ಎನ್.ಬಿ. ಚಂದ್ರಮೋಹನ್ ಅನುವಾದಿಸಿದ ಚಾರ್ಲಿ ಚಾಪ್ಲಿನ್ ನ ‘ದಿ ಗ್ರೇಟ್ ಡಿಕ್ಟೇಟರ್’ ನ ಮುಕ್ತಾಯದ ಭಾಷಣ
“ನಮಗೆ ಸಿರಿತನವನ್ನು ತಂದುಕೊಟ್ಟ ಯಂತ್ರಗಳು ನಮ್ಮನ್ನು ದೀನರನ್ನಾಗಿಸಿ ಬೇಡುವ ಸ್ಥಿತಿಗಿಳಿಸಿವೆ. ನಮ್ಮ ಜ್ಞಾನ ನಮ್ಮನ್ನು ಸಿಡುಕರನ್ನಾಗಿಸಿದೆ. ನಮ್ಮ ಜಾಣತನ, ನಮ್ಮನ್ನು ಕಟುಕರನ್ನಾಗಿ, ನಿರ್ದಯಿಗಳನ್ನಾಗಿ ಮಾಡಿದೆ. ನಾವು ಅತಿಯಾಗಿ ಆಲೋಚಿಸುತ್ತೇವೆ; ತುಂಬಾ ಕಡಿಮೆ ಸಂವೇದಿಸುತ್ತೇವೆ. ನಮಗೀಗ ಯಂತ್ರಜ್ಞಾನಕ್ಕಿಂತಲೂ ಹೆಚ್ಚಾಗಿ ಮಾನವೀಯತೆ ಬೇಕಾಗಿದೆ. ಜಾಣತನಕ್ಕಿಂತ ಹೆಚ್ಚಿಗೆ ಕರುಣೆ ಮತ್ತು ಮಾರ್ದವತೆಗಳ ಅಗತ್ಯವಿದೆ.”
ತೆಲುಗಿನ ಚಾಟು ಕವಿತೆಗಳು: ಆರ್. ವಿಜಯರಾಘವನ್ ಬರೆದ ಲೇಖನ
“ದಕ್ಷಿಣ ಭಾರತದಲ್ಲಿ ಶತಶತಮಾನಗಳಿಂದ ಮೌಖಿಕವಾಗಿ ಪ್ರಸಾರವಾದ ಚಾಟು ಎಂದು ಕರೆಯಲ್ಪಡುವ ಕವನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಈ ಕೃತಿ ಅಂಥ ಕವನಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತದೆ. ಕವಿತೆಗಳಲ್ಲಿನ ಬೌದ್ಧಿಕತೆ ಮತ್ತು ನಿಖರತೆ, ಸಾಮಾನ್ಯ ಸಂಗತಿಗಳ ಕುರಿತ ಭಾವಗೀತಾತ್ಮಕ ಒಳನೋಟ, ಐಂದ್ರಿಯಕ ಅನುಭವದ ಮೇಲಿನ ಮೋಹ ಮತ್ತು ಭಾಷೆ ಮತ್ತು ಬಯಕೆಯ ನಡುವಿನ ಸಂಬಂಧದ ಅನ್ವೇಷಣೆ ಇವೇ ಮೊದಲಾದುವುಗಳಿಂದ…”
ಫ್ಯದೊರ್ ಮಿಖಾಯ್ಲೊವಿಚ್ ದಾಸ್ತಯೆವ್ಸ್ಕಿ: ಓ.ಎಲ್. ನಾಗಭೂಷಣ ಸ್ವಾಮಿ ಬರೆದ ಲೇಖನ
“ದಾಸ್ತಯೇವ್ಸ್ಕಿ ಧರ್ಮನಿಷ್ಠ ಕುಟುಂಬದ ಮಗು. ಅವರಪ್ಪ ಮಾತ್ರ ಅಸಮಾನ ಕ್ರೂರಿ, ಅಮ್ಮ ಅಪಾರ ಕರುಣೆಯವಳು. ಅವನ ಹತ್ತು ಹನ್ನೊಂದನೆಯ ವಯಸಿನ ಹೊತ್ತಿಗೆ ಅಮ್ಮ ತೀರಿಕೊಂಡಳು, ದಾಸ್ತಯೇವ್ಸ್ಕಿಗೆ ಹತ್ತೊಂಬತ್ತು ಆಗುವ ಹೊತ್ತಿಗೆ ಅಪ್ಪನ ಕೊಲೆಯಾಯಿತು. ಶ್ರೀಮಂತಿಕೆಯೇನೂ ಇರದಿದ್ದ ದಾಸ್ತಯೇವ್ಸ್ಕಿಯ ಮನಸ್ಸು ದೇಹ ಎರಡೂ ಅಸ್ಥಿರವಾಗಿದ್ದವು, ಮೂರ್ಛೆ ರೋಗಕ್ಕೆ ತುತ್ತಾಗಿದ್ದ ಅನ್ನುವ ವಿವರಗಳು ದೊರೆಯುತ್ತವೆ…”
ಪ್ರಾಚೀನ ಚೀನೀ ಕವಿತೆಗಳ ಸಂಕಲನದ ಕನ್ನಡ ನಿರೂಪಣೆ: ಓ.ಎಲ್. ನಾಗಭೂಷಣ ಸ್ವಾಮಿ
“ಚೀನಾದ ಕಾವ್ಯ ಪರಂಪರೆಯಲ್ಲಿ ಹಳೆಯ ಕವಿತೆ ಹತ್ತೊಂಬತ್ತು ಬಹಳ ಮುಖ್ಯ ಸ್ಥಾನವನ್ನು ಪಡೆದಿವೆಯಾದರೂ ಇವುಗಳ ಕವಿ, ಕಾಲದ ಬಗ್ಗೆ ಇಂದಿಗೂ ವಾಗ್ವಾದ, ಚರ್ಚೆಗಳು ನಡೆದೇ ಇವೆ. ಪ್ರಾಚೀನ ಸಂಕಲನಕಾರರು ಸರಳವಾಗಿ ಇವನ್ನು ಗುಶಿ ಅಥವಾ ಹಳೆಯ ಕವಿತೆಗಳು ಎಂದು ಕರೆದಿದ್ದರೆ ಆನಂತರದ ವಿದ್ವಾಂಸರು ಇವನ್ನು ಒಬ್ಬನಲ್ಲ ಇನ್ನೊಬ್ಬ ಕವಿಯ ರಚನೆಗಳು ಎಂದು ವಾದ ಮಾಡುತ್ತ ಬಂದಿದ್ದಾರೆ.”
ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ
“ಶ್ರೀಮಂತ ರಾಷ್ಟ್ರವಾದ ಅಮೇರಿಕದಲ್ಲಿ, ವಿಶ್ವಾಸದಲ್ಲೇ ಅತಿ ಹೆಚ್ಚಿನ ಕರೋನ ಸೋಂಕು (೮ ಮಿಲಿಯನ್) ಕಾಣಿಸಿಕೊಂಡಿರುವುದು ಆಶ್ಚರ್ಯಕರವಾದ ಸಂಗತಿ. ಅಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ಎರಡು ಲಕ್ಷಜನ ಕರೋನ ಖಾಯಿಲೆಯಿಂದ ಸತ್ತಿದ್ದಾರೆ ಎನ್ನುವ ವಿಚಾರವನ್ನು ನಂಬುವುದು ಕಷ್ಟ.”
ದಿನಕರನ ಕೊನೆಯ ಸಿಪ್: ಪ್ರಜ್ಞಾ ಮತ್ತಿಹಳ್ಳಿ ಲೇಖನ
“ಮಹಾನಗರಗಳಲ್ಲಿ ಕಚೇರಿಗಳ ದುಡಿತ ಮುಗಿಸಿದ ಜನರು ಮೆಟ್ರೊ, ಬಸ್ಸುಗಳಲ್ಲಿ ತುಂಬಿಕೊಂಡು ನಿಂತಲ್ಲೇ ಕಿವಿಗಿರಿಸಿಕೊಂಡ ಸೆಲ್ ಫೋನುಗಳಲ್ಲಿ ತಲ್ಲೀನವಾಗಿರುತ್ತಾರೆ. ಮೈಗೆ ಮೈ ಹತ್ತುವಂತೆ ನಿಂತಿದ್ದರೂ ಪ್ರತಿಯೊಬ್ಬರೊಳಗೂ ಸುತ್ತಲಿನಿಂದ ತುಂಬ ದೂರವಾದ, ಪ್ರತ್ಯೇಕವಾದ ಮತ್ತು ಕೇವಲ ಅವರದ್ದಷ್ಟೇ ಆದ ಖಾಸಗಿ ಜಗತ್ತೊಂದು ಅರಳಿಕೊಂಡಿರುತ್ತದೆ.”
‘ಅನ್ಯ-ಅನನ್ಯ’ ಕೆ.ವಿ.ತಿರುಮಲೇಶ್: ಎನ್.ಎಸ್. ಶ್ರೀಧರಮೂರ್ತಿ ಬರಹ
“ತಿರುಮಲೇಶರು ತಮಗೆ ಇರುವ ಅಪಾರ ಓದನ್ನು ಪ್ರತಿಪಾದನೆಯ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಅಪಾರ ಓದು ಅವರಿಗೆ ಎಲ್ಲಿಯೂ ಪ್ರದರ್ಶನದ ಸಂಗತಿ ಆಗಿಲ್ಲ. ಅಗತ್ಯವಿಲ್ಲದ ಸೈದ್ಧಾಂತಿಕ ನೆಲೆಗಳಲ್ಲಿ ಅವರು ಪ್ರತಿಪಾದನೆಯನ್ನು ಸಿಕ್ಕಿ ಹಾಕಿಸುವುದೂ ಇಲ್ಲ. ಯಾವುದರ ಅಗತ್ಯ ಎಷ್ಟು ಎಂದು…”
ಹರ್ಮನ್ನ್ ಬ್ರಾಖ್ ನ ‘ವರ್ಜಿಲನ ಮರಣ’: ಕೆ. ವಿ. ತಿರುಮಲೇಶ್ ಲೇಖನ
“ಇದು ಸಂದಿಗ್ಧತೆಯೊಂದನ್ನು ಎಬ್ಬಿಸುತ್ತದೆ: ಈನಿಡ್ ಅನ್ನು ಹೊತ್ತಿ ಉರಿಸಬೇಕು, ಯಾಕೆಂದರೆ ಅದು ಹಳೆಯ ಜಗತ್ತಿಗೆ ಸೇರಿದ್ದು ಎಂಬ ವರ್ಜಿಲನ ಅಭಿಪ್ರಾಯವನ್ನು ಕಾದಂಬರಿ ಎತ್ತಿ ಹಿಡಿಯುತ್ತದೆಯೇ, ಅಥವಾ ಈ ಬ್ರಾಖ್ ನ ಈ ಕೃತಿಗೆ ಬೇರೇನಾದರೂ ಅರ್ಥವಿದೆಯೇ? ಈನಿಡ್ ಅನ್ನು ನಾಶಗೊಳಿಸಿದರೆ ಅದು ಸಾಂಸ್ಕೃತಿಕ ಲೋಕಕ್ಕೆ ನಷ್ಟ..”
ಅಕ್ಷಯ ಪಾತ್ರೆ: ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ
“ಮಹಾನಗರಗಳ ಥಳುಕಿನ ಮಾಲ್ ಗಳ ಕಣ್ಣು ಕುಕ್ಕುವ ಬೆಳಕಿನಲ್ಲಿ ರಾಶಿಗಟ್ಟಲೆ ಜೋಡಿಸಿಟ್ಟ ವಸ್ತುಗಳ ಅಕ್ಷಯ ಭಂಡಾರ ಕಂಡಾಗ ಎಂಥೆಂಥವರ ಜೇಬೂ ಕೂಡ ಗಡಗಡ ನಡುಗಿ ಉಸಿರುಡುಗಿದ ಹತಯೋಧನಂತಾಗುತ್ತದೆ. ತಳ ಕೆದರಿದ ಸಕ್ಕರೆ ಡಬ್ಬಿಯಂತೆ ಕ್ರೆಡಿಟ್ ಕಾರ್ಡು ಬಂದರೆ ಪಕ್ಕದ ಮನೆಯ ಕಡದಂತೆ ಡೆಬಿಟ್ ಕಾರ್ಡು ಬರುತ್ತದೆ. ಎಷ್ಟೆಷ್ಟು ಕೊಂಡರೂ ಮತ್ತೆಷ್ಟೆಲ್ಲ ಉಳಿದು ಹೋಗಿ ಮುಗಿಯದ ಆಕರ್ಷಣೆಯ ಮಹಾ ಸಂಗ್ರಾಮವೊಂದನ್ನು”









