Advertisement

ಬೇಂದ್ರೆಯವರ ಸಣ್ಣ-ಸೋಮವಾರ-ಒಂದು ಓದು: ಚನ್ನಪ್ಪ ಅಂಗಡಿ ಬರಹ

ಇಲ್ಲಿಯವರೆಗೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಲಾಸ್ಯವಾಡಿದ ಕವನ, ಬೆಳೆದು ಎದ್ದು ನಿಲ್ಲುತ್ತದೆ. ಆಧುನಿಕ ಯುಗದ ಪ್ರಗತಿಯ ಕಡೆಗೆ ಹೊರಳುವ ಸಂಕೇತವಾಗಿ ಗೂಡ್ಸ್ ಉಗಿಬಂಡಿ ಬರುತ್ತದೆ. ರೈಲು ಬರುವುದಕ್ಕೆ ಹೋಗುವುದಕ್ಕೆ ತನ್ನದೇ ಆದ ನಿಯಮವಿದೆ. ಆದರೆ ಇದನ್ನು ಅರಿಯದ ಬಾಲಕರು ಅದರತ್ತ ಓಡಿ ಕೈಯಿಂದ ಸಿಗ್ನಲ್ ಕೊಡುತ್ತಾರೆ. ತಮ್ಮ ಸಂಕೇತಕ್ಕನುಸಾರವಾಗಿ ರೈಲು ಚಲಿಸುತ್ತಿದೆಯೆಂದು ಭಾವಿಸಿ ಸಂಭ್ರಮಿಸುತ್ತಾರೆ. ಈ ಮುಗ್ಧತೆಯನ್ನು ಕಾಪಿಟ್ಟುಕೊಳ್ಳುವದು ಕೂಡ ಕವಿಯ ಲಕ್ಷಣ. ರೈಲು ಹಳಿಗಳನ್ನು ದಾಟಿ ಮುನ್ನಡೆದಾಗ ಸೋಮೇಶ್ವರ ಕಾಣುತ್ತದೆ. ಹೇಗೆ ಕಾಣುತ್ತದೆ?
ದ.ರಾ. ಬೇಂದ್ರೆ ರಚಿತ “ಸಣ್ಣ ಸೋಮವಾರ” ಕವಿತೆಯ ಕುರಿತು ಚನ್ನಪ್ಪ ಅಂಗಡಿ ಬರಹ ನಿಮ್ಮ ಓದಿಗೆ

Loading

ಅಂಕಣ

Latest

 ಇಂದಿಗೂ ಬಂಧಿತಳಾದ ಹೆಣ್ಣು ಹಾಗೂ ನೇಮಿಚಂದ್ರರ ಕಥೆಗಳ ನೆನಪು…..: ಡಾ. ಎಲ್.ಜಿ. ಮೀರಾ ಅಂಕಣ

“.....ಮಹಿಳೆ ತನ್ನ ಕೆಲಸವನ್ನು ಮಾಡುವುದು ತನ್ನ ಖುಷಿಗೆ, ತನ್ನ ವಿದ್ಯೆ ಓದಿನ ಸದುಪಯೋಗಕ್ಕೆ, ತನ್ನದಾದ ಪ್ರತ್ಯೇಕ ವ್ಯಕ್ತಿತ್ವ ವಿಕಾಸಕ್ಕೆ, ತನ್ನ ಸಾಮರ್ಥ್ಯ, ಯೋಗ್ಯತೆಗಳ ಪೂರ್ಣ ಉಪಯೋಗಕ್ಕೆ ಎಂಬುದು ನಮ್ಮಲ್ಲಿ ಅಪರಿಚಿತ ವಿಷಯ... ಮಹಿಳೆಯ ಬಾಲ್ಯದಿಂದ ಯೌವನದವರೆಗೆ ಅಕೆಯ ಪ್ರತಿ ತಯಾರಿ ಎಂದೋ ಬರುವ ಗಂಡನ ಬೇಡಿಕೆ, ಬಯಕೆಗಳಿಗೆ ಅನುಕೂಲಕರವಾಗಿ ತನ್ನನ್ನು ತಾನು ರೂಪಿಸಿಕೊಳ್ಳುವುದು. ನಾನು ಚಿತ್ರಿಸಿದ ಸ್ತ್ರೀಪಾತ್ರವು ಇಂಥ ಎರಡನೆ ಅಸ್ತಿತ್ವವನ್ನೊಮ್ಮೆ ಝಾಡಿಸಿ, ಗಂಡ ಮಕ್ಕಳ ಬೆಳಕಲ್ಲೆ ಬೆಳಗಬೇಕಾದ ಗ್ರಹವಾಗಿ ತಾನೇನೂ ಉಳಿಯಬೇಕಿಲ್ಲ... ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಐವತ್ತೆರಡನೆಯ ಬರಹ

ಸಾಹಿತ್ಯ

ಹುತಾತ್ಮ ಜತೀಂದ್ರನಾಥರಿಂದಾಗಿ ಮೊಳಗಿದ ‘ಪಾಂಚಜನ್ಯ’: “ಹಳೆಯ ಪುಟಗಳಿಂದ” ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಆಗ ಕುವೆಂಪು ತಾವು ಬರೆಯುತ್ತಿದ್ದ ದಿನಚರಿ, ಪತ್ರಗಳು, ಕವಿತೆಗಳು ಮೊದಲಾದುವುಗಳ ತುದಿಯಲ್ಲಿ ‘ಓಂ ಕ್ರಾಂತಿಃ ಕ್ರಾಂತಿಃ ಕ್ರಾಂತಿಃ’ ಎಂದು ಬರೆಯುತ್ತಿದ್ದರು. ಪಾಂಚಜನ್ಯವನ್ನು ಮೊದಲು ಪ್ರಕಟಿಸಿದ ‘ವಿಶ್ವಕರ್ಣಾಟಕ’ ಪತ್ರಿಕೆಯ ಸಂಪಾದಕರಿಗೆ ಬರೆದಿದ್ದ ಪೋಸ್ಟ್ ಕಾರ್ಡಿನಲ್ಲೂ ಈ ಕ್ರಾಂತಿ ಬೀಜಾಕ್ಷರಗಳನ್ನು ಕಂಡು, ತಿ.ತಾ.ಶರ್ಮರು ‘ಅಷ್ಟು ಬಟ್ಟಬಯಲಾಗಿ ಬರೆಯಬಾರದು’ ಎಂದು ಕವಿಯ ಹಿತಕ್ಕಾಗಿ ಹೇಳಿದ್ದರಂತೆ. ಕುವೆಂಪು ಈ ಕ್ರಾಂತಿಗೀತೆಯನ್ನು ಬರೆದು ಸಭೆಗಳಲ್ಲಿ ವೀರಾವೇಶದಿಂದ ಅಭಿನಯಪೂರ್ವಕವಾಗಿ ವಾಚಿಸುತ್ತಿದ್ದರು. “ಹಳೆಯ ಪುಟಗಳಿಂದ" ಸರಣಿಯಲ್ಲಿ ಡಾ. ಬಿ ಆರ್ ಸತ್ಯನಾರಾಯಣ ಬರಹ

ಸರಣಿ

ಒಬ್ಬರು ಕೊನೆಕಾರರು ಮತ್ತೊಬ್ಬರು ಡಾಕ್ಟರು: ಎಸ್. ಗಂಗಾಧರಯ್ಯ ಅನುಭವ ಕಥನ

ಕೇವಲ ಡಾಕ್ಟರಷ್ಟೇ ಆಗದೆ ಅದರ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಇಂಥ ಅಪರೂಪದ ವ್ಯಕ್ತಿತ್ವದ ತೋಪಯ್ಯನವರದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕತ್ರಿಘಟ್ಟದವರು. `ಎಲ್ಲದಕ್ಕೂ ಸರ್ಕಾರವನ್ನೇ ನಂಬಿ ಕೂರುವುದು ಮೂರ್ಖತನ. ನಾವು ನಮ್ಮ ನಮ್ಮ ಕೈಯ್ಯಿಂದ ಏನೇನು ಮಾಡೋಕೆ ಸಾಧ್ಯ ಆಗುತ್ತೋ ಅದನ್ನೆಲ್ಲಾ ಮಾಡುತ್ತಾ ಹೋಗಬೇಕು’ ಅನ್ನುತ್ತಿದ್ದ ತೋಪಯ್ಯನವರು`ಸಹಕಾರ ತತ್ವ’ದಲ್ಲಿ ಅಪಾರ ನಂಬಿಕೆ ಇಟ್ಟಿದ್ದರು. ಎಸ್.‌ ಗಂಗಾಧರಯ್ಯ ಅನುಭವ ಕಥನ “ಕಾಡ ಕಕ್ಕೆ”ಯ ಹದಿನೈದನೆಯ ಕಂತು

ಪ್ರವಾಸ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!: ಶ್ರೀಧರ್‌ ಎಸ್.‌ ಸಿದ್ದಾಪುರ ಪ್ರವಾಸ ಸರಣಿ

ಒತ್ತೊತ್ತಾಗಿ ಬದುಕುವುದಕ್ಕಿಂತ ಕಾಲು ಚಾಚಿ ಪ್ರಕೃತಿಯ ಮಡಿಲಲ್ಲಿ ಒಂದಾಗಿ ಸರಳ ಮನೆಗಳಲ್ಲಿ ಬದುಕುವ ಅಪರಿಮಿತ ಸೌಂದರ್ಯವೇ ಬೇರೆ! ನೂರಾರು ಇಲ್ಲಗಳ ನಡುವಿನ ವಿಶ್ರಾಂತ ಸುಖ. ಇಂತಹ ಹತ್ತಾರು ಅಳಿದ ಮನೆಗಳು ಹೊಳೆ ಹಾರುತ್ತಲೇ ಕಾಣಸಿಕ್ಕವು. ಅಲ್ಲಿಲ್ಲಿ ಪುಟಾಣಿ ವಿಶಾಲ ಅಂಗಳಗಳು. ನಾಗರೀಕತೆಯ, ಮನುಷ್ಯ ವಾಸದ ಕತೆಯನ್ನು ಅರಹುತ್ತದೆ. ಪ್ರಕೃತಿ ಮಡಿಲಲ್ಲಿ ಬದುಕಿದ ಇವರ ಬದುಕಿನ ಸಾಹಸಗಳೆಂತೂ. ಇವರು ಬದುಕಿದ ಕುರುಹಾಗಿ ಅಲ್ಲಲ್ಲಿ ತೆಂಗಿನ ಮರಗಳಿವೆ! ಶ್ರೀಧರ್‌ ಎಸ್.‌ ಸಿದ್ದಾಪುರ ಬರೆಯುವ “ಸಾಗುತ ದೂರ ದೂರ…” ಪ್ರವಾಸ ಸರಣಿಯಲ್ಲಿ ಕುಂಚಿಕಲ್‌ ಅಬ್ಬಿಯ ಕುರಿತ ಬರಹ ಇಲ್ಲಿದೆ

ವ್ಯಕ್ತಿ ವಿಶೇಷ

ಅಮೃತಾ ಪ್ರೀತಮ್; ಕೇವಲ ಲೇಖಕಿಯಲ್ಲ, ಒಂದು ಕ್ರಾಂತಿ: ರೇಣುಕಾ ನಿಡಗುಂದಿ ಬರಹ

ಮಕ್ಕಳನ್ನು, ಅಮೃತಾರನ್ನು ಸ್ಕೂಟರಿನಲ್ಲಿ ಕೂರಿಸಿ ಓಡಿಸಿದ್ದಕ್ಕೆ ಚಲಾನ್ ಆಗಿ ಅನೇಕ ಬಾರಿ ದಂಡ ತೆತ್ತುಬರುತ್ತಿದ್ದರು ಇಮರೋಜ್. ಅದಕ್ಕೆ ಯೋಚಿಸಿ ಇಬ್ಬರೂ ಹಣ ಕೂಡಿಸಿ ಅಮೃತಾ ಐದು ಸಾವಿರ, ಇಮರೋಜ್ ಐದು ಸಾವಿರ ಸೇರಿಸಿ ಅರವತ್ತರ ದಶಕದಲ್ಲಿ ಫಿಯೆಟ್ ಕಾರು ಕೊಂಡರಂತೆ. ಹೀಗೆ ಬದುಕಿನುದ್ದಕ್ಕೂ ಇಬ್ಬರೂ ಪ್ರತಿಯೊಂದನ್ನೂ ಸಮಭಾವದಿಂದ ಹಂಚಿಕೊಂಡು ಬಾಳಿದ್ದಕ್ಕೆ ನಾಲ್ಕು ದಶಕಗಳು ನಾಲ್ಕು ದಿನಗಳಂತೆ ಕಳೆದುಹೋದವು – ಎನ್ನುತ್ತಾರೆ ಇಮರೋಜ್. ಪಂಜಾಬಿನ ಖ್ಯಾತ ಕವಯತಿ ಅಮೃತಾ ಪ್ರೀತಂ ಹುಟ್ಟುಹಬ್ಬ ಇಂದು. ಅವರ ಸಂಗಾತಿ ಇಮ್ರೋಜ್‌ರ ಕಣ್ಣುಗಳಲ್ಲಿ ಅಮೃತಾರ ಬದುಕು ಹೇಗಿತ್ತು ಎಂಬುದರ ಕುರಿತು ರೇಣುಕಾ ನಿಡಗುಂದಿ ಬರಹ ನಿಮ್ಮ ಓದಿಗೆ

ಸಂಪಿಗೆ ಸ್ಪೆಷಲ್

ಪಾತ್ರಧಾರಿಯ ಗೈರು: ಜಯಶ್ರೀ ವಸಂತ್‌ ಲಲಿತ ಪ್ರಬಂಧ

ಅವರ ನೆನಪಾಯಿತು…. ಎರಡು ಪಾತ್ರೆಯಲ್ಲಿ ನೀರಿಟ್ಟು… ತೊಳೆದು … ಸಣ್ಣಗೆ …ನಾಜೂಕಾಗಿ ಹೆಚ್ಚಿ… ಮತ್ತೆ ಆ ನೀರು ತೊಳೆದ ನೀರು… ‘ಗಿಡಕ್ಕೆ ಹಾಕ್ರಿ ಜಿ ಕೆ ಜೆ… ಹಾಕ್ತೀರಾ….ಹಾಕಿದ್ರಾ…’ ಇತ್ಯಾದಿ ಪ್ರಶ್ನೆಗಳು. ರೇಗಿ ಹೋಗುತ್ತೆ… ಇವತ್ತು ಏನು ಬೇಡ.. ನೀರಿಲ್ಲೇ ಚೆಲ್ತೀನಿ. ನಾಜೂಕಾಗಿಯೂ ಬೇಡ….ಎಲ್ಲಾ ನಿಯಮಗಳಿಗೂ ರಜೆ… ಆರಾಮ್ ಮಾಡೋಣ ಅಂತ ಹರಡಿಕೊಂಡು ಮಾಡಿದೆ. ಇವತ್ತು ಹಿಟ್ಟು ಉಕ್ಕರಿಸಿದ ರೊಟ್ಟಿ.. ಕಾರಣ ಅದು ಮಾಡಬೇಡ್ರೀ.. ಸುಮ್ಮನೆ ಹಿಟ್ಟೆಲ್ಲಾ ಹರಡಿಕೊಂಡು ರಂಪ ಆಗುತ್ತೆ…. ನಿಮಗೂ ಕಷ್ಟ ಆಗುತ್ತೆ …ಅನ್ನೋ ಕಾಳಜಿ ಮಾಡುವ ಮನುಷ್ಯನ ಗೈರು… ಜಯಶ್ರೀ ವಸಂತ್‌ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

ಈ ದಿನದ ಚಿತ್ರ

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ. ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

  • ದಿನದ ಕವಿತೆ
  • ವಾರದ ಕಥೆ
  • ಮಿನಿಕಾಯ್ ಫೋಟೋ ಕಥನ
  • ದಿನದ ಕಾರ್ಟೂನ್

ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಗಜಲ್

"ಆ ರಸ್ತೆ ಆ ತಿರುವು ಆ ನೆರಳು ಆ ಬಿಸಿಲು ಈಗಿಲ್ಲ ಆ… ಸವಿ ಏಸು ಕನಸುಗಳು ಸುಟ್ಟು ಕರಕಲಾದವು ಇಲ್ಲಿ ಮರುಳೆ ನಿನ್ನ ನೆನಪಲ್ಲಿ" -ದೇವರಾಜ್‌ ಹುಣಸಿಕಟ್ಟಿ ಬರೆದ ಈ ದಿನದ ಗಜಲ್

ಕೃಷ್ಣಮೂರ್ತಿ ಹನೂರು ಬರೆದ ಈ ಭಾನುವಾರದ ನೀಳ್ಗತೆ “ರೈಲು ನಿಲ್ದಾಣದಲ್ಲಿ”

ಅವರು ಮತ್ತೆ ನೀವು ಒಗಟಿನ ಮಾತಿಗೇ ಹೊರಟಿರಿ ಎಂದರು. ನನ್ನ ತೀರ ವೈಯ್ಯಕ್ತಿಕ ಸಂಗತಿಗಳನ್ನು ಕೆಣಕುವುದು ಬೇಡವೆಂದೋ ಏನೋ ಒಂದಷ್ಟು ಹೊತ್ತು ಸುಮ್ಮನಾದರು. ಆ ಸಮಯದಲ್ಲಿ ಅವರು ಯಾವುದೋ ಕಾರಣಕ್ಕೆ ಅಸಮಾಧಾನಗೊಂಡ ಮಗನನ್ನು ಸುಮ್ಮನಿರಿಸುವುದರ ಕಡೆಗೆ ಹೊರಳಿದರು. ನಂತರ ನಿಮಗೆ ಮಕ್ಕಳ ಜವಾಬ್ದಾರಿಯ ಅನುಭವ ಇರಲಾರದು ನೋಡಿ. ಅದಕ್ಕೆ ನಿಮ್ಮನ್ನ ನಾನು ಪುಣ್ಯವಂತರು ಎಂದದ್ದು ಎಂದು ತಿರುಗಿ ನಕ್ಕರು. ಅವರ ನಗುವಿನಲ್ಲಿ ನನಗೂ ಆ ಅನುಭವ ಇದ್ದರೆ ಒಳ್ಳೆಯದಿತ್ತು. ಕೃಷ್ಣಮೂರ್ತಿ ಹನೂರು ಬರೆದ ಈ ಭಾನುವಾರದ ನೀಳ್ಗತೆ "ರೈಲು ನಿಲ್ದಾಣದಲ್ಲಿ"

ಮಿನಿಕಾಯ್ ಎಂಬ ಮಾಯಾದ್ವೀಪ: ಅಬ್ದುಲ್ ರಶೀದ್ ಬರೆಯುವ ಫೋಟೋ ಕಥಾನಕ

ನಾನು ಹೊರಟಿದ್ದುದು ಒಬ್ಬ ನೆಂಟನಂತೆ. ಒಂದು ಔತಣಕೂಟಕ್ಕೆ. ಆ ಔತಣಕೂಟವೂ ವಿಶೇಷವಾಗಿತ್ತು. ಆ ಹಳ್ಳಿ ಈ ಸಲದ ದೋಣಿ ಸ್ಪರ್ದೆಯಲ್ಲಿ ಮೊದಲ ಬಹುಮಾನ ಪಡೆದಿತ್ತು. ನಾನಾದರೋ ಹದಿನೆಂಟು ಗಂಟೆಗಳ ಕಾಲ ಕಡಲಲ್ಲಿ ಚಲಿಸುವ ಹಡಗೊಂದನ್ನು ಹತ್ತಿ, ಸೈಕಲನ್ನೂ ಹತ್ತಿಸಿ ಹೊರಟು ನಿಂತಿದ್ದೆ. ಜೊತೆಗೆ ಕಳೆದ ಕಾಲು ಶತಮಾನದಿಂದ ನನ್ನ ಜೀವನದ ವ್ಯಸನಗಳಾಗಿ ಹೋಗಿರುವ ಕ್ಯಾಮರಾ ಮತ್ತು ಮಸೂರಗಳು.

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ