Advertisement
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ದಿನದ ಕವಿತೆ

ಸಮುದ್ರ ಮತ್ತು ಅವನು

ತೀರದಲ್ಲಿ ಒಬ್ಬ ಮನುಷ್ಯ ನಿಂತಿದ್ದಾನೆ
ಅವನ ಮುಂದಿದೆ ವಿಶಾಲವಾದ ಸಮುದ್ರ
ಅದರ ಭವ್ಯತೆಯೇ
ಅವನ ದರ್ಶನವಾಗಿ
ಕಾಣುತ್ತಿದೆ; ಕಾಡುತ್ತಿದೆ
ಮನದೊಳಗೆ ಭೋರ್ಗರೆಯುತ್ತಿರುವ
ಸವಾಲಿನ ಅಲೆಗಳು
ಉಪ್ಪು ತಂಗಾಳಿಯನ್ನೂ ಸಿಹಿಯಾಗಿಸಿದ
ಮೃದು ಮಧುರ ರೂಪಾಂತರ

ತೀರದಲ್ಲಿ ಹರಹಿಕೊಂಡ
ಮರಳಿನ ಕಣಗಳು
ಅವನಲ್ಲಿ ಅಗಾಧತೆಯ
ಅರಿವನ್ನು ಮೂಡಿಸುತ್ತವೆ
ಎನಗಿಂತ ಕಿರಿಯರಿನ್ನಿಲ್ಲ
ಎನ್ನುವಂತೆ ಮಾಡುತ್ತವೆ

ನಿರಂತರ ಚಲನಶೀಲತೆಯ
ನಂತರದ ದೀರ್ಘ ವಿರಾಮವಾಗಿ
ಸಮುದ್ರ ಬೆಳೆಯುತ್ತಲೇ ಇದೆ
ಅವನೊಳಗೆ

ಅವನು ಹಾರುತ್ತಾನೆ
ಸಮುದ್ರದ ಅಂತರಂಗದೊಳಕ್ಕೆ
ತನ್ನಂತರಂಗದೊಳಗಿನ ಸಮುದ್ರವನ್ನು
ಕಂಡುಕೊಳ್ಳುವ ಪ್ರಯತ್ನದಲ್ಲಿ

ನೀಲಿ ಸಮುದ್ರದ ಮೇಗಣ
ಅವನ ಪಯಣ
ಬಿರುಗಾಳಿಗೆ ಅಭಿಮುಖವಾಗಿಯಂತೂ ಅಲ್ಲ
ಸಮುದ್ರದ ಮಹಾಶಾಂತತೆಗೆ ಎದುರಾಗಿ

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ