ಸಂಸ್ಕೃತಿಸಂಕರ: ಕೆ.ವಿ. ತಿರುಮಲೇಶ್ ಲೇಖನ
“ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ.”
ದಾವ್ ದೆ ಜಿಂಗ್ – ತಾವ್ ತೆ ಜಿಂಗ್: ಆರ್. ವಿಜಯರಾಘವನ್ ಲೇಖನ
“ತಾವೋ ಚಿಂತನೆಯ ನೈಸರ್ಗಿಕ ಕನ್ನಡಿಯಾಗಿರುವ ಸಾಹಿತ್ಯಿಕ ತತ್ತ್ವಶಾಸ್ತ್ರದ ಡೇವಿಡ್ ಫೋಸ್ಟರ್ ವ್ಯಾಲೇಸ್ ಅವರ ಮಾತಿನಲ್ಲಿ, ಜನರಿಗೆ ತಾವೋ ಅರಿವಿನ ಪೂರ್ವನಿಶ್ಚಿತ ಕ್ರಮ ಎಂದರೆ “ಅನನ್ಯವಾಗಿ, ಸಂಪೂರ್ಣವಾಗಿ, ಸ್ವಯಂ ತಾನೇ ಆಗಿ ಏಕಾಂಗಿಯಾಗಿ ದಿನ ಮತ್ತು ದಿನವಿಡೀ” ಜೀವಿಸುವುದು. ಆದರೆ ನಾವು ಆಳವಾದ ಮತ್ತು ಸಾರ್ವತ್ರಿಕವಾದ ಭ್ರಮೆಯಲ್ಲಿ ಸಿಲುಕಿಕೊಂಡಿರುವುದರಿಂದಲೇ…”
ಸಾಖಿ, ಶಾಹಿ ಮತ್ತದರ ಪುಟ: ಡಯಾನಾ ಕುಶಾಲಪ್ಪ ಬರೆದ ಲೇಖನ
“ನನ್ನ ಜೀವದ ಕಷ್ಟ ಯಾಕೆ ಕೇಳುತ್ತೀಯ ಸಾಖಿ, ಆ ಗೊರವನ ಹಳ್ಳಿಯ ದೈವದ ಕೋಲ ಮಾಡುವ ಬ್ಯಾರನ ಮನಸ್ಥಿತಿ. ಓಡಿಹೋಗಿ ಕೆಂಡದ ಹೊಂಡದಲ್ಲಿ ಬಿದ್ದು ಮೈಸುಟ್ಟುಕೊಂಡ ಹಾಗೆ ಅನುಭವ. ನೋಡುವವರ ಕಣ್ಣಿಗೆ ದೇವರಾಟ. ಅವನು ಹೇಳೋದೆಲ್ಲ ಸತ್ಯ. ದೇವರೇ ಅವನ ಒಡಲಲ್ಲಿ ನಿಂತು ಎಲ್ಲರ ಜೀವನದ ಬಗ್ಗೆ ನುಡಿದುಬಿಡುತ್ತದೆ ಎಂಬ ಭಾವನೆ ಹುಟ್ಟಿಸುವ ಹಾಗೆ. ಆದರೆ ಮುಂದಿನ ದಿನ ಅವನ ಗಾಯ ಬೊಬ್ಬೆ ಹೊಡೆದು ಕೊಂಡು, ಕೀವು ಕಟ್ಟಿದರೂ…”
ಶ್ರೀಧರ ಬಳಗಾರ ಕಥಾಲೋಕ: ಗುರುಗಣೇಶ ಭಟ್ ಡಬ್ಗುಳಿ ನಡೆಸಿದ ಸಂದರ್ಶನ
“ಚಿತ್ತಾಲರು ಹೇಳಿದ ಹಾಗೆ ಬರೆಯುತ್ತ ಬರೆಯುತ್ತ ಬೆರಗು ಪಡುತ್ತ ನಾವು ಅದನ್ನ ಅರ್ಥ ಮಾಡಿಕೊಳ್ಳುತ್ತೇವೆ. ಅರ್ಥ ಆಯಿತು ಅನುಭವ.. ಅರ್ಥ ಆಯಿತು ಆ ಪಾತ್ರ.. ಅರ್ಥ ಆಯಿತು ಜೀವನ.. ನಾ ಹೀಗೆ ಬರೆಯುತ್ತೇನೆ ಅಂತಲ್ಲ. ನಿಗೂಢವಾದ, ಸೃಜನಶೀಲವಾದ ಸ್ವಾಯತ್ತತೆಯಿಂದ ಕೂಡಿದ ಮತ್ತು ಸ್ವಯಂ ಆದ ಗುಣ ಬರವಣಿಗೆಗಿದೆ ಅಂದರೆ ನಮಗೇ ಒಮ್ಮೊಮ್ಮೆ ಅದು ಬೆರಗು ಉಂಟುಮಾಡಿ ವಿಷಯಾಂತರ ಮಾಡುತ್ತದೆ.”
ಏನು ಏನು ಜೇನು ಜೇನು: ಕೆ. ವಿ. ತಿರುಮಲೇಶ್ ಲೇಖನ
“ಚಿಕ್ಕಂದಿನಲ್ಲಿ ನಾನು ತೋಟದಲ್ಲಿ ಅಪರೂಪಕ್ಕೆ ಹೆಜ್ಜೇನಿನ ಗೂಡುಗಳನ್ನು ನೋಡಿದ್ದಿದೆ, ಆದರೆ ಅವುಗಳ ಜೇನನ್ನು ಇಳಿಸಬೇಕೆನ್ನುವ ವಿಚಾರ ಯಾರೂ ಮಾಡಿರಲಿಲ್ಲ. ಜನ ಹೆಜ್ಜೇನಿನ ತಂಟೆಗೆ ಹೋಗುತ್ತಿರಲಿಲ್ಲ ಎಂದು ಇದರರ್ಥ. ಇದರಿಂದ ಹೆಜ್ಜೇನಿಗೆ ಲಾಭವಾಯಿತೇ ಎಂದರೆ ಹೇಳುವುದು ಕಷ್ಟ. ಮನುಷ್ಯರ ಕೋನದಿಂದ ಜೇನಿನಲ್ಲಿ ಹೆಜ್ಜೇನು ‘ವೈಲ್ಡ್’, ಮನುಷ್ಯರ ಆಯ್ಕೆಗೆ ಒಳಗಾದುದಲ್ಲ. ಕೋಳಿಗಳಲ್ಲಿ ಕಾಡುಕೋಳಿ, ನಾಡುಕೋಳಿ ಇದ್ದಹಾಗೆ.”
ಭಾಷಾಂತರ ಪ್ರಕ್ರಿಯೆ ಮತ್ತು ವಿಜಯರಾಘವನ್ ಅನುವಾದ ಕಾವ್ಯ
“ಕಾಶ್ಮೀರಿ ಶೈವಪಂಥದ ಮೊದಲ ಕವಯಿತ್ರಿ ಲಲ್ಲಾದೇವಿಯ ವಾಕ್ ಗಳು ಕೂಡ ಕನ್ನಡದಲ್ಲಿ ಒಂದು ವಿಶಿಷ್ಟ ಬಗೆಯ ಭಾಷಾಂತರ ಪ್ರಯೋಗ. ಲಲ್ಲಾದೇವಿ ಕನ್ನಡಕ್ಕೆ ತುಂಬಾ ತಡವಾಗಿ ಪರಿಚಯವಾಗುತ್ತಿದ್ದಾಳೆ. ಲಲ್ಲಾದೇವಿಯ ವಾಕ್ ಗಳಿಗೂ ಕನ್ನಡದಲ್ಲಿ ರಚನೆಯಾಗಿರುವ ಶರಣರ ವಚನಗಳಿಗೂ ಅನೇಕ ವಿಧದಲ್ಲಿ ಸಾಮ್ಯತೆಗಳಿವೆ.”
ನರಸಿಂಹಮೂರ್ತಿ ಹಳೇಹಟ್ಟಿ ಲೇಖನ
ಜರ್ಕುಂ ಬುರ್ಕುಂ ಏನಜ್ಜೀ?: ಕೆ.ವಿ. ತಿರುಮಲೇಶ್ ಬರಹ
“ಕೇರಳದಿಂದ ಬರುವ ಈ ಚೂರಿಗಳ ಒಂದು ಬ್ರಾಂಡಿಗೆ ಹೆಚ್ಚಿನ ಬೇಡಿಕೆಯಿತ್ತು. ‘ಮುಂದಿನ ಸಲ ಬರುವಾಗ ನನಗೊಂದು ತಂದುಕೊಡಿ’ ಎನ್ನುತ್ತಿದ್ದರು. ಬಹುಶಃ ‘ತೋಟರ’ ಎನ್ನುವ ಬ್ರಾಂಡಿನದು. ಯಾಕೆ ಇಂಥ ಬೇಡಿಕೆಯೆಂದರೆ ನಮ್ಮೂರಿನ ತಯಾರಿಕೆಗಳಿಂತ ಇದು ಎಷ್ಟೋ ಮುಂದುವರಿದಿತ್ತು. ಇದಕ್ಕೆ ಬಳಸಿದ ಕಬ್ಬಿಣಕ್ಕೆ ಬೇಗ ತುಕ್ಕು ಹಿಡಿಯುತ್ತಿರಲಿಲ್ಲ. ಬಾಯಿ ಹರಿತವಾಗಿತ್ತು. ಅಲ್ಲದೆ ಇದರ ಹಿಡಿ ಉಳೆಕ್ಕೊಂಬಿನಿಂದ ಮಾಡಿದುದಾಗಿತ್ತು.”
ಗುನ್ನಾರ್ ಏಕಲೋ: ಸ್ವೀಡಿಷ್ ಕವಿಯ ಕುರಿತು ಆರ್. ವಿಜಯರಾಘವನ್ ಲೇಖನ
“ಏಕಲೋ ಪೌರಾತ್ಯ ಅನುಭಾವಕ್ಕೆ ತೆತ್ತುಕೊಂಡವನು. ಗ್ರೀಕ್ ಕವಿ ಕಾನ್ಸ್ಟಾಂಟಿನ್ ಕವಾಫಿಯ ಹಾಗೆಯೇ ಇವನು ತನ್ನ ಕವಿತೆಗಳನ್ನು ಎಂದೋ ಆಗಿಹೋದ ಕಾಲದಲ್ಲಿ ನಿಲ್ಲಿಸುತ್ತಾನೆ. ಆದರೆ ಏಕಲೋ ಒಬ್ಬ ಭಾವುಕ. ಗತ ಕಾಲದಲ್ಲಿಯೇ ಮಗ್ನನಾಗುವವ. ಆದರೆ ಅವನು ಭೂತವನ್ನು ಪಲಾಯನದ ಹಾದಿಯಾಗಿ ಆಯ್ಕೆ ಮಾಡಿಕೊಳ್ಳುವುದಿಲ್ಲ. ಅದು ಅವನಿಗೆ ಅವನ್ನು ವರ್ತಮಾನವನ್ನು ಬೆಳಗುವ, ಟೀಕೆಗೆ ಒಳಪಡಿಸುವ ಮಾರ್ಗ.”
ನಾವು ಮತ್ತು ನಮ್ಮ ಪಾತ್ರೆ ಪಗಡೆಗಳು: ಕೆ. ವಿ. ತಿರುಮಲೇಶ್ ಬರಹ
“ಹೀಗೆ ಟೊಣೆಯುವಾಗ ಒಳ್ಳೆ ಸಂಗೀತದ ಸ್ವರ ಬರಬೇಕು! ನಾನು ಕೇವಲ ‘ಸಾಕ್ಷಿ ಪ್ರಜ್ಞೆ’. ಆಮೇಲೆ ಸುರುವಾಗುವುದು ನಿಜವಾದ ಚೌಕಾಶಿ. ಅವರು ಕೊಡರು, ಇವರು ಬಿಡರು! ಆದರೆ ಮಾತ್ರ ವ್ಯಾಪಾರ ಎರಡೂ ಕಡೆಯವರಿಗೆ ಬೇಕು. ಹೊರಗಿನಿಂದ ಬರುವವರೆಲ್ಲ ನಮ್ಮನ್ನು ಸೋಲಿಸುತ್ತಾರೆ ಎನ್ನುವುದು ಅಮ್ಮನ ಭಯವಾಗಿತ್ತು. ಇದು ಬಹುಪಾಲಿಗೆ ನಿಜವಾದರೂ, ಈ ಬಡ ಕುಂಬಾರರು ಪಾಪದವರೇ ಎನ್ನುವುದು ನನ್ನ ನಂಬಿಕೆ.”









