Advertisement
ಆರ್. ದಿಲೀಪ್ ಕುಮಾರ್ ಬರೆದ ಎರಡು ಕವಿತೆಗಳು

ಆರ್. ದಿಲೀಪ್ ಕುಮಾರ್ ಬರೆದ ಎರಡು ಕವಿತೆಗಳು

ನೆಲದ ಕಣ್ಣು

ಅನಿಮಿಷನ ಮೌನ ಲಿಂಗ
ಹಿಡಿದಲೆದವನ ಪಾದದ ಬಳಿ ಆಲಯ ಬಯಲೇ
ಮಂದಿ ಕಣ್ಣಿಲಿ ಹಚ್ಚಾಟದ ಕಿಚ್ಚ ಹೊತ್ತಿಸಿ
ಮಾತಿನಲೆ ತೇಲಿಸದೆ ಕಾಣಿಸಿದ ಗುಹೇಶ್ವರ
ಸುಟ್ಟ ಬೂದಿಯಲೆಲ್ಲಾ ಬಸವನ ಕಲ್ಯಾಣ

ಹೆಜ್ಜೆ ಗುರುತಿಗೆ ಸೋತು ತೆರೆದ ಮನಸಿನ ಬಾಗಿಲು
ಸುಟ್ಟ ಗುರುತಿಗೆ ಕಮಟು ವಾಸನೆ ಸಾಕ್ಷಿ
ಸಂಕವ್ವನ ಪ್ರಶ್ನೆಗೆ ಕೊಟ್ಟ ಉತ್ತರದಲ್ಲೆ ನಕ್ಕ ಅಕ್ಕ

ಊರುದ್ದ ಅಲೆದ ಪ್ರಶ್ನೆಗೆ ಸಿಕ್ಕ ಉತ್ತರ
ಅಕ್ಕನ ಮಾತಿಗೆ ಮೌನ ಹೊಕ್ಕ ಅಲ್ಲಮನ ಮಾತು
ಜ್ಯೊತಿರ್ಲಿಂಗವಾಗದೆ ನಿಂತದ್ದಕ್ಕೆ ಸಾಕ್ಷಿ
ಸಾರುತಿದೆ ನೋಡಿ ಕಾಲದ ಪ್ರಶ್ನೆ

ನಗುತ ನಿಂತವಳಿಗೆ ಸಿಕ್ಕ ಎತ್ತರದ ಉತ್ತರ
ಊರೂರು ಅಲೆವುದನು ಬಿಟ್ಟು ಹಿಡಿ
ಮಾತಿನಲೆ ಮೌನವನು ಹಿಡಿ
ತಾಕೀತು ಒಳ ಹೊರಗೆ ನೆಲದ ಕಣ್ಣು

ಹತ್ತಿದೆ ಬೆಂಕಿ

ಅಲ್ಲಮನ ಮನೆಯಲ್ಲೆಲ್ಲಾ ಅಭಿನವ ಗುಪ್ತನ
ಹರಿದ ಹಾಳೆಯ ತುಂಡುಗಳೆ
ಶಂಕರನ ಅದ್ವೈತಾವಸ್ಥೆಯ ಆಗಸದ ನೋಟ
ಮಧ್ವನ ಮಾತಿನಲಿ ನೆಟ್ಟ ನೆಲದ ಕಣ್ಣು

ಅಲ್ಲಮನ ಜೋಳಿಗೆ ತುಂಬಿದ ಬಸವನ
ಲಿಂಗದೀಕ್ಷೆಗೆ ಕಿಚ್ಚಿಡುವ ಕಿಡಿ
ಊರೂರು ಅಲೆದವನಿಗೆ ನಿಲ್ಲಲಾರದ ಸಂಕಟ
ಮನೆಯ ಮಂದಲಿಗೆಯ ತುಂಬಾ ಬಯಲ ಕನಸು

ಇಲ್ಲಿ ನಿಂತ ಅಲ್ಲಮನ ಭಂಗಿ
ಪಾಣಿನಿಯ ಭಾಷೆಯ ಲಯಕಾಗಿ ಕೊಟ್ಟ ಪೆಟ್ಟು
ಕನ್ನಡಿಸಿದೆ ಇಂದಿಗೂ ಪುಟ್ಟ ಪುಟ್ಟ ಪದಗಳಲೆ
ನಿಂತು ನಗುತಿದೆ ಅಲ್ಲಮನ ಕಣ್ಣಲ್ಲಿ

ಕಟ್ಟಿದ ಮಾಳಿಗೆಯ ತುಂಬಾ ಕಿತ್ತ ಜಂತಿ
ಅಲ್ಲಾಡುತಿದೆ ಈಗೀಗ
ಅಲ್ಲಮನ ಮೌನಕ್ಕೆ ಬೆದರಿ ಹತ್ತಿದೆ ಬೆಂಕಿ
ಮನೆಯ ಸುಟ್ಟಲ್ಲದೆ ಆರಲಾರದು

About The Author

ಆರ್. ದಿಲೀಪ್ ಕುಮಾರ್

ಆರ್ . ದಿಲೀಪ್ ಕುಮಾರ್ ಮೂಲತಃ ಚಾಮರಾಜನಗರದವರು. ಸಾಹಿತ್ಯ ವಿಮರ್ಶೆ, ಸಂಶೋಧನೆ, ಕಾವ್ಯ ರಚನೆ ಮತ್ತು ಭಾಷಾಂತರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ