Advertisement
ಎಚ್ ವಿ ಶ್ರೀನಿಧಿ ಬರೆದ ಈ ದಿನದ ಕವಿತೆ

ಎಚ್ ವಿ ಶ್ರೀನಿಧಿ ಬರೆದ ಈ ದಿನದ ಕವಿತೆ

ಅರ್ಥಾರ್ಥ

ಪೇಟೆಯ ಧಾರಣೆ ದುರಾಸೆಗೆ
ಬಟವಾಡೆ ಆಗದೆ ಬೀದಿಪಾಲಾದ
ಹೂವುಗಳೆ, ಕೊಂಡು ತಂದು
ವಾರಕ್ಕೆ ಬೋರಾದ ವಸ್ತುಗಳೆ
ಹಣದ ಅರ್ಥವೇನು

ಷೇರುಪೇಟೆಯ ಗುಡ್ಡಗೆರೆಗಳೆ
ಹಾಳುಕೋಟೆಯ ಟಂಕಸಾಲೆಗಳೆ
ಯಾರು ಮುಟ್ಟದ ಹರಿದ ನೋಟುಗಳೆ
ಹಣದ ಅರ್ಥವೇನು

ಜೀವ ವಿಮೆ ಮಾಡಿಸಿ
ಸಾವಿಗೆ ನಮ್ಮ ಬದ್ಧರನ್ನಾಗಿಸಿದ
ಏಜೆಂಟರುಗಳೆ, ಕಟ್ಟಲಾಗದ
ಆಸ್ಪತ್ರೆ ಬಿಲ್ಲುಗಳೆ
ಹಣದ ಅರ್ಥವೇನು

ದೇವಸ್ಥಾನದ ದರಪಟ್ಟಿಗಳೆ
ಫಲಜ್ಯೋತಿಷ್ಯದ ಧನಲಾಭಗಳೆ
ಸನ್ಯಾಸಿಗಳ ಏಸಿ ಕಾರುಗಳೆ
ಹಣದ ಅರ್ಥವೇನು

ಪಾಲುವಿಭಾಗದ ಕರಾರುಪತ್ರಗಳೆ
ವೃದ್ಧರು ಕಾದಿರೋ ಪಿಂಚಣಿಗಳೆ
ಸಾಲದ ಬಾಬತ್ತಿನ ಸ್ತಿರಾಸ್ಥಿಗಳೆ
ಹಣದ ಅರ್ಥವೇನು

ಎಚ್. ವಿ. ಶ್ರೀನಿಧಿ ದಾವಣಗೆರೆಯವರು
ಕಾರ್ಯನಿಮಿತ್ತ ಸದ್ಯದ ವಾಸ್ತವ್ಯ ಬೆಂಗಳೂರು.
ತತ್ವಶಾಸ್ತ್ರ, ವಿಜ್ಞಾನ, ಸಾಹಿತ್ಯ ಆಸಕ್ತಿಯ ವಿಷಯಗಳು.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. JAYASRINIVASA RAO

    I liked the way you teased out the dual meanings of ‘artha’ here. Enjoyed reading this poem 🙂👍🌸

    Reply
    • Srinidhi

      Thank you so much sir 😊

      Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ