Advertisement
ಜ್ಯೋತಿ ಕುಮಾರ್ ಎಂ. ಬರೆದ ಈ ದಿನದ ಕವಿತೆ

ಜ್ಯೋತಿ ಕುಮಾರ್ ಎಂ. ಬರೆದ ಈ ದಿನದ ಕವಿತೆ

ಏನೆಂದು ಬರೆಯಲಿ

ಬದುಕು ಇರುವವರೆಗೂ,
ನೀನು ಇರುವುದು ಬೇಡ.
ನೀನು ಇರುವವರೆಗಿನ,
ಬದುಕೆ ಎನಗೆ ಸಾಕು.

*****

ನೀ ಇಲ್ಲದೆ, ಬದುಕುವುದು
ಎಷ್ಟೊಂದು ಕಷ್ಟ.
ನಿನ್ನನ್ನು, ನನ್ನವಳಾಗಿಸಿ
ಕೊಳ್ಳುವುದು ಇನ್ನಷ್ಟು ಕಷ್ಟ.

*****

ಬದುಕಲ್ಲಿ, ಬಂದು
ಹೋಗಿರಬಹುದು, ನೀನು.
ಆದರೆ, ನೆನಪಿರಲಿ,
ಪ್ರಾಣ ಬಿಟ್ಟೇನು, ನಿನ್ನನ್ನಲ್ಲ.

*****

ಪರೀಕ್ಷೆ ಮಾಡದಿರು,
ಪ್ರೀತಿಯನ್ನು ಇಷ್ಟೊಂದು.
ಉಸಿರು ನಿಲ್ಲಬಹುದು,
ಆದರೆ, ಪ್ರೀತಿ ಅಲ್ಲ.

*****

ನಡಿ, ನಡಿ ಹೋಗೋಣ,
ನಾವಿಬ್ಬರೂ ಅಲ್ಲಿಗೆ.
ನನ್ನ, ನಿನ್ನ, ಹೊರತು,
ಯಾರೂ ಇಲ್ಲದೂರಿಗೆ.

*****

ತುಟಿಯ ಮೇಲೆ ನಿನ್ನ ಹೆಸರು,
ಹೃದಯದಲ್ಲಿ ಕಾಡುವ ನೆನಪು.
ಇಲ್ಲಿಂದ ಏನು ಕೇಳಿ ಪಡೆಯಲಿ,
ನಿನ್ನಲ್ಲೆ, ನನ್ನ ಜೀವವಿರುವಾಗ.

*****

ಏನೆಂದು ಬರೆಯಲಿ,
ಯಾರಿಗೆ ಹೇಳಲಿ.
ಇದ್ದೊಂದು ಜೀವ, ನಿನ್ನ
ಹೃದಯದ ಪಾಲಾಗಿರುವಾಗ?!

ಜ್ಯೋತಿ ಕುಮಾರ್ ಎಂ. ಮೂಲತಃ ದಾವಣಗೆರೆ ತಾಲ್ಲೂಕು ಹಾಗೂ ಜಿಲ್ಲೆಯ ಮುದಹದಡಿ ಗ್ರಾಮದವರು.
ವೃತ್ತಿಯಲ್ಲಿ ಹೈಸ್ಕೂಲ್ ಗಣಿತ ಮೇಷ್ಟ್ರು. ಸದ್ಯ ಸಂತೆಬೆನ್ನೂರಿನಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಇವರು ಹವ್ಯಾಸಿ ಬರಹಗಾರರಾಗಿದ್ದು, ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

2 Comments

  1. Sudha N. Telkar

    ಇವು ತನಗಗಳು ಅನಿಸಿಕೊಳ್ಳುವುದಿಲ್ಲ.

    Reply
    • Jyothi Kumar M

      ಹೌದು ಮೇಡಂ,ಇವು ಹನಿಗವನಗಳು.ಕಣ್ತಪ್ಪಿನಿಂದ ತನಗಗಳು ಎಂದಾಗಿದೆ.ಕ್ಷಮೆ ಇರಲಿ.

      Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ