Advertisement

ಪ್ರಾಣಿ ಒಡನಾಟದಲ್ಲಿನ ಮನುಷ್ಯರ ಸಂಕಟ: ಡಾ. ವಿನತೆ ಶರ್ಮ ಬರೆಯುವ ಅಂಕಣ

ಕಾಡಿನ ರಸ್ತೆಯಲ್ಲಿ ಹೋಗುವಾಗ ವಾಹನ ನಿಲ್ಲಿಸಬೇಡಿ, ಪ್ರಾಣಿಗಳಿಗೆ ಆಹಾರ ಕೊಡಬಾರದು ಎಂದು ದಪ್ಪ ಅಕ್ಷರಗಳಲ್ಲಿ ಬರೆದಿದ್ದರೂ ಅಲ್ಲಲ್ಲಿ ಜನ ವಾಹನಗಳನ್ನು ನಿಲ್ಲಿಸಿದ್ದರು. ಪ್ರಾಣಿಗಳು ಕಾಣಿಸುತ್ತಿವೆ ಎಂದು ಖುಷಿ. ಹತ್ತಿರ ಬರುವ ಮಂಗಗಳಿಗೆ ಹಣ್ಣು, ಸ್ನ್ಯಾಕ್ಸ್ ಕೊಡುವುದು ಮಾಡುತ್ತಿದ್ದರು. ಸ್ವಲ್ಪ ದೂರದಲ್ಲಿ ಇದ್ದ, ಮಂಗಗಳನ್ನೇ ನೋಡುತ್ತಿದ್ದ ಜಿಂಕೆಗಳನ್ನು ಕರೆಯುವುದು ನಡೆದಿತ್ತು. ಇಷ್ಟಾದ ನಂತರ ಹೀಗೆಯೆ ಹಣ್ಣು ತೋರಿಸಿ ಕರೆದರೆ ಆನೆ, ಕಾಡೆಮ್ಮೆ ಕೂಡ ಬರಬಹುದು ಎನ್ನಿಸಿತು. ಅವುಗಳ ಸ್ವಾಭಾವಿಕ ಆಹಾರ ಪ್ರದೇಶಗಳನ್ನು ಈಗ ಲಂಟಾನಾ ಪೊದೆಗಳು ಆಕ್ರಮಿಸಿವೆ. ಜಿಂಕೆಗಳು ರಸ್ತೆಗೆ ಬಂದರೆ ಅವುಗಳನ್ನು ಹುಡುಕಿಕೊಂಡು ಹುಲಿ, ಚಿರತೆ ಕೂಡ ರಸ್ತೆಗಿಳಿಯುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Loading

ಅಂಕಣ

Latest

ಕನಕ ದಾಸರಲ್ಲಿನ ಜೀವನ ವಿವೇಕ ವ್ಯಾಪ್ತಿ; ಕನ್ನಡಿಗರ ಪ್ರಾಪ್ತಿ: ಎಲ್. ಜಿ. ಮೀರಾ ಅಂಕಣ

ಇವತ್ತಿಗೆ ಕನಕದಾಸರು ಹೇಗೆ ಪ್ರಸ್ತುತ ಎಂದು ನಾವು ನೋಡುವುದಾದರೆ, ಜಾತಿ ಕುಲ ಆಚಾರವನ್ನು ಮೀರಿದ ವಿವೇಕ ಮನುಷ್ಯನಿಗೆ ಮುಖ್ಯ ಎಂದು ಅವರು ಹೇಳಿದ ಮಾತು ಎಲ್ಲ ಕಾಲಕ್ಕೂ ಯೋಗ್ಯ. ನಂದಾದೀಪದಂತಹ ಮಾತು ಅದು. ಇಂದಿನ ಸಾವಯವ ಆಹಾರದ ಕಸರತ್ತು ಅವರು ಎಂದೋ ಹೇಳಿದ `ರಾಮಧಾನ್ಯಚರಿತ್ರೆ’ಯನ್ನು ನೆನಪಿಸುವುದಿಲ್ಲವೇ? ಚೆಲುವ ಕನ್ನಡ ನುಡಿಯ ಲಯಗಾರಿಕೆಯನ್ನು ಅರಿತು ಅವರು ಬಳಸಿದ ಪದಗಳು, ಹಾಡಿದ ಪದ್ಯಗಳು ಇಂದು ಗಾದೆ ಮಾತುಗಳಂತೆ ಬಳಕೆಯಾಗುತ್ತಿವೆ. ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

ಸಾಹಿತ್ಯ

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಕ್ರಮ ತಪ್ಪಿದ ನಗರ”

"ನೀವು ಎಂದಾದರೂ ಆಕಾಶದ ನಕ್ಷತ್ರಗಳನ್ನು ಗಮನಿಸಿದ್ದೀರಾ?" ಅವನು ಕೇಳಿದ. ಅವನ ಧ್ವನಿ ಹಳೆಯ ರೇಡಿಯೋ ಸ್ಟೇಷನ್‌ನಿಂದ ಬರುವ ಸಿಗ್ನಲ್‌ನಂತೆ ಇತ್ತು. ಅದಕುತ್ತರವಾಗಿ "ಹೌದು, ನೋಡಿದ್ದೇನೆ.” ಎಂದೆ. "ಆಕಾಶದಲ್ಲಿ ನಕ್ಷತ್ರಗಳು ಸುಮ್ಮನೆ ಬಿದ್ದಿಲ್ಲ" ಅವನು ಹೇಳುತ್ತಾ ಒಂದು ನೋಟಿನ ಮೇಲೆ ಒಂದು ನಾಣ್ಯವನ್ನು ಇಟ್ಟ. "ಅವುಗಳಿಗೊಂದು ಕ್ರಮವಿದೆ. ಆ ಕ್ರಮ ತಪ್ಪಿದರೆ ಈ ಜಗತ್ತು ಕುಸಿದು ಬೀಳುತ್ತದೆ. ಈ ಸ್ಕೈವಾಕ್ ಕೆಳಗೆ ಹರಿಯುವ ಸಾವಿರಾರು ಕಾರುಗಳು, ಈ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ನಿಮ್ಮ ಕೈಯಲ್ಲಿರುವ ಈ ಕಾಫಿ ಕಪ್... ಎಲ್ಲವೂ ಒಂದು ನಿಖರವಾದ ಜಾಗದಲ್ಲಿ ಇರಬೇಕು." ಕಾರ್ತಿಕ್ ಕೃಷ್ಣ ಬರೆದ ಕತೆ “ಕ್ರಮ ತಪ್ಪಿದ ನಗರ” ನಿಮ್ಮಈ ಭಾನುವಾರದ ಬಿಡುವಿನ ಓದಿಗೆ

ಸರಣಿ

“ಭುಜಂಗ”: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಕಾಜಾಣ ಹಕ್ಕಿಗಳು ಒಂದು ರೀತಿಯಲ್ಲಿ ಕಾಡಿನ ಕಾವಲುಗಾರರೆಂದೇ ಹೇಳಬಹುದು. ಹಿಂದಿ ಭಾಷೆಯಲ್ಲಿ ಈ ಹಕ್ಕಿಗಳನ್ನು ಕೋತ್ವಾಲ್ ಅಂದರೆ ಪೊಲೀಸ್ ಎಂದೇ ಕರೆಯುತ್ತಾರೆ! ಅಂತೆಯೇ ಭುಜಂಗ ಒಂದು ನಿರ್ಭಯ ಹಕ್ಕಿ; ಎಷ್ಟೋ ಸಾರಿ ಇತರ ಹಕ್ಕಿಗಳು ಹಿಡಿದ ಬೇಟೆಯನ್ನು ಬೆದರಿಸಿ ದರೋಡೆ ಮಾಡುತ್ತವೆ. ಅಲ್ಲದೆ ತಮ್ಮ ತಂಟೆಗೆ ಬಂದ ಯಾವುದೇ ಜೀವಿಯನ್ನೂ ಅಟ್ಟಿಸಿಕೊಂಡು ಹೋಗಿ, ಹೊಡೆದೋಡಿಸುವುದರಲ್ಲಿ ಬಹಳ ನಿಷ್ಣಾತ! ಭುಜಂಗನಲ್ಲಿ ಈ ಎದೆಗಾರಿಕೆ ಮತ್ತು ನಿರ್ಭೀತಿಯ ಗುಣವನ್ನು ಮನಗಂಡಿರುವ, ಎಷ್ಟೋ ಸಣ್ಣಪುಟ್ಟ ದುರ್ಬಲ ಹಕ್ಕಿಗಳು ಅದೇ ಮರದಲ್ಲಿ ತಮ್ಮ ಗೂಡನ್ನು ಕಟ್ಟಿಕೊಂಡು ರಕ್ಷಣೆ ಪಡೆಯುತ್ತವೆ. ಡಾ. ಎಸ್.ವಿ. ನರಸಿಂಹನ್‌ ಬರೆಯುವ "ಹಕ್ಕಿಪಕ್ಷಿ ಚಿತ್ರ ಸಂಪುಟ" ಸರಣಿಯಲ್ಲಿ ಭುಜಂಗ ಹಕ್ಕಿಯ ಕುರಿತ ಬರಹ ಇಲ್ಲಿದೆ

ಪ್ರವಾಸ

ಹೊಷಾಯ್ ಹೊಸೆದ ಹೊಸ ಕತೆ….: ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ ಪ್ರವಾಸ ಸರಣಿ

ನಿಧಾನಕ್ಕೆ ನಾಲ್ಕಾರು ಬಾರಿ ಹತ್ತಿ ಇಳಿಯುತ್ತಾ ನನ್ನ ಕಾಲಿಗೆ ಬಲ ಬರಲು ಪ್ರಾರಂಭವಾಯಿತು! ನಿಧಾನವಾಗಿ ನನ್ನ ಕಾಲಿನ ಶಕ್ತಿ ಮರಳಿತು. ಮೊದಲಿನಂತಾದೆ. ಕೂಡಿಕೊಂಡ ನರಗಳೆರಡು ನೈಸರ್ಗಿಕ ವಿಧಾನದಲ್ಲೇ ಬೇರ್ಪಟ್ಟವು! ವಾವ್‌ ಅದ್ಭುತ! ಬದುಕಿನ ಆಸೆ ಕಳಕೊಂಡ ನಾನು ಮತ್ತೆ ಬದುಕ ಜೀವಿಸತೊಡಗಿದೆ. ತಾನು ಹೊಷಾಯ್ ಆದರೂ ಬಾಹುಬಲಿಯ ಸೇವೆಗೆ ನಿಂತೆ! ಬೆಳಿಗ್ಗೆ ಬೇಗ ಬಂದು ಬಾಗಿಲು ತೆಗೆಯುವುದು. ದೇವಾಲಯದ ವಠಾರದ ಸ್ವಚ್ಛತೆ. ಬಂದವರಿಗೆ ಮಾಹಿತಿ ನೀಡುವುದು. ಪೂಜೆಗೆ ಬರುವ ಪುರೋಹಿತರಿಗೆ ಸಹಾಯ ಮಾಡುತ್ತಾ ನನ್ನ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿ

ವ್ಯಕ್ತಿ ವಿಶೇಷ

ಅಭಿಮಾನಿಗಳ ಆಯರಿಯೂ, ಅಮ್ಮ ಹಾಕುತ್ತಿದ್ದ ಬರೆಗಳೂ….: ಜುಲೇಖಾ ಬೇಗಂ ಜೀವನ ವೃತ್ತಾಂತ

ಒಂದೊಂದು ಪ್ರಯೋಗದಲ್ಲೂ ಲೋಹಿತಾಶ್ವನ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೆಚ್ಚುಮಾಡಿಕೊಳ್ಳುತ್ತಿದ್ದೆ. ಜನರೆಲ್ಲ ಮನೆಗೆ ಬರಲು ಶುರುವಿಟ್ಟರು. ಭಾಗಮ್ಮನವರು ಇಂತಹದಕ್ಕೆಲ್ಲ ಸೊಪ್ಪೇ ಹಾಕುತ್ತಿರಲಿಲ್ಲ. ಎಂಟು ವರ್ಷ ಮೀರಿದಂತೆ ದೇಹ ಬದಲಾವಣೆಯಾಗುತ್ತಿತ್ತು. ನನ್ನ ಮುಖ, ಗಲ್ಲ, ಎದೆ, ಕೈ ತೋಳುಗಳು, ಇಡೀ ದೇಹವೇ ಅಗಲಿಸುತ್ತಿದ್ದ ವಯಸ್ಸು. ಅದಕ್ಕಾಗೋ ಅಥವಾ ಅಸೂಯೆಯಿಂದಲೋ ನಾನ್ಯಾರ ಬಳಿಯಾದರೂ ಮಾತಿಗೆಂದು ನಿಂತರೂ ಬೈದು, ಹೊಡೆದು ರಾದ್ಧಾಂತ ಮಾಡುತ್ತಿದ್ದರು. ಕೀರ್ತಿ ಬೈಂದೂರು ನಿರೂಪಣೆಯ ಜುಲೇಖಾ ಬೇಗಂ ಜೀವನ ವೃತ್ತಾಂತ "ಒಂದು ಜೀವ ಮೂರು ಜನ್ಮ" ಎಂಟನೆಯ ಕಂತು

ಸಂಪಿಗೆ ಸ್ಪೆಷಲ್

ಬಾಪುವಿನ ನೆರಳಲ್ಲಿ ಬೆಳಕು ಕಾಣಿಸುವ ‘ನಮ್ಮೊಳಗೊಬ್ಬ ಗಾಂಧಿ’ಯ ಸತ್ಯಾನ್ವೇಷಣೆ: ಡಾ.ರಾಜೇಂದ್ರಕುಮಾರ್ ಕೆ ಮುದ್ನಾಳ್

ಮಹಿಳೆಯರ ಬದುಕು ಸ್ವಾವಲಂಬಿಯಾಗಿರಬೇಕೆಂದು ಶಕ್ತಿದಾಯಕವಾಗಿ ಇರಬೇಕೆಂದು ಗಾಂಧಿ ಬಯಸಿದ್ದರು ಎಂಬುದನ್ನು ಮೂಕಮ್ಮ ಮತ್ತು ರಮಾ ಪಾತ್ರದ ಮೂಲಕ ನಾಟಕಕಾರರು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ರಮಾ ವಿಧವೆಯಾಗಿದ್ದರು ಮತ್ತೊಬ್ಬನನ್ನು ಪ್ರೀತಿಸಿ ಮರು ಮದುವೆ ಮಾಡಿಕೊಳ್ಳುವ ಉತ್ಸಾಹವನ್ನು ತೋರಿಸಿದ್ದು ಕೂಡ ಗಾಂಧಿ ವಿಚಾರಧಾರೆಗಳಿಗೆ ಮನಸೋತು. ರಮಾ ಮತ್ತು ರಹಿಮರ ಪ್ರೇಮ ಭಾವೈಕ್ಯತೆಯ ಪ್ರತೀಕವಾಗಿ ಹೊರಹೊಮ್ಮಿದೆ. 'ನಮ್ಮೊಳಗೊಬ್ಬ ಗಾಂಧಿ' ನಾಟಕದ ಕುರಿತು ಡಾ. ರಾಜೇಂದ್ರಕುಮಾರ್‌ ಕೆ. ಮುದ್ನಾಳ್‌ ಬರಹ

ಈ ದಿನದ ಚಿತ್ರ

ರವಿಶಂಕರ ಪಾಟೀಲ ತೆಗೆದ ಈ ದಿನದ ಫೋಟೋ

ಈ ದಿನದ ಚಿತ್ರ ತೆಗೆದವರು ರವಿಶಂಕರ ಪಾಟೀಲ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದವರಾದ ರವಿಶಂಕರ ಅವರು ವೃತ್ತಿಯಲ್ಲಿ ಪ್ರೌಢಶಾಲಾ ದೈಹಿಕ ಶಿಕ್ಷಕರು. ಸಣ್ಣಕತೆ ಪದ್ಯ ಅವರ ಆಸಕ್ತಿಯ ಸಾಹಿತ್ಯ ಪ್ರಕಾರಗಳು. “ದೃಷ್ಟಿಕೋನ” (2012) ಇವರ ಪ್ರಕಟಿತ ಕಥಾ ಸಂಕಲನ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

"ಮಣ್ಣಲ್ಲಿ ಈವರೆಗೆ ಹುಟ್ಟಿದ ಎಲ್ಲಾ ಹೆಣ್ಣುಗಳು  ಮುಖಕ್ಕೆ ಬಣ್ಣ ಬಳಿದುಕೊಂಡು  ಮುಡಿಗೆ ಮಲ್ಲಿಗೆ ಮುಡಿದುಕೊಂಡು ವಯ್ಯಾರ ಮಾಡಿಕೊಂಡು  ದಾರಿಯ ತುಂಬುತ್ತಾ  ಪ್ರಚಂಡ ಮಹಾಭೋಗಕ್ಕೆ ಆಹ್ವಾನಿಸುವುದನ್ನು ಕಂಡು   ದಿಗ್ಭ್ರಮೆಗೊಂಡು ಉದ್ರೇಕಗೊಂಡು ಎಣಿಸಲಾರದಷ್ಟು ತುಟಿಗಳು ಮೊಲೆಗಳು  ಗುಪ್ತಾಂಗದಿಂದ ಧುಮ್ಮಿಕ್ಕಿ ಬಂದ  ಅಗಾಧ ನೀರಿನೊಳಗೆ  ಮುಳುಗಿ, ಮೇಲೆದ್ದು, ಮತ್ತೆ ಮುಳುಗಿ ಸತ್ತ  ಉಬ್ಬಿ  ದಡಕ್ಕೆ ಬಿದ್ದ"- ದಾದಾಪೀರ್‌ ಜೈಮನ್‌ ಅನುವಾದಿಸಿದ ಅನಿತಾ ತಂಪಿ ಕವಿತೆ ‘ಪ್ರೇತಂ’

ಕಾರ್ತಿಕ್ ಕೃಷ್ಣ ಬರೆದ ಈ ಭಾನುವಾರದ ಕತೆ “ಕ್ರಮ ತಪ್ಪಿದ ನಗರ”

"ನೀವು ಎಂದಾದರೂ ಆಕಾಶದ ನಕ್ಷತ್ರಗಳನ್ನು ಗಮನಿಸಿದ್ದೀರಾ?" ಅವನು ಕೇಳಿದ. ಅವನ ಧ್ವನಿ ಹಳೆಯ ರೇಡಿಯೋ ಸ್ಟೇಷನ್‌ನಿಂದ ಬರುವ ಸಿಗ್ನಲ್‌ನಂತೆ ಇತ್ತು. ಅದಕುತ್ತರವಾಗಿ "ಹೌದು, ನೋಡಿದ್ದೇನೆ.” ಎಂದೆ. "ಆಕಾಶದಲ್ಲಿ ನಕ್ಷತ್ರಗಳು ಸುಮ್ಮನೆ ಬಿದ್ದಿಲ್ಲ" ಅವನು ಹೇಳುತ್ತಾ ಒಂದು ನೋಟಿನ ಮೇಲೆ ಒಂದು ನಾಣ್ಯವನ್ನು ಇಟ್ಟ. "ಅವುಗಳಿಗೊಂದು ಕ್ರಮವಿದೆ. ಆ ಕ್ರಮ ತಪ್ಪಿದರೆ ಈ ಜಗತ್ತು ಕುಸಿದು ಬೀಳುತ್ತದೆ. ಈ ಸ್ಕೈವಾಕ್ ಕೆಳಗೆ ಹರಿಯುವ ಸಾವಿರಾರು ಕಾರುಗಳು, ಈ ದೊಡ್ಡ ದೊಡ್ಡ ಬಿಲ್ಡಿಂಗ್‌ಗಳು, ನಿಮ್ಮ ಕೈಯಲ್ಲಿರುವ ಈ ಕಾಫಿ ಕಪ್... ಎಲ್ಲವೂ ಒಂದು ನಿಖರವಾದ ಜಾಗದಲ್ಲಿ ಇರಬೇಕು." ಕಾರ್ತಿಕ್ ಕೃಷ್ಣ ಬರೆದ ಕತೆ “ಕ್ರಮ ತಪ್ಪಿದ ನಗರ” ನಿಮ್ಮಈ ಭಾನುವಾರದ ಬಿಡುವಿನ ಓದಿಗೆ

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ