Advertisement

ದೇವ್ರು ಶಾಣ್ಯಾ ಅದಾನ್ರೀ… : ವಿನಾಯಕ ಅರಳಸುರಳಿ ಅಂಕಣ

ಹೌದಲ್ಲವೇ? ಎಲ್ಲಾ ಸರಿಯಾಗಿರುವ ಹೊತ್ತಿನಲ್ಲೂ ಯಾವುದೋ ಒಂದು ಕೊರಗು ನಮ್ಮನ್ನು ಕಾಡುತ್ತಲೇ ಇರುತ್ತದೆ. ಮಧ್ಯಾಹ್ನದ ನೆರಳಿನಲ್ಲಿ ಯಾರದೋ ಹುಡುಕಾಟ… ಸಂಜೆಯ ತಂಪಲ್ಲಿ ಯಾವುದೋ ನೆನಪು.. ರಾತ್ರೆಯ ಕನವರಿಕೆಯಲ್ಲಂತೂ ಎಂಥದ್ದೋ ದುಃಖ… ಇವೆಲ್ಲಾ ಏಕೆ? ಕಳೆದ ನೆನ್ನೆಗಳೇ ಅದೇಕೋ ಚಂದ ಎನಿಸುತ್ತವೆ. ಇಂದು ಎನ್ನುವುದು ಯಾವಾಗಲೂ ಕಹಿ ಕಹಿ. ಈ ಕ್ಷಣಕ್ಕೆ ಮೈ ಚಾಚಿ ಮಲಗಿರುವ ಹಂಸತೂಲಿಕಾ ತಲ್ಪದಲ್ಲೂ ಹಿಂದೆಂದೋ ಅರೆನಿದಿರೆ ಹೊತ್ತು ತಂದಿದ್ದ ಗುಡಿಸಲಿನ ಒರಟು ನೆಲದ್ದೇ ಕನವರಿಕೆ. ಮನಸ್ಸು… ಅದು ಹೀಗೇಕೆ? ಕಳೆದ ಕ್ಷಣಗಳೆಲ್ಲಾ ಎದೆಯೊಳಗೆ ಉಳಿದು ಹೋಗುವುದೇಕೆ?
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ

Loading

ಅಂಕಣ

Latest

ಸಂತೆಯಲ್ಲಿ ಸಂತರು ರಚಿಸಿದ ನುಡಿರತ್ನಗಳು : ಕನ್ನಡದ ತತ್ವಪದಗಳು: ಡಾ. ಎಲ್.ಜಿ.ಮೀರಾ

ಹೀಗೆ ಹಾಡುತ್ತಿರುವಾಗ ಕೆಲವರು ಮೂಲಕವಿಯ ಅಂಕಿತವನ್ನು ಬದಲಿಸಿ ತಮ್ಮ ನಡುವಿನ ಇಲ್ಲವೆ ದೇವರ ಹೆಸರುಗಳನ್ನು ಸೇರಿಸುವುದುಂಟು. ಆದರೆ ಇವು ಜನಪದರು ಹಾಡುತ್ತಿದ್ದ ಹಾಡುಗಳು ಎಂಬ ಕಾರಣದಿಂದಾಗಿ ಪಂಡಿತರು ಇವನ್ನು ಉಪೇಕ್ಷೆ ಮಾಡುತ್ತಿದ್ದರು. ಹೀಗಾಗಿ ಇವುಗಳ ಸಂಗ್ರಹಕಾರ್ಯ ವಿಳಂಬವಾಯಿತು. ಅವು ಹಾಡಿನ ರೂಪದಲ್ಲಿ ಇದ್ದುದರಿಂದ ಜನರ ಬಾಯಲ್ಲಿ ಹೇಗೋ ಉಳಿದುಕೊಂಡು ಅಳಿಯದೆ ಪ್ರಸಾರವಾಗುತ್ತಾ ಬಂದಿವೆ. ಜಾತಿಧರ್ಮಗಳನ್ನು ಮೀರಿ, ಈ ನೆಲದ ತತ್ವಚಿಂತನೆಯನ್ನು ನಿಸರ್ಗ ವಿವೇಕದ ಜೊತೆ ಬೆರೆಸುತ್ತ ಸಮಾಜದ ಚಿಂತನಾಕ್ರಮವನ್ನು ಆರೋಗ್ಯಕರವಾಗಿರುವಂತೆ ಈ ತತ್ವಪದಗಳು ನೋಡಿಕೊಂಡಿವೆ. ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

ಸಾಹಿತ್ಯ

ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್‌ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು. ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ಸರಣಿ

ಒಡಪು ಗೌರಮ್ಮ ಮತ್ತು ಆಕಿ: ಸುವರ್ಣ ಚೆಳ್ಳೂರು ಸರಣಿ

ಆ ದಾರಿಯೊಳಾಗ ನಡಕೊಂತ ಹೋಗೊದಂದ್ರ ಅದೊಂಥರಾ ಸಮಾಧಾನ ಅನ್ಸೋದು, ಆಕಡೆ ಈಕಡಿಗೆ ಹಸರು, ಗಿಡಗಳು ಅದರಾಗೂ ಹುಂಚಿ ಹೂವು ಬಿಟ್ಟಾಗ ಅದನ್ನ ಹರದು ತಿನ್ನಾಕ ಇನ್ನಷ್ಟು ಖುಷಿ ಆಗ್ತಿತ್ತು. ಆ ದಾರಿ ನಡಕ ಹೋದಾಗೆಲ್ಲಾ ಆ ಒಡಪಿನ ಕಟ್ಟಿ ಕಾಣ್ತಿತ್ತು. ಊರು ಬಿಟ್ಟು ದೂರ ಇದ್ದ ಆ ಕಟ್ಟಿ ಹತ್ರ ಗೌರಮ್ಮಜ್ಜಿ ಯಾವಾಗಲೂ ಇರ್ತಿದ್ಲು. ಆಕಿಗೆ ಗೊತ್ತಿರುವಷ್ಟು ಒಡಪುಗಳು ಆ ಊರಿನ್ಯಾಗ ಯಾರಿಗೂ ಗೊತ್ತಿರ್ಲಿಲ್ಲ, ಊರಾಗ ಯಾವ್ದನ ಮದುವಿ ಆದ್ರ ಅಕಿನ ಎಲ್ಲಾರೂ ಕರಿತಿದ್ರು, ಹಂಗಾಗಿ ಆಕಿ ಒಡಪು ಗೌರಮ್ಮ ಅಂತ ಕರಿತಿದ್ರು. ಸುವರ್ಣ ಚೆಳ್ಳೂರು ಬರೆಯುವ “ಆಕಿ” ಸರಣಿಯ ಹನ್ನೊಂದನೆಯ ಬರಹ

ಪ್ರವಾಸ

ಕೋಟೆ ಕೊತ್ತಲಗಳ ನಡುವೆ…: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಎಂದೂ ನಿದ್ರಿಸದ ಕೋಟೆ ಏಳು ಮಹಾದ್ವಾರಗಳಿಂದ ಇಂದಿಗೂ ಅಬೇಧ್ಯವಾಗಿದೆ. ತನ್ನ ತಲೆ ಬಿದ್ದಲ್ಲಿ ದೇವಾಲಯವನ್ನು ನಿರ್ಮಿಸಿ ಹಾಗೂ ದೇಹವಿದ್ದಲ್ಲಿ ಕೋಟೆ ಗೋಡೆಯ ನಿರ್ಮಿಸಿ ಎಂದು ತನ್ನನ್ನೆ ತಾ ಬಲಿಕೊಟ್ಟ! ತನ್ನ ತಲೆ ಕತ್ತರಿಸಿದ ಮೇಲೂ ಆತ ನಿಧಾನಕ್ಕೆ ಕೋಟೆಯ ಗೋಡೆ ಎಡೆಗೆ ನಡೆದು ಧರೆಗುರುಳಿದ. ಅಲ್ಲೇ ಕೋಟೆಯನ್ನು ನಿರ್ಮಿಸಲಾಯಿತು. ಎಷ್ಟೇ ಬಾರಿ ನಿರ್ಮಿಸಿದರೂ ನಿಲ್ಲದ ಕೋಟೆ ಬೀಳದೆ ನೇರ ನಿಂತಿತು. ಅಂತೂ ರಾಣಾಕುಂಭನ ಆಸೆ ನೆರವೇರಿತು. ಕಿಲಿವಾಡದಲ್ಲಿ ಬೃಹತ್ ಕೋಟೆಯೊಂದು ಎದ್ದು ನಿಂತಿತು! ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ರಾಜಸ್ಥಾನದಲ್ಲಿ ಓಡಾಡಿದ ಅನುಭವಗಳ ಕುರಿತ ಬರಹ

ವ್ಯಕ್ತಿ ವಿಶೇಷ

ಹೆಣ್ಣಿನ ನೋವಿಗೂ ಬಣ್ಣವೇ ಮುಲಾಮು: ಜುಲೇಖಾ ಬೇಗಂ ಜೀವನ ವೃತ್ತಾಂತ

ಬಟ್ಟೆ ಜಾರಿತೋ ಅಥವಾ ನಾನೇ ಕದಲಿಸಿದೆನೋ ಮಾಂಸವೆಲ್ಲ ತುಂಡುತುಂಡಾಗಿ ಹರಿದುಬಂತು. ಗರ್ಭದಲ್ಲಿ ಭ್ರೂಣದ ಮಾಂಸ ಉಳಿದಿತ್ತೋ ಏನೊ, ‘ನನ್ನನ್ನು ಬೇಡವೆನ್ನುವ ಮೊದಲು ನನ್ನ ಹೇಳಿ-ಕೇಳಿ ಮಾಡಿದ್ದೀಯಾ? ಇಲ್ಲ ತಾನೆ, ಮತ್ತೆ ನಾನೇಕೆ ನಿನ್ನ ಒಪ್ಪಿಗೆ ಕೇಳಲಿ?’ ಎಂಬಂತಿತ್ತು ಆ ಸನ್ನಿವೇಶ. ಹಾರಿದ ಜಾಗದ ಸುತ್ತಲೂ ಮಾಂಸ ಚೂರಾಗಿ ಚೆಲ್ಲಿಬಿದ್ದಿತ್ತು. ಏನೂ ಮಾಡಲಾರದೆ, ತೊಟ್ಟ ಬಟ್ಟೆಯನ್ನೆಲ್ಲ ಹರಡಿ ಅಲ್ಲಿಯೇ ಸುಮ್ಮನೆ ಕುಳಿತೆ. ನೇಪಥ್ಯದಲ್ಲಿ ಪರದೆ ಎಳೆಯುವವರಿಗೂ ಏನಾಗುತ್ತಿದೆ ಎಂದು ಗೊತ್ತಾಗಿತ್ತು. ಬೆಳಕನ್ನು ಆರಿಸಿ, ಪರದೆಯನ್ನು ಎಳೆದೇಬಿಟ್ಟರು. ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಹದಿನೈದನೆಯ ಕಂತು

ಸಂಪಿಗೆ ಸ್ಪೆಷಲ್

“ಹಳೆಯ ಪುಟಗಳಿಂದ…” ಸರಣಿಯಲ್ಲಿ ಎಂ.ಎಸ್.‌ ಶ್ರೀರಾಮ್‌ ಬರಹ

ಮೊದಲಿಗೆ ಬ್ರಿಟಿಷ್ ರಾಜನ ಚಿತ್ರದ ಜಾಗದಲ್ಲಿ ಮಹಾತ್ಮಾ ಗಾಂಧಿಯವರ ಚಿತ್ರವನ್ನು ಹಾಕಬೇಕೆಂದು ಯೋಜನೆ ತಯಾರಿಸಿದರೂ ಹಾಕಿದ್ದು ಅಶೋಕನ ಸಿಂಹಗಳನ್ನು! ಆ ನಂತರ ತಂಜಾವೂರಿನ ದೇವಸ್ಥಾನದ ಚಿತ್ರದ ಸಾವಿರ ರೂಪಾಯಿನ ನೋಟು, ಗೇಟ್‍ವೇ ಚಿತ್ರವಿದ್ದ ಐದು ಸಾವಿರ ರೂಪಾಯಿನ ನೋಟನ್ನು ಛಾಪಿಸಲಾಯಿತು. ಮಹಾತ್ಮಾ ಗಾಂಧಿಯ ಚಿತ್ರ ಹಾಕಿ ನೋಟುಗಳನ್ನು ಮೊದಲ ಬಾರಿಗೆ ಛಾಪಿಸಿದಾಗ ಅನೇಕರು ಅದನ್ನು ನಿಜವಾದ ರೂಪಾಯಿಗಳೆಂದು ಒಪ್ಪಲಿಲ್ಲವಂತೆ! ಅದು ನಿಜಕ್ಕೂ ಜಾಲಿ ನೋಟಲ್ಲ ಎನ್ನುವ ಪ್ರಚಾರವನ್ನು ಸರಕಾರ ಕೈಗೊಳ್ಳಬೇಕಾಯಿತು. "ಹಳೆಯ ಪುಟಗಳಿಂದ..." ಸರಣಿಯಲ್ಲಿ ಎಂ.ಎಸ್.‌ ಶ್ರೀರಾಮ್‌ ಬರಹ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ದಾದಾಪೀರ್ ಜೈಮನ್ ಅನುವಾದಿಸಿದ ವೆಲ್ಷ್ ಭಾಷಾ ಕವಿ ಶಾನ್ ಮೆಲಾಂಗಲ್ ಡ್ಯಾಫಿಡ್ ಕವಿತೆ

"ಇಡೀ ಜಗತ್ತಿನ ಹೊಟ್ಟೆಯೇ ಅದರೊಳಗೆ ಮುದ್ರೆಯೊತ್ತಿದ ಹಾಗೆ! ಜೀವದ ಗುರುತು. ಜೀವನದ ಗುರುತು. ಒಂದೊಂದೇ ಒದೆತ. ಒಂದೊಂದೇ ಬಾರಿ. ಆ ಒದೆತಗಳೆಲ್ಲವೂ ಚಾಕುವಿನೊಳಗೆ ತೂರಿ ಮನೆ ಮಾಡಿದ ಹಾಗೆ! ರಾತ್ರಿ ಊಟ ಮಾಡುವಾಗ ಕೈಗೆಲ್ಲಾ ಅನ್ನ ಸಾರಿನ ತುತ್ತಿನೆಂಜಲಂಟಿರುವಾಗ ಕಥೆ ಅವಳೊಳಗಿಂದ ಹೊಮ್ಮಿ ಬರುತ್ತದೆ. ಧಡೂತಿ ಹೆಂಗಸು. ಈ ಚಾಕು ಅವಳ ಹಳೆಯ ದೋಸ್ತಿ. ಇಡೀ ಜಗತ್ತಿನ ಉದರವೇ ಅದರೊಳಗೆ ಬೆಳೆಯುತ್ತಿರುವ ಬೆರಗು. ಈ ಚಾಕು. ಅಮ್ಮನ ಕೊನೆಯ ದಿನಗಳ ಹೊತ್ತಿಗೆ ಈ ಜಗತ್ತು ಮಾತ್ರ ಉಳಿದಿರುತ್ತದೆ. ಚಾಕು ಸವೆದಿರುತ್ತದೆ." -ದಾದಾಪೀರ್ ಜೈಮನ್ ಅನುವಾದಿಸಿದ ವೆಲ್ಷ್ ಭಾಷೆಯ  ಶಾನ್ ಮೆಲಾಂಗಲ್ ಡ್ಯಾಫಿಡ್ ಕವಿತೆ

ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ನವತೀರದಲ್ಲಿ, ಒಂದು ಸಂಜೆ ಮೀರಾ ದಿಬ್ಬದ ಮೇಲೆ ನಿಂತು, ಲೈಟ್‌ಹೌಸ್ ಇದ್ದ ಜಾಗವನ್ನೇ ನೋಡುತ್ತಿದ್ದಳು. ನಮಗೆ ಪ್ರಿಯವಾದವರನ್ನು ಕಳೆದುಕೊಂಡಾಗ ನಾವು ಲೆಕ್ಕ ಹಾಕುತ್ತೇವಲ್ಲಾ – ಅವರು ನಮಗೆ ಏನು ಕೊಟ್ಟರು, ಏನನ್ನು ಅರ್ಧಕ್ಕೇ ಬಿಟ್ಟುಹೋದರು, ಅವರನ್ನು ನೋಡಿಯೇ ನಾವು ಏನೇನು ಕಲಿತೆವು ಎಂದು – ಹಾಗೆ ಅವಳೂ ಲೆಕ್ಕ ಹಾಕುತ್ತಿದ್ದಳು. ತನ್ನ ಅಣ್ಣನ ಕೆಲಸದ ರೀತಿ, ಆತನ ಏಕಾಗ್ರತೆ, ಸಮಸ್ಯೆ ಕಂಡರೆ ಬಿಡದೆ ಅಂಟಿಕೊಳ್ಳುವ ಅವನ ಛಲ – ಎಲ್ಲವನ್ನೂ ನೆನಪಿಸಿಕೊಂಡಳು. ವಾಸುಕಿ ಸಿ.ಜಿ ಬರೆದ ಈ ಭಾನುವಾರದ ಕತೆ “ಮುಗಿಲ ಒಗಟು ಮತ್ತು ಮಣ್ಣಿನ ಮಲ್ಲಯುದ್ಧ”

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ