ಎಸ್. ಜಾನಕಿಗೆ ಯಾಕೆ ಕೇವಲ ಪದ್ಮ?: ಸುಕನ್ಯಾ ಕನಾರಳ್ಳಿ ಅಂಕಣ
ಅವರೇನೂ ತೆಪ್ಪಗೆ ಅದನ್ನು ಒಪ್ಪಿಕೊಳ್ಳಲಿಲ್ಲ. ತಮ್ಮಲ್ಲಿ ಜಾಗೃತವಾಗಿರುವ ಆಧುನಿಕ ಮಹಿಳಾಪ್ರಜ್ಞೆಗೆ ನೀವು ಅಪಚಾರ ಮಾಡುತ್ತಿದ್ದೀರಿ ಎಂದು ಗಾಂಧೀಜಿಯವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡರು. ಯಾವ ಚಳುವಳಿಯೂ ತಾವಿಲ್ಲದೆ ನಡೆಯಕೂಡದು ಎಂದು ಸ್ಪಷ್ಟವಾಗಿ ಹೇಳಿದರು. ದಾದಾಬಾಯಿ ನವರೋಜಿಯವರ ಮೊಮ್ಮಗಳು ಕುರ್ಷೆದ್ ಬೆನ್ ನವರೋಜಿ ಒಂದು ಸಿಟ್ಟಿನ ಪತ್ರವನ್ನು ಸಹ ಬರೆದು ಗಾಂಧಿಗೆ ರವಾನಿಸಿದರು. ‘ಸ್ತ್ರೀಧರ್ಮ’ ಎಂಬ ಪತ್ರಿಕೆಯಲ್ಲಿ ಮಾರ್ಗರೆಟ್ ಕಸಿನ್ಸ್ ಹೀಗೆ ‘ಹೊರಗಿರಿಸುವ’ ಹುನ್ನಾರವನ್ನು ಪ್ರತಿಭಟಿಸಿದರು. ಯಾವುದೇ ಸಮಾವೇಶ, ಸಮಿತಿ, ಸಂಚಲನೆಗಳು ಹೆಣ್ಣಿಲ್ಲದೆ ನಡೆಯಬಾರದೋ, ಹಾಗೆಯೇ ಯಾವುದೇ ಹೋರಾಟ, ಪ್ರತಿಭಟನೆಗಳು ಸಹ ಹೆಣ್ಣಿಲ್ಲದೆ ಅಪೂರ್ಣ ಎಂದು ಎಚ್ಚರಿಸಿದರು
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೆಂಟನೆಯ ಬರಹ


