ಕನ್ನಡ ವಿಜ್ಞಾನ ಸಂವಹನಕ್ಕೆ ಡಾ. ಕೆ. ಶಿವರಾಮ ಕಾರಂತರ ಕೊಡುಗೆ: ಎಲ್. ಜಿ. ಮೀರಾ ಅಂಕಣ
ಇಂತಹ ವಿಚಾರ ಮನಸ್ಸಿಗೆ ಬಂದ ಮೇಲೆ ಕಾರಂತರು ಸುಮ್ಮನೆ ಕೂರುವ ಜಾಯಮಾನದವರಲ್ಲ. ಮಕ್ಕಳಿಗೆ ತಮ್ಮ ಜಿಲ್ಲೆಯಾದ ದಕ್ಷಿಣಕನ್ನಡದ ಪರಿಚಯವನ್ನು ಸ್ವಾರಸ್ಯಕರವಾಗಿ ಮತ್ತು ಚಿತ್ರಸಹಿತವಾಗಿ ಮಾಡಿಕೊಡುವ `ಚಿತ್ರಮಯ ದಕ್ಷಿಣಕನ್ನಡ’ ಕೃತಿಯನ್ನು ರಚಿಸಿಯೇಬಿಟ್ಟರು. ಇದಕ್ಕಾಗಿ ಜಿಲ್ಲೆಯ ತುಂಬ ಓಡಾಡಿ ಅನೇಕ ಛಾಯಾಚಿತ್ರಗಳನ್ನು ತೆಗೆದರು, ಚಿತ್ರಗಳನ್ನು ಸ್ವತಃ ಬರೆದರು! ಮುಂದೆ ಮಕ್ಕಳಿಗಾಗಿ ಮತ್ತು ಆಸಕ್ತ ದೊಡ್ಡವರಿಗಾಗಿ `ದಕ್ಷಿಣ ಹಿಂದೂಸ್ಥಾನ’ ಕೃತಿಯನ್ನು ಹಾಗೂ `ಬಾಲಪ್ರಪಂಚ’, `ವಿಜ್ಞಾನ ಪ್ರಪಂಚ’ ಎಂಬ ವಿಶ್ವಕೋಶಗಳನ್ನು ರಚಿಸಿದರು.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ನಲವತ್ತೈದನೆಯ ಬರಹ
