ಕಷ್ಟ ಸುಖದವರು ಬೇಕು: ಕೆ. ಸತ್ಯನಾರಾಯಣ ಕಥಾ ಸರಣಿ
ಇಲ್ಲಿ ಬಿಡಿಸಿ ಹೇಳುವುದು ಏನಿದೆ? ಅಥವಾ ಇದನ್ನೂ ಕೂಡ ಬಿಡಿಸಿ ಹೇಳಬೇಕಾಗಿ ಬಂದಿರುವುದು ನಮ್ಮ ಸಮಸ್ಯೆ ಇರಬಹುದು. ಜಗತ್ತಿನಲ್ಲಿ ಎಲ್ಲರೂ ಎಲ್ಲದರ ಬಗ್ಗೆ ಮಾತನಾಡಬಹುದು, ಮಾತನಾಡುತ್ತಾರೆ. ಯುದ್ಧ, ಕ್ಷಾಮ, ಭಕ್ತಿ, ದೇವರು, ಶಿಕ್ಷಣ ನೀತಿ, ಬಾಹ್ಯಾಕಾಶ, ಕಾಡ್ಗಿಚ್ಚು, ಕ್ರಿಕೆಟ್ ಸ್ಕೋರ್. ಆದರೆ ಅವರ ದಿನನಿತ್ಯದ ಕಷ್ಟ ಸುಖ ಇರುತ್ತಲ್ಲ, ಅದನ್ನು ಹೇಳಿಕೋಬೇಕು. ಅದನ್ನು ಇನ್ನೊಬ್ಬರು ಹೇಳುವಾಗ ಕೇಳಿಸಿಕೊಳ್ಳಬೇಕು. ಇನ್ನೊಬ್ಬರಿಂದ ಇದನ್ನೆಲ್ಲ ಹೇಳಿಸುವ, ಹೊರಡಿಸುವ ಕಲೆ ಗೊತ್ತಿರಬೇಕು. ಈಗ ಅಂತಹವರು ಇಲ್ಲವೇ ಇಲ್ಲ.
ಕೆ. ಸತ್ಯನಾರಾಯಣ ಬರೆಯುವ ಕಥಾಸರಣಿ “ರೂಪಕಗಳಿಗೆ ಕೊರತೆಯಿಲ್ಲ”

