Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

ನಡುವೆ ಹತ್ತಿದವರು ನಡುವೆಯೇ ಇಳಿದುಹೋದರು: “ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್‌ ಕಲ್ಯಾಣಿ ಬರಹ

ಹೀಗೆ ಕಾಲ ಓಡಿತು. ಪತ್ರಗಳು ನಿಂತು ಹೋದವು. ಫೋನ್ ನಿಂತುಹೋಯಿತು. ಅವರವರ ಕೆಲಸದಲ್ಲಿ ಅವರವರು ಬ್ಯುಸಿ ಆದರು. ಓದು, ಕೆಲಸ ಹುಡುಕುವುದು, ಹಣಕಾಸಿನ ತಾಪತ್ರಯದಲ್ಲಿ ನಾವುಗಳು ಊರಿಗೆ ಹೋಗಿ ಬರುವುದು ಕಡಿಮೆಯಾಯಿತು. ಊರಿನಲ್ಲಿ ಮೊದಲು ದೊಡ್ಡ ದೊಡ್ಡಮ್ಮ, ನಂತರ ಹಿರಿಯಕ್ಕ ತೀರಿಕೊಂಡ ಸುದ್ದಿ ಹೇಗೋ ನಮ್ಮನ್ನು ತಲುಪಿತು. ಅಲ್ಲಿಗೂ ಇವಳು ಹೆಚ್ಚು ಹೋಗಿ ಬಂದು ಮಾಡುತ್ತಿರಲಿಲ್ಲ, ತನ್ನ ಗಂಡನ ಮುಂದೆ ತಾಯಿ ಮನೆಯ ಹೀನಾಯ ಪರಿಸ್ಥಿತಿ ಕಾಣಬಾರದೆಂದು ಭಾವಿಸಿ…. ಅವಳ ತಮ್ಮ ಹೆಂಡತಿಯೊಂದಿಗೆ ಕಿರಿಕಿರಿ ಮಾಡಿಕೊಂಡ. ಕುಡಿತ ಹೆಚ್ಚಾಯಿತು. ಬದುಕು ಮೂರಾ ಬಟ್ಟೆಯಾಯಿತು.
“ದಡ ಸೇರದ ದೋಣಿ” ಸರಣಿಯಲ್ಲಿ ವಸಂತಕುಮಾರ್‌ ಕಲ್ಯಾಣಿ ಬರಹ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಒಮ್ಮೆ ಹೀಗೆ ಬಿಡುವಿದ್ದಾಗ, ಐತಾಳರು ನನ್ನ ಹಿನ್ನೆಲೆ ಬಗ್ಗೆ ವಿಚಾರಿಸಿದಾಗ ಸುಳ್ಳು ಹೇಳಲು ಮನಸ್ಸಾಗದೆ ಎಲ್ಲ ಹೇಳಿಬಿಟ್ಟೆ. ಮನಸ್ಸು ಹಗುರಾಯಿತು. ಈವರೆಗೂ ಸಂಪೂರ್ಣ ಸತ್ಯ ಯಾರಿಗೂ ಹೇಳಿರಲಿಲ್ಲ. ಐತಾಳರು ಸ್ವಲ್ಪ ಹೊತ್ತು ನನ್ನ ಮುಖವನ್ನೇ ನೋಡಿದರು. ಕೆಲಸದ ವಿಷಯದಲ್ಲಿ ಅವರು ತುಂಬಾ ಸ್ಟ್ರಿಕ್ಟ್; ಆದರೆ ಹೆಂಗರಳು. ಕೆಲಸಗಾರರನ್ನು ಮಕ್ಕಳ ಹಾಗೆ ನೋಡಿಕೊಳ್ಳುವ ಸ್ವಭಾವ. “ಆದ್ರೂ ನೀ ಊರು ಬಿಟ್ಟು ಬರಬಾರದಿತ್ತು ಮಾರಾಯ, ನೀ ಎಣಿಸಿದ ಹಾಗೆ ಅಲ್ಲೇನು ಆಗಿರಲಿಕ್ಕಿಲ್ಲ. ಈ ಕಾಲದ ಜನ ಕಥೆ ಸಿನಿಮಾ ಧಾರಾವಾಹಿ ನೋಡಿ ಎಂತೆಲ್ಲಾ ಗ್ರಹಿಸಿ ಹೀಗೆ ಮಾಡಿಬಿಡೋದು ಹೌದಲ್ಲವನ!”
ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ “ಅನಿಕೇತನ” ನಿಮ್ಮ ಓದಿಗೆ

Read More

ಶೂನ್ಯ ಟಿಕೆಟ್’ನ ಒಂದು ಪ್ರಸಂಗ: ವಸಂತಕುಮಾರ್‌ ಕಲ್ಯಾಣಿ ಬರಹ

ಕಂಡಕ್ಟರ್ ಒಂದು ನಿರ್ಧಾರಕ್ಕೆ ಬಂದ. ಪೊಲೀಸರು ಬರಲಿ ಅವರೇ ನಿರ್ಧರಿಸಲಿ ಎಂದು ಬಸ್ ನಿಲ್ಲಿಸಲು ಡ್ರೈವರ್‌ಗೆ ಸೂಚಿಸಿದ. ಆದರೂ ಬಸ್ ನಿಲ್ಲಲಿಲ್ಲ. ಪೋಲೀಸರ ಪ್ರವೇಶ ಮಾತಿನಲ್ಲಿ ಆದದ್ದಕ್ಕೆ, ಈ ಮೂವರು “ಕರೆಸಯ್ಯ ನಾವು ನೋಡದೆ ಇರೋ ಪೋಲಿಸ್ರಾ… ಹೆದರಿಸ್ತೀಯಾ? ಕರೆಸೆ ಬಿಡು” ಎಂದು ದುಂಬಾಲು ಬಿದ್ದರು. (ಹಾಗೆ ನಟಿಸಿದರು) ಒಂದು ಸ್ಟಾಪ್ ಮುಂದೆ ಬಂದ ಬಸ್ ಅನಿವಾರ್ಯವಾಗಿ ನಿಲ್ಲಿಸಬೇಕಾಯಿತು. ಐದು ನಿಮಿಷದಿಂದ ಯಾರಿಗೋ ಫೋನ್ ಮಾಡುತ್ತಾನೆ ಇದ್ದ ಕಂಡಕ್ಟರ್ “ಪೊಲೀಸರು ಬರ್ಲಿ; ಗೊತ್ತಾಗುತ್ತೆ” ಎನ್ನುತ್ತಾ. ಬಸ್ ಅನಿವಾರ್ಯವಾಗಿ ನಿಂತಿತು.
ವಸಂತಕುಮಾರ್ ಕಲ್ಯಾಣಿ ಬರೆದ ಶೂನ್ಯ ಟಿಕೇಟ್‌ ಒಂದರ ಪ್ರಸಂಗ ನಿಮ್ಮ ಓದಿಗೆ

Read More

ಅನಾಯಾಸೇನ ಮರಣಂ……: ವಸಂತಕುಮಾರ್‌ ಕಲ್ಯಾಣಿ ಪ್ರಬಂಧ

ಹೊರಗೆ ಬಂದು, ರಿಸೆಪ್ಷನಿಸ್ಟ್ ಲೆಕ್ಕ ಹಾಕಿ, “ಇನ್ನು ಎಂಟುನೂರು ಕಟ್ಟಿ ಸಾಕು” ಎಂದು ಔದಾರ್ಯ ತೋರಿ, ಅದರಂತೆ ಮಾಡಿ ಹೊರ ಬಂದಾಗ ನನ್ನ ಹೆಂಡತಿ ತುಂಬಾ ಖುಷಿಯಲ್ಲಿದ್ದಳು. “ಸದ್ಯ ದೇವರು ಕಾಪಾಡಿದ, ನೀವು ಸುಮ್ಮನೆ ಟೆನ್ಶನ್ ಮಾಡಿಕೊಳ್ಳುತ್ತೀರಾ. ಡಾಕ್ಟರ್ ತುಂಬಾ ಒಳ್ಳೆಯವರು, ಬೇರೆಯವರಿಗೂ ರೆಕಮೆಂಡ್ ಮಾಡಬಹುದು. ಇನ್ನು ನೀವು ಸುಮ್ಮನೆ ತಲೆ ಕೆಡಿಸಿಕೊಳ್ಳದೆ ಆರಾಮಾಗಿರಿ.” ಹೀಗೆ ಸತತವಾಗಿ ಹೇಳಿ, ನಾನು ಎಲ್ಲದಕ್ಕೂ ತಲೆಯಾಡಿಸಿ “ಆರು ಸಾವಿರ ಅಂದಿದ್ದರೆ ಸುಮ್ಮನೆ ಕೊಡುತ್ತಿದ್ದೆವು, ಇನ್ನೂರು ಉಳಿದಿದೆಯಲ್ಲ ಅದರಲ್ಲಿ ಸ್ವೀಟ್ ತಗೊಂಡು ಹೋಗೋಣ” ಎಂದಾಗ ಅದಕ್ಕೂ ತಲೆಯಾಡಿಸಿದೆ.
ವಸಂತಕುಮಾರ್‌ ಕಲ್ಯಾಣಿ ಪ್ರಬಂಧ “ಅನಾಯಾಸೇನ ಮರಣಂ…”

Read More

ಹಿಂಗೊಂದಿತ್ತು ಕಾಲ…: ವಸಂತಕುಮಾರ್‌ ಕಲ್ಯಾಣಿ ಬರಹ

ತರಕಾರಿ ಗುಣಮಟ್ಟ ನೋಡುವುದು, ಚೌಕಾಶಿ ಮಾಡುವುದು ಮೊದಲಾದರಲ್ಲಿ ತೊಡಗಿಕೊಂಡರೆ, ಈ ಸಮೂಹದಲ್ಲಿದ್ದ ರಾಮಕ್ಕ, ಚೆನ್ನಮ್ಮಕ್ಕ, ಜೊತೆ ಇನ್ನೊಬ್ಬರು ಇದ್ದರು -ಒಂದು ಹೂವಿನ ಹೆಸರು ಅವರದು- ಯಾವ ಮಾಯದಲ್ಲೋ ಎರಡು ಬದನೆಕಾಯಿಯನ್ನೋ, ಒಂದು ಮಾವಿನ ಹಣ್ಣನ್ನೋ ‘ಅಬೇಸ್’ ಮಾಡಿ ಸೆರಗಿನಲ್ಲಿ ಮುಚ್ಚಿಟ್ಟುಕೊಂಡು ಗಾಡಿ ಹೋದ ನಂತರ ಉಳಿದವರಿಗೆ ತಮ್ಮ ಕೈಚಳಕದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದೂ, ಉಳಿದವರು ಅದಕ್ಕೆ ಕೊಂಕಿನ, ಮೆಚ್ಚುಗೆಯ ಮಾತಾಡುತ್ತಾ ಒಂದಷ್ಟು ಸಮಯ ಕಳೆಯುತ್ತಿದ್ದರೆ, ನಮ್ಮಮ್ಮ ಪಾಪ ಭೀರು, “ಪಾಪ ಯಾಕೆ ಹಾಗೆ ಮಾಡಿದೆ, ಈ ಬಿಸಿಲಿನಲ್ಲಿ ಸುತ್ತುವ ಅವನಿಗೆ ನಷ್ಟವಾಯಿತಲ್ಲ” ಎಂದು ಕೊರಗುತಿದ್ದರು.
ವಸಂತಕುಮಾರ್‌ ಕಲ್ಯಾಣಿ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ