Advertisement
ಹುಂಚಾ ಸಚಿನ್ ದೇವ್ ಬರೆದ ಈ ದಿನದ ಕವಿತೆ: ಸಂಜೆಯಾಗಿಹೋಯಿತೇ…

ಹುಂಚಾ ಸಚಿನ್ ದೇವ್ ಬರೆದ ಈ ದಿನದ ಕವಿತೆ: ಸಂಜೆಯಾಗಿಹೋಯಿತೇ…

ಸಂಜೆಯಾಗಿಹೋಯಿತೇ…

ಬಿಸಿಲ ಕೊಳವೆಗಾಳಿ ಹೀರಿ
ಹೊತ್ತಿ ಹಗಲು ಉರಿಯುವಾಗಲೇ..
ಮತ್ತೆ ಬರುವೆನೆಂದು ಹೊರಟ
ಘಳಿಗೆ ತಿರುಗಿ ನೋಡುವಾಗಲೇ..
ಮಡಿಸಿ ಇಟ್ಟ ಪುಟಕೆ
ಮರಳಿ ಹೋಗುವಾಗಲೇ..
ಆರಿ ಹೋದ ಮೌನವೊಂದು
ಮಾತಾಗಿ ಮೂಡುವಾಗಲೇ..
ಬಿಡುವು ಮಾಡಿಕೊಂಡು ಬಂದ
ನಗುವು ಹೊರಡುವಾಗಲೇ..
ಬಿಡಿಸಿದೊಂದು ಚಿತ್ರವೂ
ಭಿತ್ತಿಯಲಿ ಬಂಧಿಯಾಗುವಾಗಲೇ…
ಮೋಡ ತಿಂದ ತುಟಿಯ ಗುರುತು
ಕೆಂಪು ಕೆನ್ನೆಯಲ್ಲಿ
ಗಗನ ನೀಲಿಯಾಗುವಾಗಲೇ..
ಸಂಜೆಯಾಗಿ ಹೋಯಿತೇ …

ಸಚಿನ್‌ ಹೊಸನಗರದ ಹುಂಚಾ ಊರಿನವರು
ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ
ಕವಿತೆ ಕಥೆಗಳನ್ನು ಓದುವುದು ಇವರ ಹವ್ಯಾಸ

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

1 Comment

  1. ಮಮತ

    ತುಂಬ ಚೆನ್ನಾಗಿದೆ ಕವಿತೆ

    Reply

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ