕೆ ನೆನಪು ನೂರೆಂಟು!: ಸುಕನ್ಯಾ ಕನಾರಳ್ಳಿ ಅಂಕಣ

ಮೊದಲನೆಯದಕ್ಕೆ ಬಾಯಿರುಚಿ ಅಂತೇನೂ ಇರಲಿಲ್ಲ. ಎರಡನೆದು ಮಹಾ ದೋಸೆಪ್ರಿಯೆ. ಮನೆಪಾಠದ ಮೇಷ್ಟ್ರು ಅಟ್ಟದ ಮೇಲೆ ದೊಡ್ಡ ಕುಟುಂಬದ ಅಷ್ಟೂ ಮಕ್ಕಳಿಗೆ ಪಾಠ ಹೇಳುತ್ತಿದ್ದರೆ, ಎರಡನೆದು ಕೆಳಗಿನ ಅಡಿಗೆ ಮನೆಯಿಂದ ಚೋಂಯ್ ಶಬ್ದ ಕೇಳಿಸಿದ್ದೇ ಎಷ್ಟು ದೋಸೆಗಳು ಕಾವಲಿ ಮೇಲೆ ಬಿದ್ದವು ಅಂತ ಮನಸ್ಸಿನಲ್ಲೇ ಎಣಿಸಿಕೊಂಡಿತ್ತು. ಪಾಠವೆಲ್ಲ ಮುಗಿದು ಮೇಷ್ಟ್ರು ಹೋದ ಮೇಲೆ ಎರಡನೆದು ದಡಬಡ ಅಟ್ಟದ ಮೆಟ್ಟಿಲು ಇಳಿದು ಹೋದರೆ ಅಡಿಗೆಮನೆಯಲ್ಲಿ ದೋಸೆ ಕಾವಲಿ ಎಲ್ಲೋ ಮಿಣ್ಣಗೆ ಕೂತಿದ್ದು ಕಂಡು ಹೊ ಎಂದು ಅಳಹತ್ತಿತಲ್ಲ!
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಪವಾಡದ ಮಲ್ಲಮ್ಮರು!: ಸುಕನ್ಯಾ ಕನಾರಳ್ಳಿ ಅಂಕಣ

ಸಾಮಾಜಿಕ ಶಕ್ತಿಗಳು, ಅದರಲ್ಲೂ ವಿಶೇಷವಾಗಿ ಧರ್ಮಗಳು, ಸ್ತ್ರೀಶೋಷಣೆ ಸಂಪ್ರದಾಯದಲ್ಲೇನೂ ಇರಲಿಲ್ಲ, ಅಂದೂ ಸಹ ಸ್ತ್ರೀಸ್ವಾತಂತ್ರ್ಯವಿತ್ತು, ನಮ್ಮ ಗಾರ್ಗಿ ಮೈತ್ರೇಯಿಯರ ಉದಾಹರಣೆಯನ್ನು ನೋಡಿದರೆ ಸಾಕಲ್ಲ ಎನ್ನುತ್ತಾ ‘ಸುವರ್ಣ ಯುಗ’ವೊಂದನ್ನು ಕಟ್ಟಿ ಹಾದಿ ತಪ್ಪಿಸಲು ಪ್ರಯತ್ನಿಸುತ್ತವೆ. ಹಾಗಿದ್ದರಿಂದಲೇ ಸಂಪ್ರದಾಯವೆನ್ನುವುದು ಆಧುನಿಕದ ಜೊತೆಗೆ ಸುಲಲಿತವಾಗಿ ಬೆರೆತು ಹರಿಯಿತು ಎಂದು ಸಂಪ್ರದಾಯದ ಗೋಡೆಯಲ್ಲಿ ಇರುವ ಘೋರ ಅರೆಕೊರೆಗಳನ್ನು ಮುಚ್ಚಿ ಸುಣ್ಣ ಬಳಿಯುವ ಪ್ರಯತ್ನ ಅದು. ಒಂದಾನೊಂದು ಕಾಲದಲ್ಲಿ ಸಹ ಎಲ್ಲವೂ ಚೆನ್ನಿತ್ತು, ಆ ಚೆನ್ನ ಚೆಲುವು ಇಂದು ಆಧುನಿಕದಲ್ಲಿ ಇನ್ನೊಂದು ರೂಪವನ್ನು ತಳೆದು ನಿಂತಿದೆ ಎಂದು ತಲೆ ಸವರುವ ಹುನ್ನಾರವೇ ಅದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ಮೂರನೆಯ ಬರಹ

Read More

ಗರತಿಗಂಗಮ್ಮ ಮತ್ತು ಡಿಸ್ಕೋ ಲೈಟು!: ಸುಕನ್ಯಾ ಕನಾರಳ್ಳಿ ಅಂಕಣ

ಸಮಂಜಸತೆ ಮತ್ತು ಸಾವಯವತೆ ದೃಶ್ಯಸಂಸ್ಕೃತಿಯ ಅನಿವಾರ್ಯ ಭಾಗ ಎನ್ನುವುದನ್ನು ನಾವು ಸಾರಾಸಗಟಾಗಿ ಮರೆತಿದ್ದೇವೆ ಅಂತನ್ನಿಸುತ್ತದೆ. ಸನ್ಯಾಸಿಯೊಬ್ಬರು ಧೀಮಂತ ಭಂಗಿಯಲ್ಲಿ ನಿಂತಿರುವ ರಸ್ತೆಯುದ್ದಕ್ಕೂ ಲಲನೆಯರು ಚಿನ್ನ ವಜ್ರಗಳನ್ನು ಹೊತ್ತು ನಿಂತ ಬ್ಯಾನರುಗಳು ಕಣ್ಣಿಗೆ ಹೊಡೆಯುತ್ತವೆ. ಕಳೆದವಾರ ಶ್ರೀರಾಮಕೃಷ್ಣರ ವೃತ್ತವನ್ನೂ ಕಚ್ಚಿಕೊಂಡಂತೆ ಸುತ್ತ ಮುತ್ತಲೆಲ್ಲ ಯಾವುದೋ ಕಾರ್ಪೊರೇಟರನ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಫ್ಲೆಕ್ಸ್ ಬ್ಯಾನರುಗಳು ಹಲ್ಲು ಕಿರಿದಿದ್ದೇ ಕಿರಿದಿದ್ದು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೆರಡನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ