ಇದಮಿತ್ಥಂ ಎಲ್ಲಿಹುದು ಮನುಜ ಸ್ವಭಾವದಲಿ?: ಸುಕನ್ಯಾ ಕನಾರಳ್ಳಿ ಅಂಕಣ
ಆದರೆ ನಿಜವಾದ ಹೊಡೆತ ಬೀಳುವುದು ಆ ಕಪ್ಪು ಹುಡುಗನ ತಾಯಿಯನ್ನು ಅವಳು ಭೇಟಿಯಾದಾಗ. ಕೌಟುಂಬಿಕ ಹಿಂಸೆಯಡಿ ಸಿಕ್ಕಿಬಿದ್ದ ಆ ತಾಯಿಗೆ ಕುಟುಂಬವೂ ಉಳಿಯಬೇಕು, ಮಗನ ಬರ್ಕತ್ತೂ ಆಗಬೇಕು. ಕರಿಯರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಸಮಾಜ ಒಂದು ಕಡೆ, ಸ್ಕೂಲಿನಿಂದ ಹೊರಕಳಿಸಿದರೆ ಆ ಎಳೆಯನ ಭವಿಷ್ಯವನ್ನು ಕತ್ತರಿಸಿ ಬಿಸಾಕುವ ಅವನ ಕ್ರೂರಿ ಅಪ್ಪ ಇನ್ನೊಂದು ಕಡೆ, ನಿನಗೆ ಬೇಕಿದ್ದರೆ ಪಾದ್ರಿಯನ್ನು ಹೊರದಬ್ಬು, ನನ್ನ ಮಗನ ವಿದ್ಯಾಭ್ಯಾಸಕ್ಕೆ ಅಡ್ಡಿ ಮಾಡಬೇಡ, ಎಂದು ನಯವಾಗಿ ಆದರೆ ದೃಢವಾಗಿ ಹೇಳುವ ಅವಳ ಧಾರಣಶಕ್ತಿ ಮತ್ತು ಹೇಗೋ ಬದುಕುಳಿದು ತನ್ನವರನ್ನೂ ಬದುಕಿಸಿಕೊಳ್ಳುವ ಅವಳ ತಣ್ಣಗಿನ ಸ್ಥೈರ್ಯ ಈ ಸಿಸ್ಟರಿನಿಯ ಧಾರ್ಮಿಕ ಹುಂಬತನವನ್ನು ಅಲ್ಲಾಡಿಸಿಬಿಡುತ್ತದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತೊಂದನೆಯ ಬರಹ


