ಇದು ವಾತ್ಸಲ್ಯದ ಒಸಗೆ: ಡಾ. ರಾಜಲಕ್ಷ್ಮಿ ಕೃತಿಯ ಕುರಿತು ಸುಧಾ ಆಡುಕಳ ಬರಹ
ಬೆರಳ ತುದಿಯಲ್ಲಿ ನೂರಾರು ಅರಿವಿನ ಹರಹುಗಳು ಹರಡಿಕೊಳ್ಳುವ ಕಾಲದಲ್ಲಿ ಇಂತಹ ಮಾಹಿತಿಗಳು ನಮಗೆ ಬೇಕೆ? ಎಂದು ಪ್ರಶ್ನಿಸಿಕೊಂಡರೆ ಎಂದಿಗಿಂತಲೂ ಇಂದು ಈ ರೀತಿಯ ಪುಸ್ತಕಗಳು ಹೆಚ್ಚು ಅವಶ್ಯಕ ಎನಿಸುವುದು. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲರೂ ಸ್ವಯಂ ವೈದ್ಯರಂತೆ ವರ್ತಿಸುತ್ತಿದ್ದಾರೆ. ಅಂತರ್ಜಾಲವೆಂಬ ಆಕಾಶದಲ್ಲಿ ತುಂಬಿರುವ ಮಾಹಿತಿಗಳಲ್ಲಿ ಸತ್ಯಕ್ಕಿಂತಲೂ ಸುಳ್ಳಿನ ವೈಭವೀಕರಣವೇ ಹೆಚ್ಚು ತುಂಬಿದೆ. ಅವುಗಳ ಮೊರೆಹೋಗಿ ತಪ್ಪು ಜಾಲಗಳಲ್ಲಿ ಇಂದಿನ ಕಿಶೋರಿಯರು ಸಿಲುಕಿರುವ ಎಷ್ಟೋ ಉದಾಹರಣೆಗಳು ನಮ್ಮ ಎದುರಿಗಿವೆ. ತಿಳಿದವರು, ತಿಳಿಯದವರಿಗೆ, ತಿಳಿಯುವಂತೆ ತಿಳಿಸಿದರೆ ಮಾತ್ರ ಅದು ‘ತಿಳುವಳಿಕೆ’ ಅನಿಸಿಕೊಳ್ಳುತ್ತದೆ.
ಡಾ. ರಾಜಲಕ್ಷ್ಮಿ ಬರೆದ “ವಾತ್ಸಲ್ಯದ ಒಸಗೆ” ಕೃತಿಯ ಕುರಿತು ಸುಧಾ ಆಡುಕಳ ಬರಹ
