Advertisement
ಮಂಡಲಗಿರಿ ಪ್ರಸನ್ನ ಬರೆದ ಗಜಲ್

ಮಂಡಲಗಿರಿ ಪ್ರಸನ್ನ ಬರೆದ ಗಜಲ್

ಬದುಕಿನ ರಮ್ಯತೆ ಭಗ್ನಗೊಳಿಸಿದ ನಿನಗೆ ಕೃತಜ್ಞತೆಗಳು
ಮಲ್ಲಿಗೆ ಮನಕೆ ಕೊಳ್ಳಿಯಿರಿಸಿದ ನಿನಗೆ ಕೃತಜ್ಞತೆಗಳು

ಜಗದ ಚೆಲುವಿಗೆ ಬೀಗಿ ಬಿಳಿಯದೆಲ್ಲ ಹಾಲೆಂದುಕೊಂಡೆ
ನೊರೆಯ ಹಾಲಿಗೂ ಹುಳಿಹಿಂಡಿದ ನಿನಗೆ ಕೃತಜ್ಞತೆಗಳು

ಋತುವಿನ ಸಹಜಗುಣ ತಿಳಿಯದೆ ಸುಮ್ಮನೆ ದೂರಿದೆನಲ್ಲ
ಉಸುರಿಗೂ ಕೆಂಡದ ಲೇಪನೀಡಿದ ನಿನಗೆ ಕೃತಜ್ಞತೆಗಳು

ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆ
ಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು

ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನ
ನನ್ನೊಳಗಿನ ಕಾರಂಜಿ ನಗೆನುಂಗಿದ ನಿನಗೆ ಕೃತಜ್ಞತೆಗಳು

ಊಹಿಸಲಾಗದ ತಿರುವಿನ ಹಾದಿಯ ಚಮತ್ಕಾರ ಅದು
ಶ್ರಾವಣ ಸೋನೆಗೂ ನೋವುಣ್ಣಿಸಿದ ನಿನಗೆ ಕೃತಜ್ಞತೆಗಳು

ಬಿಡದ ವ್ಯಾಮೋಹವೆ ಕೊನೆಗೆ ಮುಳುವಾಯಿತಲ್ಲ `ಗಿರಿ’
ಇತಿಹಾಸದ ದುರಂತಕಥೆ ನೆನಪಿಸಿದ ನಿನಗೆ ಕೃತಜ್ಞತೆಗಳು

About The Author

ಮಂಡಲಗಿರಿ ಪ್ರಸನ್ನ

ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ

2 Comments

  1. ಶರಣಪ್ಪ ತಳ್ಳಿ

    ವಾಹ! ಗಜಲ್ ಮಾದರಿಯ ಪರಿಭಾವದ ಪರಿ ಬಿಚ್ಚಿದಂತೆ,ಅನಂತ ಭಾವಗಳು ಹಾರಾಡಿದಂತೆ,ಚಮತ್ಕೃತಿಯಾಗಿವೆ ಸಾಲುಗಳು.
    ಅಭಿನಂದನೆಗಳು ಮಂಡಲಗಿರಿ ಪ್ರಸನ್ನ ಗುರುಗಳಿಗೆ.

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ