Advertisement

ಅಮೃತಾ ಪ್ರೀತಮ್; ಕೇವಲ ಲೇಖಕಿಯಲ್ಲ, ಒಂದು ಕ್ರಾಂತಿ: ರೇಣುಕಾ ನಿಡಗುಂದಿ ಬರಹ

ಮಕ್ಕಳನ್ನು, ಅಮೃತಾರನ್ನು ಸ್ಕೂಟರಿನಲ್ಲಿ ಕೂರಿಸಿ ಓಡಿಸಿದ್ದಕ್ಕೆ ಚಲಾನ್ ಆಗಿ ಅನೇಕ ಬಾರಿ ದಂಡ ತೆತ್ತುಬರುತ್ತಿದ್ದರು ಇಮರೋಜ್. ಅದಕ್ಕೆ ಯೋಚಿಸಿ ಇಬ್ಬರೂ ಹಣ ಕೂಡಿಸಿ ಅಮೃತಾ ಐದು ಸಾವಿರ, ಇಮರೋಜ್ ಐದು ಸಾವಿರ ಸೇರಿಸಿ ಅರವತ್ತರ ದಶಕದಲ್ಲಿ ಫಿಯೆಟ್ ಕಾರು ಕೊಂಡರಂತೆ. ಹೀಗೆ ಬದುಕಿನುದ್ದಕ್ಕೂ ಇಬ್ಬರೂ ಪ್ರತಿಯೊಂದನ್ನೂ ಸಮಭಾವದಿಂದ ಹಂಚಿಕೊಂಡು ಬಾಳಿದ್ದಕ್ಕೆ ನಾಲ್ಕು ದಶಕಗಳು ನಾಲ್ಕು ದಿನಗಳಂತೆ ಕಳೆದುಹೋದವು – ಎನ್ನುತ್ತಾರೆ ಇಮರೋಜ್. ಪ್ರಾಪಂಚಿಕ ಆಮಿಷಗಳು ಯಾವತ್ತೂ ಇಬ್ಬರನ್ನು ಕಾಡಲಿಲ್ಲ.
ಪಂಜಾಬಿನ ಖ್ಯಾತ ಕವಯತಿ ಅಮೃತಾ ಪ್ರೀತಂ ಹುಟ್ಟುಹಬ್ಬ ಇಂದು. ಅವರ ಸಂಗಾತಿ ಇಮ್ರೋಜ್‌ರ ಕಣ್ಣುಗಳಲ್ಲಿ ಅಮೃತಾರ ಬದುಕು ಹೇಗಿತ್ತು ಎಂಬುದರ ಕುರಿತು ರೇಣುಕಾ ನಿಡಗುಂದಿ ಬರಹ ನಿಮ್ಮ ಓದಿಗೆ

Loading

ಅಂಕಣ

Latest

ಕೆ.ಎಸ್.ನ ಕಾವ್ಯದ ಸೊಲ್ಲು – ಕನ್ನಡತೋಟದ ಮಲ್ಲಿಗೆಯರಳು: ಎಲ್. ಜಿ. ಮೀರಾ ಅಂಕಣ

ಕೆ.ಎಸ್.ನ. ಅವರ `ಮೈಸೂರು ಮಲ್ಲಿಗೆ’ ಕವನ ಸಂಕಲನವು ನಮ್ಮ ಸಾಹಿತ್ಯ ಕ್ಷೇತ್ರದ ಒಂದು ಸುಕುಮಾರ ಬೆರಗು! ಹಿಂದಿರುಗಿ ನೋಡಿದರೆ ಇಂಥದೊಂದು ಘಟಿತ ಸಾಧ್ಯ ಆಗಿದ್ದು ಹೇಗೆ ಎಂದು ಮೂಗಿನ ಮೇಲೆ ಬೆರಳಿಡುವಂತಾಗುತ್ತದೆ. ಹೌದು, ಡಾ.ಎಚ್.ಎಸ್.ವಿ. ಅವರು ಸರಿಯಾಗಿ ಗುರುತಿಸಿರುವಂತೆ ಆಚಾರ್ಯ ಬಿ.ಎಂ.ಶ್ರೀ ಅವರ ಯುಗಪ್ರವರ್ತಕ ಅನುವಾದ ಕೃತಿ `ಇಂಗ್ಲಿಷ್ ಗೀತಗಳು’ ಹಾಗೂ ತೀ.ನಂ.ಶ್ರಿ. ಅವರ `ಒಲುಮೆ’ ಕವನ ಸಂಕಲನಗಳ ಪ್ರಭಾವ `ಮೈಸೂರು ಮಲ್ಲಿಗೆ’ಯ ಮೇಲಿರುವ ಹಾಗಿದೆ. ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೊಂದನೆಯ ಬರಹ

ಸಾಹಿತ್ಯ

ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕತೆ “ಬದುಕು ಜಟಕಾಬಂಡಿ”

ಯಾವಾಗ ಒಬ್ಬ ಮನುಷ್ಯ ಬೇರೆಯವರ ಕಣ್ಣಿಗೆ ಬರೀ ಒಂದು ಬಾಡಿಯಾಗಿ ಬದಲಾಗುತ್ತಾನೋ ಯಾರಿಗೂ ಗೊತ್ತಿಲ್ಲ. ಆದರೂ ಎಲ್ಲರೂ ತಾವೇನೋ ಶಾಶ್ವತವಾಗಿ ಇಲ್ಲೇ ಮೊಳೆ ಹೊಡೆದುಕೊಂಡು ಕೂರೋರ ಹಾಗೇ ಇಡೀ ಪ್ರಪಂಚವೇ ನಂದು ಅನ್ನೋ ಹಾಗೆ ಹೇಗೆ ವರ್ತಿಸುತ್ತೀವಿ!? ನಾಲಕ್ಕೇ ನಾಲಕ್ಕು ಕಾಸು ಜಾಸ್ತಿ ದುಡಿದ ಕೂಡಲೆ ತಲೆ ಮೇಲೊಂದು ಕೊಂಬು ಬಂದಂತೆ ನಡೆದುಕೊಳ್ಳುವುದು, ಧಾಷ್ಟ್ಯ, ಅಹಂಕಾರ, ಅತಿರೇಕದ ಆಟಗಳೋ!? ಮೋಹನ್‌ ಮಂಜಪ್ಪ ಬರೆದ ಕತೆ "ಬದುಕು ಜಟಕಾಬಂಡಿ" ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಸರಣಿ

ನಾಟಕ ಕಂಪನಿ ಮತ್ತು ಒಲವಿನ ಪತ್ರ: ಜುಲೇಖಾ ಬೇಗಂ ಜೀವನ ವೃತ್ತಾಂತ

ಅಪ್ಪನನ್ನು ಚಹಾ ಕುಡಿಯೋಣವೆಂದು ಊರಿನ ಕೆಲವರೆಲ್ಲ ಸೇರಿ ಕರೆದುಕೊಂಡು ಹೋದರು. ಚಹಾ ಕುಡಿಯುವುದರಲ್ಲೇನಿದೆ? ಎಂದು ಅಪ್ಪನಿಗೂ ಅನ್ನಿಸಿ, ಜೊತೆ ನಡೆದರು. ಆ ಚಹಾ ಅಂಗಡಿಯಲ್ಲಿ ಅವರೆಲ್ಲ ಒಟ್ಟು ಸೇರಿ, ಅಪ್ಪನ ಕಾಲಿಗೆರಗಿ ಗೋಗರೆದರು. ‘ಇಲ್ಲಂತ ಹೇಳ್‌ಬ್ಯಾಡ್ರಿ. ಕಂಪೆನಿ ಕಟ್ಟೋ ಆಸಿನೇ ಇರ್ಲಿಲ್ರಿ. ನಿಮ್ ಮಗ್ಳ ಅಭಿನಯ ಕಂಡ್ಮೇಲೆ ಅನ್ಸ್ತು ಅಜ್ಜಾರ’ ಎಂದು ಅಲವತ್ತುಕೊಂಡರು. ಅವರೆಲ್ಲ ತನ್ನ ಕಾಲಡಿ ಕೂತು ಹೀಗೆ ಕೇಳುವಾಗ ಅಪ್ಪನ ಮನಸ್ಸಿಗೆ ಅದೇನು ಎನಿಸಿತೋ? ಹೂಂಗುಟ್ಟಿದರು. ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಇಪ್ಪತ್ನಾಲ್ಕನೆಯ ಕಂತು

ಪ್ರವಾಸ

ನೇತ್ರಾಣಿಯ ನೆತ್ತಿಯಿಂದ: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಜಟ್ಟಿಗನ ದೇವಾಲಯದ ದಾರಿ ಸುಸೂತ್ರವಾಗೇನೂ ಇರಲಿಲ್ಲ. ದೊಡ್ಡ ಬೃಹತ್ ಬಂಡೆಯ ಚಡಿಗಳಲ್ಲಿ ನುಸುಳಿ ದಾಟಬೇಕಿತ್ತು. ಸ್ವಲ್ಪ ಯಾಮಾರಿದರೂ ಪಾತಳಕ್ಕೆ ಇಲ್ಲ ಸಮುದ್ರ ಪಾಲು. ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂಡೆಗಳ ದಾಟಿದರೆ ಸಿಗುವ ಏರುದಾರಿಯಲ್ಲಿ ಸಾಗಬೇಕು. ಅಲ್ಲಲ್ಲಿ ದಾರಿ ತಪ್ಪಿಸುವ ಹೊರಳು ದಾರಿಗಳು ಹಲವು. ಹಚ್ಚ ಹಸಿರೊಳಗೆ ದಾರಿ ತಪ್ಪದಂತೆ ನಿಧಾನಕ್ಕೆ ಒಬ್ಬರ ಹಿಂದೊಬ್ಬರು ನಡೆದೆವು. ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ನೇತ್ರಾಣಿ ಪ್ರವಾಸದ ಕುರಿತ ಬರಹ ಇಲ್ಲಿದೆ

ವ್ಯಕ್ತಿ ವಿಶೇಷ

ತಿರುವುಮುರುವಿನ ಹಾದಿಯಲ್ಲಿ….: ಜುಲೇಖಾ ಬೇಗಂ ಜೀವನ ವೃತ್ತಾಂತ

ನಾನು ಕಲಾವಿದೆ ಎಂಬುದು ಅವರಿಗೂ ತಿಳಿದಿರದ ವಿಷಯವೇನಲ್ಲ. ನನ್ನ ಬಗ್ಗೆ ಪೂರ್ತಿಯಾಗಿ ವಿಚಾರಿಸಿಕೊಂಡೇ ಬಂದಿದ್ದರು. ನನ್ನೊಳಗಿನ ಕಲೆಗೆ ಅವಮಾನ ಮಾಡಬಾರದೆಂದೂ ಹಾಗೇ ಅದನ್ನು ಪೋಷಿಸಬೇಕೆಂದು ಕಿವಿಮಾತೇನೊ ಹೇಳಿದರು. ಹೇಳಿದ ಮಾತು ಕಿವಿಯ ಮೇಲೆ ಬೀಳಲೇ ಇಲ್ಲ! ಆಗುವುದಿಲ್ಲ ಎಂದು ಮುಖಭಂಗಿಯಲ್ಲೇ ಕೂತಿದ್ದೆ. ಆಗುಹೋಗುಗಳನ್ನು ನೋಡುತ್ತಿದ್ದ ಅಪ್ಪ, ‘ಏನ್ ಮಾತಾಡ್ತೀಯೋ, ಮನ್ಷನೇನೊ ನೀನು? ನನ್ ಮಗ್ಳು ಏನ್ ಹೇಳ್ತಾ ಅದಾಳು! ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಇಪ್ಪತ್ಮೂರನೆಯ ಕಂತು

ಸಂಪಿಗೆ ಸ್ಪೆಷಲ್

ಒಂದು ಪದ್ಯ, ಹತ್ತು ಮುಖ, ಹತ್ತು ಬಾಯಿ ಮತ್ತು ಔಚಿತ್ಯ: ಡಾ. ವಿಶ್ವನಾಥ ನೇರಳಕಟ್ಟೆ ಬರಹ

‘ವದನ’ ಎನ್ನುವ ಪದಕ್ಕೆ ಮುಖ, ಬಾಯಿ ಎನ್ನುವ ಅರ್ಥವಿದ್ದು, ತಲೆ ಎನ್ನುವ ಅರ್ಥವಿಲ್ಲ. ಆತನಿಗೆ ನಿಜವಾಗಿಯೂ ತಲೆ ಇದ್ದಿದ್ದರೆ ಸೀತೆಯನ್ನು ಅಪಹರಿಸಿ, ಬಳಿಕ ತನ್ನ ಮನಸ್ಸನ್ನು ಸರಿಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ, ಎನ್ನುವ ಭಾವ ಈ ಪದಬಳಕೆಯಲ್ಲಿ ಇದ್ದಂತಿದೆ. ‘ರಾಮಚಂದ್ರ ಚರಿತ ಪುರಾಣ’ದ ಆಧಾರದಲ್ಲಿ ಹೇಳುವುದಾದರೆ, ರಾವಣ ಪರಸ್ತ್ರೀ ವ್ಯಾಮೋಹಿ ಅಲ್ಲವೇ ಅಲ್ಲ. ಹೆಣ್ಣುಮಕ್ಕಳನ್ನು ಗೌರವಪೂರ್ಣವಾಗಿ ಕಾಣುವುದೇ ಅವನ ಸ್ವ-ಭಾವ. ಆದರೆ ಸೀತೆಯ ವಿಚಾರಕ್ಕೆ ಬಂದಾಗ ತನ್ನ ಮೂಲಗುಣವನ್ನೇ ಅವಗಣಿಸಿ ನಡೆದುಕೊಳ್ಳುತ್ತಾನೆ. ಕವಿ ನಾಗಚಂದ್ರನ ‘ರಾಮಚಂದ್ರ ಚರಿತ ಪುರಾಣ’ದಲ್ಲಿನ ಪದ್ಯವೊಂದರ ಕುರಿತು ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರಹ ನಿಮ್ಮ ಓದಿಗೆ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ಸಿ.ಬಿ.ಐನಳ್ಳಿ ಬರೆದ ಎರಡು ಹೊಸ ಕವಿತೆಗಳು

"ರೆಕ್ಕೆಗಳಿಗೆ ಅಕ್ಷರ ಅಂಟಿಸುತ್ತಿದ್ದಂತೆ ಹಾರಾಟವೇ ಮರೆವು ನಡೆದ ಒಂದೊಂದು ಹೆಜ್ಜೆಯೂ ಮರೆವಿನ ಹಾದಿಯ ಹಾಡಾಯಿತು ಕಲಿಸಿದರು ಕಲಿಸಿದರು ಕಲಿಸಿದರು ಮರೆವನ್ನೇ ಕಲಿಸಿದರು ಹೆಮ್ಮೆಯಿಂದ ಮರೆತೆ ಮರೆತೆ ಮರೆತೆ ಮರೆತದ್ದೇನೆಂಬುದನೇ ಮರೆತೆ ಕೆಸರ ಸಾಗರದಿ ಮೈಮರೆತು ಬೆರೆತೆ" -ಸಿ.ಬಿ.ಐನಳ್ಳಿ ಬರೆದ ಎರಡು ಹೊಸ ಕವಿತೆಗಳು

ಮೋಹನ್‌ ಮಂಜಪ್ಪ ಬರೆದ ಈ ಭಾನುವಾರದ ಕತೆ “ಬದುಕು ಜಟಕಾಬಂಡಿ”

ಯಾವಾಗ ಒಬ್ಬ ಮನುಷ್ಯ ಬೇರೆಯವರ ಕಣ್ಣಿಗೆ ಬರೀ ಒಂದು ಬಾಡಿಯಾಗಿ ಬದಲಾಗುತ್ತಾನೋ ಯಾರಿಗೂ ಗೊತ್ತಿಲ್ಲ. ಆದರೂ ಎಲ್ಲರೂ ತಾವೇನೋ ಶಾಶ್ವತವಾಗಿ ಇಲ್ಲೇ ಮೊಳೆ ಹೊಡೆದುಕೊಂಡು ಕೂರೋರ ಹಾಗೇ ಇಡೀ ಪ್ರಪಂಚವೇ ನಂದು ಅನ್ನೋ ಹಾಗೆ ಹೇಗೆ ವರ್ತಿಸುತ್ತೀವಿ!? ನಾಲಕ್ಕೇ ನಾಲಕ್ಕು ಕಾಸು ಜಾಸ್ತಿ ದುಡಿದ ಕೂಡಲೆ ತಲೆ ಮೇಲೊಂದು ಕೊಂಬು ಬಂದಂತೆ ನಡೆದುಕೊಳ್ಳುವುದು, ಧಾಷ್ಟ್ಯ, ಅಹಂಕಾರ, ಅತಿರೇಕದ ಆಟಗಳೋ!? ಮೋಹನ್‌ ಮಂಜಪ್ಪ ಬರೆದ ಕತೆ "ಬದುಕು ಜಟಕಾಬಂಡಿ" ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ