ಆಲದ ಮರವೆಂಬ ಆಲಯದಲ್ಲಿ: ದೇವಿಕಾ ನಾಗೇಶ್ ಬರಹ
ವೈಜ್ಞಾನಿಕ, ಧಾರ್ಮಿಕ ಕಾರಣಗಳು ಏನೇ ಇರಲಿ. ಈ ಭೂಮಿಯಲ್ಲಿ ಇರುವ ಪ್ರತಿಯೊಂದು ಕ್ರಿಮಿಕೀಟ, ಮರ ಗಿಡ, ಪ್ರಾಣಿ ಪಕ್ಷಿಗಳು ಮನುಷ್ಯರಷ್ಟೇ ಪ್ರಮುಖರು. ಪ್ರಕೃತಿಯ ಸಮತೋಲನಕ್ಕಾಗಿ ನಾಡಿನಲ್ಲಿ ಸಮೃದ್ಧಿ ನೆಲೆಸಲು ಕಾಡು ಬೇಕು ಎನ್ನುವ ಸತ್ಯ ಮನಗಂಡರೆ ಗಿಡ ಮರಗಳನ್ನು ನಾವು ಪ್ರೀತಿಸುತ್ತೇವೆ. ಹೀಗಾಗಿ ದೇವರ ಕಾಡುಗಳು, ನಾಗ ಬನಗಳು ಈ ಭೂಮಿಯಲ್ಲಿ ನಂಬಿಕೆಯ ಹೆಸರಿನಲ್ಲಿ ಬಹುಕಾಲ ಬಾಳಿ ಬಂದವು. ಆದರೆ ಇಂದು ಇವಿಷ್ಟು ಕಾಂಕ್ರೀಟ್ ಕಾಡುಗಳಾಗಿರುವುದು ನಾವು ಕಂಡ ದುರಂತ. ಆಧುನಿಕತೆ ಎಂದರೆ ಇರುವ ಕಾಡನ್ನು ಕಡಿದು ಅಗಲ ರಸ್ತೆಗಳನ್ನು, ಅಗಸದೆತ್ತರ ಗಗನಚುಂಬಿ ಕಟ್ಟಡಗಳನ್ನು ಕಟ್ಟುವುದು ಎಂದಲ್ಲ.
ಆಲದ ಮರದ ಕುರಿತು ದೇವಿಕಾ ನಾಗೇಶ್ ಬರಹ


