ಚೊಟ್ಟೆ ರಮ್ಮು ಮತ್ತು ದೇವಿ ಪಾತ್ರಧಾರಿ: ಎಸ್. ಗಂಗಾಧರಯ್ಯ ಅನುಭವ ಕಥನ
ತಿರುಗಿ ಮೇಳದ ಜಾಗಕ್ಕೆ ಬರುವ ಹೊತ್ತಿಗೆ ದೇವಿಗೂ ರಕ್ತ ಬೀಜಾಸುರನಿಗೂ ಯುದ್ಧ ಶುರುವಾಗಿತ್ತು. ದೇವಿ ಕೈಯ್ಯಲ್ಲಿರುವ ಕತ್ತಿಗಳನ್ನು ಜಳಪಿಸುತ್ತಾ ಹಲ್ಲು ಕಡಿಯುತ್ತಾ ನೆಗೆನೆಗೆದು ಕುಣಿಯುತ್ತಿದ್ದಾಳೆ. ರಕ್ತಬಿಜಾಸುರನೂ ಅಷ್ಟೇ ಗತ್ತಿನಲ್ಲಿ ಹೆಗಲ ಮೇಲಿದ್ದ ದಪ್ಪನೆಯ ಗದೆಯನ್ನು ಆಗಾಗ ಮೇಲೆತ್ತಿ ತಿರುವುತ್ತಾ ಲಯ ಬದ್ಧವಾಗಿ ಹೆಜ್ಜೆಗಳನ್ನು ಹಾಕುತ್ತಾ ದೇವಿಯನ್ನು ಯುದ್ಧಕ್ಕೆ ಆಹ್ವಾನಿಸುತ್ತಿದ್ದಾನೆ. ಸ್ಟೇಜಿನಿಂದ ದೂರದಲ್ಲಿ ಯಾರೋ ಹಾಸಿದ್ದ ಚಾಪೆಯಲ್ಲಿ ಕೂರುವ ಹೊತ್ತಿಗೆ ಹೊಟ್ಟೆಯ ಜೊತೆಗೆ ತಲೆಯೂ ಸುತ್ತಿ ಬಂದಂತೆ ಆಗ ತೊಡಗಿತು. ದೇವಿ ರಕ್ತಬೀಜಾಸುರರ ಅಬ್ಬರದ ದನಿ ಕೇಳಿದಂತೆಲ್ಲಾ ತಲೆ ಸುತ್ತು ಜಾಸ್ತಿಯಾಗಿತ್ತು.
ಎಸ್. ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನಾಲ್ಕನೆಯ ಕಂತು


