ಒಂದು ಕೊನೇ ರೌಂಡು…: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ
ಸ್ವಾಮಿಗೆ ದುಃಖ ತಡೆದುಕೊಳ್ಳಲು ಆಗಲಿಲ್ಲ. ಮಣಿ, “ಕಾರ್ ಚೆನ್ನಾಗಿದೆ. ತಿಂಡಿ ತಿಂದ ಮೇಲೆ ನನ್ನನ್ನು ಒಂದು ರೌಂಡ್ ಹಾಕಪ್ಪ ಸ್ವಾಮಿ” ಎಂದಿದ್ದು ಸ್ವಾಮಿ, “ಅದೇನು ದೊಡ್ಡ ವಿಷಯ. ಒಂದಲ್ಲ ಎರಡು ರೌಂಡ್ ಹಾಕೋಣ ಬಿಡು” ಎಂಬ ಮಾತುಗಳು ಜ್ಞಾಪಕಕ್ಕೆ ಬಂದವು. ಸ್ವಾಮಿ ಕೈಕೈ ಹಿಸುಕಿಕೊಂಡು ನನ್ನಿಂದ ಅಪಾರಾಧ ನಡೆದು ಹೋಯಿತಲ್ಲ ಎಂದುಕೊಳ್ಳುತ್ತ.. ಸ್ವಾಮಿ, “ದೇವರೆ ಈ ದಿನ ಬೆಳಿಗ್ಗೆ ನನ್ನನ್ನು ಯಾಕಪ್ಪ ಇಲ್ಲಿಗೆ ಕರೆದುಕೊಂಡು ಬಂದೆ?” ಎಂದು ಅಳತೊಡಗಿದರು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿಯ ಕೊನೆಯ ಕಂತು