Advertisement

ನಾರಾಯಣ ಯಾಜಿ

ಅರ್ಥಗಾರಿಕೆಯ ಆಂತರ್ಯ ಮತ್ತು “ಮಾತು ಮದ್ದಳೆ”: ನಾರಾಯಣ ಯಾಜಿ ಬರಹ

ಯಕ್ಷಗಾನದಲ್ಲಿ ಭೀಷ್ಮ ವಿಜಯ, ವಾಲಿವಧೆ, ಕೃಷ್ಣ ಸಂಧಾನ ಇವೆಲ್ಲವೂ ವಾದಕೇದ್ರಿತವಾಗಿ, ರಸವೆನ್ನುವುದನ್ನು ಹುಡುಕಬೇಕಾಗಿದೆ. ವಾಲಿ ಸುಗ್ರೀವ ಎದುರಾದಾಗ “ಮತ್ತು ಮತ್ತೆನ್ನೆಡೊನೆ ನಿತ್ತುಕೊಂಡೀರಣದಿ ಉತ್ತರವ ಕೊಡುವೆ” ಎನ್ನುವ ಭರದಲ್ಲಿ ಉದ್ದುದ್ದು ಮಾತನಾಡುವ ಪ್ರವೃತ್ತಿಯನ್ನು ನಿರಾಕರಿಸುವಾಗ ಗ ನಾ ಭಟ್ಟರಿಗೆ ವರ್ತಮಾನದ ತಾಳಮದ್ದಳೆಯ ಅಪಸವ್ಯಗಳು ಎದುರಾಗಿವೆ. ವೀರ ರಸದ ಭಾಗದಲ್ಲಿ ಮಾತು ಕಡಿಮೆ ಆಡಬೇಕೆನ್ನುವ ಔಚಿತ್ಯಪ್ರಜ್ಞೆಯನ್ನು ಅವರು ವಿವರಿಸುತ್ತಾರೆ. ರಾಮ ಧರ್ಮಸೂಕ್ಷ್ಮವನ್ನು ವಿವರಿಸಬೇಕೆ ಹೊರತೂ ತರ್ಕದ ಹಾದಿ ಹಿಡಿಯ ಬಾರದು. ಜೊತೆಗೆ ಪಾರ್ತಿಸುಬ್ಬ ವಾಲಿಯನ್ನು ಉದಾತೀಕರಣಕೊಳಿಸಿರುವುದನ್ನು ಕಟುವಾಗಿ ಟೀಕಿಸುತ್ತಾರೆ. ಇದು ಓರ್ವ ವಿಮರ್ಶಕನಿರಬೇಕಾದ ನಿಲುವು.
ಗ.ನಾ. ಭಟ್ಟ ಬರೆದ “ಮಾತು ಮದ್ದಳೆ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ಅಮಾಯಕ ಸ್ತ್ರೀಯರ  ಬದುಕಿಗೆ “ಗ್ಲಾನಿ” ಯಾಗುವ ಗಂಡಸರು: ನಾರಾಯಣ ಯಾಜಿ ಬರಹ

ಬದುಕು ಎಂದರೆ ಎಲ್ಲರಿಗೂ ಒಂದೇ ರೀತಿಯ ಪಯಣವಲ್ಲ. ಕೆಲವರಿಗೆ ಅದು ಸಾಧನೆಯ ಮಾರ್ಗವಾಗಬಹುದು; ಕೆಲವರಿಗೆ ಅದು ಸಹನೆಯ ಪರೀಕ್ಷೆಯಾಗಬಹುದು. ‘ಗ್ಲಾನಿ’ಯ ಮಹಾಲಕ್ಷ್ಮಿ ಮತ್ತು ಅಂಬಾಬಾಯಿ ಈ ಸಹನೆಯ ಪ್ರತಿಮೆಗಳು. ಶಿವು ಆ ಸಹನೆಯ ಸಾಕ್ಷಿ. ಅವರ ಬದುಕಿನಲ್ಲಿ ಜಯವಿಲ್ಲದಿದ್ದರೂ, ಒಂದು ಗಂಭೀರವಾದ ಅರ್ಥವಿದೆ. ಆ ಅರ್ಥವೇ ಈ ಕಾದಂಬರಿಯ ಜೀವಾಳ.
ಅರುಣಕುಮಾರ ಹಬ್ಬು ಕಾದಂಬರಿ “ಗ್ಲಾನಿ” ಕುರಿತು ನಾರಾಯಣ ಯಾಜಿ ಬರಹ

Read More

ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ

ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು. ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು ಈ ರೀತಿಯ ಬರಹದಿಂದ ಸಾಧ್ಯ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ನೇತಾಜಿ ಸುಭಾಷರ ಲೋಕದಲ್ಲಿ ನಮ್ಮದೊಂದು ಹೆಜ್ಜೆ: ನಾರಾಯಣ ಯಾಜಿ ಬರಹ

ರಾಮಾಯಣವನ್ನು ಹೊಸ ಇತಿಹಾಸದೊಂದಿಗೆ ನೇತಾಜಿ ಸುಭಾಶ್‌ಚಂದ್ರ ಬೋಸ್ ಅವರು ಇಂಗ್ಲೀಷಿನಲ್ಲಿ ಬರೆದ ಆತ್ಮಕಥೆಯನ್ನು “ಭಾರತೀಯ ಹೋರಾಟ” ಎನ್ನುವ ಹೆಸರಿನಲ್ಲಿ ಹೊರತಂದಿದ್ದಾರೆ. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ನೆಹರೂ, ಗಾಂಧಿ ಒಂದು ಕಡೆ, ಅದಕ್ಕೆ ಪ್ರತಿಯಾಗಿ ನೇತಾಜಿ ಸುಭಾಶ್ ಬಾಬು ಎನ್ನುವ ಸುದ್ದಿ ಯಾವತ್ತಿನಿಂದಲೂ ಕೇಳುತ್ತಲೇ ಇದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ 1915 ರಿಂದ 1921ರ ತನಕ ಮಹತ್ವದ ತಿರುವು ಕಂಡ ದಿನಗಳು.
ಪ್ರೊ. ಕೆ.ಇ. ರಾಧಾಕೃಷ್ಣ ಅನುವಾದಿಸಿರುವ ಸುಭಾಶ್‌ಚಂದ್ರ ಬೋಸರ ಕೃತಿ “ಭಾರತೀಯ ಹೋರಾಟ”ದ ಕುರಿತು ನಾರಾಯಣ ಯಾಜಿ ಬರಹ, ನಿಮ್ಮ ಓದಿಗೆ

Read More

ಮೌನ ಮಾತಾಡಿದಾಗ ಹೊತ್ತಾಗಿತ್ತು: “ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ

ಇದ್ದಕ್ಕಿದ್ದಂತೆ ರಾಮಕೃಷ್ಣ ನನ್ನನ್ನು ಹುಡುಕಿಕೊಂಡು ಬಂದ, ಅಳುತ್ತಿದ್ದ, ಏನಾಯ್ತು ಎಂದರೆ “ಸುಮಾಳ ಮದುವೆ ಫಿಕ್ಸ್ ಆಯಿತು.. ಹುಡುಗ ದೆಹಲಿಯಲ್ಲಿದ್ದಾನೆ. ಸಿಕ್ಕಾಪಟ್ಟೆ ದೊಡ್ಡ ಉದ್ಯೋಗವಂತೆ” ಎಂದವನೇ “ನನ್ನನ್ನು ಕ್ಷಮಿಸು, ನಿನಗೂ ಅನ್ಯಾಯ ಮಾಡಿದೆ. ನಿನಗೆ ಅಶ್ವಿನಿಯ ಮೇಲೆ ಮನಸ್ಸಾದರೆ ಸುಮಾ ನನ್ನನ್ನು ಒಲಿಯಬಹುದು ಅಂದುಕೊಂಡೆ” ಎಂದವನೇ ಅಪ್ಪಿ ಅಳತೊಡಗಿದ. ನಾನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಮದುವೆಗೆ ಆಮಂತ್ರಣವೂ ಬರಲಿಲ್ಲ. ಮುಕೇಶ್‌ ನೆನಪಾದ. ಹಾಡಬೇಕೆಂದರೆ ಕೇಳುವವರು ಯಾರು ಎಂದೆನಿಸಿತು.
“ದಡ ಸೇರದ ದೋಣಿ” ಸರಣಿಯಲ್ಲಿ ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ