Advertisement

ನಾಟಕ ರೂಪದ ವರದಿ ವಾಚನದ ಮಜಾ… ಬಸವನಗೌಡ ಹೆಬ್ಬಳಗೆರೆ ಸರಣಿ

ತಮಾಷೆಯ ಸಂಗತಿ ಅಂದರೆ ಇನ್ಸಲ್ಟ್ ಆಗಿದ್ದ ದಯಾನಿಗೆ ಹೊರಗೆ ಹೋದ ಕೂಡಲೇ ಅವನು ಮದುವೆಯಾಗಬೇಕೆಂದುಕೊಂಡಿದ್ದ ಅವನ ಮನದರಸಿ ಕರೆ ಮಾಡಿದ್ದಾಳೆ. ಅವಳ ಕರೆಯಲ್ಲಿ ಅವನು ತಲ್ಲೀನನಾಗಿಬಿಟ್ಟಿದ್ದಾನೆ. ನಾಟಕವನ್ನು‌ ಮರೆತುಬಿಟ್ಟಿದ್ದಾನೆ ಅನಿಸುತ್ತೆ. ತಕ್ಷಣ ನಾನೇ ಹೊರ ಹೋಗಿ ಅವನನ್ನು ಒಪ್ಪಿಸಿ ವಾಪಸ್ಸು ಕರೆ ತಂದಿದ್ದಾಯ್ತು, ನಂತರ ಕಾಳಿದಾಸ ಫಿಲಂ ನಲ್ಲಿನ ‘ಕಮಲೇ ಕಮಲೋತ್ಪತ್ತಿಃ’ ಪದದ ಬದಲು ಪ್ರೇರಣಾ ತರಬೇತಿಯಾದ್ದರಿಂದ ‘ಪ್ರೇರಣೇ ಪ್ರೇರಣೋತ್ಪತ್ತಿಃ’ ಎಂದು ಹೇಳುತ್ತಾ ಬಂದು ಪ್ರಶ್ನೆ ಕೇಳಿಸಿ ನಮ್ಮ ವರದಿ ವಾಚನದ ನಾಟಕವು ಮೂಡಿಬಂತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ

Loading

ಅಂಕಣ

Latest

ಆ ರಿಮೋಟು ನಮ್ಮ ಕೈಯಲ್ಲೇ ಇದೆ…: ವಿನಾಯಕ ಅರಳಸುರಳಿ ಅಂಕಣ

ಅದೇನೋ ಅಸಹನೆ... ಈ ಸಮಾಜದ ಮೇಲೆ. ಜನರ ಮೇಲೆ. ಸುತ್ತಲಿನವರ ಮೇಲೆ. ಕೊನೆಗೆ ನನ್ನ ಮೇಲೆಯೂ. ಇವೆಲ್ಲದರ ಮೂಲ ಎಲ್ಲೆಂದು ನೋಡುತ್ತ ಹೋದಂತೆ ಬಂದು ತಲುಪಿದ್ದು ದಿನದ ಕೆಲವೇ ಕೆಲವು ಕ್ಷಣಗಳ ಬಿಡುವಿನಲ್ಲಿ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿರುವ ಸೋಶಿಯಲ್ ಮೀಡಿಯಾದ ಎದುರು. ನೋಡುವ ಎಂದು ಅದರಲ್ಲಿನ ಜಾಳನ್ನೆಲ್ಲ 'ನಾಟ್ ಇಂಟರೆಸ್ಟೆಡ್' ಎಂದು ಬದಿಗೆ ಸರಿಸುತ್ತ ಬಂದೆ.‌ ಕಮೆಂಟು ಸೆಕ್ಷನ್‌ನ‌ ಬಾಗಿಲಿನ ಹಿಡಿಕೆಗೆ ಕೈ ತಗುಲಿಸಲೇ ಇಲ್ಲ. ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”

ಸಾಹಿತ್ಯ

ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ ‘ಪಾಂಚಜನ್ಯ’: “ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ‘ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ‘ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು. “ಹಳೆಯ ಪುಟಗಳಿಂದ" ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಸರಣಿ

ಓಹೋ ಗ್ರಾಮವಂತೆ, ಆಹಾ ಸಮುದಾಯವಂತೆ: ಕೆ. ಸತ್ಯನಾರಾಯಣ ಕಥಾ ಸರಣಿ

ನಿಮ್ಮ ಸೋದರತ್ತೆ ಒಬ್ಬಳು ಕ್ಷಯದಿಂದ ಬೇಗ ತೀರಿ ಹೋದಳು. ಅವಳಿಗೆ ಮುಂಚೆ ಅವಳ ಗಂಡ ಕೂಡ ಕ್ಷಯದಿಂದಲೇ ತೀರಿ ಹೋಗಿದ್ದ. ಸೋದರತ್ತೆ ಮಗನಿಗೆ ಸರಿಯಾಗಿ ವಿದ್ಯೆ ಹತ್ತಲಿಲ್ಲ. ಅವನಿಗೊಂದು ಮನೆ ಕಟ್ಟಬೇಕು ಅಂತ ನಿಮ್ಮಜ್ಜಿ ಹೊರಟಾಗ, ನೆರವಾಗ್ತೀನಿ ಅಂತ ಮೊದಲು ಗೋಪಿನಾಥರಾಯ, ನಂತರ ಅಚ್ಯುತರಾಯ, ಆಮೇಲೆ ರಂಗಶೆಟ್ಟಿ ಎಲ್ಲರೂ ಮುಂದೆ ಬಂದರು. ಅವನು ಕಳ್ಳ ಅಂತ ಇವನು, ಇವನು ಕಳ್ಳ ಅಂತ ಅವನು. ಒಬ್ಬರ ಮೇಲೆ ಒಬ್ಬರು ಚಾಡಿ ಹೇಳಿ, ಒಟ್ಟಾರೆ ನಿಮ್ಮಜ್ಜಿಗೆ ಟೋಪಿ ಹಾಕುತ್ತಿದ್ದರು. ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ "ರೂಪಕಗಳಿಗೆ ಕೊರತೆಯಿಲ್ಲ"

ಪ್ರವಾಸ

ನೇತ್ರಾಣಿಯ ನೆತ್ತಿಯಿಂದ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಟ್ಟಿಗನ ದೇವಾಲಯದ ದಾರಿ ಸುಸೂತ್ರವಾಗೇನೂ ಇರಲಿಲ್ಲ. ದೊಡ್ಡ ಬೃಹತ್ ಬಂಡೆಯ ಚಡಿಗಳಲ್ಲಿ ನುಸುಳಿ ದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ಪಾತಳಕ್ಕೆ ಇಲ್ಲ ಸಮುದ್ರ ಪಾಲು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂಡೆಗಳ ದಾಟಿದರೆ ಸಿಗುವ ಏರುದಾರಿಯಲ್ಲಿ ಸಾಗಬೇಕು. ಅಲ್ಲಲ್ಲಿ ದಾರಿ ತಪ್ಪಿಸುವ ಹೊರಳು ದಾರಿಗಳು ಹಲವು. ಹಚ್ಚ ಹಸಿರೊಳಗೆ ದಾರಿ ತಪ್ಪದಂತೆ ನಿಧಾನಕ್ಕೆ ಒಬ್ಬರ ಹಿಂದೊಬ್ಬರು ನಡೆದೆವು. ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ನೇತ್ರಾಣಿ ಪ್ರವಾಸದ ಕುರಿತ ಬರಹ ಇಲ್ಲಿದೆ

ವ್ಯಕ್ತಿ ವಿಶೇಷ

ಅಮೃತಾ ಪ್ರೀತಮ್; ಕೇವಲ ಲೇಖಕಿಯಲ್ಲ, ಒಂದು ಕ್ರಾಂತಿ: ರೇಣುಕಾ ನಿಡಗುಂದಿ ಬರಹ

ಮಕ್ಕಳನ್ನು, ಅಮೃತಾರನ್ನು ಸ್ಕೂಟರಿನಲ್ಲಿ ಕೂರಿಸಿ ಓಡಿಸಿದ್ದಕ್ಕೆ ಚಲಾನ್ ಆಗಿ ಅನೇಕ ಬಾರಿ ದಂಡ ತೆತ್ತುಬರುತ್ತಿದ್ದರು ಇಮರೋಜ್. ಅದಕ್ಕೆ ಯೋಚಿಸಿ ಇಬ್ಬರೂ ಹಣ ಕೂಡಿಸಿ ಅಮೃತಾ ಐದು ಸಾವಿರ, ಇಮರೋಜ್ ಐದು ಸಾವಿರ ಸೇರಿಸಿ ಅರವತ್ತರ ದಶಕದಲ್ಲಿ ಫಿಯೆಟ್ ಕಾರು ಕೊಂಡರಂತೆ. ಹೀಗೆ ಬದುಕಿನುದ್ದಕ್ಕೂ ಇಬ್ಬರೂ ಪ್ರತಿಯೊಂದನ್ನೂ ಸಮಭಾವದಿಂದ ಹಂಚಿಕೊಂಡು ಬಾಳಿದ್ದಕ್ಕೆ ನಾಲ್ಕು ದಶಕಗಳು ನಾಲ್ಕು ದಿನಗಳಂತೆ ಕಳೆದುಹೋದವು – ಎನ್ನುತ್ತಾರೆ ಇಮರೋಜ್. ಪಂಜಾಬಿನ ಖ್ಯಾತ ಕವಯತಿ ಅಮೃತಾ ಪ್ರೀತಂ ಹುಟ್ಟುಹಬ್ಬ ಇಂದು. ಅವರ ಸಂಗಾತಿ ಇಮ್ರೋಜ್‌ರ ಕಣ್ಣುಗಳಲ್ಲಿ ಅಮೃತಾರ ಬದುಕು ಹೇಗಿತ್ತು ಎಂಬುದರ ಕುರಿತು ರೇಣುಕಾ ನಿಡಗುಂದಿ ಬರಹ ನಿಮ್ಮ ಓದಿಗೆ

ಸಂಪಿಗೆ ಸ್ಪೆಷಲ್

ಕೇಂದ್ರತ್ಯಾಗಿ ಬಲ ಮತ್ತು ಕರ್ಣನ ಉದಾತ್ತತೆ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಕೃಷ್ಣನ ಸೂಚನೆಯಂತೆ ಕರ್ಣನ ಭೇಟಿಗೆ ಬಂದ ಕುಂತಿ ಮಮತೆಯ ಭಾವದಿಂದಲೇ ಮಾತನಾಡುತ್ತಾ, ತನ್ನ ಮಕ್ಕಳ ಜೊತೆ ಸೇರಿ ಧರಣಿಯನ್ನು ಆಳಬಹುದೆಂಬ ಆಮಿಷವನ್ನು ಒಡ್ಡುತ್ತಾಳೆ. ಆದರೆ ಅನ್ನದ ಋಣಕ್ಕೆ ತಪ್ಪಿ ನಡೆದು ಪ್ರಾಣವನ್ನು ಉಳಿಸಿಕೊಳ್ಳಲಾರೆನೆಂಬ ಆದರ್ಶ ಕರ್ಣನದ್ದಾಗಿರುತ್ತದೆ. ದೇಹ ಶಾಶ್ವತವಲ್ಲ; ಶರೀರವನ್ನು ನಿಮಿತ್ತವಾಗಿಸಿಕೊಂಡು ಸಂಪಾದಿಸಿದ ಕೀರ್ತಿ ಶಾಶ್ವತವಾದದ್ದು ಎನ್ನುವುದು ಅವನ ದೃಢನಂಬಿಕೆ. ಅದನ್ನೇ ತಾಯಿಗೆ ಅರುಹುತ್ತಾನೆ. ಮತ್ತೆ ತಾಯಿ ಶೋಕಿಸಿದಾಗ ಕರ್ಣನಲ್ಲಿ ಮಾತೃಭಕ್ತಿ ಜಾಗೃತವಾಗುತ್ತದೆ. ದಿವ್ಯಾಸ್ತ್ರವನ್ನು ಹಿಡಿಯುವುದಿಲ್ಲ; ಅರ್ಜುನನನ್ನು ಬಿಟ್ಟು ಉಳಿದ ನಾಲ್ಕೂ ಮಕ್ಕಳನ್ನು ಕೊಲ್ಲುವುದಿಲ್ಲ ಎಂದು ತಾಯಿಗೆ ಮಾತು ಕೊಡುತ್ತಾನೆ. ಡಾ. ವಿಶ್ವನಾಥ ನೇರಳಕಟ್ಟೆ ಬರಹ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

"ಸುರುಳಿ ಸುರುಳಿಯಲಿ ಕಳೆದುಹೋದ ಆತ್ಮದ ಬೂದಿಯ ಅರಸುವ ಮುನ್ನವೇ ಚಡಪಡಿಸುವ ತಂಗಾಳಿಯ ಕೆನ್ನೆಯನ್ನಾದರೂ ಚುಂಬಿಸುವೆಯಾ? ತುಸು ಸಾಂತ್ವನದ ನುಡಿಗಳನ್ನ ಅರುಹಿ ಆದಿ ಅನಾದಿಯ ನೆನಪಿಸಲೊಮ್ಮೆ" -ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ

ಕೃಷ್ಣಮೂರ್ತಿ ಹನೂರು ಬರೆದ ಈ ಭಾನುವಾರದ ನೀಳ್ಗತೆ “ರೈಲು ನಿಲ್ದಾಣದಲ್ಲಿ”

ಅವರು ಮತ್ತೆ ನೀವು ಒಗಟಿನ ಮಾತಿಗೇ ಹೊರಟಿರಿ ಎಂದರು. ನನ್ನ ತೀರ ವೈಯ್ಯಕ್ತಿಕ ಸಂಗತಿಗಳನ್ನು ಕೆಣಕುವುದು ಬೇಡವೆಂದೋ ಏನೋ ಒಂದಷ್ಟು ಹೊತ್ತು ಸುಮ್ಮನಾದರು. ಆ ಸಮಯದಲ್ಲಿ ಅವರು ಯಾವುದೋ ಕಾರಣಕ್ಕೆ ಅಸಮಾಧಾನಗೊಂಡ ಮಗನನ್ನು ಸುಮ್ಮನಿರಿಸುವುದರ ಕಡೆಗೆ ಹೊರಳಿದರು. ನಂತರ ನಿಮಗೆ ಮಕ್ಕಳ ಜವಾಬ್ದಾರಿಯ ಅನುಭವ ಇರಲಾರದು ನೋಡಿ. ಅದಕ್ಕೆ ನಿಮ್ಮನ್ನ ನಾನು ಪುಣ್ಯವಂತರು ಎಂದದ್ದು ಎಂದು ತಿರುಗಿ ನಕ್ಕರು. ಅವರ ನಗುವಿನಲ್ಲಿ ನನಗೂ ಆ ಅನುಭವ ಇದ್ದರೆ ಒಳ್ಳೆಯದಿತ್ತು. ಕೃಷ್ಣಮೂರ್ತಿ ಹನೂರು ಬರೆದ ಈ ಭಾನುವಾರದ ನೀಳ್ಗತೆ "ರೈಲು ನಿಲ್ದಾಣದಲ್ಲಿ"

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ