Advertisement
ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ದೇವರಾಜ್ ಹುಣಸಿಕಟ್ಟಿ ಬರೆದ ಈ ದಿನದ ಕವಿತೆ

ಪಾದಗಳ ನಂಬಿರಯ್ಯ…..

ಪಾದಗಳ ನಂಬಿರಯ್ಯ…

ರೆಕ್ಕೆ ಇದ್ದ ಹಕ್ಕಿಗಳು
ಹೀಗೆ ಹೇಳುತ್ತವೆ…
ಎಷ್ಟು ಎತ್ತರ ಹಾರಿ
ಅದೆಷ್ಟು ಸಮುದ್ರ ಲಂಘಿಸಿ..
ತಳ ಊರುವಾಗ
ಪಾದಗಳದ್ದೇ ಜರೂರು…

ಪಾದಗಳ ನಂಬಿರಯ್ಯ…

ಮೂರೇ ಮೂರು
ಪಾದದಳತೆಯಲಿ..
ಪ್ರಾಣ ಸಮೇತ ಕೈ ಚೆಲ್ಲಿದ
ಬಲಿ ಚಕ್ರವರ್ತಿಯನೊಮ್ಮೆ ಕೇಳಿ ನೋಡಿ..
ಯಕಃಶ್ಚಿತ ಪಾದಗಳೆಂದವನಿಗೆ….
ಪಾಪ ಎನ್ನದಿದ್ದರೆ ಕೇಳಿ…

ಪಾದಗಳ ನಂಬಿರಯ್ಯ…

ಪಾದಗಳು ಬಣ್ಣ ಬದಲಿಸಲಾರವು..
ಕಣ್ಣು ಕಳೆದುಕೊಳ್ಳಲಾರವು….
ರಾಮನ ಪಾದ ಸ್ಪರ್ಶದಿಂದಲೇ
ಜೀವ ಪಡೆದ ಅಹಲ್ಯೆ ಕೂಡ ನಕ್ಕೆ ಹೇಳುತ್ತಾಳೆ…

ಪಾದಗಳ ನಂಬಿರಯ್ಯ

ಎನ್ನುವಾಗಲೇ ನೀವೇ
ಮುತ್ತಿಟ್ಟ ಪಾದಗಳು ಬೆಳೆದು
ಎದೆಗೆ ಒದೆಯುವಾಗ
ಪಾದಗಳ ವಿಚಿತ್ರವನು
ನಂಬಿರಯ್ಯ….

ದೇವರಾಜ್‌ ಹುಣಸಿಕಟ್ಟಿ ರಾಣೇಬೆನ್ನೂರಿನವರು
ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಬಿಡಿ ಚಿತ್ರಗಳು ಮತ್ತು ಇತರ ಕವಿತೆಗಳು ಇವರ ಪ್ರಕಟಿತ ಕೃತಿ
ಕವಿತೆಯ ಓದು, ಬರೆಯುವುದು ಇವರ ಹವ್ಯಾಸ

 

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ