Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ವರ್ಷದ ಮೊದಲ ಮಳೆ ಎಂದರೆ…

ವರ್ಷದ ಮೊದಲ ಮಳೆ ಎಂದರೆ…
ಅಟ್ಟ ಸೇರಿರುವ ಅಡಕೆ ಗೋಣಿ
ಬೆಲೆಯ ಏರು ಇಳಿವು
ಕೊಂಬೆ ತುದಿಯಲ್ಲಿ ನಗುವ ಮಾವಿನಕಾಯಿ
ನಡುನಡುವೆ ಇಣುಕುವ ಹಣ್ಣು ಹಣ್ಣಿನ ಕಣ್ಣು
ತಾಳಮದ್ದಲೆಯ ನೆನಹು
ತಲೆಹಣ್ಣಾದ ಅಜ್ಜನಿಗೆ

ಅಜ್ಜಿಗಂತೂ ಕೌದಿಯ ಧ್ಯಾನ
ಸುತ್ತಮುತ್ತ ಹರಡಿಕೊಂಡ
ತುಂಡು ತುಂಡು ಬಟ್ಟೆಗಳು
ಹರಿದು ಚೆಲ್ಲಾಪಿಲ್ಲಿಯಾದ ಬಟ್ಟೆ
ಚೂರು ಚೂರುಗಳಲ್ಲಿ
ಮಗ ಮಗಳು ಮೊಮ್ಮಕ್ಕಳ
ಮಮಕಾರದ ಸಮಗ್ರತೆ
ಹರಿದ ಬಟ್ಟೆಯ ಬಾಲ್ಯ
ತಡಕಾಡಲ್ಪಡುತ್ತದೆ ಒದ್ದೆಗಣ್ಣಿನಲಿ

ಬಿಸಿ ಬಿಸಿ ಬಜ್ಜಿ
ಗುಟುಕು ಚಹಾ
ಐವತ್ತಾರನೇ ನಂಬರಿನ
ಬಸ್ಸು ಹಿಡಿದು
ಆಫೀಸಿನಿಂದ ಮನೆ ತಲುಪಿದ
ಮಗನ ಪಾಲಿಗೆ

ಸೊಸೆಗೆ ಅಡುಗೆಕೋಣೆ
ಹಪ್ಪಳ ಸಂಡಿಗೆಗಳ
ಕುರುಕುರು ಕಿರಿಕಿರಿ
ಮಾವಿನಮಿಡಿ ಉಪ್ಪಿನಕಾಯಿಯ ನೆಪದಲ್ಲಿ
ಭರಣಿಯೊಳತುಂಬಿಸಿಡುತ್ತಾಳೆ
ಮುಂದಿನೊಂದು ವರ್ಷದ ದೂರಾಲೋಚನೆಯನ್ನು

ಚಳಿ ಮತ್ತು ಬಿಸಿ
ಒಳಕೋಣೆಯಲ್ಲಿರುವ ವಿರಹಿ ಮಂಚ
ಗೋಡೆ ಪಟದಲ್ಲಿ ನಗುವ ರಾಧೆ ಮತ್ತು ಕೃಷ್ಣ
ಹದಿಹರೆಯ ಕಳೆಯದ
ಎಳೆಯ ಮೊಮ್ಮಗಳಿಗೆ

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ