Advertisement

ದೇವಿಕಾ ನಾಗೇಶ್

ಒಂದು ಸಮಸ್ಯೆ, ಸಾಂಘಿಕ ಬಹು-ಉತ್ತರಗಳು: ಡಾ. ವಿನತೆ ಶರ್ಮಾ ಅಂಕಣ

ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಬಲವಾದ ಅಸ್ಮಿತೆ ಇಲ್ಲದಿರುವುದು, ಎಲ್ಲಾ ವಿಷಯಗಳಲ್ಲೂ ದೂರದ ಬ್ರಿಟನ್, ಅಮೆರಿಕಾ, ಯುರೋಪ್ ರಾಷ್ಟ್ರಗಳ ನಡೆ-ನುಡಿಗಳನ್ನು ಚಾಚೂತಪ್ಪದೆ ಪಾಲಿಸುತ್ತಾ, ಅವರ ನಿಲುವುಗಳನ್ನೆ ತನ್ನದಾಗಿಸಿಕೊಂಡು ಗುಲಾಮಗಿರಿ ತೋರುವುದು, ತಾವಿರುವ ಏಷ್ಯಾ-ಪೆಸಿಫಿಕ್ ವಲಯದಲ್ಲಿ ತಮ್ಮನ್ನು ಗುರುತಿಸಿಕೊಳ್ಳದೆ ಹೇಡಿತನ ತೋರುವುದು ಕೂಡ ಸಮಸ್ಯೆಯೆ. ಆಸ್ಟ್ರೇಲಿಯಾ ಅಧಿಕೃತವಾಗಿ ಬ್ರಿಟನ್ನಿನ ಅಧಿಪತ್ಯವನ್ನು ಒಪ್ಪಿಕೊಂಡು ಅದರ ಒಂದು ತುಣುಕಾಗಿದ್ದು, ವಸಾಹತುಶಾಹಿ ಬಿಳಿಯರ ದೇಶವಾಗಿದ್ದುಕೊಂಡೆ ಬಾಳುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಮಕ್ಕಳ ಶೋಷಣೆಯ ಪಾಪಿಷ್ಟರು: ಡಾ. ವಿನತೆ ಶರ್ಮಾ ಅಂಕಣ

ಹದಿನೆಂಟು ವರ್ಷವಾದಾಗ ಒಬ್ಬ ವ್ಯಕ್ತಿ ‘adult’ ಎಂದು ಸರ್ಕಾರ ಹೇಳುತ್ತದೆ. ಇವರು ತಮ್ಮ ಜೀವನಕ್ಕೆ ತಾವೇ ಸಂಪೂರ್ಣವಾಗಿ ಜವಾಬ್ದಾರರು. ಪೂರ್ಣಾವಧಿ ಉದ್ಯೋಗದಲ್ಲಿದ್ದು ಮುಂದೆ ತಮ್ಮದೇ ಕುಟುಂಬ ಆರಂಭಿಸಿದಾಗ ಇವರ ಮಕ್ಕಳು ಚೈಲ್ಡ್ ಕೇರ್ ಸೆಂಟರ್‌ಗೆ ಹೋಗುವುದು ಅನಿವಾರ್ಯವಾಗುತ್ತದೆ. ಪಾರ್ಟ್ ಟೈಮ್ ಕೆಲಸ ಮಾಡುತ್ತಾ ಮಕ್ಕಳನ್ನು ಪೋಷಿಸುತ್ತೀವಿ ಎಂದರೆ ಅವರ ಕೆರಿಯರ್‌ಗೆ ದೊಡ್ಡ ಹೊಡೆತ. ಅಲ್ಲದೆ ಒಂದೂವರೆ ಸಂಬಳವಿದ್ದರೆ ಇತ್ತ ಕಡೆ ಕುಟುಂಬದ ಖರ್ಚುಗಳನ್ನು ತೂಗಿಸಲು ಕಷ್ಟ. ಅತ್ತ ಕಡೆ ಸರಕಾರದಿಂದ welfare ಸಹಾಯ ಸಿಗುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅಣಬೆ ಅಡುಗೆ, ಅಪರಾಧದ ಕತೆ: ಡಾ. ವಿನತೆ ಶರ್ಮಾ ಅಂಕಣ

ನ್ಯಾಯಾಲಯವು ಈ ಕೇಸ್ ಗೆಂದು ಈ ವರ್ಷ ಲಾಟ್ರೋಬ್ ವ್ಯಾಲಿ ಪ್ರದೇಶದ ಸುಮಾರು ಹದಿನೈದು ಸಾವಿರ ಜನರನ್ನು ಸಂಪರ್ಕಿಸಿ ಜ್ಯೂರಿಗಳಾಗುತ್ತೀರಾ ಎಂದು ಕೇಳಿತ್ತು. ಜ್ಯೂರಿಗಳಾಗುವುದಕ್ಕೆ ಒಪ್ಪಿಕೊಂಡರೆ ಅವರು ಸುಮಾರು ನಾಲ್ಕು ತಿಂಗಳ ಕಾಲ ಕೌಂಟಿ ಮತ್ತು ರಾಜ್ಯದ ಸುಪ್ರೀಂ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಸಮಯವನ್ನು ಕೊಡಬೇಕಿತ್ತು. ಅದಲ್ಲದೆ, ಕೇಸ್ ನಡೆಯುವುದನ್ನು ನಿಯಮಿತವಾಗಿ ಗಮನವಿಟ್ಟು ನೋಡಿ, ತಮ್ಮ ತಂಡದಲ್ಲಿ ಚರ್ಚಿಸಿ ವಾರದಿಂದ ವಾರಕ್ಕೆ ಮುನ್ನಡೆಯುವುದಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಆಸ್ಟ್ರೇಲಿಯಾದ ಐತಿಹಾಸಿಕ ಮೈಲಿಗಲ್ಲು: ಡಾ. ವಿನತೆ ಶರ್ಮಾ ಅಂಕಣ

ಒಂದೆಡೆಯಿಂದ ಇನ್ನೊಂದು ಎಡೆಗೆ ಹೋಗುವ ದಾರಿಯ ಬಗ್ಗೆ ಹೇಳಲು ಕರಾರುವಾಕ್ಕಾದ ಸೂಚನೆಗಳನ್ನು ಹಾಡುಗಳಲ್ಲಿ ಅಡಕಿಸಿದ್ದಾರೆ. ಎಲ್ಲಿ ಕುಡಿಯಲು ನೀರು ಸಿಗುತ್ತದೆ, ತಿನ್ನಲು ಗೆಡ್ಡೆಗೆಣಸು, ತಂಗಲು ಸ್ಥಳ ಸಿಗುತ್ತದೆ, ಅನ್ನುವುದೂ ಈ ಹಾಡುಗಳಲ್ಲಿ ತಿಳಿಯುತ್ತದೆ. ಆಕಾಶದಲ್ಲಿ ಬೆಳಗಿನ ಸೂರ್ಯರಶ್ಮಿ ಇನ್ನೂ ಕೆಳಗಿರುವಾಗ ಈ ನೀರಿನ ತೊರೆಯಿಂದ ನಡೆಯುತ್ತಾ, ಓಡುತ್ತಾ ಹೊರಟು ಆ ದೊಡ್ಡ ಗಮ್ ಮರದ ಉತ್ತರಕ್ಕಿರುವ ಕುರುಚಲು ಪೊದೆಕಾಡು ದಾಟಿ ಬಿಸಿಲು ನಡುನೆತ್ತಿಯ ಮೇಲಿದ್ದಾಗ ಆ ಕಿರುದಿಣ್ಣೆ ಸಿಗುತ್ತದೆ. ಅದೇ ದಾರಿಯಲ್ಲಿ ಸೂರ್ಯನ ಇಳಿಬಿಸಿಲಿನ ಜಾಡನ್ನು ಹಿಂಬಾಲಿಸುತ್ತಾ ಹೋದರೆ ಬಂಡೆರಾಶಿ ಕಾಣುತ್ತದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸತ್ಯ-ಮಿಥ್ಯಗಳ ಲೋಕವಿದು!: ಡಾ. ವಿನತೆ ಶರ್ಮಾ ಅಂಕಣ

ವಿಮಾನ ಡಿಕ್ಕಿ ಹೊಡೆದ ಆಸ್ಪತ್ರೆ, ಮೆಡಿಕಲ್ ಕಾಲೇಜು ಹಾಸ್ಟೆಲ್‌ನಲ್ಲಿದ್ದ ಕೆಲವರು ಏನಾಗುತ್ತಿದೆ ಎಂದು ಕೇಳುತ್ತಾ ಆ ಪ್ರಶ್ನೆಗೊಂದು ಕೊನೆ ಚುಕ್ಕೆ ಇಡದೆಯೆ ಹೋಗಿದ್ದಾರೆ. ರೆಸ್ಟ್ ಇನ್ ಪೀಸ್. ಆತ್ಮಕ್ಕೆ ಶಾಂತಿ ಸಿಗಲಿ. ಕಣ್ಣೀರು, ದಿಗ್ಭ್ರಮೆ, ಪುಂಖಾನುಪುಂಖ ಪ್ರಶ್ನೆಗಳು, ಎಲ್ಲರೂ ಹುಡುಕುತ್ತಿರುವ ಉತ್ತರಗಳ ಸಾಗರ ಅಪ್ಪಳಿಸಿದೆ. ಅದ್ಯಾವುದೊ ಕರುಣಾಳು ಬೆಳಕು ಒಬ್ಬನೇ ಒಬ್ಬ ಪ್ರಯಾಣಿಕನನ್ನು ಕೈಹಿಡಿದು ನಡೆಸಿ ಕಾಪಾಡಿದೆ. ಅವನ ಕಥೆ ಅಪನಂಬಿಕೆಗಳ ಲೋಕದಲ್ಲಿ ಉಳಿದ ಒಂದೇ ಒಂದು ಹುಲ್ಲುಕಡ್ಡಿ ಸತ್ಯವಾಗಿದೆ. ಇದೇನಿದು ಮಿಥ್ಯ-ಸತ್ಯಗಳ ಲೋಕವಿದು!
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ