Advertisement

ಎಸ್. ಗಂಗಾಧರಯ್ಯ

ಹೆಣ್ಣು ನೋಡಲೆಂದು ಬಂದವರು!: ಸುಕನ್ಯಾ ಕನಾರಳ್ಳಿ ಅಂಕಣ

ಅದೂ ಸರಿಯೇ. ಅಂತಾರಾಷ್ಟ್ರೀಯ ಕರೆ ದುಬಾರಿ ತಾನೇ? ಟಿಪಿಕಲ್ ಅಮೆರಿಕನ್ ಎಂದು ಗೊಣಗಿಕೊಂಡು ನಾನು ಸುಮ್ಮನಾದರೂ ಮನೆಯಲ್ಲಿ ರಂಪವಾಗುವುದೇನೂ ತಪ್ಪಲಿಲ್ಲ. ‘ಅಲ್ಲಿಂದಾ ಫೋನ್ ಮಾಡಿದವನ ಹತ್ತಿರ ಒಳ್ಳೆಯ ಮಾತಾಡೋದು ಬಿಟ್ಟು, ನಾನು ಕರಮಿ, ನಾನು ಕುಳ್ಳಿ, ನಾನು ಡುಮ್ಮಿ ಅಂತ ಹೇಳಿಕೊಳ್ತಾಳಲ್ಲ ನಿನ್ನ ಮಗಳು, ಏನನ್ನಬೇಕು ಇದಕ್ಕೆ?’ ಎಂದು ಚಂದ್ರಣ್ಣ ತಲೆ ಮೇಲೆ ಕೈಹೊತ್ತುಕೊಂಡಿದ್ದರು. ‘ಅಲ್ಲಿಂದಾ ಫೋನ್ ಮಾಡಿದವನ ಪ್ರಶ್ನೆ ಅಷ್ಟು ಸ್ಪಷ್ಟವಾಗಿದ್ದರೆ ಇಲ್ಲಿಂದಾ ಮಾತಾಡುವ ನನ್ನ ಉತ್ತರ ಸಹ ಸ್ಪಷ್ಟವಾಗಿರಬೇಕು ತಾನೇ?’ ಎಂದು ವಿಶಾಲಮ್ಮನ ಹತ್ತಿರ ನಾನು ಬೇತುಕೊಂಡಿದ್ದೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಕಾಸರವಳ್ಳಿ, ಕಾಯ್ಕಿಣಿ ಮತ್ತು ಟ್ರಾಫಿಕ್!: ಸುಕನ್ಯಾ ಕನಾರಳ್ಳಿ ಅಂಕಣ

ನಮ್ಮ ಅಪಾರ್ಟ್ಮೆಂಟಿನ ತನಕವೂ ಇದ್ದ ಪೊಲೀಸರನ್ನು ಕಂಡಾಗ ಮಾತ್ರ ಇದು ಜಯಂತ ಎಫೆಕ್ಟ್ ಅಲ್ಲ ಅಂತ ಅರಿವಾಗಿತ್ತು. ಸೆಕ್ಯೂರಿಟಿ ಹತ್ತಿರ ನಿಲ್ಲಿಸಿ ಏನ್ರೀ ಇದು ಅವಾಂತರ ಎಂದು ವಿಚಾರಿಸಿದೆ. ‘ಅಯ್ಯೋ, ಮೇಡಮ್. ಸಿಎಂ ಬರ್ತಾ ಇದಾರೆ. ಪಕ್ಕದ ಹೋಟೆಲ್ಲಿನಲ್ಲಿ ಪ್ರಜಾವಾಣಿ ವಾರ್ಷಿಕ ಸಾಧಕಿಯರಿಗೆ ಅಭಿನಂದನೆ ಸಮಾರಂಭ ಇದೆ. ನಿಮ್ಮ ಹೆಸರು ಸಹ ಒಂದಲ್ಲಾ ಒಂದು ದಿನ ಬರುತ್ತೆ ನೋಡ್ತಾ ಇರಿ,’ ಎಂದು ರೇಗಿಸಿದಾಗ, ‘ಆ ಹೊತ್ತಿಗೆ ನಾನು ಇರೊಲ್ಲ. ಇದ್ದರೂ ಹೋಗೊಲ್ಲ,’ ಎಂದು ಉಡಾಫೆಯಿಂದ ನಕ್ಕು ಗೇಟನ್ನು ದಾಟಿ ಒಳಹೊಕ್ಕು ಸಮಾಧಾನದ ನಿಟ್ಟುಸಿರು ಬಿಟ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಮನೆಯೊಳಗಿನ-ಈಕೆ  ಮತ್ತು  ಹೊರಗಿನ-ಆಕೆ!: ಸುಕನ್ಯಾ ಕನಾರಳ್ಳಿ ಅಂಕಣ

ಮನೆಯೊಳಗಿನ ಈಕೆ ಮನೆಯಿಂದ ಆಚೆ ಹೋಗಿ ದುಡಿದರೂ ಸಹ ಮನೆಯನ್ನು ನಿಭಾಯಿಸುವುದು ಕೊನೆಗೂ ಈಕೆಯ ಹೊಣೆಯಾಗಿ ಉಳಿದುಕೊಂಡಿದೆ ಎನ್ನುವುದೂ ಸಹ ನಿಜ. ಅಲ್ಲೋ ಇಲ್ಲೋ ಗಂಡ ಮಕ್ಕಳಿಂದ ಸಹಾಯ ಸಿಗಬಹುದೇನೋ. ಅದು ಕೇವಲ ಸಹಾಯ ಅಷ್ಟೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಮೂವತ್ತೊಂದನೆಯ ಬರಹ

Read More

ಪದವಿರಲಿ ಎದೆಯಲ್ಲಿ, ಪ್ರೀತಿ ಹರಿದೀತು!: ಸುಕನ್ಯಾ ಕನಾರಳ್ಳಿ ಅಂಕಣ

ಬದುಕಿನ ಸಂಕಷ್ಟಗಳ ಸಮಯದಲ್ಲಿ ಹೈಸ್ಕೂಲಿನಲ್ಲಿ ಕಲಿತ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ, ಕೈ ಹಿಡಿದು ನಡೆಸೆನ್ನನು’ ಎಂಬ ಬಿ ಎಂ ಶ್ರೀ ಅವರ ಅನುವಾದಿತ ಇಂಗ್ಲಿಷ್ ಕವಿತೆಯನ್ನು ಆರ್ತತೆಯಿಂದ ನೆನಪಿಸಿಕೊಂಡಿದ್ದೇನೆ. ಕೆ. ಎಸ್. ನರಸಿಂಹಸ್ವಾಮಿಯವರ ‘ದೀಪವೂ ನಿನ್ನದೇ, ಗಾಳಿಯೂ ನಿನ್ನದೇ, ಆರದಿರಲಿ ಬೆಳಕು’ ಎಂದು ಬೇಡಿಕೊಂಡಿದ್ದೇನೆ. ಊರಿನಲ್ಲಿ ಗಣಪತಿ ಕೂರಿಸುತ್ತಿದ್ದ ಒಂದು ತಿಂಗಳಲ್ಲಿ ಸಾಮಾನ್ಯವಾಗಿ ಇರುತ್ತಿದ್ದ ಪಿ. ಕಾಳಿಂಗರಾಯರ ‘ಬಾರಯ್ಯ ಬೆಳದಿಂಗಳೇ…’ ಕೇಳುತ್ತಾ ಸುತ್ತಮುತ್ತಲ ಹಳ್ಳಿಗಳಿಂದ ಗಾಡಿ ಹೂಡಿಕೊಂಡು ಬರುತ್ತಿದ್ದ ಮಂದಿ ಬೀದಿಯಲ್ಲಿ ಕಿಕ್ಕಿರಿದು ನಿಂತು ಬೆಳದಿಂಗಳಲ್ಲಿ ತೊಯ್ದಂತೆ ತನ್ಮಯರಾಗಿ ನಿಂತಿದ್ದನ್ನು ಕಂಡಿದ್ದೇನೆ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ

Read More

ಭಾವಾತಿರೇಕ ಎಂಬ ಖಾಯಿಲೆ: ಸುಕನ್ಯಾ ಕನಾರಳ್ಳಿ ಅಂಕಣ

ಈಗ ಬದುಕಿನ ಈ ಹಂತದಲ್ಲಿ ಅವರ ಕಾಳಜಿ ಒಂದೇ. ಬದುಕಿನುದ್ದಕ್ಕೂ ತಮ್ಮ ತಂಗಿಯರ ಬದುಕನ್ನು ದಡ ಹತ್ತಿಸಲು ಕಳೆದಾಗಿದೆ. ಅವರೆಲ್ಲ ತನ್ನನ್ನು ಪ್ರೀತಿಯಿಂದ ನೋಡಿಕೊಂಡರೂ ಸಹ ಈಗ ತನ್ನದೇ ಒಂದು ನೆಲೆ ಬೇಕೆನ್ನಿಸಿದೆ. ತನಗೆ ನಾಲ್ಕು ಗೋಡೆ, ಒಂದು ತಾರಸಿಯಾದರೂ ಇರುವ ಮನೆ ಕಟ್ಟಿಕೊಂಡು ಉಳಿದ ಬದುಕನ್ನು ಒಬ್ಬಳೇ ಕಳೆಯಲು ಒಂದು ಸೈಟು ಬೇಕು, ಅಷ್ಟೇ. ಅಸಂಖ್ಯಾತ ವಿದ್ಯಾರ್ಥಿಗಳು, ಸಾಹಿತ್ಯ ವಲಯದ ಹಲವಾರು ಆಪ್ತರು, ಭೋಪರಾಕ್ ಹೇಳುತ್ತಿರುವ ಅಪಾರವಾದ ಸ್ನೇಹಿತರ ಬಳಗ… ಇಷ್ಟೆಲ್ಲ ಇದ್ದು ಸುಮಾರು ಎಪ್ಪತ್ತರ ದಶಕದ ವಯಸ್ಸಿನ ಆಕೆ ಹೀಗೆ ಬಹಿರಂಗವಾಗಿ ಹೇಳಿಕೊಳ್ಳಬೇಕಾಯಿತೆ?
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೊಂಭತ್ತನೆಯ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ