ಭದ್ರಾ ದಂಡೆಯಲ್ಲಿ ತೇಜಸ್ವಿಯೊಂದಿಗೆ ಮೀನು ಹಿಡಿದಿದ್ದು…
ಹೀಗೆ ತೇಜಸ್ವಿ ಮನೆ ಕಟ್ಟುವಾಗ ಪ್ರೊಫೆಸರ್ ಬಂದಿದ್ದರು. ತೇಜಸ್ವಿ ಹಕ್ಕಿಗಳನ್ನು ವೀಕ್ಷಿಸಲು ಬೈನಾಕುಲರ್ ಇಟ್ಟುಕೊಂಡಿದ್ದರು. ಹೀಗೆ ಒಂದು ದಿನ ಕಾರಿನಲ್ಲಿ ಎಲ್ಲರೂ ಹೋಗುತ್ತಿದ್ದೆವು. ಪ್ರೊಫೆಸರ್ ಬೈನಾಕ್ಯೂಲರನ್ನು ತೇಜಸ್ವಿಯಿಂದ ಪಡೆದುಕೊಂಡು ಪಕ್ಷಿ ನೋಡುತ್ತೇನೆ ಎಂದು ಪಡೆದುಕೊಂಡರು. ಸಾಕಷ್ಟು ಏನೇನೋ ಮಾಡಿದರೂ ಹಕ್ಕಿಗಳು ಪ್ರೊಫೆಸರ್ಗೆ ಹತ್ತಿರದಿಂದ ಕಾಣಿಸಲಿಲ್ಲ. ಇದರಿಂದ ಬೇಸತ್ತ ಪ್ರೊಫೆಸರ್. ‘ಇದ್ರಲ್ಲಿ ಏನೂ ಕಾಣೋದೆ ಇಲ್ವಲ್ರಿ’ ಎಂದು ತೇಜಸ್ವಿ ಕೈಗೆ ಕೊಟ್ಟರು. ತೇಜಸ್ವಿ ತೆಗೆದುಕೊಂಡು ಒಮ್ಮ ಕಾರಿನಿಂದ ಆಚೆ ವೀಕ್ಷಿಸಿ ‘ರೀ ಪ್ರೊಫೆಸರ್ ನಿಮ್ಗೆ ತಿ.. ಕಡಿಯುತ್ತಾ..ʼ ಎಂದರು. ನನಗೋ ನಗು ತಡೆದುಕೊಳ್ಳಲಾಗಲಿಲ್ಲ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ

