Advertisement
ಡಾ. ವಿನತೆ ಶರ್ಮ

ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.

ಹೊಸವರ್ಷ, ಹೊಸಜೀವನದ ಮಜಲುಗಳು: ವಿನತೆ ಶರ್ಮ ಅಂಕಣ

ನಾನೇನೋ ಒಂದಷ್ಟು ಹನಿ ಬಿತ್ತು ಅಂದೆ ಸರಿ. ಆದರೆ ಸಣ್ಣ ಮಳೆ ಬಿದ್ದದ್ದು ಬ್ರಿಸ್ಬೇನ್, ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ. ಇದನ್ನು ಅಪಹಾಸ್ಯ ಮಾಡುವಂತೆ ಉತ್ತರ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ (ಬ್ರಿಸ್ಬೇನ್ ನಗರದಿಂದ ೧,೪೦೦ ಕಿಮೀ ದೂರ) Townsville ನಗರ ಮತ್ತು ಅದರ ಆಸುಪಾಸಿನಲ್ಲಿ ಭಾರಿ ಮಳೆ ಬಿದ್ದು, ಪ್ರವಾಹ ಸ್ಥಿತಿ ಉದ್ಭವಿಸಿ ಈಗ ಅದನ್ನು ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ನಿಭಾಯಿಸುತ್ತಿವೆ. ಸಾವಿರಾರು ಜನರು ಪ್ರವಾಹಪೀಡಿತ ಸಂತ್ರಸ್ತರು ಎಂದು ನೋಂದಾಯಿಸಿಕೊಂಡಿದ್ದಾರೆ. ಅನೇಕ ಕಡೆ ರಸ್ತೆಗಳು ಮುಚ್ಚಿವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಭಾರತೀಯ-ಬ್ರಿಟಿಷ್ ಸಂಧಿಯಾದ ಸೆಂಚುರಿ ಕ್ಲಬ್: ವಿನತೆ ಶರ್ಮ ಅಂಕಣ

ನಾನು ಇದನ್ನೆಲ್ಲಾ ಕಲ್ಪಿಸಿಕೊಳ್ಳುತ್ತಾ ನಡೆದಾಡುತ್ತಾ, ಫೋಟೋಗಳನ್ನ ತೆಗೆಯುತ್ತಾ ಇತಿಹಾಸದ ಕಾಲಘಟ್ಟಗಳಲ್ಲಿ ಕಳೆದುಹೋಗಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದೆ. ಅತ್ತ ಕಡೆ ನನ್ನ ಗಂಡ, ‘ನಾವಿಲ್ಲಿ ಕೂತಿದ್ದು, ಅಲ್ಲಿ ಆ ಲಾನ್‌ನಲ್ಲಿ ಒಂದು ಆನೆ ಕುಟುಂಬ ಓಡಾಡುತ್ತಿದ್ದಾರೆ ಎಷ್ಟು ಚೆನ್ನ, ಅಲ್ವಾ’ ಎಂದರು. ನನ್ನ ಬ್ರಿಟಿಷ್ ಗಂಡನ ಮಾತು ಕೊಲೊನಿಯಲ್ ಟೈಮ್ಸ್ ಕಲ್ಪನೆಗಳಲ್ಲಿ ಮುಳುಗಿದ್ದ ನನ್ನ ಭಾರತೀಯ ಮನಸ್ಸನ್ನು ತಾಕಿತ್ತು. ಆ ಕ್ಷಣದಲ್ಲಿ ಅಲ್ಲೊಂದು ಭಾರತೀಯ-ಬ್ರಿಟಿಷ್ ಸಂಧಿ-ಸಮಾಗಮವಾಗಿತ್ತು. ಖಂಡಿಸಬೇಕೊ, ನಗಬೇಕೊ ತಿಳಿಯದೇ ಕಕ್ಕಾಬಿಕ್ಕಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಆಸ್ಟ್ರೇಲಿಯನ್ ಬನ್ನಿಂಗ್ಸ್ ಸಂಸ್ಕೃತಿ: ವಿನತೆ ಶರ್ಮ ಅಂಕಣ

ರಜೆ ಮುಗಿದು ಕೆಲಸಕ್ಕೆ ವಾಪಸ್ಸಾದ ಸಹೋದ್ಯೋಗಿಗಳನ್ನು ‘ರಜೆಯಲ್ಲಿ ಏನೇನು ಮಾಡಿದಿರಿ’ ಎಂದು ಕೇಳುವುದು ಜನವರಿ ತಿಂಗಳ ಮೊದಲವಾರದ ಅತ್ಯಂತ ಮುಖ್ಯವಾದ ಕೆಲಸ. ಇದನ್ನು ಯಾರೂ ಮರೆಯುವಂತಿಲ್ಲ. ಹಾಗೆ ಕೇಳಿ ಅವರು-ನಾವು ಹೇಳುವ, ಹಂಚಿಕೊಳ್ಳುವ ಕಥೆಗಳು ರೋಚಕವೂ, ರಂಜನೀಯವೂ ಆಗಿರುತ್ತದೆ. ಈ ಬಾರಿ ಯಾತಕ್ಕೋ ಕೆಲವರು ರಜೆಯೆಲ್ಲ ಮನೆ ರಿಪೇರಿ ಕೆಲಸದಲ್ಲೇ ಕಳೆಯಿತು ಎಂದು ಉದ್ಗಾರವೆಳೆದರು. ಸ್ವಂತ ಮನೆಯಿದ್ದರೆ ನಾವು ಮಾಡುವ ರಿಪೇರಿ ಕೆಲಸಗಳಿಗೆ ಕೊನೆ-ಮೊದಲಿರುವುದಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಲೆಕ್ಕಕ್ಕೆ ಸಿಗದ ೨೦೨೪ ಏಳು-ಬೀಳುಗಳು: ವಿನತೆ ಶರ್ಮ ಅಂಕಣ

ಕೂತಿದ್ದ ವಿಮಾನವು ನಿಧಾನವಾಗಿ Aotearoa ಸೌತ್ ಐಲ್ಯಾಂಡ್ ಅಂಚನ್ನು ಸಮೀಪಿಸಿದಾಗ ಎರಡು ಸೀಟ್ ಆಚೆ ಕೂತಿದ್ದ ಹುಡುಗ ‘ಕ್ಯಾನ್ ಯು ಸೀ ದ ಮೌಂಟೆನ್ಸ್?’ ಅಂತ ಕೇಳಿದ. ಕಿಟಕಿಯಿಂದ ಹಿಮಪರ್ವತಗಳನ್ನು ನೋಡುತ್ತಾ ಮೈಮರೆತಿದ್ದ ನನಗೆ ಅವನು ತನ್ನ ಮೊಬೈಲ್ ಫೋನ್ ಕೊಟ್ಟು ‘ಪ್ಲೀಸ್, ವಿಡಿಯೋ ಮಾಡಿ’ ಎಂದಾಗ ಅವನ ಫೋನನ್ನು ಕಿಟಕಿಯ ಮೇಲೆ ಹಿಡಿದು, ನಾನು ಪುನಃ ಪರ್ವತಗಳಲ್ಲಿ ಕಳೆದುಹೋದೆ. ನನ್ನ ಫೋನಿನಲ್ಲಿ ವಿಡಿಯೋ ಹಿಡಿಯುವ ಆಲೋಚನೆ ಕೂಡ ಬರಲಿಲ್ಲ. ಅದನ್ನು ನೆನಪಿಸಿಕೊಂಡರೆ ಯಾಕೋ ಈಗ ನನ್ನಮ್ಮನ ಹಿಮಾಲಯ ಪ್ರವಾಸಗಳ ಡೈರಿ ಜ್ಞಾಪಕಕ್ಕೆ ಬರುತ್ತಿದೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಕೀವೀ-ಕಾಂಗರೂ ದೇಶಸ್ಥರ ನೆಂಟಸ್ತನ: ವಿನತೆ ಶರ್ಮ ಅಂಕಣ

“ಈ ನಾಯಕರ ನಿಲುವು ಏನೆಂದರೆ ತಾವು ಆಸ್ಟ್ರೇಲಿಯಾವನ್ನು ಒಂದು ಆಧುನಿಕ ದೇಶವನ್ನಾಗಿ ಮಾತ್ರ ನೋಡುವುದು. ವಸಾಹತು ಚರಿತ್ರೆಯನ್ನು ಸಮರ್ಥಿಸುವುದಿಲ್ಲ ಮತ್ತು ಬಿಳಿಯರು ಬಂದು ಅಭಿವೃದ್ಧಿಪಡಿಸಿದ್ದರಿಂದ ನಾವು ಈ ಅದೃಷ್ಟದ ನಾಡಿನಲ್ಲಿದ್ದೀವಿ. ಮೂಲಜರಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೈಟ್ ದ್ವೀಪವಾಸಿಗಳು ಈ ಆಧುನಿಕ ಆಸ್ಟ್ರೇಲಿಯಾದಲ್ಲಿ ಅದಕ್ಕೆ ಹೊಂದಿಕೊಂಡು ಇರಬೇಕು, ತಮಗೆ ಪ್ರತ್ಯೇಕ ಅಸ್ಮಿತೆ ಬೇಕು ಎಂದು ಕೇಳಬಾರದು. ತನ್ನ ಪಕ್ಷ ಅಧಿಕಾರಕ್ಕೆ ಬಂದರೆ ಈ ರೆಫೆರೆಂಡಮ್ ಮುಂತಾದ ಬೇಡಿಕೆಗಳಿಗೆ ಆಸ್ಪದ ಕೊಡುವುದಿಲ್ಲ, ಎಂದಿದ್ದಾರೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ