Advertisement

ಎಸ್. ಗಂಗಾಧರಯ್ಯ

ತೇಜಸ್ವಿ ನಮ್ಮನ್ನಗಲಿದ ತಿಂಗಳಲ್ಲಿ, ಅವರಿದ್ದ ಊರಿನಲ್ಲಿ…: ಸುಕನ್ಯಾ ಕನಾರಳ್ಳಿ ಅಂಕಣ

ಭಾಷೆ ಅರ್ಥ ಮಾಡಿಸುವುದಕ್ಕಿಂತ ಅಪಾರ್ಥಕ್ಕೆ ಹಾದಿಯನ್ನು ಬಿಚ್ಚುತ್ತದೆ ಎನ್ನುವುದು ನನಗೆ ಗೊತ್ತು. ಕಲೆಯ ಸೃಷ್ಟಿಗೆ ಗ್ರಾಮೀಣ ಮತ್ತು ಪ್ರಕೃತಿ ತೆರೆದುಕೊಂಡಷ್ಟು ನಗರ ಮತ್ತು ಆಧುನಿಕ ತೆರೆದುಕೊಳ್ಳುವುದಿಲ್ಲವೊ ಏನೊ ಅಂತಷ್ಟೇ ಹೇಳಬೇಕಿತ್ತು. ಯಾಕೆಂದರೆ ಗ್ರಾಮೀಣ ಮತ್ತು ಪ್ರಕೃತಿಗಳಲ್ಲಿ ಸೌಂದರ್ಯ ಇರುತ್ತದೆ. ನಾವು ಕ್ಲಿಕ್ಕಿಸಲು ಮಾಲ್‌ಗೆ ಹೇಗೆ ಹೋಗುವುದಿಲ್ಲವೋ ಹಾಗೆಯೇ ಸ್ಲಮ್ಮಿಗೂ ಹೋಗುವುದಿಲ್ಲ. ಅದು ಫೋಟೋಗ್ರಾಫಿಕ್ ಸೌಂದರ್ಯವನ್ನು ಶುದ್ಧನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಪರಿಣಿತರಿಗೆ ಮಾತ್ರ ಸಾಧ್ಯವೋ ಏನೋ. ಯಾಕೆಂದರೆ ಫೋಟೋಗ್ರಫಿ ಕೇವಲ ಹವ್ಯಾಸವಾದಾಗ ಕಣ್ಣಿಗೆ ಹಿತವಾದದ್ದನ್ನು ಮಾತ್ರ ಆರಿಸಿಕೊಳ್ಳುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಅಪ್ಪಂತನದ ವ್ಯವಸ್ಥೆಗೆ ಬೆತ್ತಲೆಯ ಗೀಳು!: ಸುಕನ್ಯಾ ಕನಾರಳ್ಳಿ ಅಂಕಣ

ನಮ್ಮ ಮಟ್ಟಿಗೆ ಹೇಳುವುದಾದರೆ ಇಂದೊಂದು ತೀರಾ ಅಸಂಭಾವ್ಯವೂ, ಅಸಂಬದ್ಧವೂ ಆದ ಕಲ್ಪನೆಯಾಗಿದೆ. ಹನ್ನೆರಡನೆಯ ಶತಮಾನದಷ್ಟು ಹಿಂದಿನ ಆ ಪರಿಸರದಲ್ಲಿ ಹೆಣ್ಣೊಬ್ಬಳು ಅವಳೆಂಥ ಅನುಭಾವಿಯಾಗಿದ್ದರೂ, ಬೆತ್ತಲೆಯಾಗಿ, ಕೂದಲನ್ನು ಮರೆಮಾಡಿಕೊಂಡು ಸಂಚರಿಸಿದಳೆಂಬುದು ಅತ್ಯಂತ ಅಸಂಗತವೂ, ಅನುಚಿತವೂ ಆದ ಭ್ರಮಾಕಲ್ಪನೆಯಾಗಿ ಮಾತ್ರ ತೋರುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೆರಡನೆಯ ಬರಹ

Read More

ಕನ್ನಡ ಸಿನಿಮಾದ ನಿಜವಾದ ‘ಹೊಸ ಹೆಣ್ಣು’ ಹುಟ್ಟಿದ್ದು ತ್ರಿವೇಣಿಯ ‘ಬೆಳ್ಳಿಮೋಡ’ದಲ್ಲಿ: ಸುಕನ್ಯಾ ಕನಾರಳ್ಳಿ ಅಂಕಣ

ಲೀಲಾಳ ಅಣ್ಣ ಈಗ ಮಧ್ಯ ಪ್ರವೇಶಿಸಿ ಕುಟುಂಬವೆಂಬ ಸಂಸ್ಥೆಯ ‘ಸಹಜತೆ’ಯನ್ನು ಮರಳಿಸುವ ಪ್ರಯತ್ನ ಮಾಡುತ್ತಾನೆ. ಎಲ್ಲದಕ್ಕೂ ತನ್ನ ಅಪ್ಪನೇ ಕಾರಣ ಎಂದು ದೂರುತ್ತಾನೆ. ಸಾಯುವ ಮುನ್ನ ಲೀಲಾ ತನ್ನ ತಾಯಿಯನ್ನು ಕಾಣುವ ಹಂಬಲದಲ್ಲಿ ಕೊರಗುತ್ತಾಳೆ. ಅಪ್ಪ ತಾನು ಮಾಡಿದ ತಪ್ಪಿನ ಅರಿವಾಗಿ ಹುಚ್ಚು ಹಿಡಿದು ಬೀದಿ ಬೀದಿ ಅಲೆಯುತ್ತಾ ಕೊನೆಯ ಉಸಿರೆಳೆಯುತ್ತಾನೆ. ಲೀಲಾಳ ಅಣ್ಣ ಅತ್ತಿಗೆ ಮಕ್ಕಳೆಲ್ಲರೂ ‘ಒಳ್ಳೆಯ’ ಕುಟುಂಬದಲ್ಲಿ ಬದುಕಬೇಕು ಎಂದು ನೀತಿಪಾಠ ಹೇಳುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂದನೆ ಬರಹ

Read More

ಒಳಗೆ-ಹೊರಗೆ: ಸುಕನ್ಯಾ ಕನಾರಳ್ಳಿ ಅಂಕಣ

ಮೇಲೆ ಹತ್ತುವ ಪ್ರಯತ್ನದಲ್ಲಿಯೇ ಅದೇನನ್ನು ಹತ್ತಿ ಮೀರಿದರೋ, ಅಂತೂ ಎಲ್ಲ ಕೈದಿಗಳೂ ಕೆಳಗಿಳಿದು ಬಂದರು! ಕೆಳಗಿದ್ದ ಪೊಲೀಸರು ಅಷ್ಟೊತ್ತಿಗೆ ಕಾಫಿ, ನೀರು, ಜ್ಯೂಸ್, ಸಿಗರೇಟು ಇತ್ಯಾದಿಗಳಿಗೆ ಅಲ್ಲಿಲ್ಲಿ ಚೆದುರಿದ್ದರು. ಕೊನೆಗೆ ಕೈದಿಗಳೇ ಹೋಗಿ ಅಲ್ಲಿಲ್ಲಿ ಹುಡುಕಿ ಎಲ್ಲ ಪೊಲೀಸರನ್ನೂ ಕರೆದುತಂದರಂತೆ! ತಪ್ಪಿಸಿಕೊಳ್ಳುವುದಲ್ಲ, ನಮಗೆ ಬಿಡುಗಡೆ ಆದೇಶ ಬಂದಿದ್ದರೂ ಬೇಸರವಾಗುತ್ತಿತ್ತು. ಇನ್ನೆರಡು ದಿನದಲ್ಲಿ ನಮ್ಮ ನಾಟಕದ ಪ್ರದರ್ಶನವಿತ್ತು, ಎಂದು ಆ ಕೈದಿ ಕಥೆಯನ್ನು ಮುಗಿಸಿದರು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತನೆ ಬರಹ

Read More

ಬಿಡುಗಣ್ಣಿನ ಎರಡು ಬಿಡಿನೋಟಗಳು: ಸುಕನ್ಯಾ ಕನಾರಳ್ಳಿ ಅಂಕಣ

ಉತ್ಪಾದನೆ ಯಾರು ಮಾಡ್ತಾರೋ ಅವರಿಗೆ ಅದರ ಮೇಲೆ ಅಧಿಕಾರ ಇರಬೇಕು ಅಂತ ಒಪ್ಪಿಕೊಂಡಿರೋ ವ್ಯವಸ್ಥೆ ಒಳಗೇ ಇದ್ದುಕೊಂಡು ತಾನು ಹೊತ್ತು, ಹೆತ್ತು, ಬೆಳೆಸಿದ ಮಕ್ಕಳ ಅಧಿಕಾರವನ್ನ ವ್ಯವಸ್ಥೆಗೆ ಬಿಟ್ಟುಕೊಡಬೇಕಾದ ಅಸಹಾಯಕತೆಯಲ್ಲಿಯೂ ಸಹ ಹೆಣ್ಣು ಬದುಕಿ ಉಳಿತಾಳೆ. ವ್ಯವಸ್ಥೆ ತಮ್ಮ ತಮ್ಮ ಹುಚ್ಚಾಟಗಳಿಗೆ ಆ ಮಕ್ಕಳನ್ನ ಯುದ್ಧಕ್ಕೆ ಕಳುಹಿಸಿ ಅವಳ ಕಣ್ಣೆದುರೇ ಅವು ಹೊಸಕಿ ಹೋದರೂ ಸಹ ಮತ್ತೆ ಮತ್ತೆ ಯಾವುದೋ ನಂಬಿಕೆಯಲ್ಲಿ ಮಕ್ಕಳನ್ನ ಹುಟ್ಟಿಸಿ ಬೆಳೆಸುತ್ತಲೇ ಹೋಗುತ್ತಾಳಲ್ಲ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ