Advertisement

Category: ಪುಸ್ತಕ ಸಂಪಿಗೆ

ಕೆ.ಟಿ. ಶಿವಪ್ರಸಾದ್ ಎಂಬ ಕಲಾವಿದನ ನೆನಪು….

ಖ್ಯಾತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ನೆನ್ನೆ ತೀರಿಕೊಂಡರು. ಅಂತರ್‌ರಾಷ್ಟ್ರೀಯ ಕಲಾವಿದರಾಗಿ ಗುರುತಿಸಿಕೊಂಡಿದ್ದ ಶಿವಪ್ರಸಾದರು, ತಮ್ಮ ಕಲೆ, ತೀರಾ ಹತ್ತಿರದ ಸ್ನೇಹಿತರೊಂದಿಗಿನ ಒಡನಾಟದ ಹೊರತು, ತಮ್ಮ ಬದುಕನ್ನು ಬದುಕಿದ ರೀತಿ ಬಹಳ ಭಿನ್ನವಾಗಿತ್ತು. ಪೂರ್ಣಚಂದ್ರ ತೇಜಸ್ವಿಯವರ ಆಪ್ತ ಒಡನಾಡಿಯೂ ಆಗಿದ್ದ ಇವರ ನೆನಪುಗಳನ್ನು, ಅವರ ಆಪ್ತ ನಾಗರಾಜ್‌ ಹೆತ್ತೂರು “ಶಿವ ಮೇಡ್‌ ಬೈ ತೇಜಸ್ವಿ” ಪುಸ್ತಕದ ಹೆಸರಿನಲ್ಲಿ ಪ್ರಕಟಿಸಿದ್ದರು. ಈ ಕೃತಿಯ ಆಯ್ದ ಭಾಗಗಳು ನಿಮ್ಮ ಓದಿಗೆ ಇಲ್ಲಿವೆ.

Read More

`ಕನ್ನಡದಲ್ಲಿ ಬರೆಯುವ ಮರಾಠಿ ಲೇಖಕ’: ಎಸ್.ಎಲ್.‌ ಭೈರಪ್ಪ ಓದುಗರ ಸ್ಪಂದನ ಕೃತಿಯ ಬರಹ

ಒಬ್ಬ ಲೇಖಕನ ಬರೆಹದಲ್ಲಿ ಮುರಿಯುವ ದಾಂಪತ್ಯವನ್ನು ಮತ್ತೆ ಬೆಸೆಯುವ ಶಕ್ತಿ ಇರುವುದನ್ನು ಕಂಡು ನಾನು ವಿಸ್ಮಿತನಾದೆ. ಮೈಸೂರಿನಲ್ಲಿರುವ ನನ್ನ ಪತ್ರಕರ್ತ ಗೆಳೆಯ ಗಣೇಶ ಅಮೀನಗಡ ಅವರಿಗೆ ಫೋನ್ ಮಾಡಿ ವಿಷಯ ವಿವರಿಸಿದೆ. ಅವರು ಭೈರಪ್ಪನವರನ್ನು ಕಂಡು ವಿಷಯ ತಿಳಿಸುವುದಾಗಿ ಹೇಳಿದರು. ನಂತರ ಉದ್ಯಮಿ, ಅವರ ಮಗಳು ಮತ್ತು ತಾಯಿ ಮೈಸೂರಿಗೆ ಹೋಗಿ ಭೈರಪ್ಪನವರನ್ನು ಭೇಟಿಯಾದರು. ಐದಾರು ತಿಂಗಳುಗಳ ನಂತರ ಉದ್ಯಮಿ ಯಾವುದೋ ಒಂದು ಕಾರ್ಯಕ್ರಮದಲ್ಲಿ ನನಗೆ ಭೇಟಿಯಾದರು. ಮಗಳ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿದೆಯೆಂದು ಅವರು ಹೇಳಿದರು. ಭೈರಪ್ಪನವರ ಮಾಂತ್ರಿಕ ಬರೆಹದ ಶಕ್ತಿಯ ಬಗ್ಗೆ ನನಗೆ ನಿಜವಾಗಿಯೂ ಅಚ್ಚರಿಯಾಯಿತು.
ಕೆ. ಸತ್ಯನಾರಾಯಣ ಸಂಪಾದಿತ “ಎಸ್.ಎಲ್.‌ ಭೈರಪ್ಪ ಓದು-ಓದುಗರು” ಕೃತಿಯ ಡಾ. ಸರಜೂ ಕಾಟ್ಕರ್ ಬರಹ ನಿಮ್ಮ ಓದಿಗೆ

Read More

“ಲಯ”ದ ಜಾಡು ಹಿಡಿದು: ಸುಭದ್ರಾ ಹೆಗಡೆ ಬರಹ

ಬದಲಾವಣೆಗೆ ಹೊಂದಿಕೊಳ್ಳುವ ಮನೋಭಾವ, ಕೆಡುಕಿನೆಡೆಗೆ ಸಾಗಬಾರದೆಂಬ ಕಳಕಳಿ, ಪರೋಪಕಾರ ಮನೋಭಾವ ಎಲ್ಲಾ ಪಾತ್ರಗಳಲ್ಲಿ ಅಡಕವಾಗಿರುವ ಮೂಲದ್ರವ್ಯ. ಹಾಗಾಗಿ ವಿದೇಶಿಯಳಾದರೂ ಸೋಫಿಯಾ ಮತ್ತವಳ ಮಗನನ್ನು ತಮ್ಮೊಳಗೆ ಒಬ್ಬನಂತೆ ಭಾವಿಸುತ್ತಾರೆ. ಗಂಗಾಳ ವಿಧವೆ ಮಗಳಿಗೊಂದು ಬದುಕು ಕಟ್ಟಿಕೊಡುವ ಹಿರಿಯಗುಣ ಇವರೆಲ್ಲರಲ್ಲಿ ಕಾಣಸಿಗುತ್ತದೆ. ಸಹಬಾಳ್ವೆ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬಲ್ಲದು ಎನ್ನುವುದೇ ಲಯದಲ್ಲಿ ಕಂಡುಬರುವ ಪ್ರಮುಖ ಅಂಶ. ವಿವಿಧ ರಂಗದಲ್ಲಿ ವಿಭಿನ್ನ ಬದುಕನ್ನು ಕಟ್ಟಿಕೊಂಡ ಉತ್ತಮ ವಿಚಾರಗಳ, ಸಂಸ್ಕಾರ, ಸಂಸ್ಕೃತಿಪ್ರಿಯರ ಸಮಾವೇಶವೇ ಈ ‘ಲಯ’ ಕಾದಂಬರಿಯಲ್ಲಿದೆ.
ಎಲ್.ಎಸ್.‌ ಶಾಸ್ತ್ರಿ ಅವರ “ಲಯ” ಕಾದಂಬರಿ ಕುರಿತು ಸುಭದ್ರಾ ಹೆಗಡೆ ಬರಹ

Read More

ಪ್ರಸ್ತುತ ಕಾಲಘಟ್ಟ ಮತ್ತು “ಬೆಂಕಿಯ ನೆರಳು”: ಎನ್.ಎಸ್. ಚಿದಂಬರರಾವ್ ಕಾದಂಬರಿಯ ಕುರಿತು ಸಿಂಧೂರಾವ್‌ ಟಿ. ಬರಹ

ಎಲ್ಲಾ ಕಾಲದಲ್ಲೂ ತಮ್ಮ ತಮ್ಮ ಪರಿಸ್ಥಿತಿಗಳಲ್ಲಿ ಸ್ವತಂತ್ರ ಆಲೋಚನೆ ಮತ್ತು ನಡವಳಿಕೆ ತೋರುವುದಕ್ಕೆ ಎಲ್ಲ ಯುವಜನಾಂಗವೂ ಆಶಿಸುತ್ತಲೆ ಇರುತ್ತದೆ. ಅದು ಸಹಜ ಮತ್ತು ಹಾಗೇ ಇರಬೇಕಾದ್ದು. ಕಾಲಕ್ಕೆ ತಕ್ಕಂತೆ ಅವರ ಅಭಿವ್ಯಕ್ತಿಗಳಿಗೆ ನಡವಳಿಕೆಗಳಿಗೆ ಕಡಿವಾಣಗಳು ಬಿಗಿಯಾಗಿ, ಸಡಿಲಾಗಿ, ಉದುರಿಹೋಗಿ ಎಲ್ಲಾ ಆಗಿದೆ. ಈ ಸ್ಥಿತ್ಯಂತರದ ಕಾಲವನ್ನು ಅವರು ಆತ್ಮವಿಶ್ವಾಸ, ಓದು, ಆರ್ಥಿಕ ಸ್ವಾತಂತ್ರ್ಯ ಇದ್ದಾಗ ಹೇಗೆ ನಿಭಾಯಿಸುತ್ತಾರೆ ಎಂಬುದು ಯಶಸ್ಸು ಅಥವಾ ದುರಂತದ ಪರಿಣಾಮವನ್ನು ತಂದಿಡುತ್ತದೆ. ಓದು ಬರಿದೆ ಡಿಗ್ರಿಗಳಾದಾಗ, ಕೆಲಸದ ಪದಕಗಳಾದಾಗ ಏನಾಗುತ್ತದೆ ಎಂಬ ಪರಿಣಾಮವನ್ನು ನೋಡುತ್ತಲೇ ಇದ್ದೇವೆ.
ದಿವಂಗತ ಎನ್.ಎಸ್. ಚಿದಂಬರರಾವ್ ಅವರ “ಬೆಂಕಿಯ ನೆರಳು” ಕಾದಂಬರಿಯನ್ನು ಪುಸ್ತಕ ಮನೆ ಪ್ರಕಾಶನ ಮರುಮುದ್ರಿಸಿದ್ದು, ಈ ಕೃತಿಯ ಕುರಿತು ಸಿಂಧುರಾವ್‌ ಟಿ. ಬರಹ ನಿಮ್ಮ ಓದಿಗೆ

Read More

ಉಪಾಸೊ: ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ

ಅತ್ತ ಶಡ್ಡುವಿನ ಪ್ರೇಮ ಭಂಗಪಡಿಸಲು ಮುಂದಾಗಲಾರದೆ ಇತ್ತ ಗಂಡ ಊರಿಗೆ ಬಹಿಷ್ಕಾರ ಹಾಕುವುದನ್ನು ನೋಡಲಾರದ ಸಂಕಟದಲ್ಲಿ ಜಾನಕೆ ನರಳುತ್ತಿದ್ದಳು. ಅವಳ ಸನಿಹ ನಿದ್ದೆ ಸುಳಿಯದು. ಹೊರಳಾಡಿ ಮಗ್ಗಲು ಬದಲಿಸಿದಳು. ನಿಟ್ಟುಸಿರುಬಿಟ್ಟಳು. ಶ್ವಾಸ ಎದೆಯೊಳಗೆ ಸಿಕ್ಕಿದಂತಾಗಿ ಎದ್ದು ಕೂತಳು. ಹೊಸ್ತಿಲ ಪಕ್ಕ ಉರಿಯುತ್ತಿದ್ದ ನಂದಾದೀಪದ ಮಂದ ಬೆಳಕಿನಲ್ಲಿ ಚಾಪೆಯ ಮೇಲೆ ಅಂಗಾತ ಮಲಗಿದ್ದ ಉಪಾಸೊ ಅಂಕಣ ದಿಟ್ಟಿಸುತ್ತಿದ್ದ. ಹಗಲಲ್ಲಿ ಹಗುರಾಗಿ ಕಾಣುತ್ತಿದ್ದ ಹಗರಣಗಳು ರಾತ್ರಿ ಕತ್ತಲಲ್ಲಿ ಕಾಮದಂತೆ ತೀವ್ರವಾಗಿ ಕಾಡುತ್ತಿದ್ದವು. ನಿದ್ದೆಯಿಲ್ಲದ ನಿಶ್ಯಬ್ದ ಏಕಾಂತದಲ್ಲಿ ನೆನಪುಗಳು ಕಿಕ್ಕಿರಿಯುತ್ತಿದ್ದವು.
ಶ್ರೀಧರ ಬಳಗಾರ ಕಾದಂಬರಿ “ಬಲಿಪಾದ”ದ ಆಯ್ದ ಭಾಗ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ