ಇಂಗ್ಲೀಷ್ ಮೇಡಮ್ಮಿನ ಕನ್ನಡ ಪುರಾಣ: ಸುಕನ್ಯಾ ಕನಾರಳ್ಳಿ ಅಂಕಣ
ಷೇಕ್ಸ್ಪಿಯರ್ ತನ್ನ ಕಾಲದಲ್ಲಿ ಮಹಾನ್ ನಾಟಕಕಾರ ಎಂದು ಪರಿಗಣಿಸಲ್ಪಟ್ಟಿದ್ದನೊ ಇಲ್ಲವೋ. ವಾಸ್ತವವಾಗಿ ಆತ ಕೇವಲ ಎರಡನೆಯ ಅಥವಾ ಮೂರನೆಯ ದರ್ಜೆಯ ನಾಟಕಾರನಾಗಿದ್ದ ಎಂಬ ನಿಲುವಿದೆ. ನಮ್ಮ ವಿ. ಸೀತಾರಾಮಯ್ಯನವರ ಮಾತುಗಳು ಅದನ್ನೇ ಧ್ವನಿಸುತ್ತವೆ. ‘ಶೇಕ್ಸಪಿಯರನಲ್ಲಿ ಭವ್ಯವಾದ, ಸುಬದ್ಧವಾದ, ತಾರಕವಾದ ಜೀವನಮೌಲ್ಯಗಳಿಲ್ಲ; ದರ್ಶನವಿಲ್ಲ. ಆದುದರಿಂದ ಅವನು ಕೀಳನೆಂಬ ಒಂದು ವಿಚಿತ್ರ ತೀರ್ಮಾನ ಬಹುಕಾಲದಿಂದ ಬಂದಿದೆ. (ಪು. ೨೦). ಆದರೆ ಭಾರತದಲ್ಲಿ, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ, ಇಂಗ್ಲಿಷ್ ಶಿಕ್ಷಕರ ಕೈಯಲ್ಲಿ ಅವನು ಮಹಾನ್ ಎತ್ತರವನ್ನು ಏರಿದ ರೀತಿಗೆ ಕಾರಣವನ್ನು ಹುಡುಕಬೇಕೆಂದರೆ ವಸಾಹತುಶಾಹಿ ಇತಿಹಾಸದತ್ತ ಹೊರಳಿಕೊಳ್ಳಬೇಕು.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ನಲವತ್ತನೆಯ ಬರಹ


