Advertisement

ಸಾಹಿತ್ಯ

ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ”

ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ”

ಯಕ್ಷಗಾನ ಬಿಟ್ಟು ಗಂಭೀರವಾಗಿ ಯಾವುದಾದರೂ ನೌಕರಿ ಸೇರಿಕೊಂಡು ದುಡಿಯಬೇಕು ಇದು ನಮ್ಮ ತಂದೆಯ ವರಾತ. ಯಕ್ಷಗಾನ ಕಲಾವಿದನಿಗೇನು ಸಮಾಜದಲ್ಲಿ ಗೌರವವಿಲ್ಲ. ಅಷ್ಟಾಗಿ ಈಗಿನ ಕಾಲದಲ್ಲಿ ಯಕ್ಷಗಾನದವನಿಗೆ ಯಾರು ಹೆಣ್ಣು ಕೊಟ್ಟಾರು. ರಾತ್ರಿಯಿಡೀ ನಿದ್ದೆ ಬಿಡುವುದು, ಹಗಲು ನಿದ್ದೆ ಮಾಡುವುದು ಗೂಬೆಯಂತೆ. ಇದೇನು ಅಂಥಹ ಪುರುಷಾರ್ಥ ಸಾಧನೆಯ ಹಾದಿಯಲ್ಲ. ಇವುಗಳೆಲ್ಲ ನನ್ನ ತಂದೆಯವರ ಹಳವಂಡ. ತಂದೆಯವರ ಈ ಧೋರಣೆಯು ನನಗೇನೂ ಪರಿಣಾಮ ಬೀರದು. ಯಾಕೆಂದರೆ ಅವರು ಯಾವುದನ್ನೂ ಗಂಭೀರವಾಗಿ ಸ್ವೀಕರಿಸಿದವರಲ್ಲ. ಮನಸ್ಸಿಗನಿಸಿದ್ದನ್ನು ಕಾರಿಕೊಂಡಾರು.
ರವಿಶಂಕರ್‌ ಎಸ್‌. ಎಲ್. ಮತ್ತು ಇಟಗಿ ಮಹಾಬಲೇಶ್ವರ ಭಟ್ಟ, ಜಂಟಿಯಾಗಿ ಬರೆದ ಕತೆ “ಮನ್ವಂತರ” ನಿಮ್ಮ ಈ ಭಾನುವಾರದ ಓದಿಗೆ

read more
ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ “ನೋಟ”

ಅವರಿಗೀಗಲೂ ಶಬ್ದ ಮಾಡುವವರಿಗಿಂತ, ಆ ಶಬ್ದವೇ ಆಪ್ತವಾಗಿತ್ತು. ಆದರೆ ಮೇಲಿನ ಮನೆಯ ಆ ಶಬ್ದ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಸಹಜ ಎನಿಸಿದೆಯೆಂದರೆ, ಸದ್ದಾಗುವುದೂ ತನಗೀಗ ತಿಳಿಯುತ್ತಿಲ್ಲ ಎನಿಸಿ ಸಾವಿತ್ರಮ್ಮನಿಗೆ ನಗುಬರುತ್ತಿತ್ತು. ಜೊತೆಗೆ, ತನಗೆ ಕಿವಿ ಇನ್ನಷ್ಟು ಮಂದವಾಗುತ್ತಿದೆಯೇ ಎನ್ನುವ ಅನುಮಾನವೂ ಬರುತ್ತಿತ್ತು. ದಿನವಿಡೀ ನಂಜಯ್ಯ ಮಾತಾಡುವುದು ಅಷ್ಟಕ್ಕಷ್ಟೇ. ಮನೆಗೆ ಬರುವವರು ಆಡುವ ಮಾತೂ ಹೆಚ್ಚೇನಿರುವುದಿಲ್ಲ. ಹಾಗಾಗಿ ಸದಾ ತನಗೆ ಜೊತೆಯಾಗುವುದೆಂದರೆ ಅದೊಂದು ಸದ್ದು ಮಾತ್ರ …
ಅಲಕಾ ಕಟ್ಟೆಮನೆ ಬರೆದ ಕತೆ “ನೋಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

read more
ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಸ್ಲಾ..ಟ್!”

ವಸಂತಕುಮಾರ್ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಸ್ಲಾ..ಟ್!”

ಹನ್ನೆರಡರ ಸುಮಾರಿಗೆ ಎಲ್ಲರೂ ಒಟ್ಟಾದರು. ಸೀನಪ್ಪ ಎಲ್ಲ ರೆಡಿ ಮಾಡಿಟ್ಟಿದ್ದ; ಇನ್ನೊಂದು ಅರ್ಧ ಗಂಟೆ ಒಳಗೆ ಎಲ್ಲಾ ಮುಗಿಸಿ ಬಿಡುವ ಸೂಚನೆ ಇತ್ತು. ಆಗ ಶುರುವಾಯಿತು ಏನೋ ಗಲಿಬಿಲಿ. ಸೀನಪ್ಪ ಬಂದ “ಸಾರ್ ನಾನು ಹೊರಗಿರುತ್ತೇನೆ ನಾನಾಗಲೇ ತೋರಿಸಿದ್ದೆನಲ್ಲ ಕೌಂಟರ್ ಎರಡರಲ್ಲಿ ದೇವರಾಜ ಅನ್ನುವವರನ್ನ, ಅವರೆಲ್ಲ ಮಾಡಿಕೊಡುತ್ತಾರೆ” ಎಂದ. ಬಾಯಿಗೆ ಕೈ ಅಡ್ಡ ಇಟ್ಟು “ಲೋಕಾಯುಕ್ತರು ಬಂದಿದ್ದಾರೆ ಹಾಗಾಗಿ ಸ್ವಲ್ಪ ತಡ ಆಗಬಹುದು, ಒಂದು ಮೂತ್ತರಿಂದ ಎರಡೂ ಮೂವತ್ತು ಊಟದ ಸಮಯ. ಅದು ಕೂಡ ಸ್ವಲ್ಪ ಹಿಂದೆ ಮುಂದೆ ಆಗಬಹುದು.”
ವಸಂತಕುಮಾರ್ ಕಲ್ಯಾಣಿ ಬರೆದ ಕತೆ “ಸ್ಲಾ..ಟ್!” ನಿಮ್ಮ ಈ ಭಾನುವಾರದ ಓದಿಗೆ

read more
ಕತೆಗಾರ ಕೆ. ಸತ್ಯನಾರಾಯಣ ಹೊಸ ಕಥಾ ಸರಣಿ “ರೂಪಕಗಳಿಗೆ ಕೊರತೆಯಿಲ್ಲ” ಇಂದಿನಿಂದ

ಕತೆಗಾರ ಕೆ. ಸತ್ಯನಾರಾಯಣ ಹೊಸ ಕಥಾ ಸರಣಿ “ರೂಪಕಗಳಿಗೆ ಕೊರತೆಯಿಲ್ಲ” ಇಂದಿನಿಂದ

ಮದುವೆ ಗೊತ್ತಾಗುವ ಮುನ್ನ ಶಿವರಾಂ ಒಂದು ಚಿತ್ರ ನಿರ್ಮಿಸಿದ್ದರು. ನೆಮ್ಮದಿ, ಸಂತೋಷ ತುಂಬಿದ ಒಂದು ಕಂಟ್ರಾಕ್ಟರ್‌ ಸಂಸಾರದ ಕತೆ ಅದು. ಸಂಸಾರದ ಯಜಮಾನ ಡ್ಯಾಂ ಸೈಟ್‌ನಲ್ಲಿ ಆದ ಅಪಘಾತದಿಂದಾಗಿ ಮಧ್ಯ ವಯಸ್ಸಿನಲ್ಲೇ ತೀರಿಕೊಂಡಾಗ, ನಾಯಕಿಯಾಗಿದ್ದ ಜಯಮ್ಮ ದುಃಖ ತೋರಿಸಿದ ರೀತಿ, ನಂತರ ಸಂಸಾರ ಕಟ್ಟಿದ ರೀತಿ, ಎಲ್ಲರನ್ನೂ ಮೂಕರನ್ನಾಗಿಸಿತ್ತು. ಜೀವನದಲ್ಲಿ ಇದ್ದರೆ ಇಂತಹ ಹೆಂಡತಿ ಇರಬೇಕು ಅಂತ ಬಯಸಿ, ಬೇಡಿ, ಪ್ರಚಾರ ನೀಡಿ, ಮದುವೆ ಮಾಡಿಕೊಂಡಿದ್ದರು.
ಕತೆಗಾರ ಕೆ. ಸತ್ಯನಾರಾಯಣ ಹೊಸ ಕಥಾ ಸರಣಿ “ರೂಪಕಗಳಿಗೆ ಕೊರತೆಯಿಲ್ಲ”, ಇಂದಿನಿಂದ, ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

read more
ಸಿಡ್ನಿ ಶ್ರೀನಿವಾಸ್ ಬರೆದ ಈ ಭಾನುವಾರದ ಕತೆ “ನನ್ನ ಸರದ ಕತೆ”

ಸಿಡ್ನಿ ಶ್ರೀನಿವಾಸ್ ಬರೆದ ಈ ಭಾನುವಾರದ ಕತೆ “ನನ್ನ ಸರದ ಕತೆ”

“ನನ್ನ ಸೊಸೆ ಆರತಿ ಸಿಂಗಪೂರಿನಿಂದ ತಂದುಕೊಟ್ಟಳು” ಎಂದು ನನ್ನನ್ನು ಹೊಗಳಿದರು. ನಾನು ಬಿಕೋ ಎನ್ನುವ ನನ್ನ ಮದುವೆಯ ಹಳೆಯ ಸರವನ್ನೇ ತೊಟ್ಟಿದ್ದೆ. ನನ್ನ ಅಕ್ಕ ತಂಗಿಯರು ನಮ್ಮ ಅತ್ತೆಯನ್ನು ಮನಸಾರೆ ಬೈದುಕೊಂಡರು. ನನ್ನ ಅಮ್ಮ ಆಕೆಯನ್ನು ಶಪಿಸಿದರು – ಈ ಮುದುಕಿಗೆ ಏನುಬಂತು!
ಸಿಡ್ನಿ ಶ್ರೀನಿವಾಸ್ ಬರೆದ ಕತೆ “ನನ್ನ ಸರದ ಕತೆ” ನಿಮ್ಮ ಈ ಭಾನುವಾರದ ಓದಿಗೆ

read more
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….”

ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….”

ಮೈಲಾರಿಗೆ ಗೆಳೆಯನ ಅಪಾರ್ಥಕ್ಕಿಂತ, ಕಣ್ಮುಂದಿನ ಸಾವಿಗಿಂತ ಹೆಂಡತಿ ಪ್ರತಿಭಟಿಸದೇ ದೂರ ನಿಂತಿದ್ದು ಜೀರ್ಣಿಸಿಕೊಳ್ಳಲಾಗಲಿಲ್ಲ. ಕೈ ಮುಗಿಯುವಂತೆ ಕಣ್ಣಲ್ಲಿ ನೀರು ತಂದು ನಾನೇನೂ ತಪ್ ಮಾಡಿಲ್ಲ ಅನ್ನುವಂತೆ ಆಚೀಚೆ ಕತ್ತು ಆಡಿಸುತ್ತಾ ಒದ್ದಾಡುತ್ತಿದ್ದ. ಕೈಯ ಬಿಗಿತ ಜೋರಾದಂತೆ ಮೈಲಾರಿ ಕಣ್ಣು ಮ್ಯಾಲೆ ಕೆಳಗೆ ಮಾಡ್ತಿದ್ದ. ಗಂಟಲಲ್ಲಿ ಸರ್ ಸರ್ ಅನ್ನೋ ಸದ್ದು ಬಂದು ಒಂದೇ ಸಾರಿ ಶಬ್ಧ ನಿಶಬ್ಧವಾಯಿತು.
ಸಂತೆಬೆನ್ನೂರು ಫೈಜ್ನಟ್ರಾಜ್ ಬರೆದ ಈ ಭಾನುವಾರದ ಕತೆ “ಹರಿವ ಹೊಳೆಯ ಜೊತೆಯಲ್ಲಿ….” ನಿಮ್ಮ ಓದಿಗೆ

read more
ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು”

ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು”

ಅವರು ಹೇಳಿದ ದ್ವೀಪವಾಸಿ ಮುತ್ತುಕೋಯಾನ ಕಥೆಯನ್ನು ಕೇಳಿದರೆ ಏಕಕಾಲದಲ್ಲಿ ನಗುವೂ ವಿಷಾದವೂ ಖೇದವೂ ನಗುವೂ, ವಿಷಾದವೂ, ಖೇದವೂ, ವೈರಾಗ್ಯವೂ ಉಂಟಾಗುವ ಹಾಗೆ ಇತ್ತು. ಮುಕ್ತಿಯಾರರು ಹೇಳಿದ ಹಾಗೆ ಮುತ್ತುಕೋಯಾರಿಗೆ ಸುಮಾರು ಎಂಬತ್ತರ ಆಸುಪಾಸು ವಯಸ್ಸು ಇರಬಹುದು.
ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು” ನಿಮ್ಮ ಓದಿಗೆ

read more
ಶಿವಕುಮಾರ ಚನ್ನಪ್ಪನವರ್‌ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್”

ಶಿವಕುಮಾರ ಚನ್ನಪ್ಪನವರ್‌ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್”

ನಿನ್ನೆ ಜಗಳವಾದ ಮೇಲೂ ರಾಘವ ಹೇಳಿದಂತೆ ಕೇಳಬೇಕಿತ್ತು. ನೀನು ಸುಮ್ಮನಿದ್ದಿದ್ದರೆ ಮುಗಿಯುತ್ತಿತ್ತು. ಎಂಬವನ ಮಾತು ಸರಿಯಾಗಿತ್ತು. ಮಾತಿನ ಬರದಲ್ಲಾದ ತಪ್ಪಿಗೆ ಇವತ್ತು ಮ್ಯಾನೇಜ್‌ಮೆಂಟ್‌ನಲ್ಲಿ ತಾನು ಅಪರಾಧಿಯ ಸ್ಥಾನದಲ್ಲಿದ್ದೇನೆ. ಅವಳು ನನ್ನ ಭಾಷೆಯ ಬಗ್ಗೆ ಹಾಗೆ ಮಾತಾಡಿದ್ದು ತನಗೆ ಹಿಡಿಸಲಿಲ್ಲ, ಅಲ್ಲದೇ ಅದು ಸರ್ಕಾರದ ಪ್ರಾಜೆಕ್ಟ್ ಮತ್ತು ಈ ಪ್ರಾಜೆಕ್ಟಿನ ಎಲ್ಲ ಕಡತಗಳನ್ನು ಸರ್ಕಾರ ಕನ್ನಡದಲ್ಲೇ ಮಂಡಿಸುವುದು. ಇಂಥ ಸ್ಟೇಟ್ ಕನ್ನಡ ಪ್ರಾಜೆಕ್ಟ್‌ನಲ್ಲಿ ಇದ್ದುಕೊಂಡೇ ಹೀಗೇ ಮಾತಾಡುವವರು ಇನ್ನೂ ಎಂ.ಎನ್.ಸಿ. ಕಂಪನಿಯಲ್ಲಿದ್ದರೆ ಕನ್ನಡವನ್ನು ಸಾಯಿಸಿಯೇ ಬಿಡುತ್ತಾರೆ, ಭಾಷೆ ವಿಚಾರದಲ್ಲಿ ನಾನು ಮಾಡಿದ್ದೆ ಸರಿ ಎನಿಸಿತವಗೆ.
ಶಿವಕುಮಾರ ಚನ್ನಪ್ಪನವರ್‌ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್”

read more
ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಭಾಷಣ

ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಅಬ್ದುಲ್ ರಶೀದ್ ಭಾಷಣ

ಇವತ್ತು ಇಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಈ ಬಿರುಬಿಸಿಲ ಹೊತ್ತು ಅವರು ಯಾರೂ ಇಲ್ಲಿ ಇಲ್ಲ. ಆದರೆ ಅವರ ಹಾಗಿರುವ ಹಲವು ಹಾಡುಗಾರರೂ ಇಲ್ಲೇ ಅಕ್ಕಪಕ್ಕ ತೋಟದಲ್ಲಿ ಕೆಲಸ ಮಾಡುತ್ತಿರಬಹುದು. ಅಥವಾ ಅವರ ಜಾಗವನ್ನು ಅಸ್ಸಾಮಿನಿಂದ ಬಂಗಾಳದಿಂದ ಬಂದ ಕೆಲಸಗಾರರು ವಹಿಸಿಕೊಂಡಿರಬಹುದು. ಅವರಲ್ಲೂ ಇಂತಹ ಕಥೆಗಾರರಿರಬಹುದು. ಸುಮಾರು ಐವತ್ತು ವರ್ಷಗಳ ಹಿಂದೆ ಅಸ್ಸಾಮಿನಿಂದ ಜೇನುಪೆಟ್ಟಿಗೆಗಳನ್ನು ಇಡಲು ದಾಸ್ ಎಂಬ ಯುವಕ ಬಂದಿದ್ದ. ಅವನೂ ಆಗ ಬಾಲಕನಾಗಿದ್ದ ನನಗೆ ಕಥೆಗಳನ್ನು ಹೇಳುತ್ತಿದ್ದ. ಈಗ ಬಹುಶಃ ಆತ ಎಲ್ಲಿರಬಹುದೋ ಗೊತ್ತಿಲ್ಲ. ಆದರೆ ಆತ ನನ್ನ ಕಥಾ ಪಾತ್ರವಾದ.
ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ನಡೆದ “ಕೊಡಗು ಜಿಲ್ಲಾ ಹದಿನೇಳನೆಯ ಕನ್ನಡ ಸಾಹಿತ್ಯ ಸಮ್ಮೇಳನ”ನ ಅಧ್ಯಕ್ಷರಾದ ಅಬ್ದುಲ್ ರಶೀದ್ ಭಾಷಣ ನಿಮ್ಮ ಓದಿಗೆ

read more

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ