ನಂಬಿ ಕೆಟ್ಟವರಿಲ್ಲವೋ… ಇಲ್ಲ…ನಂಬಿ ಕೆಟ್ಟಿದ್ದಾರೆ: ಪ್ರೊ. ಪುಟ್ಟರಾಜು ಪಿ. ಬರಹ
ಸಾವಿರಾರು ವರುಷಗಳ ಹಿಂದೆ ಈ ಕತೆಗಳನ್ನೇ ನಿಜವೆಂದು ಧೃಡವಾಗಿ ನಂಬಿರುವ ಜನರನ್ನು ಏನೆನ್ನಬೇಕು? ಆ ನಂಬಿಕೆಯನ್ನೇ ಗಾಳವಾಗಿಸಿ ಜನರನ್ನು ಮರಳು ಮಾಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪಿತೂರಿಯಾದರೂ ಏನು? ಕಳೆದ ಒಂದು ದಶಕದಿಂದ ನಮ್ಮ ದೇಶವೂ ಈ ದಾರಿಯಲ್ಲಿ ನಿಧಾನವಾಗಿ ಸಾಗುತ್ತಿದೆ ಎಂಬ ಗುಮಾನಿ ಹುಟ್ಟುತ್ತಿದೆ. ನಾನು ಈ ಲೇಖನ ಬರೆಯುತ್ತಿರುವ ದಿನಗಳಲ್ಲೇ ಭಾರತದ ಸುಪ್ರೀಂ ಕೋರ್ಟಿನಲ್ಲಿ ಕೇರಳದ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ ನೀಡಬೇಕೇ? ಅಥವಾ ಇಲ್ಲವೇ ಎಂಬ ವಿಚಾರಣೆ ನಡೆಯುತ್ತಿತ್ತು. ಅಲ್ಲಿ ದೇವಸ್ಥಾನದ ಪರವಾಗಿ ವಾದ ಮಾಡುತ್ತಿದ್ದ ವಕೀಲರು ಇದೇ ನಂಬಿಕೆಯನ್ನು ನ್ಯಾಯಾಲಯದ ಮುಂದೆ ಇಟ್ಟಿದ್ದರು.
ಪ್ರೊ. ಪುಟ್ಟರಾಜು ಪಿ. ಬರಹ, ನಿಮ್ಮ ಓದಿಗೆ


