ಕುಪ್ಪಳ್ಳಿಯಲ್ಲಿ ಕೆಟಿಎಸ್ ಜೊತೆ…
ಪೂರ್ಣಚಂದ್ರರ ಆತ್ಮೀಯರಲ್ಲೊಬ್ಬರಾದ ಕೆ.ಟಿ. ಅವರ ಖಾಸಾ ಗೆಳೆಯ ಕೂಡ. ವಿಪರ್ಯಾಸ ಎಂದರೆ ಇದೇ ನೋಡಿ, ಕುವೆಂಪು ತೀರಿಕೊಂಡಾಗ ಇದೇ ತೇಜಸ್ವಿ ಜತೆಗೂಡಿ ಕವಿಶೈಲದ ಕುವೆಂಪು ಸ್ಮಾರಕ ಕಲ್ಪನೆಯನ್ನು ಸಾಕಾರಗೊಳಿಸಿದ್ದವರು ಕೆ.ಟಿ. ಮುಂದೆ ತೇಜಸ್ವಿಯ ಸ್ಮಾರಕವನ್ನೂ ಸ್ವತಃ ಕೆ.ಟಿ. ನಿರ್ಮಾಣ ಮಾಡುತ್ತಾರೆಂದು ಕನಸಲ್ಲೂ ಅಂದುಕೊಂಡಿರಲಿಲ್ಲ. ಆದರೆ ದುರಾದೃಷ್ಠವಶಾತ್ ತೇಜಸ್ವಿ ಸಾವು ಅವರ ಸ್ಮಾರಕ ಕಲ್ಪನೆಯನ್ನೂ ಕೆ.ಟಿ.ಯೇ ಮಾಡುವಂತಾಗಿದ್ದು ವಿಪರ್ಯಾಸ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ


