ಈಗಿನ ಮಕ್ಕಳು ಹೀಗೇಕೆ?: ಬಸವನಗೌಡ ಹೆಬ್ಬಳಗೆರೆ ಸರಣಿ
ಮಕ್ಕಳ ಮುಂದೆ ಇವನ್ನೆಲ್ಲಾ ಹೇಳಿದರೆ ಬರೀ ಕೇಳುತ್ತಾರಷ್ಟೇ ಆದರೆ ಈ ಕಷ್ಟದ ತೀವ್ರತೆ ಅವರಿಗೆ ಅರಿವಾಗುವುದಿಲ್ಲ. ಮೊದಲು ಅನ್ನಕ್ಕೆ ಭಾರಿ ಬೆಲೆಯಿತ್ತು. ನಮ್ಮ ಊರಲ್ಲಿ ಕೆಲ ಮನೆಗಳಲ್ಲಿ ಹಬ್ಬಕ್ಕೆ ಮಾತ್ರ ಅನ್ನ ಮಾಡುತ್ತಿದ್ದರು. ಆದರೆ ಈಗ ಇಂತಹ ಪರಿಸ್ಥಿತಿ ಯಾರಿಗೂ ಇಲ್ಲ. ಮಕ್ಕಳಲ್ಲಿ ಮೊದಲು ಇದ್ದ ಕಮಿಟ್ಮೆಂಟ್, ಗುರು ಶಿಷ್ಯರ ಬಾಂಧವ್ಯ, ತಮ್ಮ ಹೆತ್ತವರ ಬಗ್ಗೆ ಇರುವ ಪ್ರೀತಿಯ ಬಂಧ ತುಸು ಬಿರುಕು ಬಿಡುತ್ತಿದೆ! ಒಂದು ಹಂತದವರೆಗೂ ಬಾಂಧವ್ಯ ಇದ್ದರೂ ಅದು ಬರೀ ಮೆಟೀರಿಯಲಿಸ್ಟಿಕ್ ಆಗಿದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಅರವತ್ತೆಂಟನೆಯ ಕಂತು ನಿಮ್ಮ ಓದಿಗೆ


