Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ನಾವೇ ಭೂಮಿಯ ವಾರಸುದಾರರೇ?: ಚಂದ್ರಮತಿ ಸೋಂದಾ ಸರಣಿ

ನಮ್ಮ ಬಂಧುವೊಬ್ಬರದು ಅರಣ್ಯದ ನಡುವಿನ ಒಂಟಿ ಮನೆ. ಒಂದು ಬೇಸಿಗೆಯ ಬೆಳದಿಂಗಳ ರಾತ್ರಿಯಲ್ಲಿ ಹುಲಿ ಮತ್ತು ಕಾಡೆಮ್ಮೆ ಎರಡರ ನಡುವೆ ಭಯಂಕರ ಕಾದಾಟ. ಅವರ ಮನೆಯ ಹಿತ್ತಿಲಿನ ಪಕ್ಕದಲ್ಲಿಯೇ ಇವೆರಡರ ಹೋರಾಟವನ್ನು ಆ ಮನೆಯ ಜನರೆಲ್ಲ ಕುತೂಹಲದಿಂದ ಸುಮಾರು ಅರ್ಧಗಂಟೆಗೂ ಹೆಚ್ಚಿನ ಸಮಯ ವೀಕ್ಷಿಸಿದರಂತೆ. ಆ ಪ್ರಾಣಿಗಳ ಹೋರಾಟದ ಜಾಗಕ್ಕೂ ಇವರ ಮಧ್ಯೆ ಕೇವಲ ಒಂದು ಬೇಲಿಯಷ್ಟೆ ಇದ್ದುದು. ಇದು ಎಲ್ಲಿಯೂ ಸುದ್ದಿಯಾಗಲೇ ಇಲ್ಲ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ಮಳೆರಾಯ ಬಂದ ಮಲ್ಲೆಹೂವು ತಂದ: ಚಂದ್ರಮತಿ ಸೋಂದಾ ಸರಣಿ

ಚೌತಿಹಬ್ಬ ಮುಗಿಯಿತು ಎಂದರೆ ಮಳೆಗೆ ತುಸು ಬಿಡುಗಟ್ಟು. ಎಲ್ಲಕಡೆ ಬಣ್ಣಬಣ್ಣದ ಚಿಟ್ಟೆಗಳ ಮೇಳ. ನಮ್ಮೊಳಗೆ ಅವುಗಳನ್ನು ಹಿಡಿಯುವ ಸ್ಪರ್ಧೆ. ಇನ್ನೇನು ಕೈಗೆ ಸಿಕ್ಕೇಬಿಟ್ಟಿತು ಎನ್ನುವಷ್ಟರಲ್ಲಿ ಮಾಯ. ಆಗ ಮರಳಿ ಯತ್ನವ ಮಾಡು. ಅವು ಅಷ್ಟು ಸುಲಭವಾಗಿ ನಮ್ಮ ಕೈಗೆ ಸಿಗುತ್ತಿರಲಿಲ್ಲ. ಇನ್ನೊಂದು ಬಗೆಯ ಚಿಟ್ಟೆಗಳು ಹಾರಾಡುತ್ತಿದ್ದವು. ಅವು ನಮಗೆ ಆಕರ್ಷಕವಾಗಿ ಕಾಣಿಸುತ್ತಿರಲಿಲ್ಲ. ನಾವು ಅವನ್ನು ಕರೆಯುತ್ತಿದ್ದದು ವಿಮಾನ ಎಂದು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಐದನೆಯ ಕಂತಿನಲ್ಲಿ ಆಗಿನ ಮಳೆ ದಿನಗಳ ಕುರಿತ ಬರಹ

Read More

ನೀನೆ ಭುವನಕ್ಕಾರಾಧ್ಯನೈ… ಚೂತರಾಜಾ: ಚಂದ್ರಮತಿ ಸೋಂದಾ ಸರಣಿ

ಮಲೆನಾಡು, ಕರಾವಳಿ ಭಾಗದಲ್ಲಿ ಕೊಸಗಾಯಿ ಅಥವಾ ಕುಚ್ಚುಮಾವಿನಕಾಯಿ ಎನ್ನುವುದು ಮಳೆಗಾಲದಲ್ಲಿ ಅಡಿಗೆಗೆ ಸಹಾಯಕ. ಕುದಿಯುವ ಹಂತದಲ್ಲಿದ್ದ ನೀರಿಗೆ ತೊಳೆದು ಶುದ್ಧಗೊಳಿಸಿದ ಮಾವಿನಕಾಯಿಗಳನ್ನು ಹಾಕಿ ಒಂದು ಕ್ಷಣಬಿಟ್ಟು ಅದನ್ನು ಅಲ್ಲಿಂದ ತೆಗೆದು ಆರಿದ ಮೇಲೆ ಉಪ್ಪುನೀರಿನಲ್ಲಿ ಹಾಕಿಡಬೇಕು. ಇದರಿಂದಲೂ ಹಸಿಮಾವಿನಕಾಯಿಯಲ್ಲಿ ಮಾಡುವ ವ್ಯಂಜನಗಳನ್ನೆಲ್ಲ ಮಾಡಬಹುದು. ಇದಕ್ಕೂ ಅಷ್ಟೆ, ಎಲ್ಲ ಮಾವಿನಕಾಯಿಯೂ ಬಾರದು. ಸಿಪ್ಪೆ ದಪ್ಪವಿದ್ದು ಉಪ್ಪಿನಲ್ಲಿ ಕರಗಬಾರದು. ಜೋಓಓ ಎಂದು ಹೊಯ್ಯುವ ಮಳೆಯಲ್ಲಿ ಕಮ್ಮಗೆ ಉಂಡು, ಬೆಚ್ಚನೆ ಹೊದ್ದು ಮಲಗಿದರೆ ʻಸ್ವರ್ಗಕ್ಕೆ ಕಿಚ್ಚು ಹಚ್ಚೆಂದ….ʼ
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ನಾಲ್ಕನೆ ಕಂತು

Read More

ಮುಳ್ಳಕ್ಕಿಯ ರೆಕ್ಕೆಪುಕ್ಕಗಳು: ಡಾ. ಚಂದ್ರಮತಿ ಸೋಂದಾ ಸರಣಿ

ಹಿಂದೆ ಕೂಲಿ ಕೆಲಸ ಮಾಡುವ ಜನರು ಬೇಸಿಗೆಯಲ್ಲಿ ಒಣಗಿಸಿಟ್ಟ ಹಲಸಿನ ಬೀಜಗಳನ್ನು ಮಳೆಗಾಲದಲ್ಲಿ ಮುಖ್ಯ ಆಹಾರವಾಗಿ ಬಳಸುತ್ತಿದ್ದರು. ಆಗ ಅಧಿಕ ಮಳೆ ಹೊಯ್ಯುತ್ತಿದ್ದುದರಿಂದ ಅವರಿಗೆ ಕೂಲಿಕೆಲಸ ಸಿಗುತ್ತಿರಲಿಲ್ಲ, ದವಸಧಾನ್ಯಗಳನ್ನು ಕೊಳ್ಳಲು ಆಗುತ್ತಿರಲಿಲ್ಲ. ಒಂದುಹೊತ್ತು ಅನ್ನವನ್ನೋ ಗಂಜಿಯನ್ನೋ ಉಂಡರೆ ಇನ್ನೊಂದು ಹೊತ್ತಿಗೆ ಹಲಸಿನ ಬೇಳೆಯೇ ಆಹಾರವಾಗಿತ್ತು. ಹೀಗೆ ಹಲಸಿನ ಬೇಳೆ ಅವರನ್ನು ಸಲಹುತ್ತಿತ್ತು. ಇತ್ತೀಚೆಗೆ ಹಲಸಿನ ಬೇಳೆಯಲ್ಲಿ ಅತ್ಯಧಿಕ ಪೌಷ್ಟಿಕಾಂಶ ಇದೆ ಎನ್ನುವ ಸಂಗತಿ ಪ್ರಚಲಿತವಾಗಿದೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯಲ್ಲಿ ಮೂರನೆಯ ಬರಹ

Read More

ಕಾಶಿಗೆ ಹೋಗಲೂ ಚೌಕಾಶಿಯೇ: ಡಾ. ಚಂದ್ರಮತಿ ಸೋಂದಾ ಸರಣಿ

ಕೆಲವು ಬಾರಿ ಮನೆಯ ತಾಪತ್ರಯವಿದ್ದಾಗ ಸುಗ್ಗಿ ಮಾಡಲು ಕಷ್ಟ ಅಂತ ಫಸಲುಗುತ್ತಿಗೆ ಅಂತ ಕೊಡುವ ರೂಢಿಯಿತ್ತು. ಬೆಳೆಯ ಅಂದಾಜು ಮಾಡಿ ಇಂತಿಷ್ಟು ಹಣ ಅಂತ ನಿಗದಿಮಾಡಿ ಒಟ್ಟಾಗಿ ಹಣವನ್ನು ಸಂದಾಯ ಮಾಡುತ್ತಿದ್ದರು. ಆ ವರ್ಷ ಬೆಳೆ ಅಂದಾಜಿಗಿಂತ ಹೆಚ್ಚಾದರೆ ಅಥವಾ ಇವರ ಬೆಳೆಗೆ ಒಳ್ಳೆಯ ದರ ಬಂದರೆ ಬೆಳೆಗಾರರು ಕೈಕೈ ಹಿಸುಕಿಕೊಳ್ಳುತ್ತಿದ್ದರು. ʻಅಯ್ಯೋ! ಅನ್ಯಾಯವಾಗಿ ದುಡ್ಡು ಕಳಕಂಡೆ.ʼ ಅಂತ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಎರಡನೆಯ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ