ಅರ್ಥಗಾರಿಕೆಯ ಆಂತರ್ಯ ಮತ್ತು “ಮಾತು ಮದ್ದಳೆ”: ನಾರಾಯಣ ಯಾಜಿ ಬರಹ
ಯಕ್ಷಗಾನದಲ್ಲಿ ಭೀಷ್ಮ ವಿಜಯ, ವಾಲಿವಧೆ, ಕೃಷ್ಣ ಸಂಧಾನ ಇವೆಲ್ಲವೂ ವಾದಕೇದ್ರಿತವಾಗಿ, ರಸವೆನ್ನುವುದನ್ನು ಹುಡುಕಬೇಕಾಗಿದೆ. ವಾಲಿ ಸುಗ್ರೀವ ಎದುರಾದಾಗ “ಮತ್ತು ಮತ್ತೆನ್ನೆಡೊನೆ ನಿತ್ತುಕೊಂಡೀರಣದಿ ಉತ್ತರವ ಕೊಡುವೆ” ಎನ್ನುವ ಭರದಲ್ಲಿ ಉದ್ದುದ್ದು ಮಾತನಾಡುವ ಪ್ರವೃತ್ತಿಯನ್ನು ನಿರಾಕರಿಸುವಾಗ ಗ ನಾ ಭಟ್ಟರಿಗೆ ವರ್ತಮಾನದ ತಾಳಮದ್ದಳೆಯ ಅಪಸವ್ಯಗಳು ಎದುರಾಗಿವೆ. ವೀರ ರಸದ ಭಾಗದಲ್ಲಿ ಮಾತು ಕಡಿಮೆ ಆಡಬೇಕೆನ್ನುವ ಔಚಿತ್ಯಪ್ರಜ್ಞೆಯನ್ನು ಅವರು ವಿವರಿಸುತ್ತಾರೆ. ರಾಮ ಧರ್ಮಸೂಕ್ಷ್ಮವನ್ನು ವಿವರಿಸಬೇಕೆ ಹೊರತೂ ತರ್ಕದ ಹಾದಿ ಹಿಡಿಯ ಬಾರದು. ಜೊತೆಗೆ ಪಾರ್ತಿಸುಬ್ಬ ವಾಲಿಯನ್ನು ಉದಾತೀಕರಣಕೊಳಿಸಿರುವುದನ್ನು ಕಟುವಾಗಿ ಟೀಕಿಸುತ್ತಾರೆ. ಇದು ಓರ್ವ ವಿಮರ್ಶಕನಿರಬೇಕಾದ ನಿಲುವು.
ಗ.ನಾ. ಭಟ್ಟ ಬರೆದ “ಮಾತು ಮದ್ದಳೆ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

