Advertisement

ನಾರಾಯಣ ಯಾಜಿ

ಕಳೆದುಹೋದವರನ್ನು ಹೇಗೆ ಹುಡುಕಲಿ?: ಅಮಿತಾ ರವಿಕಿರಣ್ ಬರಹ

ಇದನ್ನೆಲ್ಲಾ ನಾನೀಗ ಬರೆಯುವಾಗಲೂ ಇದೆಲ್ಲ ಕನಸೇ ಅನಿಸುತ್ತದೆ, ಕಂಡು ಕೇಳರಿಯದ ಊರಿನಿಂದ ಬಂದು, ನನ್ನೂರಿನಿಂದ ಹೋಗುವಾಗ ಅಣ್ಣಂದಿರಾಗಿ ಹೋಗಿದ್ದರು. ಹೋಳಿಗೆ ಬಣ್ಣ ಕಳಿಸುತ್ತಿದ್ದೆ, ದಶರೆಗೆ ಬನ್ನಿ, ರಕ್ಷಾಬಂಧನಕ್ಕೆ ರಾಖಿ, ಸಂಕ್ರಾಂತಿಗೆ ಎಳ್ಳು, ಪತ್ರಗಳಲ್ಲಿ ಒಣಗಿದ ಹೂವು ಎಲೆಗಳು. ಅದೊಂದು ಬೇರೆಯದೇ ಲೋಕವಾಗಿತ್ತು. ಮೂವರಲ್ಲಿ ಜಾಸ್ತಿ ಪತ್ರ ಬರೆಯುತ್ತಿದ್ದುದು ದೆಹಲಿಯ ಅಶೋಕ್ ಕುಮಾರ್ ಮತ್ತು ಅಕ್ಬರ್ ಖಾನ್ ಅವರು. ಜೀತೇಂದ್ರ ಪ್ರಸಾದ್ ಅವರ ಪತ್ರ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಬರುತ್ತಿತ್ತು. ನಾನು, ತಂಗಿ ಪತ್ರ ಬರೆಯುತ್ತಿದ್ದೆವು.
ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

Read More

ಒರಗಿಕೊಳ್ಳುವ ಮುನ್ನ….

ರಜಾದಿನಗಳ ಮಧ್ಯಾಹ್ನಗಳಲ್ಲಿ ನಾನು ಆಕೆ ಮನೆಯ ಆ ನೀಲಿ ಬಾಗಿಲನ್ನ ಧಡ ಧಡ ಬಡಿಯುತ್ತ ನಿಂತು ಬಿಡುತ್ತಿದ್ದೆ, ಮೊದಮೊದಲು, ಬಾಗಿಲು ತೆಗೆದು ಆಮೇಲ್ ಬಾ ಮಾಮ ಮಕ್ಕೊಂಡಾರು ಅನ್ನುತ್ತಿದ್ದ ಅಕ್ಕ, ಆಮೇಲೆ ಒಳಗಿನಿಂದಲೇ ಕೂಗಲು ಶುರು ಮಾಡಿದಳು. ಆನಂತರ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಆಗೆಲ್ಲ ಸಿಕ್ಕಾಪಟ್ಟೆ ಅವಮಾನವಾಗಿ ಕಣ್ಣು ತುಂಬಿಕೊಂಡು ಮನೆಗೆ ಹೋಗುತ್ತಿದ್ದೆ. ನನ್ನ ಅಳುವಿಗೆ ಕಾರಣ ಕೇಳುವಷ್ಟು ವ್ಯವಧಾನ ಯಾರಿಗೂ ಇರಲಿಲ್ಲ. ನನ್ನ ದೋಸ್ತರಾಗಿದ್ದ ಮರಗಳು ಕೂಡ ನನ್ನ ಹತ್ತಿರ ಮಾತು ಬಿಟ್ಟಂತೆ ನನಗೆ ಭಾಸವಾಗುತ್ತಿತ್ತು, ಯಾಕೆಂದರೆ ಅಕ್ಕ ಸಿಕ್ಕಿದ್ದೇ ಸಿಕ್ಕಿದ್ದು… ಮೌನವಾಗಿ ಮಾತನಾಡುವ ಸ್ನೇಹಿತರಿಗಿಂತ ಮಾತನಾಡುವ ಜೀವಕ್ಕೆ ನಾನು ಆದ್ಯತೆ ಕೊಟ್ಟಿದ್ದು ಅವಕ್ಕೂ ಸಿಟ್ಟು ಬಂದಿತ್ತೇನೋ.
ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

Read More

“ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು”

“ರಾತ್ರಿ ಅಂಗಳದಲ್ಲಿ ಚಾಪೆ ಹಾಸಿಕೊಂಡು ನನ್ನನು ತಂಗಿಯನ್ನು ತನ್ನ ತೋಳ ದಿಂಬಿನ ಮೇಲೆ ಮಲಗಿಸಿಕೊಂಡು ಪಪ್ಪಾ ನಮಗೆ ಗೋವಿನ ಕಥೆಯನ್ನು ಹೇಳಿದ್ದು ಅದೆಷ್ಟು ಬಾರಿಯೋ! ಚಿಕ್ಕೆ ತಾರೆಗಳಿಂದ ತುಂಬಿದ್ದ ಆಕಾಶ ದಟ್ಟ ಅರಣ್ಯವಾಗಿ ಬಾನೇ ಬೆಳ್ಳಿತೆರೆಯಾಗಿ ಅಲ್ಲೇ ಎಲ್ಲ ಚಿತ್ತಾರಗಳು ಮೂಡಿದಂತೆ ಅನಿಸುತ್ತಿತ್ತು. ಪ್ರತಿಸಲ ಈ ಕಥೆ ಕೇಳುವಾಗ, ಕರುವನ್ನು ಬಿಟ್ಟು ಹೋಗುವ ಪುಣ್ಯಕೋಟಿಯನ್ನು ನೆನೆದು ಬಿಕ್ಕಿ ಅಳುವುದು, “ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಕಥೆಯಿದು” ಎಂದು ಭಾವುಕರಾಗಿ ಪದೇ ಪದೇ ಹೇಳಿಕೊಳ್ಳುವ ಪರಿಪಾಠವೂ ಇತ್ತು. ಇದು ನನ್ನೊಬ್ಬಳ ಕಥೆಯಲ್ಲ ಕನ್ನಡದ ಪ್ರತಿ ಮಗುವೂ ಗೋವಿನ ಹಾಡಿನ ಗಂಧದಲ್ಲಿ ಮಿಂದೆದ್ದು ಬಂದಿದೆ.”

Read More

ಕಳೆದುಕೊಂಡದ್ದಕ್ಕಿಂತ ಪಡೆದುಕೊಂಡದ್ದರ ತೂಕವೇ ಹೆಚ್ಚು…

ನನ್ನ ಉದ್ದ ಕೂದಲನ್ನು ಮೂರು ನಾಲ್ಕುದಿಕ್ಕಿನಲ್ಲಿ ಇಳಿಬಿಟ್ಟು ಒಂದೊಂದೇ ಭಾಗವನ್ನು ತಿಕ್ಕಿ ತಿಕ್ಕಿ ಚಂದ ಮಾಡಿ ಸ್ನಾನ ಮಾಡಿಸಿದ ಕೂದಲು ಒಣಗಿದ ಮೇಲೆ ಹಗುಹಗುರಾಗಿ ಇಮ್ಮಡಿಸುತ್ತಿತ್ತು, ಕೆಲವೊಮ್ಮೆ ಈ ಸ್ನಾನದ ನಂತರ ಊಟ ಮಾಡಿ ಪಪ್ಪನ ಕೈಮೇಲೆ ಕಥೆ ಕೇಳುತ್ತ ಮಲಗಿದರೆ ಏಳುತ್ತಿದ್ದುದು ಸಂಜೆ ಆರಕ್ಕೆ. ಅದೊಂದು ದಿನ ಮಧ್ಯಾಹ್ನ ಮಲಗಲು, ನಮಗೆ ಅವಕಾಶ ಇತ್ತಾದರೂ, ನಾವು ತಪ್ಪಿಸಿಕೊಳ್ಳುವ ಎಲ್ಲ ಉಪಾಯ ಮಾಡುತ್ತಿದ್ದೆವು.
ಅಮಿತಾ ರವಿಕಿರಣ್‌ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ