Advertisement
ಮಲಿಕಜಾನ ಶೇಖ ಬರೆದ ಮಕ್ಕಳ ಕವಿತೆ

ಮಲಿಕಜಾನ ಶೇಖ ಬರೆದ ಮಕ್ಕಳ ಕವಿತೆ

ಗಾಂಧಿತಾತ

ಗಾಂಧಿತಾತ ನಮ್ಮತಾತ
ದೇಶಕ್ಕಾಗಿ ಮಡಿದ
ಮಹಾತ್ಮಾನಾತ…|| ಪ||

ಬಾಲ ಮೋಹನ ಗಾಂಧಿ
ತಾಯಿ-ಗುರುವಿನ ಮಾತಿನಲ್ಲೇ
ಜಗವ ಬೆಳಗಲು ಹೊರಟುಬಿಟ್ಟ…|| ೧||

ಶಾಲೆಯಲ್ಲಿ ಜಾಣನಲ್ಲ
ನೀತಿಯಲ್ಲಿ ಜಗವಬಲ್ಲ
ಅಂತರಾತ್ಮ ಬಂಧದಲ್ಲಿ ನಡೆದುಬಿಟ್ಟ….|| ೨||

ಬಡವ ನನ್ನ ದೇಶ
ಕೋಟು ಸೂಟು ಬೇಡ
ಪಂಚೆವುಟ್ಟು ಸಾಗಿಬಿಟ್ಟ…|| ೩||

ಅಸ್ತ್ರ ಎಂದು ಹಿಡಿಯಲಿಲ್ಲ
ಹನಿ ರಕ್ತ ಚೆಲ್ಲಲಿಲ್ಲ
ಯುದ್ಧ ಮಾತ್ರ ಗೆದ್ದುಬಿಟ್ಟ….|| ೪||

ಸತ್ಯಾಗ್ರಹ ಶಸ್ತ್ರದಿಂದ
ಅಹಿಂಸೆ ಮಾರ್ಗದಲ್ಲಿ
ಬ್ರಿಟಿಷರನ್ನು ನಡುಗಿಸಿಟ್ಟ…|| ೫||

ಮಾಡು ಇಲ್ಲ ಮಡಿ
ದೇಶ ಬಿಟ್ಟು ನಡಿ ಎನುತಾ
ಬ್ರಿಟಿಷರನ್ನು ತೊಲಗಿಸಿಟ್ಟ…|| ೬||

ಸತ್ಯ ಶಾಂತಿ ನ್ಯಾಯ ಕರ್ಮ
ಸಹನೆ ಪ್ರೀತಿ ನನ್ನ ಧರ್ಮ ಎನುತಾ
ಅಜ್ಞಾನ ಅಂಧಕಾರವ ಕಳಚಿಬಿಟ್ಟ….|| ೮||

ನನ್ನ ಜೀವನವೇ
ನನ್ನ ಸಾರ ಎನ್ನುತಾ
ಬದುಕಿಬಿಟ್ಟ….|| ೯||

 

ಮಲಿಕಜಾನ ಶೇಖ
ಸಂಖ, ಜತ್ತ (ಮಹಾರಾಷ್ಟ್ರ)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ