ಹೆಣದ ಹಣ: ಜಿಮ್ ರವಿ ಜೀವನ ಚರಿತ್ರೆಯ ಅಧ್ಯಾಯ
ಮಣ್ಣು ಮುಚ್ಚಿದ್ದ ನಾಲ್ಕಾಣೆಯನ್ನು ಯಾರಿಗೂ ಕಾಣದಂತೆ ಅತಿ ವೇಗವಾಗಿ ತೆಗೆದುಕೊಳ್ಳುವಾಗ ಕೈ ತುಂಬಾ ಮಣ್ಣಿನ ಸಮೇತ ಜೇಬಿಗೆ ಹಾಕಿಕೊಂಡಿದ್ದರ ಪರಿವೆ ಅವನಿಗಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡು `ಏನಿಲ್ಲ ಕಣಣ್ಣೋ ಅಲ್ಲಿ ಬಿದ್ಬಿಟ್ಟೆ ನಿಕ್ಕರ್ ಮಣ್ಣಾಯ್ತು ಅಷ್ಟೆ’ ಅಂದ. ಆದ್ರೆ ಆ ಆಸಾಮಿ `ಲೇ ಕಳ್ ನನ್ಮಗ್ನೆ ಬಿದ್ರೆ ಬರೀ ಜೇಬ್ ಮಾತ್ರಾ ಮಣ್ಣಾಗುತೇನ್ಲಾ ಏನೋ ಕಳ್ಗರ ಬಿಟ್ಟಿಂಗೆ ಕಾಣುತ್ತೆ. ನಿಮ್ಮವ್ವ ಸಿಗ್ಲಿ ಹೇಳ್ತೀನಿ ತಡಿ’ ಅಂದು ಹೋದ. ಯಾವುದು ಯಾರಿಗೂ ಗೊತ್ತಾಗಬಾರ್ದು ಅಂತ ಅಂದ್ಕೊಂಡಿದ್ನೋ ಅದರ ಸುಳಿವೆ ಬೇರೆಯವರಿಗೆ ಸಿಕ್ಕಿದ್ದು ರವಿಯ ಜಂಘಾಬಲವನ್ನೇ ಕುಸಿಯುವಂತೆ ಮಾಡಿತ್ತು.
ಡಾ. ಮಂಜುನಾಥ್ ಮಾಗೋದಿ ಜಿಮ್ ರವಿ ಅವರ ಜೀವನ ಚರಿತ್ರೆ ‘ರವಿ ನೀನು ಆಗಸದಲ್ಲಿ’ ಕೃತಿಯ ಒಂದು ಅಧ್ಯಾಯ


