Advertisement

Category: ಅಂಕಣ

ನೀನ್ ಬಾ ಪೋಪಂ: ದಿಲೀಪ್ ಕುಮಾರ್ ಅಂಕಣ

“ಬೇಟೆಯಾಡಲು ಬಂದ ಶಂತನುವಿಗೆ ಬಹಳ ದೂರದಲ್ಲಿಂದಲೇ ಯೋಜನಗಂಧಿಯ ದೇಹದಿಂದ ಬರುತ್ತಿದ್ದ ವಾಸನೆ ಸೆಳೆಯುತ್ತದೆ. ಮೊದಲೇ ಬಳಲಿದ್ದವನು ಆ ವಾಸನೆಗೆ ಮರುಳಾಗಿ ದುಂಬಿಯಂತೆ ಅದನ್ನರಸಿ ಬರುತ್ತಾನೆ. ಬರುವಾಗಲೇ ಆ ಮಧುವಿನ ವಾಸನೆಗೆ ಸೋತವನು, ಎಳೆ ಜಿಂಕೆಯ ಹಾಗೆ ಕಣ್ಣುಗಳು ಇರುವವಳನ್ನು ಕಂಡು, ಕಂಡೊಡನೆ ಒಲಿದು, ಸತ್ಯ ಸಾಬೀತುಪಡಿಸಲು ಹಿಡಿಯುವ ದಿಬ್ಯದ ಹಾಗೆ ಅವಳನ್ನು ಹಿಡಿದು ಮಾತು ಪ್ರಾರಂಭ ಮಾಡುತ್ತಾನೆ.”

Read More

ನಿಂತ ನೆಲವು ಯಾರದು?: ಮಧುಸೂದನ್ ವೈ.ಎನ್ ಅಂಕಣ

“ಸುತ್ತಮುತ್ತಲ ಕಾರ್ಮಿಕ ಮಕ್ಕಳ ಬಗ್ಗೆ ನಮ್ಮ ಧೋರಣೆ ಹೀಗಿರಲು ಬೀದಿ ಬದಿಯಲ್ಲಿ ಅನಾಥ ಬಿದ್ದಿರುವ ಮಕ್ಕಳನ್ನಂತೂ ಕಂಡೂ ಕಾಣದಂತೆ ಒಂದು ಬಗೆಯಲ್ಲಿ ತಪ್ಪಿಸಿಕೊಂಡು ಓಡಿಬಿಡುತ್ತೇವೆ. ಅಲ್ಲಿ ಕನಿಕರವೂ ಇರುವುದಿಲ್ಲ, ಬದಲಾಗಿ ಎಷ್ಟೋ ಜನಕ್ಕೆ ಅವರು ಕಿರಿಕಿರಿ ಅನಿಸುತ್ತಾರೆ. ಮಕ್ಕಳ ಸಮಸ್ಯೆಗೆ ನಮಗೆ ತಕ್ಷಣಕ್ಕೆ ದೂರಲು ಸಿಗುವುದು ಹೆತ್ತವರು. ಸರ್ಕಾರಗಳೂ ಮೈಕೊಡವಿಕೊಳ್ಳುವುದರಿಂದ ಈ ಕಾರಣವನ್ನು ಎದುರಿಗಿಟ್ಟಿದ್ದೇನೆ.”

Read More

‘ಅಪ್ಪನ ಅಂಗಿ’ಗೆ ಬರೆದ ನನ್ನ ಮಾತುಗಳು: ಲಕ್ಷ್ಮಣ ವಿ ಎ ಅಂಕಣ

“ಬೆಳಕು ಹರಿಯುವಷ್ಟರಲ್ಲಿ ಬೆಂಗಳೂರು ತಲುಪಿದೆ. ಅವರಿವರ ವಿಚಾರಿಸಿ ಅಗ್ರಿ ಕಾಲೇಜಿನ ಬಸ್ಸು ಹತ್ತಿ ಪ್ರವೇಶ ಪರೀಕ್ಷೆಯನ್ನೂ ಬರೆದೆ. ಇನ್ನೇನು ಸಂಜೆಯಾಯಿತು ವಾಪಸು ಧಾರವಾಡಕ್ಕೆ ಬಸ್ಸಿರುವುದು ರಾತ್ರಿ ಒಂಬತ್ತೂವರೆಗೆ ಅಲ್ಲಿಯವರೆಗೂ ಏನು ಮಾಡುವುದು? ಸಿನೇಮಾ ನೋಡಲು ಮನಸಿರಲಿಲ್ಲ. ಏಕೆಂದರೆ ಕರೀಶ್ಮಾ ಕಪೂರಳ ಆ ಚೆಲುವು, ಕಾರಿನ ಹೆಡ್ ಲೈಟಿನಂತಹ ಅವಳ ಎರಡು ಕಣ್ಣುಗಳು…”

Read More

ಒಂದು ಬಾಗಿಲನ್ನು ಹೊಕ್ಕು ಹೊರಬಂದ ಮೇಲೆ…: ಆಶಾ ಜಗದೀಶ್ ಅಂಕಣ

“ಶಾಂತಿಯವರು ವಸ್ತುವಿನ ಆಯ್ಕೆಯಲ್ಲಿ ತೋರಿಸುವ ಕಾಳಜಿ ಬಹಳ ಮುಖ್ಯ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯತೆಯನ್ನು ಕಾಣಬಹುದು. ಶಾಂತಿಯವರು ಕಥೆಯ ವಿಚಿತ್ರ ತಿರುವುಗಳು ಮತ್ತು ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ಹೋಗುವ ಆಕರ್ಷಕ ರೀತಿಯಿಂದಾಗಿ ಓದುಗರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತಾರೆ. ಜಯರಾಮ ಹುಚ್ಚನಾದ ಕಥೆ ಅದಕ್ಕೊಂದು ಉತ್ತಮ ನಿದರ್ಶನ. ಜಯರಾಮ ಹುಚ್ಚ ಯಾಕಾದ ಎನ್ನುವುದನ್ನು ತಿಳಿಯಲಿಕ್ಕೆ ನಾವು ಪೂರಾ ಕಥೆಯನ್ನು ಓದಲೇಬೇಕು.”

Read More

ಕೀಳರಿಮೆಯ ರೋಗಕ್ಕೆ ಶಿಕ್ಷಣದ ಮದ್ದರೆದು…: ಶ್ರೀಹರ್ಷ ಸಾಲಿಮಠ ಬರೆಯುವ ಹೊಸ ಅಂಕಣ

“ಒಮ್ಮೆ ಸೈಕಲ್ ಕೊಳ್ಳಲು ಹೋಗಿದ್ದಾಗ ನಾನು ಒಂದು ಸೈಕಲ್ಲನ್ನು ತೊರಿಸಿ “ಇದು ಎಷ್ಟು” ಅಂತ ಕೇಳಿದೆ. ಸೇಲ್ಸ್ ಮನ್ ಬಿಳಿಯ. ಆತ ಬೆಲೆ ಎಷ್ಟು ಅಂತ ಹೇಳದೆ “ಅದು ದುಬಾರಿ” ಎಂದಷ್ಟೇ ಹೇಳಿದ. ನೀನು ಕಂದುಬಣ್ಣದವನು ನಿನಗೆ ಅದನ್ನು ಕೊಳ್ಳುವ ಯೋಗ್ಯತೆಯಿಲ್ಲ ಎಂದು ಆತ ಪರೋಕ್ಷವಾಗಿ ಹೇಳಿದ್ದ. ಅಸಲಿಯತ್ತೆಂದರೆ ನಾನು ಕಟ್ಟುವ ತೆರಿಗೆಯೇ ಆತನ ಆದಾಯಕ್ಕಿಂತ ಹೆಚ್ಚಿತ್ತು!”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ