Advertisement

ವಿನಾಯಕ ಅರಳಸುರಳಿ

ಪ್ರಿಂಟಿಂಗ್‌ ಪ್ರೆಸ್ಸಿನಲ್ಲಿ ರೂಪುಗೊಂಡ ವಿಜ್ಞಾನಿ!: ಶೇಷಾದ್ರಿ ಗಂಜೂರು ಅಂಕಣ

“ಓದು ಬರಹ ಬಲ್ಲವನಾದರೂ ಕ್ರಮ ಶಿಕ್ಷಣ ಪಡೆಯದಿದ್ದ ಫ್ಯಾರಡೆಗೆ ಆ ಪುಸ್ತಕ ಒಂದು ವರದಾನವಾಯಿತು. ರಾಸಾಯನಿಕ ಶಾಸ್ತ್ರದ ಪ್ರಥಮ ಪಾಠಗಳನ್ನು ಅವನು ಕಲಿತದ್ದು ಆ ಪುಸ್ತಕದ ಮೂಲಕವೇ. ಆ ಪುಸ್ತಕವನ್ನು ಬರೆದವಳು ಜೇನ್ ಮಾರ್ಸೆಟ್ ಎಂಬ ಲೇಖಕಿ. ವೈಜ್ಞಾನಿಕ ರಂಗದಲ್ಲಿ ತನ್ನ ಬೆಳವಣಿಗೆಗೆ ಕಾರಣೀಭೂತವಾದ ಆ ಪುಸ್ತಕ ಮತ್ತು ಆ ಲೇಖಕಿಯನ್ನು ಫ್ಯಾರಡೆ ಮರೆಯಲ್ಲಿಲ್ಲ. ವಿಜ್ಞಾನಿಯಾಗಿ ಹೆಸರು ಮಾಡಿದ ನಂತರವೂ ತನ್ನೆಷ್ಟೋ ಲೇಖನ….”

Read More

ಕಾಲದಲ್ಲಿ ಲೀನವಾಗುವುದೆಂದರೆ….: ಶೇಷಾದ್ರಿ ಗಂಜೂರು ಅಂಕಣ

“ಮ್ಯಾಕ್ಸ್‌ವೆಲ್‌ ನ ಕಾಲಕ್ಕೆ ಸುಮಾರು ಎರಡು ಶತಮಾನದ ಮುನ್ನವೇ, ಐಸಾಕ್ ನ್ಯೂಟನ್ “ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು” ಎಂದು ತೋರಿಸಿಕೊಟ್ಟಿದ್ದ. ಅದರ ಕುರಿತು ಮತ್ತಷ್ಟು ಅಧ್ಯಯನ ನಡೆಸಿದ ಮ್ಯಾಕ್ಸ್‌ವೆಲ್, ಕೇವಲ ಕೆಂಪು, ಹಸಿರು ಮತ್ತು ನೀಲಿ ಬಣ್ಣಗಳಿಂದಲೇ ಯಾವುದೇ ಬಣ್ಣವನ್ನು ನಿರ್ಮಿಸಬಹುದೆಂದು ತೋರಿಸಿಕೊಟ್ಟ. ಅಷ್ಟೇ ಅಲ್ಲ, ೧೮೬೧ರಲ್ಲಿ, ಲಂಡನ್ನಿನ ರಾಯಲ್ ಸೊಸೈಟಿಯ ಪ್ರದರ್ಶನ ಒಂದರಲ್ಲಿ..”

Read More

ಮಹಾನತೆಯ ಅಹಂಕಾರದ ಹುಂಬತನ: ಶೇಷಾದ್ರಿ ಗಂಜೂರು ಅಂಕಣ

“ಅದು, ನಾವು ಸಾಮಾನ್ಯವಾಗಿ ಕಾಣುವ ಆರಡಿ-ಮೂರಡಿಯ ಗೋರಿಯಲ್ಲ; ಅದು ಹಲವಾರು ಕೋಣೆಗಳಿರುವ ಕಟ್ಟಡ. ಒಂದು ಕೋಣೆಯಲ್ಲಿ, ಶವಪೆಟ್ಟಿಗೆ ಇದೆ. ಆ ಶವಪೆಟ್ಟಿಗೆ ಮರದಿಂದ ಮಾಡಿದ್ದಾದರೂ, ಅದಕ್ಕೆ ಚಿನ್ನದ ಹಾಳೆಗಳನ್ನು ಲೇಪಿಸಲಾಗಿದೆ. ಆ ಶವಪೆಟ್ಟಿಗೆಯನ್ನು ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ ಇದೆ. ಅದೂ ಸಹ, ಮೊದಲನೆಯ ಶವಪೆಟ್ಟಿಗೆಯಂತಹುದೇ. ಅದನ್ನೂ ತೆರೆದು ನೋಡಿದರೆ, ಅದರಲ್ಲಿ ಇನ್ನೊಂದು ಶವಪೆಟ್ಟಿಗೆ!”

Read More

ನ್ಯೂರಾನ್‌ ಗಳ ಸುಳಿಯಲ್ಲಿ ನೆನಪಿನ ಕೊಂಡಿ…: ಶೇಷಾದ್ರಿ ಗಂಜೂರು ಅಂಕಣ

“ಈ ನ್ಯೂರಾನ್‌ ಗಳು ಒಂದಕ್ಕೊಂದು ಸಂಪರ್ಕಿಸುವ ಜಾಗಗಳಲ್ಲಿ, ಅವುಗಳು ತಾಗುವುದಿಲ್ಲ. ಬದಲಿಗೆ, ಅವುಗಳ ಮಧ್ಯೆ ಅತ್ಯಂತ ಸಣ್ಣದಾದ ಸಿನಾಪ್ಟಿಕ್ ಕ್ಲೆಫ್ಟ್‌ ಗಳೆನ್ನುವ ಜಾಗವಿರುತ್ತದೆ. ಎಲೆಕ್ಟ್ರಿಕ್ ಸಿಗ್ನಲ್‌ ಗಳು ಹಾಯದಂತಹ ಈ ಜಾಗಗಳಲ್ಲಿ, ಒಂದು ನ್ಯೂರಾನ್ ಇನ್ನೊಂದು ನ್ಯೂರಾನ್‌ ಗೆ ತನ್ನ ಸಂದೇಶ ರವಾನೆ ಮಾಡುವುದು. ರಾಸಾಯನಿಕ ಕಣಗಳ ಮೂಲಕ. “ನ್ಯೂರೋಟ್ರಾನ್ಸ್‌ಮಿಟರ್ಸ್” ಎನ್ನುವ ಈ ರಾಸಾಯನಿಕ ಕಣಗಳಲ್ಲಿ ಹಲವಾರು ತರಹದ ವೈವಿಧ್ಯಗಳಿದ್ದು, ..”

Read More

“ಮರೆವೇ ಮುಕ್ತಿ”: ಶೇಷಾದ್ರಿ ಗಂಜೂರು ಅಂಕಣ

“ಅವನ ಸರ್ಜರಿಯ ಕೆಲ ವರ್ಷಗಳ ನಂತರ ಅವನ ತಂದೆ ಮರಣ ಹೊಂದಿದರು. ಆ ವಿಷಯ ಅವನಿಗೆ ತಿಳಿದಾಗ ಎಲ್ಲರಂತೆಯೇ ಅವನು ದುಃಖಿತನಾದ. ಕೆಲವೇ ಸಮಯದಲ್ಲಿ ಮಾತುಕತೆ ಬೇರೆಡೆಗೆ ತಿರುಗಿತು; ಅವನಪ್ಪ ಸತ್ತಿದ್ದ ಸಂಗತಿ ಸಂಪೂರ್ಣವಾಗಿ ಮರೆಯಿತು. ಆ ಸಾವಿನ ನೋವು ಕ್ಷಣಮಾತ್ರದಲ್ಲಿ ಮರೆಯಾಯಿತು. ಕೆಲವು ಸಮಯದ ನಂತರ ಮತ್ತೊಮ್ಮೆ ತಂದೆಯ ಸಾವಿನ ವಿಚಾರವನ್ನು ಅವನಿಗೆ ತಿಳಿಸಿದಾಗ, ಅದೇ ಮೊದಲ ಬಾರಿಗೆ ತಂದೆಯ ಸಾವನ್ನು ತಿಳಿದಂತೆ ಅವನು ದುಃಖಿತನಾದ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ