ಸಿವಿ ಕವಿತೆಗಳು- ಅಪೂರ್ಣ ಹಾಡಿನ ಆತ್ಮವಿಳಾಸ: ಸಿವಿ ರಾಘವೇಂದ್ರ ಕೃತಿಗೆ ವಿಕಾಸ್ ನೇಗಿಲೋಣಿ ಮುನ್ನುಡಿ
ಸದಾ ಕವಿತೆಯ ಗುಂಗಲ್ಲೇ ಇರುವಂತೆ ಕಾಣುವ ಸ್ನೇಹಿತ ಸಿವಿ ರಾಘವೇಂದ್ರ, ಸಂಕಲನ ತರುತ್ತಿರುವುದು ತಡವಾದರೂ ಈಗಾಗಲೇ ಬಿಡಿಬಿಡಿಯಾಗಿ ಬಹಳ ವರ್ಷಗಳಿಂದ ಕವಿತೆಯನ್ನಷ್ಟೇ ನಿರಂತರವಾಗಿ ಬರೆಯುತ್ತಿರುವ ಬರಹಗಾರ. ಆ ಮಟ್ಟಿಗೆ ಅವರು ಏಕಪ್ರಕಾರ ವ್ರತಸ್ಥ. ಕಿರುತೆರೆಯಲ್ಲಿ ಕೆಲ ವರ್ಷಗಳ ಕಾಲ ದುಡಿಮೆ ಮಾಡಿದರೂ ಸಿನಿಮಾ ಹಾಡುಗಳ ಬಗ್ಗೆ ಮೋಹ, ಸದಾ ಏನನ್ನೋ ಧ್ಯಾನಿಸುತ್ತಿದ್ದಾರೇನೋ ಅನ್ನುವ ಗಾಢ ಮೌನ, ಕಡುವಿಷಾದ- ಇವೆಲ್ಲವೂ ರಾಘವೇಂದ್ರ ಅವರ ಅಂತರಂಗದ ಬಯೋಡಾಟಾ. ತಮ್ಮ ಕವಿತೆಗಳಲ್ಲಿ ಆ ಕ್ಷಣವನ್ನು ಹಿಡಿಯುವುದರಲ್ಲಿ ಅವರು ನಿಸ್ಸೀಮ.
ರಾಘವೇಂದ್ರ ಸಿ.ವಿ. ಕವನ ಸಂಕಲನ “ದೇವರ ಬಿಕ್ಕಳಿಕೆಗಳು” ವಿಕಾಸ್ ನೇಗಿಲೋಣಿ ಮುನ್ನುಡಿ

