“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕುಸುಮಾ ಶಾನಭಾಗ ಬರಹ
ಕೊನೆಗೂ ಗಾಂಧೀಜಿ ಗೌರಮ್ಮನಿಗೆ ಕಿತ್ತಳೆ ಹಣ್ಣು ಕೊಟ್ಟು, ಅವರ ಮನೆಗೆ ಬಂದರು. ಗೌರಮ್ಮ ಅವರನ್ನು ಮಣೆಯಿಟ್ಟು ಕೂರಿಸಿದರು. ಇದೆಲ್ಲ ಯಾಕೆಂದು ಗಾಂಧೀಜಿ ಕೇಳಿದರೂ ಅವರು ಉತ್ತರಿಸಲಿಲ್ಲ. ಒಳಗಿನಿಂದ ಒಂದು ಪಾತ್ರೆಯಲ್ಲಿ ತಮ್ಮಲ್ಲಿದ್ದ ಎಲ್ಲಾ ಚಿನ್ನದ ಆಭರಣಗಳನ್ನು ತುಂಬಿಸಿ ತಂದು ಗಾಂಧೀಜಿ ಎದುರಿನಲ್ಲಿಟ್ಟರು. ಆ ಚಿನ್ನವನ್ನು ಹರಿಜನ ಉದ್ಧಾರ ಕಾರ್ಯಕ್ಕೆ ಬಳಸುವಂತೆ ಗಾಂಧೀಜಿಯನ್ನು ಕೇಳಿಕೊಂಡರು. ಇದಕ್ಕೆ ಪತಿಯ ಒಪ್ಪಿಗೆ ಇದೆಯೆ ಎಂದು ಗಾಂಧೀಜಿ ಕೇಳಿದರಂತೆ. ಸ್ವ ಇಚ್ಛೆಯಿಂದ ಗೌರಮ್ಮ ಕೊಡುತ್ತಿದ್ದಾರೆ.
“ಹಳೆಯ ಪುಟಗಳಿಂದ…” ಸರಣಿಯಲ್ಲಿ ಕೊಡಗಿನ ಗೌರಮ್ಮನವರ ಕುರಿತು ಕುಸುಮಾ ಶಾನಭಾಗ ಬರಹ

